ಕೋಟೇಶ್ವರ: ಗೀತಾ ಜಯಂತಿ ಆಚರಣೆ, ಸಾಮೂಹಿಕ ಗೀತಾ ಪಠಣ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಗೀತಾ ಜಯಂತಿಯ ಅಂಗವಾಗಿ ಕೋಟೇಶ್ವರದ ಶ್ರೀ ಶಂಕರ ಜಯಂತಿ ಭಜನಾ ಮಂಡಳಿಯವರಿಂದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಶ್ರೀಮದ್ ಭಗವದ್ಗೀತೆಯ ಸಾಮೂಹಿಕ ಪಠಣ ನಡೆಯಿತು. ಬೆಳಿಗ್ಗೆ ೯ಕ್ಕೆ ಪಠಣ ಆರಂಭಿಸಿದ ತಂಡ ಮಧ್ಯಾಹ್ನ ೧೨ ರವರೆಗೂ ಗೀತೆಯ ಸಮಗ್ರ ಹದಿನೆಂಟು ಅಧ್ಯಾಯಗಳನ್ನು ಪಠಿಸಿದರು.

Call us

Click Here

ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದು ಶುಭ ಕೋರಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸದಸ್ಯೆ ವಸಂತಿ ಮಿತ್ಯಂತ ಗೀತೆಯ ಶ್ರೇಷ್ಠತೆ ಮತ್ತು ಅದರ ಪಠಣದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಾಮೂಹಿಕವಾಗಿ ಪೂಜೆ ನೆರವೇರಿಸಲಾಯಿತು.

Leave a Reply