Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಆರೋಗ್ಯ ಕಾಳಜಿ ಎಂಬ ಉಂಡೆನಾಮ!
    ಯಡ್ತರೆ ಕಾಲಂ

    ಆರೋಗ್ಯ ಕಾಳಜಿ ಎಂಬ ಉಂಡೆನಾಮ!

    Updated:27/09/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ನಾಗರಾಜ ಪಿ. ಯಡ್ತರೆ

    Click Here

    Call us

    Click Here

    ಮೊನ್ನೆ ಒಬ್ಬ ವಿದ್ಯಾರ್ಥಿ ಪೋನ್ ಮಾಡಿ sir, what is the difference between market and marketing? ಅಂತ ಕೇಳ್ದ. ಮಾರ್ಕೆಟಿಂಗ್ ಅಂದ ಕೂಡಲೆ ನನಗೆ ನೆನಪಾದದ್ದು ಇವತ್ತಿನ ಜೀವನದಲ್ಲಿ ಹೇಗೆ ಮಾರ್ಕೇಟಿಂಗ್ ಬೃಹಸ್ಪತಿಗಳು ಕಲರ್ ಕಲರ್ ಮಕ್ಮಲ್ ಟೋಪಿ ಹಿಡಿದುಕೊಂಡು ಜನರನ್ನು ಕಾಯುತ್ತಿರುತ್ತಾರೆ ಅಂತ. ಒಂದು ಚಿಕ್ಕ ಉದಾಹರಣೆ ನೋಡಿ. ಹಿಂದಿನ ಕಾಲದಲ್ಲಿ ಜನರು ಬೆಳಿಗ್ಗೆ ಹಲ್ಲುಜ್ಜಲು ಇದ್ದಿಲು ಅಥವಾ ಉಪ್ಪು ಬಳಸೋದು ಸಾಮಾನ್ಯವಾಗಿತ್ತು. ನಾವು ಚಿಕ್ಕವರಾಗಿದ್ದಾಗ ಬಳಸುತ್ತಿದ್ದೆವು. ನಂತರ ಹಲ್ಲುಜ್ಜಲು ವಿವಿಧ ನಮೂನೆಯ ಟೂತ್ ಪೇಸ್ಟ್‌ಗಳು ಬಂದವು. ಸ್ವಲ್ಪ ಸಿಹಿಯಾದ ಈ ಪೇಸ್ಟ್‌ಗಳು ಜನರ ಜೀವನದ ಒಂದು ಅವಿಭಾಗ್ಯ ಅಂಗವಾಯಿತು. ನೂರಾರು ಕಂಪೆನಿಗಳು ಇದನ್ನು ತಯಾರಿಸಿದವು. ಆದರೆ ಇದ್ದಕ್ಕಿದ್ದಂತೆ ಒಂದು ಬೆಳಿಗ್ಗೆ ಟೂತ್ಪೇಸ್ಟ್ ಕಂಪೆನಿಯೊಂದು ’ನಿಮ್ಮ ಪೇಸ್ಟ್ನಲ್ಲಿ ಉಪ್ಪಿ ಇದೆಯೇ?’ ಅಂತ ಕೇಳಿತು. ಆದರೆ ಜನ ಯಾರೂ ಉಪ್ಪು ನಮ್ಮ ಮನೆಯಲ್ಲಿಯೇ ಇದೆ. ನಾವು ಅದರಲ್ಲೇ ಹಲ್ಲು ಉಜ್ಜುತ್ತೇವೆ ನಿಂದು ಯಾರಿಗೆ ಬೇಕು? ಅಂತ ಕೇಳಿಲ್ಲ. ಸ್ವಲ್ಪ ದಿನದ ನಂತರ ಅದೇ ಕಂಪೆನಿ ’ನಿಮ್ಮ ಪೇಸ್ಟ್ನಲ್ಲಿ ಉಪ್ಪು ಹಾಗೂ ನಿಂಬೆ ಇದೆಯೇ’ ಅಂತ ಕೇಳಿತು. ನಾನಂತೂ ದಿಗಿಲುಕೊಂಡು ಬೇರೆ ಕಂಪೆನಿ ಪೇಸ್ಟ್ ತಗೊಂಡೆ ಯಾಕೆಂದರೆ ಇನ್ನು ಕೆಲವು ದಿನಗಳಲ್ಲಿ ಆ ಕಂಪೆನಿ ಇದ್ದಿಲು, ಲವಂಗ, ದಾಲ್ಜಿನಿ ಎಲ್ಲಾ ಹಾಕಿ ದಿನಕ್ಕೊಂದು ಟೋಪಿ ಹೊಲಿಸುತ್ತದೆ ಎಂದು ನನಗೆ ಅಂದಾಜಾಯಿತು.

