ಕುಂದಾಪ್ರ ಡಟಾಟ್ ಕಾಂ ಸುದ್ದಿ.
ಕುಂದಾಪುರ: ದೇವಲ್ಕುಂದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ತಂತ್ರಿಗಳಾದ ನಾಗೇಶ್ವರ ಭಟ್ಟ ಅವರು ವಯೋಸಹಜ ಕಾರಣಗಳಿಂದ ತಮ್ಮ ತಂತ್ರಸೇವೆ ಹಾಗೂ ಅರ್ಚಕ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದುವ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಿಗೆ ಅಪೂರ್ವ ಭಕ್ತಿ ಸಮರ್ಪಣೆಯನ್ನು ಸಲ್ಲಿಸಿದರು.
ಸುಮಾರು ಹಲವು ದಶಕಗಳ ಕಾಲ ದೇವಾಲಯದಲ್ಲಿ ನಿಷ್ಠೆ, ಶ್ರದ್ಧೆ ಹಾಗೂ ಆಗಮೋಕ್ತ ಸಂಪ್ರದಾಯದಂತೆ ಸೇವೆ ಸಲ್ಲಿಸಿದ ಅವರು, ತಮ್ಮ ಸೇವಾ ಅವಧಿಯ ