Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಗಣಪನ ರೂಪದಲ್ಲಿದೆ ಹಲವು ಜೀವನ ಪಾಠ
    ವಿಶೇಷ ಲೇಖನ

    ಗಣಪನ ರೂಪದಲ್ಲಿದೆ ಹಲವು ಜೀವನ ಪಾಠ

    Updated:10/09/2021No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಚೈತ್ರ ರಾಜೇಶ್ ಕೋಟ.
    ವಿಭಿನ್ನ ರೂಪ, ಜ್ಞಾನಧಾರೆಯ ಸ್ವರೂಪ, ಬುದ್ದಿವಂತ ಗಣಪ. ವಿಘ್ನಗಳನ್ನು ನಿವಾರಿಸೋ ವಿನಾಯಕ, ನಮ್ಮೆಲ್ಲರ ಆರಾಧ್ಯ ದೇವ ಗಣನಾಯಕ. ಗಣಪತಿ ಎಂದ ತಕ್ಷಣ ನೆನಪಾಗುವುದೇ ಅವನ ರೂಪ. ಇವನ ಈ ರೂಪದಲ್ಲೂ, ಗುಣದಲ್ಲೂ ನಾವು ಕಲಿಯಬೇಕಾದ ಪಾಠಗಳು ಬಹಳ.

    Click Here

    Call us

    Click Here

    ಆನೆಯ ತಲೆ ಧರಿಸಿರುವ ಗಜಾನನ, ಆನೆಗಳು ದಟ್ಟವಾದ ಕಾಡಿನಲ್ಲಿ ಮತ್ತು ಮರದ ಸಾಲಿರುವ ದಾರಿಯಲ್ಲಿ ನಡೆಯುವುದರಿಂದ ಇತರೆ ಪ್ರಾಣಿಗಳಿಗೂ ದಾರಿಯನ್ನು ಮಾಡಿಕೊಡುತ್ತದೆ. ಇದೇ ರೀತಿ ಗಜೇಂದ್ರನು ಭಕ್ತರು ನಡೆಯುವ ಮಾರ್ಗದಲ್ಲಿರುವ ಎಲ್ಲಾ ಅಡೆ-ತಡೆಗಳನ್ನು, ವಿಘ್ನಗಳನ್ನು ದೂರ ಮಾಡುವ. ಗಣೇಶನ ದೊಡ್ಡ ತಲೆಯು ಬುದ್ದಿವಂತಿಕೆ ಮತ್ತು ದೊಡ್ಡದಾದ ಆಲೋಚನಾ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಹೀಗಾಗಿಯೇ ತಂದೆ ಈಶ್ವರನು ಮೂರು ಬಾರಿ ಪ್ರಪಂಚ ಪ್ರದಕ್ಷಿಣೆ ಮಾಡಿ ಮೊದಲಿಗರಾಗಿ ಬರಬೇಕೆಂದು ಗಣೇಶ ಮತ್ತು ಕಾರ್ತಿಕೇಯರಲ್ಲಿ ಹೇಳಿದಾಗಿ ತನ್ನ ಬುದ್ದಿವಂತಿಕೆಯಿಂದ ತನ್ನ ಮಾತಾ-ಪಿತರಲ್ಲಿ ಈಡೀ ಜಗತ್ತೆ ಮೈದುಂಬಿರುವಾಗ ಬೇರೆಲ್ಲೂ ಹೋಗಬೇಕಾದ ಅವಶ್ಯಕತೆ ಇಲ್ಲವೆಂದು ಇವರಿಗೆ ಮೂರು ಸುತ್ತು ಬಂದು, ಪ್ರಥಮ ಪೂಜೆಯ ಒಡೆಯನಾದ.

