ಕುಂದಾಪುರ ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ಆನಾರೋಗ್ಯ ಪೀಡಿತ ಮಕ್ಕಳಿಗೆ ಧನಸಹಾಯ ಹಸ್ತಾಂತರ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಹೆಲ್ಪಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಾನಿಗಳ ನೆರವಿನೊಂದಿಗೆ ಸಂಗ್ರಹಿಸಲಾದ ಒಟ್ಟು ರೂ.71,110 ಮೊತ್ತದ ಸಹಾಯಧನವನ್ನು ಇಬ್ಬರು ಮಕ್ಕಳ ಚಿಕಿತ್ಸೆಗಾಗಿ ನೀಡಲಾಯಿತು.

Call us

Click Here

ಅನಾರೋಗ್ಯದಿಂದ ಬಳಲುತ್ತಿದ್ದ ಕುಂದಾಪುರ ಖಾರ್ವಿಕೇರಿಯ ಪುಟಾಣಿಯಾದ ಆರೂಷಿ ಹಾಗೂ ಕೋಟೇಶ್ವರದ ಆರ್ಯನ್ ಪಾಪು ಚಿಕಿತ್ಸೆಗಾಗಿ ತಲಾ 35,555 ರೂ ಗಳಂತೆ ರೂಪಾಯಿ ಸಹಾಯಧನ ವನ್ನು ಹೆಲ್ಪಿಂಗ್ ಹ್ಯಾಂಡ್ಸ್ ಟೃಸ್ಟ್ ನ ಪಧಾಧಿಕಾರಿಗಳು ಹಾಗೂ ಕೋಟಿಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಸದಸ್ಯರ ಸಮಕ್ಷಮದಲ್ಲಿ, ದೇವರಿಗೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಪೋಷಕರ ಚೆಕ್ ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ದೇವಸ್ಥಾನ ಸಮಿತಿಯ ಶಾರದಾ ಹಳವಳ್ಳಿ, ಉಷಾ ಬಂಗೇರ ಮಾರ್ಕೊಡು ಹಾಗೂ ಹೆಲ್ಪಿಂಗ್ ಹ್ಯಾಂಡ್ಸ್ ಗೌರವಾಧ್ಯಕ್ಷರಾದ ರವೀಂದ್ರ ರಟ್ಟಾಡಿ, ಜ್ಞಾನಾನಂದ ಐರೋಡಿ, ಅಧ್ಯಕ್ಷರಾದ ಪ್ರದೀಪ್ ಕೋಟೇಶ್ವರ, ಕೋಷಾಧಿಕಾರಿಗಳಾದ ಸುನೀಲ್ಖಾರ್ವಿ ತಲ್ಲೂರು, ಕಮಿಟಿಯ ಸದಸ್ಯರಾದ ಮಣೀಶ್ ಶ್ರೀಯಾನ್, ರಾಘವೇಂದ್ರ ಕೋಡಿ, ಅವಿನಾಶ್ ಹೇರಿಕುದ್ರು,ಶರತ್ ಹೊದ್ರಾಳಿ, ನಾಗರಾಜ್ ಹೊದ್ರಾಳಿ,ರತನ್ ಹೇರಿಕುದ್ರು, ಸಚಿನ್ ಕೋಡಿ, ಕಿಶೋರ್ ಕೋಡಿ ಉಪಸ್ಥಿತರಿದ್ದರು.

Leave a Reply