    ಹೀಗೆ ಜನರ ಜೀವನಶೈಲಿ ಸುಧಾರಿಸುತ್ತಿದ್ದಂತೆ, ಆರೋಗ್ಯದ ಕಡೆಗೆ ಜನರು ಗಮನ ಹರಿಸಲು ಪ್ರಾರಂಭಿಸಿದರು. ಇಂತಹ ಸಂದರ್ಭದಲ್ಲಿ ಹಣದ ಬಗ್ಗೆ ಚಿಂತಿಸದೇ ತಮ್ಮ ಆರೋಗ್ಯದ ಕಡೆಗೆ ಗಮನ ಕೊಟ್ಟು ಎಲ್ಲಿ, ಏನು ವಿಶೇಷವಾದದ್ದು ಸಿಗುತ್ತದೆ ಎಂದು ಕಣ್ಣು ಬಿಟ್ಟು ನೋಡುತ್ತಿದ್ದಂತೆ, ಎಲೆಕ್ಟ್ರಾನಿಕ್ ಮಾಧ್ಯಮಗಳು ದಿನಾ ಬೆಳಿಗ್ಗೆ ಆರೋಗ್ಯ, ಯೋಗ, ಜಾತಕ ಈ ಬಗೆಯ ಕಾರ್ಯಕ್ರಮಗಳನ್ನು ಬಿತ್ತರಿಸಿ ಜನರಿಗೆ ವಿಪರೀತ ಗೊಂದಲ ಉಂಟುಮಾಡಲು ಪ್ರಾರಂಭಿಸಿದವು. ಇದು ಎಲ್ಲಿಯವರೆಗೆ ಹೋಯಿತೆಂದರೆ ಬೆಳಿಗ್ಗೆ ಶ್ವಾಸ ತೆಗೆದುಕೊಳ್ಳಲೂ ಒಬ್ಬ ಶ್ವಾಸಗುರು ಬಂದ್ರು. ಶ್ವಾಸ ತಗೊಳ್ಳಕ್ಕೂ ಒಬ್ಬ ಶ್ವಾಸ ಗುರುನಾ? ಅಂತ ಕೇಳ್ಬೆಡಿ. ಶ್ವಾಸ ತಗೊಳ್ಳೋದು ಒಂದು ಪ್ರಾಡೆಕ್ಟ್ ಆಗಿ ಹೋಯ್ತು. ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದರು, ‘ಇನ್ನು ಉಚ್ಚೆ ಹೊಯ್ಯಲಿಕ್ಕೂ’ ಗುರು ಬರುತ್ತಾರೆ ಅಂತ. ದಿನ ಭವಿಷ್ಯ ಮಾತ್ರ ಇನ್ನೂ ಭಯಂಕರ. ’ಇವತ್ತು ನಿಮಗೆ ಆಗುವ ಅನಿಷ್ಠ ದೂರ ಆಗಬೇಕೆಂದರೆ, ’ಓಂ ಹ್ರಾಂ, ಹ್ರೀಂ ರುಂಡಧಾರೀಣಿಯೇ ನಮಃ’ ಅಂತ ಸಾವಿರದ ಒಂದು ಬಾರಿ ಜಪ ಮಾಡಿ ಅಂತ ಹುಕುಂ ಹೊರಡಿಸುತ್ತಿದ್ದಂತೆಯೇ ಹೇಗೆ ನಗಬೇಕು ಎಂದು ಗೊತ್ತಾಗುವುದಿಲ್ಲ. ಯಾಕೆಂದ್ರೆ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲೇ ಸಾವಿರದ ಒಂದು ಕೆಲಸದ ಒತ್ತಡದಲ್ಲಿ ಇವರು ಹೇಳುವ ಜಪ ಮಾಡುತ್ತಾ ಕುಳಿತರೆ ಮಧ್ಯಾಹ್ನ 12 ಗಂಟೆ ಆಗೋದು ಗ್ಯಾರೆಂಟಿ ಅಲ್ವಾ?

