ಬೀಜಾಡಿ: ಬೈಕಿಗೆ ಮಹೇಂದ್ರ ಝೈಲೋ ಡಿಕ್ಕಿ: ಬೈಕ್ ಸವಾರನ ಸಾವು

Call us

Call us

Call us

ಕುಂದಾಪುರ: ಇಲ್ಲಿನ ಬೀಜಾಡಿ ಸಮೀಪ ಬೈಕ್ ಹಾಗೂ ಮಹೇಂದ್ರ ಜೈಲೋ ವಾಹನದ ನಡುವೆ ನಡೆದ ಅಫಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ. ಗಣಪಯ್ಯ ಗಾಣಿಗ(54) ದುರ್ದೈವಿ

Call us

Click Here

ಘಟನೆಯ ವಿವರ:
ಗಣಪಯ್ಯ ಗಾಣಿಗ ಕೋಟೇಶ್ವರದಿಂದ ಕುಂಭಾಶಿ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತನ್ನ ಟಿವಿಎಸ್ ಲೂನಾದಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಮಹೇಂದ್ರ ಝೈಲೋ ವಾಹನ ಬಿಜಾಡಿ ಸಮೀಪ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ಗಣಪಯ್ಯ ಗಾಣಿಗರ ತಲೆಗೆ ಗಂಬೀರ ಗಾಯಗಳಾಗಿದ್ದವು. ಕೂಡಲೇ ಗಾಯಾಳುವನ್ನು ಕುಂದಾಪುರದ ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಮೃತಪಟ್ಟಿದ್ದರು. ಅಲ್ಲಿಂದ ಪರಾರಿಯಾಗಿದ್ದ ಮಹೇಂದ್ರ ಝೈಲೋ ವಾಹನವನ್ನು ಪಡುಬಿದ್ರೆಯ ಸಮೀಪ ಅಡ್ಡಗಟ್ಟಿ ವಾಹನ ಚಾಲಕನನ್ನು ಬಂಧಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply