Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನಮ್ಮೂರನ್ನು ಪ್ರಪಂಚಕ್ಕೆ ಕಟ್ಟಿಕೊಡುವ ತುಡಿತ ವಿಶೇಷವಾದುದು: ಮನು ಹಂದಾಡಿ
    ನಮ್ದೇ ಸಮಾಚಾರ

    ನಮ್ಮೂರನ್ನು ಪ್ರಪಂಚಕ್ಕೆ ಕಟ್ಟಿಕೊಡುವ ತುಡಿತ ವಿಶೇಷವಾದುದು: ಮನು ಹಂದಾಡಿ

    Updated:11/03/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಮೊಬೈಲ್ App ಬಿಡುಗಡೆಗೊಳಿಸಿ ಮಾತನಾಡಿದ ವಾಟ್ಸಪ್ ಹೀರೋ

    Click Here

    Call us

    Click Here

    ಕುಂದಾಪುರ: ಕ್ಷಣಾರ್ಧದಲ್ಲಿ ಸುದ್ದಿಯಲ್ಲಿ ಪ್ರಪಂಚದ ಮೂಲೆ ಮೂಲೆಗಳಿಗೂ ತಲುಪಿಸುವಷ್ಟು ಸಶಕ್ತವಾದ ತಂತ್ರಜ್ಞಾನ ಇಂದು ಬೆಳೆದು ನಿಂತಿದೆ. ದೂರದಲ್ಲಿ ಘಟಿಸುವ ಘಟನೆಗಳು ನಿರೀಕ್ಷೆಗಿಂತ ವೇಗವಾಗಿ ತಲುಪಿ ಚರ್ಚೆಯ ವಸ್ತುವಾಗುತ್ತಿರುವ ಹೊತ್ತಿನಲ್ಲಿ ನಮ್ಮೂರಿನ ವೈಶಿಷ್ಟ್ಯಗಳನ್ನು ಮೊದಲು ನಮ್ಮವರಿಗೆ ತಲುಪಿಸಬೇಕೆಂಬ ತುಡಿತ ವಿಶೇಷವಾದುದು. ಕುಂದಾಪುರದ ಸಂಸ್ಕೃತಿ, ಭಾಷಾ ಸೊಗಡು ಎಲ್ಲವನ್ನು ದಿನನಿತ್ಯದ ಆಗುಹೋಗುಗಳೊಂದಿಗೆ ಕಟ್ಟಿಕೊಡುವ ಪ್ರಯತ್ನ ಶ್ಲಾಘನೀಯ ಎಂದು ಶಿಕ್ಷಕ, ಸಾಮಾಜಿಕ ತಾಣದ ವಿಶಿಷ್ಟ ಧ್ವನಿ ಮನೋಹರ ಹಂದಾಡಿ(ಮನು ಹಂದಾಡಿ) ಹೇಳಿದರು.

    ಅವರು ಇಲ್ಲಿನ ಭಂಡಾರ್‌ಕಾರ್ಸ್ ಕಾಲೇಜಿನ ಎ.ವಿ. ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕುಂದಾಪ್ರ ಡಾಟ್ ಕಾಂ ಮೊಬೈಲ್ ಆಪ್ ಬಿಡುಗಡೆಗೊಳಿಸಿ ಮಾತನಾಡಿದರು. ಇಂದು ಮೊಬೈಲ್ ಇಲ್ಲದ ಕೈಗಳಿಲ್ಲ. ಅದು ನಮ್ಮ ಬದುಕನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಎಲ್ಲವನ್ನೂ ಮೊಬೈಲ್ ಭಾಷೆಯಲ್ಲಿಯೇ ಸಂವಹನಿಸಬೇಕಾದ ಕಾಲಘಟ್ಟದಲ್ಲಿ ಕುಂದಾಪ್ರ ಡಾಟ್ ಕಾಂ ಮೊಬೈಲ್ ಆಪ್ ಪರಿಚಯಿಸಿ ಕುಂದನಾಡಿನ ಸೊಗಡನ್ನು ಮತ್ತಷ್ಟು ಸುಲಭವಾಗಿ ಓದುಗರಿಗೆ ತಲುಪಿಸುವ ಕೆಲಸಕ್ಕೆ ಮುಂದಾಗಿದ್ದು ಶ್ಲಾಘನೀಯ ಎಂದರು.

    ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಎಎಸ್‌ಎನ್ ಹೆಬ್ಬಾರ್ ಮಾತನಾಡಿ ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ಬೆರಗು ಹುಟ್ಟಿಸುವಂತದ್ದು. ಕುಂದಾಪ್ರ ಕನ್ನಡಕ್ಕೆ ತನ್ನದೇ ವೈಶಿಷ್ಟ್ಯತೆ ಇದೆ. ಭಾಷೆಯೊಳಗಿನ ರಭಸ, ಶಕ್ತಿ ಭಾಷೆಯ ಸೊಗಡನ್ನು ಹೆಚ್ಚಿಸಿದೆ. ಕಲಾಕ್ಷೇತ್ರ ಕುಂದಾಪುರ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ ಪ್ರತಿಭೆಯಿದ್ದವರು ಎಲ್ಲೇ ಇದ್ದರೂ ಬೆಳೆಯುತ್ತಾರೆ. ಮಾಧ್ಯಮದ ಸವಾಲುಗಳನ್ನು ಎದುರಿಸಿಕೊಂಡು ಕುಂದಾಪ್ರ ಡಾಟ್ ಕಾಂ ಮತ್ತಷ್ಟು ಬೆಳೆಯುವಂತಾಗಲಿ ಎಂದರು.

