ಬಸ್ ನಿರ್ವಾಹಕ – ಚಾಲಕನ ಪ್ರಾಮಾಣಿಕತೆಯಿಂದ, ಮಾಲಕನ ಕೈಸೇರಿದ ಲಕ್ಷ ರೂ. ಮೌಲ್ಯದ ಚಿನ್ನಾಭರಣ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರದಿಂದ ಇಲ್ಲಿಂದ ಮಂಗಳೂರಿಗೆ ತೆರಳುವ ಖಾಸಗಿ ಎಕ್ಸ್‌ಪ್ರೆಸ್ ಬಸ್ ಏರಿದ್ದ ಯುವಕ ಚಿನ್ನಾಭರಣ ಸಹಿತ ಅಮೂಲ್ಯ ದಾಖಲೆಗಳನ್ನು ಕಳೆದುಕೊಂಡಿದ್ದು, ಕಂಡಕ್ಟರ್ ಪ್ರಾಮಾಣಿಕತೆಯಿಂದ ಮರಳಿ ಪಡೆದುಕೊಂಡಿದ್ದಾನೆ.

Call us

Click Here

Click here

Click Here

Call us

Visit Now

Click here

ಕುಂದಾಪುರದಲ್ಲಿ ಬಸ್ ಏರಿದ್ದ ಯುವಕ ತೆಕ್ಕಟ್ಟೆಯಲ್ಲಿ ಇಳಿದುಹೋಗಿದ್ದಾನೆ. ಆತ ಕುಳಿತಿದ್ದ ಸೀಟು ನೋಡಿದಾಗ ಅಲ್ಲೊಂದು ಬ್ಯಾಗ್ ಇತ್ತು. ಅದರಲ್ಲಿ ಕರಿಮಣಿ ಸರ, ಮೂರು ಬಳೆಗಳು ಮತ್ತು ಒಂದು ಮೊಬೈಲ್ ಇತ್ತು. ಬ್ಯಾಗ್ ನೋಡಿದ ಕಂಡಕ್ಟರ್ ವಿಟ್ಲದ ಗೋಪಾಲ್ ಎಂಬಾತ, ಬಸ್ ಚಾಲಕ ಪ್ರತಾಪ್ ಎಂಬರಿಗೆ ತಿಳಿಸಿದ್ದಾರೆ.

ಇದೇ ವೇಳೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೋಟ ಪೊಲೀಸ್ ಸಿಬ್ಬಂದಿಗೆ ಬ್ಯಾಗ್ ಹಸ್ತಾಂತರಿಸಿ ವಿಷಯ ತಿಳಿಸಿದ್ದಾರೆ. ನಂತರ ಜಾಲತಾಣದಲ್ಲಿ ಯುವಕ ಕಳೆದುಕೊಂಡ ಸೊತ್ತುಗಳ ಪೋಟೋ ಹಾಕಿ ಈ ನಂಬರ್‌ಗೆ ಕರೆ ಮಾಡಿ ಎಂದು ಸಂದೇಶ ರವಾನಿಸಿದ್ದರು. ಸಂದೇಶ ಹೇಗೋ ಯುವಕನಿಗೆ ತಲುಪಿದ್ದು, ಬ್ಯಾಗ್ ಕಳೆದುಕೊಂಡಿದ್ದ ಠಾಣೆಗೆ ತೆರಳಿ ಬ್ಯಾಗ್ ಪಡೆದುಕೊಂಡಿದ್ದಾನೆ. ಬಸ್ ಚಾಲಕ ಪ್ರತಾಪ್ ಮತ್ತು ಕಂಡಕ್ಟರ್ ವಿಟ್ಲ ಗೋಪಾಲ್ ಅವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

Leave a Reply

Your email address will not be published. Required fields are marked *

16 − 9 =