ಸರ್ಕಾರಿ ಶಾಲೆಗಳ ಪ್ರಾರಂಭ ಕೇವಲ ಪ್ರಚಾರಕ್ಕೆ ಮಾತ್ರ ಸ್ಥಿಮಿತವಾಗದಿರಲಿ – ಕೆ. ವಿಕಾಸ್ ಹೆಗ್ಡೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ವಲಯ ವ್ಯಾಪ್ತಿಯ ಸರ್ಕಾರಿ ಶಾಲಾ ಪ್ರಾರಂಭ ಅತ್ಯಂತ ವಿಜೃಂಭಣೆಯಿಂದ ನಡೆದಿರುವುದು ಅತ್ಯಂತ ಶ್ಲಾಘನೀಯ ಹಾಗೂ ಮಕ್ಕಳ ಹಿತದ್ರಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಆದರೆ ಇದು ಕೇವಲ ಶಾಲಾ ಪ್ರಾರಂಭಕ್ಕೆ ಮಾತ್ರ ಸ್ಥಿಮಿತವಾಗಿರದೆ ಶಾಲೆಯ ಮುಂದಿನ ಬೆಳವಣಿಗೆಗೆ ರಹದಾರಿಯಾಗಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ.

Call us

Click Here

ಕುಂದಾಪುರ ವಲಯ ವ್ಯಾಪ್ತಿಯ ಹಲವಾರು ಸರ್ಕಾರಿ ಶಾಲೆಗಳಲ್ಲಿ ಶೂನ್ಯ ಶಿಕ್ಷಕರಿದ್ದಾರೆ. ಇಂತಹ ಶಾಲೆಗಳಿಗೆ ಶೀಘ್ರ ಶಿಕ್ಷಕರ ನೇಮಕವಾಗಲಿ ಹಾಗೂ ಎಷ್ಟೋ ಶಾಲೆಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ, ಸೂಕ್ತ ಕಟ್ಟಡ ಇಲ್ಲದಿರುವುದು, ಆಟದ ಮೈದಾನದ ಕೊರತೆ, ಸಾರಿಗೆ ಸಮಸ್ಯೆ, ಸಮಯಕ್ಕೆ ಸರಿಯಾಗಿ ಸಮವಸ್ತ್ರ, ಪಠ್ಯ ಪುಸ್ತಕ ಇತ್ಯಾದಿ ಅಗತ್ಯತೆಗಳು ಪೂರೈಕೆಯಾಗದಿರುವುದು, ಕೆಲವೊಂದು ಅಧ್ಯಾಪಕರು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಇಲ್ಲದಿರುವುದು ಸೇರಿದಂತೆ ಹಲವಾರು ಸಮಸ್ಯೆಗಳ ಪರಿಹಾರಕ್ಕೂ ಸಂಬಂಧಿತರು ಗಮನ ಹರಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.

Leave a Reply