    ನಿಮಗೆ ಇನ್ನೊಂದು ವಿಷಯ ಗೊತ್ತಾ? ಇದು ನಿಜ ಸಂಗತಿ. ಸುಳ್ಳು ಅಂತ ತಿಳ್ಕೊಬೇಡಿ. ಇಂದಿನ ಆಧುನಿಕ ಯುಗದಲ್ಲಿ ಹೇಗೆ ಖಾಯಿಲೆಯನ್ನು, ಖಾಯಿಲೆಗೆ ಡಾಕ್ಟರನ್ನೂ ಹೇಗೆ ವಿಭಾಗ ಮಾಡುತ್ತಾರೆ ನೋಡಿ. ನಮ್ಮೂರಲ್ಲಿ ಒಬ್ಬ ಡಾಕ್ಟರ್ ಇದ್ದಾರೆ. ನಮಗೆ ಯಾವ ಖಾಯಿಲೆ ಬಂದರೂ ಅವರೇ ಡಾಕ್ಟರ್. ಜ್ವರ ಬರಲಿ, ತಲೆನೋವು ಬರಲಿ, ಗಾಯ ಆಗಿರಲಿ, ಹಲ್ಲು ನೋವು ಬರಲಿ, ಹೊಟ್ಟೆನೋವು ಬರಲಿ. ಏನೇ ಆದ್ರೂ ಒಬ್ರೇ ಡಾಕ್ಟರ್. ಆದರೆ ಇತ್ತೀಚೆಗೆ ಪ್ರತಿಯೊಂದು ಖಾಯಿಲೆಗೂ ಬೇರೆ ಬೇರೆ ಡಾಕ್ಟರ್. ಅದರಲ್ಲೂ ಮತ್ತೆ ಸಬ್ ಡಿವೈಡ್. ಮೊನ್ನೆ ಒಂದು ಹಲ್ಲು ಡಾಕ್ಟರ್ ಶಾಪ್ ಎದುರಿನ ಬೋರ್ಡ್ ನೋಡಿ ಶಾಕ್ ಆದೆ. ಯಾಕಂದ್ರೆ ’ಕೋರೆ ಹಲ್ಲಿನ ಡಾಕ್ಟರ್ ಬುಧವಾರ ಮತ್ತು ಶುಕ್ರವಾರ ಲಭ್ಯರಿರುತ್ತಾರೆ’ ಅಯ್ಯಬ್ಬ! ’ಕೋರೆ ಹಲ್ಲು ಇರುವ ಡಾಕ್ಟರಾ?’ ಹೇಗಿರುತ್ತಾರೆ ಅಂತ ಭಯ ಶುರುವಾಯ್ತು. ಅನಂತರ ಗೊತ್ತಾಯಿತು. ನಮ್ಮ ಬಾಯೊಳಗಿರುವ 32 ಹಲ್ಲುಗಳಿಗೂ 32 ಬಗೆಯ ಡಾಕ್ಟರ್ ಇದ್ದಾರೆ ಅಂತ. ಬಾಚಿಹಲ್ಲು, ಕೋರೆಹಲ್ಲ, ಅರೆಯುವ ಹಲ್ಲು, ದವಡೆ ಹಲ್ಲು. ಎಲ್ಲದಕ್ಕೂ ಒಬ್ಬೊಬ್ಬ ಡಾಕ್ಟರ್.