    ಶೂರ್ಪಕರ್ಣನ ಅಗಲವಾದ ಕಿವಿಗಳು ವಿವೇಕದ ಸಂಕೇತವಾಗಿದ್ದು, ಹೆಚ್ಚು ಕೇಳಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು ಎನ್ನುವ ಅರಿವನ್ನು ಮೂಡಿಸುತ್ತದೆ. ಎಲ್ಲರನ್ನೂ ಸದಾ ಆಕರ್ಷಿಸುವ ಹೇರಂಬನ ಸೊಂಡಿಲು ಎಲ್ಲರೂ ಸದಾ ಕ್ರಿಯಾಶೀಲರಾಗಿರಬೇಕು ಎನ್ನುತ್ತದೆ. ಎಲ್ಲಾ ಸನ್ನಿವೇಶಗಳಿಗೂ ಹೊಂದಿಕೊಳ್ಳಬೇಕು, ಸಂದರ್ಭಕ್ಕನುಗುಣವಾಗಿ ಹೊಂದಿಕೊಂಡರೆ ಗೆಲುವು ನಮ್ಮದೇ ಎಂಬುವುದರ ದ್ಯೋತಕವಾಗಿದೆ. ವಕ್ರತುಂಡನ ಏಕದಂತವು ಒಂದೇ ಮನಸ್ಸಿನ್ನಿಂದ ಕೆಲಸ ಮಾಡಬೇಕು. ಹೀಗೆ ಏಕ ಚಿತ್ತದಿಂದ ಮಾಡಿದ ಕೆಲಸವು ಬೇಗ ಸಿದ್ದಿಸುತ್ತದೆ ಎನ್ನುವುದ್ದನ್ನು ಶ್ರೀ ಸಿದ್ದಿವಿನಾಯಕನ ಏಕದಂತವ ನೋಡಿ ಕಲಿಯಬಹುದು. ಇಲಿಯು ಕೋಪ, ಅಹಂಕಾರದಂತಹ ಕೆಟ್ಟ ಗುಣಗಳನ್ನು ಸೂಚಿಸುತ್ತದೆ. ಕೆಟ್ಟ ಗುಣಗಳನ್ನು ಗಣೇಶನು ತಡೆದು ಇಲಿಯ ಮೇಲೆ ಸವಾರಿ ಮಾಡುತ್ತಾನೆ. ಅಂದರೆ ಕೆಟ್ಟ ಗುಣಗಳು ಎಂದಿಗೂ ನಮ್ಮಿಂದ ಮೇಲೆ ಏರಬಾರದು ನಮ್ಮ ಕೆಳಗಿದ್ದಷ್ಟು ನಾವು ಮುಂದೆ ಹೋಗಲು ಸಾಧ್ಯ ಎನ್ನುವ ಸಕಾರಾತ್ಮಕ ಚಿಂತನೆಯನ್ನು ಮಾಡಬಹುದು. ಹೀಗೆ ಗಣೇಶ್ವರನ ಒಂದೊಂದು ರೂಪದಿಂದಲೂ ಒಂದೊಂದು ಅಂಶ ಕಲಿಯಬಹುದಾಗಿದೆ.

    ನಮ್ಮ ಕರ್ತವ್ಯ ಮೊದಲು ಎಂದು ಹೇಳಿದ್ದು ವಿನಾಯಕನೇ, ತಾಯಿ ಸ್ನಾನಕ್ಕೆಂದು ಹೋದಾಗ ತನಗೆ ನೀಡಿದ ಕರ್ತವ್ಯವನ್ನು ಪಾಲಿಸಲು ಜೀವವನ್ನೂ ಲೆಕ್ಕಿಸದೇ ತಂದೆಯೊಂದಿಗೆ ಯುದ್ದಕ್ಕೆ ಮುಂದಾಗುತ್ತಾನೆ. ಕೈಗೆತ್ತಿಕೊಂಡ ಕೆಲಸ ಪೂರ್ತಿಗೊಳಿಸದೇ ಬಿಡಬಾರದೆಂಬ ಪಾಠವನ್ನು ಗಣೇಶನು ಮಹಾಭಾರತವನ್ನು ಎಲ್ಲಿಯೂ ನಿಲ್ಲಿಸದೇ ನಿರರ್ಗಳವಾಗಿ ಬರೆದು ಪೂರ್ತಿಗೊಳಿಸಿದ.

    ಚೈತ್ರ ರಾಜೇಶ್ ಕೋಟ.

    ಹೀಗೆ ಗಣೇಶನ ರೂಪದ ಜೊತೆಗೆ ಗಣಪನ ಜೀವನದ ಅದೆಷ್ಟೋ ಕಥೆಗಳು ನಮ್ಮ ಜೀವನದ ಕಥೆಗೆ ಪಾಠವಾಗುತ್ತದೆ. ಗಣೇಶನ ಮಹಿಮೆ ಎಂದಿಗೂ ಅಪಾರ. ಗಣಪತಿಯು ಎಲ್ಲರ ಮನೆ-ಮನಗಳನ್ನು ಬೆಳಗಲಿ.

    Click here

    Click here

    Click here

    Call us

    Call us

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಗಣನಾಯಕನ ರೂಪ, ಗುಣದಲ್ಲಿ ಕಲಿಯಬೇಕಾದ ಪಾಠಗಳು ಅನೇಕ

    06/09/2024

    ಭಾರತ ಬಜೆಟ್-23 ಮುನ್ನೋಟ: ಆರ್ಥಿಕ ಕುಸಿತದ ಭೀತಿಯ ನಡುವೆ ಭಾರತೀಯ ಅರ್ಥವ್ಯವಸ್ಥೆಯನ್ನು ಮೇಲೆತ್ತುವ ಸವಾಲು

    01/02/2023

    ಉದ್ಯೋಗ ಸಂದರ್ಶನದ ತಯಾರಿಗೆ ಒಂದಿಷ್ಟು ಟಿಪ್ಸ್

    01/01/2023

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ
    • ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು
    • ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್ ಭೇಟಿ
    • ವಿದೇಶಿ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d