    ಸುದ್ದಿಮನೆ ವಾರಪತ್ರಿಕೆ ಸಂಪಾದಕ ಸಂತೋಷ್ ಕೋಣಿ ಶುಭಶಂಸನೆಗೈಯುತ್ತಾ ಒಳ್ಳೆಯದನ್ನು ಪ್ರಶಂಸಿಸುವ ಕೆಟ್ಟದ್ದನ್ನು ಖಂಡಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇವೆರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಮನೋಭಾವ ಒಳ್ಳೆಯದಲ್ಲ. ಮಾಧ್ಯಮಗಳ ಕೆಡುಕುಗಳನ್ನು ದೂಷಿಸುವ ಮೊದಲು ನಾವು ಬದಲಾಗಬೇಕಾದುದು ಬಹುಮುಖ್ಯ ಎಂದರು.

    Click here

    Click here

    Click here

    Call us

    Call us

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಂಡಾರ್‌ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ| ಎನ್. ಪಿ. ನಾರಾಯಣ ಶೆಟ್ಟಿ ಮಾತನಾಡಿ ನಾವೇನು ಮಾತನಾಡಿದರೂ ಅದಕ್ಕೆ ಪ್ರತಿರೋಧ ಎದುರಿಸಬೇಕಾದ ಆತಂಕದ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ನಮ್ಮ ನೇರ ಹಾಗೂ ಸಕಾರಾತ್ಮವಾದ ನಡೆ ನಕಾರಾತ್ಮಕ ಅಂಶಗಳನ್ನು ಮೆಟ್ಟಿ ನಿಲ್ಲುವ ತಾಕತ್ತು ಹೊಂದಿದೆ. ತಂತ್ರಜ್ಞಾನವನ್ನು ಆವಹಿಸಿಕೊಂಡು ಮುನ್ನಡೆಯುತ್ತಿರುವ ದೇಶವನ್ನು ಮತ್ತಷ್ಟು ಶಕ್ತಿಯುತವಾದುದು ಎಂದು ತೋರಿಸಿಕೊಡುವ ತಾಕತ್ತು ನಮ್ಮಲಿದೆ ಎಂದು ಹೇಳಿದ್ದರು.

    ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಪ್ರಾರ್ಥಿಸಿದರು. ಕುಂದಾಪ್ರ ಡಾಟ್ ಕಾಂನ ಪ್ರವೀಣ ಟಿ. ಬೈಂದೂರು ಧನ್ಯವಾದಗೈದರು. ಉಪನ್ಯಾಸಕ ರಂಜಿತ್‌ಕುಮಾರ್ ಶೆಟ್ಟಿ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು.

    ನಿಮ್ಮ ಮೊಬೈಲ್ ಗಳಿಗೆ ಕುಂದಾಪ್ರ ಡಾಟ್ ಕಾಂ Mobile APP ಡೌನ್ ಲೋಡ್ ಮಾಡಿಕೊಳ್ಳಬೇಕಾದರೇ, ಮೊಬೈಲ್ ನಲ್ಲಿ ಈ ಲಿಂಕ್ ಕ್ಲಿಕ್ ಮಾಡಿ ( https://play.google.com/store/apps/details?id=com.kundapra.news ) ಅಥವಾ ನೇರವಾಗಿ ಪ್ಲೇ ಸ್ಟೋರ್ ಗೆ ಹೋಗಿ kundapra.com ಅಂತ ಸರ್ಚ್ ಮಾಡಿ ಅಲ್ಲಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

    ಬೆಂಗಳೂರಿನ ಇರೆಲೆಗೋ ಕಂಪೆನಿ ಮೊಬೈಲ್  ಕುಂದಾಪ್ರ ಡಾಟ್ ಕಾಂ Mobile APP ಅಭಿವೃದ್ಧಿಪಡಿಸಿದೆ.

    _MG_4253_MG_4212 _MG_4222 _MG_4255 _MG_4257 _MG_4260 _MG_4265 _MG_4271_MG_4233

    Like this:

    Like Loading...

    Related

    Kundapra.com
    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ತಮ್ಮದೇ ಅಸ್ಥಿತ್ವ ರೂಪಿಸಿಕೊಳ್ಳುವುದು ಕುಂದಾಪ್ರ ಮಣ್ಣಿನ ಗುಣ: ಶಾಸಕ ಗುರುರಾಜ ಗಂಟಿಹೊಳೆ

    19/07/2023

    ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಬೈಂದೂರುಗೆ ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ

    21/08/2016

    ವಾಸದೇವ ಭಟ್ ಅವರಿಗೆ ಪತ್ರಿಕಾ ದಿನದ ಗೌರವ ಪ್ರದಾನ

    30/06/2015

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ
    • ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d