ಕಂಬಳ ಸಮಿತಿಯ ಪೂರ್ವಭಾವಿ ಸಭೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕು ಕಂಬಳ ಸಮಿತಿಯ ಅಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು ಅಧ್ಯಕ್ಷತೆಯಲ್ಲಿ 2021-22ನೇ ಸಾಲಿನ ಕಂಬಳದ ಪೂರ್ವಭಾವಿ ಸಭೆ ಉಪ್ಪುಂದದ ಮಾತಾಶ್ರೀ ಸಭಾ ಭವನದಲ್ಲಿ ನಡೆಯಿತು.

Call us

Click Here

ಕಂಬಳ ಸಮಿತಿಯ ಕಾರ್ಯಕಾರಿಯನ್ನು ಮುಂದಿನ ಒಂದು ವರ್ಷದ ಅವಧಿಗೆ ಪುನರಾಯ್ಕೆ ಮಾಡಲಾಯಿತು. ಗಂತಿನಲ್ಲಿ ಕೋಣವನ್ನು ಸ್ಪರ್ಧೆಗೆ ಅಣಿಮಾಡುವ ಸಮಯವನ್ನು ಗರಿಷ್ಠ ಐದು ನಿಮಿಷಕ್ಕೆ ಸೀಮಿತ ಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭ ಸಮಿತಿ ಉಪಾಧ್ಯಕ್ಷರಾದ ವೆಂಕಟರಮಣ ಗಾಣಿಗ, ಶ್ರೀರಾಮ್ ಚೈತ್ರ ಪರಮೇಶ್ವರ ಭಟ್ ಬೋಳಂಬಳ್ಳಿ, ರಾಜು ದೇವಾಡಿಗ ಮಿಯ್ಯಾಣಿ, ಕೊಡೇರಿ ಕಂಬಳದ ಯಜಮಾನ ಚನ್ನಕೇಶವ್ ಕಾರಂತ್, ಗುಡಾಡಿ ಶೆಖರ ಪೂಜಾರಿ, ಸುರೇಶ್ ಕಾಡಿತಾರ್, ಕಂಬಳ ಸಮಿತಿಯ ಕಾರ್ಯದರ್ಶಿ ಸುಧೀರ್ ದೇವಾಡಿಗ, ಕೋಶಾಧಿಕಾರಿ ಜನಾರ್ದನ ದೇವಾಡಿಗ, ಕಂಬಳ ಗದ್ದೆ ಯಜಮಾನರು, ಹಗ್ಗದ ಜೋಟಗಾರರು, ಗೋರಿ ಸವಾರಿಗರು, ಕಂಬಳ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Reply