    ಹಿಂದೆಲ್ಲಾ ಒಬ್ಬ ವ್ಯಕ್ತಿ ವಿದ್ಯೆ ಕಲಿತು, ಯಾವುದೇ ಉದ್ಯೋಗ ಇಲ್ಲದಿದ್ದರೇ ಅವನು ರಸ್ತೆ ಬದಿಯಲ್ಲೋ, ಪೇಟೆಯಲ್ಲೋ ಒಂದು ಗೂಡಂಗಡಿ ಅಥವಾ ಬೀಡಾ ಅಂಗಡಿ ಹಾಕೋದು ಸಾಮಾನ್ಯವಾಗಿತ್ತು. ಅದು ಅವನ ಹೊಟ್ಟೆಪಾಡು. ಆದರೆ ಈಗ ಈ ಗೂಡಂಗಡಿ ಹಾಕಲಿಕ್ಕೂ ಡಬಲ್ ಡಿಗ್ರಿ ಬೇಕಾಗುತ್ತೆ ಅಂತ ಕಾಣುತ್ತೆ. ಯಾಕಂದ್ರೆ ಇವತ್ತು ಬರುವ ಆ ಸಾವಿರಾರು ಹೆಸರಿನ ಚಾಕೋಲೆಟ್ ಜಾಹೀರಾತನ್ನು ಕೇಳಿ ಮಕ್ಕಳು ಅಂಗಡಿಯಲ್ಲಿ ಅದನ್ನು ಕೇಳೋದು. ಅಬ್ಬ! ತಲೆ ಚಿಟ್ಟು ಹಿಡಿಯಬಹುದು. ನೂರಾರು ಹೆಸರಿನ ಗುಟ್ಕಾ ಮಾಲೆಗಳು, ಲೇಸ್, ಕುರ್ಕುರಿ, ಪರ್ಕ್ ಅದರಲ್ಲೂ ವಿಧಗಳು! ನೀವೇ ಯೋಚನೆ ಮಾಡಿ ಒಂದು ಕಂಪೆನಿಯ ಮುಖಕ್ಕೆ ಹಚ್ಚುವ ಕ್ರೀಮ್, ಯುವಕರಿಗೆ ಒಂದು ಬಗೆ, ಮಹಿಳೆಯರಿಗೆ ಇನ್ನೊಂದು ಬಗೆ, ಮಕ್ಕಳಿಗೆ ಮತ್ತೊಂದು ಬಗೆ. ಮುಖಕ್ಕೆ ಹಚ್ಚುವ ಕ್ರೀಮ್ನಲ್ಲೂ ಮಲ್ಟಿವಿಟಮಿನ್ ಅಂತೆ. ನಗು ಬರೋದಿಲ್ವಾ? ಎಂಥ ಜರತಾರಿ ಟೋಪಿ ನೋಡಿ.

    Click here

    Click here

    Click here

    Call us

    Call us

    ನಾನು ಹೇಳಿದ ಈ ಮೇಲಿನ ವಿಷಯವನ್ನೆಲ್ಲಾ ಗಂಭೀರವಾಗಿ ಆಲೋಚಿಸಿದಾಗ ಜಾಹೀರಾತುಗಳು, ಜಾಹೀರಾತು ಮಾಧ್ಯಮಗಳು, ಮಾರ್ಕೆಟಿಂಗ್‌ನ ಕಬಂಧ ಬಾಹುಗಳು ಹೇಗೆ ನಮ್ಮನ್ನು ಸುತ್ತುವರಿದಿದೆ ಅಂತ ತಿಳಿಯುತ್ತೆ. ತೀರಾ ಸಾಮಾನ್ಯ ವಸ್ತುವಾದ ಅಡುಗೆ ಉಪ್ಪಿಗೂ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚುಮಾಡುವ ಕಂಪೆನಿಗಳು ಎಷ್ಟರ ಮಟ್ಟಿಗೆ ನಮಗೆ ಗುಣಮಟ್ಟದ ವಸ್ತುಗಳನ್ನು ಕೊಡುತ್ತದೆ? ಉತ್ತಮ ಗುಣಮಟ್ಟದ್ದೇ ಆಗಿದ್ದರೂ ಅದರ ಉತ್ಪಾದನಾ ವೆಚ್ಚವೆಷ್ಟು? ನಾವು ಕೊಡುತ್ತಿರುವುದೆಷ್ಟು? ಅಂತ ಯೋಚಿಸಬೇಕಾಗುತ್ತದೆ. ಏನು ಮಾಡೋದು ಕಾಲವೇ ಬದಲಾದ ಮೇಲೆ ನಾವು ಅದಕ್ಕೆ ತಕ್ಕಂತೆ ಕುಣಿಯಬೇಕು ಅಲ್ವಾ?

