ಕುಂದಾಪುರ: ಎಲ್ಲರ ನಡೆ ಹಾಗೂ ನುಡಿ ಬಹಳ ಅಂತರವನ್ನು ಕಾಣುತ್ತೆವೆ. ಇಂದು ಯಾರೂ ಮಾತನ್ನು ಕೇಳಲು ಸಿದ್ದರಿಲ್ಲ. ಯಾರು ನಡೆದಂತೆ ನುಡಿಯುತ್ತಾರೋ ಅವರ ಮಾತಿಗೆ ಎಂದಿಗೂ ಬೆಲೆಯಿದೆ. ನಮ್ಮ ಮಾತು, ನಗು, ನಡತೆ ಎಲ್ಲವೂ ಬೇರೆಯವರಿಗೆ ನೋವಾಗದಂತಿರಬೇಕು ಎಂದು ಶಿವಮೊಗ್ಗ ಕಸ್ತೂರ್ಬಾ ಬಾಲಿಕಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನಟೇಶ್ ಹೇಳಿದರು.
ಅವರು ಇಲ್ಲಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಕನ್ನಡ ವೇದಿಕೆಯ ಕುಂದಾಪುರದ ಡಿಂಡಿಮ ಮೂರನೇ ಭಾನುವಾರದ ಕಾರ್ಯಕ್ರಮದ ಮಾತಿನರಮನೆಯಲ್ಲಿ ಕಗ್ಗ – ಕನ್ನಡದಲ್ಲಿ ಕಟ್ಟಿದ ಜೀವನ ದರ್ಶನ ಎಂಬ ವಿಷಯದ ಕುರಿತು ಮಾತನಾಡಿದರು. ಡಿವಿಜಿಯವರ ಕಗ್ಗದಲ್ಲಿ ನಮ್ಮೆಲ್ಲರ ಬದುಕನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಜೀವನದಲ್ಲಿ ಎದುರಾಗುವ ಪ್ರತಿ ಸಮಸ್ಯೆಗಳನ್ನು ಹಾಗೂ ಅದನ್ನು ಎದುರಿಸುವ ರೀತಿಯನ್ನು ಎಂದೀ ಡಿವಿಜಿ ತೆರೆದಿಟ್ಟಿದ್ದರು. ಅದು ಎಂದಿಗೂ ಪ್ರಸ್ತುತ ಎಂದವರು ಹೇಳಿದರು.
ಕುಂದಾಪುರದ ಹಿರಿಯ ಛಾಯಾಚಿತ್ರಕಾರ ಪುಂಡಲೀಕ ಶ್ಯಾನುಭೋಗ್ ಅವರಿಗೆ ನುಡಿ ಗೌರವ ಸಮರ್ಪಿಸಲಾಯಿತು. ಕನ್ನಡ ವೇದಿಕೆಯ ಅಧ್ಯಕ್ಷ ಸುಬ್ರಮಣ್ಯ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಮನಾ ಎನ್. ಕುಂದಾಪುರ ನಿರ್ವಹಿಸಿದರು.