ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮೊದಲ ಭಾರಿಗೆ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು.
ದೇವರ ಹೆಸರಿನಲ್ಲಿ ಕನ್ನಡದಲ್ಲಿ ಪ್ರಮಾಣವಚನ ತೆಗೆದುಕೊಂಡ ಕೋಟ ಈ ವೇಳೆ ಅವರು ಕನ್ನಡದ ಶಾಲು ಧರಿಸಿದ್ದು ವಿಶೇಷವಾಗಿತ್ತು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿನ್ನು ಸಾಸ್ತಾನದಲ್ಲಿ ಸನ್ಮಾನಿಸಿದ ಬಳಿಕ ಅಭಿನಂದನಾ ಭಾಷಣದಲ್ಲಿ ಸಂಸತ್ತಿನ ಪ್ರಮಾಣ ಮಾಡುವಾಗ ಕನ್ನಡದ ಶಾಲು ಹಾಕಿಕೊಂಡು ಕನ್ನಡದಲ್ಲಿ ಪ್ರಮಾಣ ವಚನ ಮಾಡಬೇಕೆಂದು ಉಡುಪಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ವಿನಂತಿಸಿದ್ದರು. ಅಂದು ಹೊದಿಸಲಾಗಿದ್ದ ಕನ್ನಡ ಶಾಲನ್ನು ಧರಿಸಿ ಕೋಟ ಅವರು ಪ್ರಮಾಣವಚನ ಸ್ವೀಕರಿಸಿದರು.
► ಕಬಾಬ್, ಫಿಶ್ ಫ್ರೈಗೆ ಕೃತಕ ಬಣ್ಣ ಬಳಕೆಗೆ ನಿರ್ಬಂರ್ಧ. ಉಲ್ಲಂಘಿಸಿದ್ರೆ ಕಠಿಣ ಶಿಕ್ಷೆ, ದಂಡ – https://kundapraa.com/?p=73504 .