    Like this:

    Like Loading...

    Related

    kundapra.com Column Nagaraj P yedthare
    Share. Facebook Twitter Pinterest LinkedIn Tumblr Telegram Email
    ಯಡ್ತರೆ ಕಾಲಂ
    • Website
    • Facebook

    ಬೈಂದೂರಿನ ಯಡ್ತರೆಯವರಾದ ನಾಗರಾಜ್ ಪಿ., ವೃತ್ತಿಯಲ್ಲಿ ಕೋ-ಆಪರೇಟಿವೊಂದರ ಪ್ರಬಂಧಕರು. ಎಂ.ಕಾಂ. ಪದವೀಧರರಾಗಿರುವ ಅವರು ಯುಸ್ಕೊರ್ಡ್ ಕೋಚಿಂಗ್ ಕ್ಲಾಸಸ್ ಎಂಬ ತಮ್ಮದೇ ಸಂಸ್ಥೆಯ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಕಳೆದ 10 ವರ್ಷಗಳಿಂದ ವಿದ್ಯಾದಾನ ಮಾಡುತ್ತಾ ಬಂದಿದ್ದಾರೆ. ರಂಗಭೂಮಿ, ಸಾಹಿತ್ಯ ಹಾಗೂ ಚಿತ್ರಕಲೆ ಸೇರಿದಂತೆ ಕಲೆಯ ವಿವಿಧ ಪ್ರಕಾರಗಳಲ್ಲಿ ಅಪಾರ ಒಲವು ಹೊಂದಿರುವುದು ಮಾತ್ರವಲ್ಲದೇ ಅವುಗಳಲ್ಲಿ ಎಲೆಮರೆಯ ಕಾಯಿಯಂತೆ ತೊಡಗಿಸಿಕೊಂಡವರು. ಹಿಡಿದ ಕೆಲಸ ಹೇಗೇ ಇರಲಿ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಲೆಗಾರಿಕೆ ಅವರಿಗೆ ಸಿದ್ಧಿಸಿದೆ. ನಾಗರಾಜ್ ಅವರು ತಮ್ಮೊಳಗಿನ ವಿಚಾರಗಳನ್ನು ಕುಂದಾಪ್ರ ಡಾಟ್ ಕಾಂ ನಲ್ಲಿ 'ಯಡ್ತರೆ ಕಾಲಂ' ಎಂಬ ಅಂಕಣದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ನಾಗರಾಜ ಅವರ ಇಮೇಲ್ - rajapyedthare@ymail.com

    Related Posts

    ವಿಚಾರವಾದಿಗಳ ಸೋಗಿನಲ್ಲಿರುವ ವಿಚಿತ್ರವಾದಿಗಳು

    26/08/2016

    ಯಸ್ಕೋರ್ಡ್ ಕೋಚಿಂಗ್ ಕ್ಲಾಸಸ್ ಯಡ್ತರೆ – Excellency in Accountancy

    07/07/2016

    ಸೈಂಟ್ ಮೇರೀಸ್ ದ್ವೀಪದತ್ತ ಒಂದು ಪಯಣ

    07/01/2016

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ
    • ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು
    • ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್ ಭೇಟಿ
    • ವಿದೇಶಿ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ಪ್ರಿಯಾಂಶ್ ಶಂಕರ್‌ಗೆ ಚಿನ್ನದ ಪದಕ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d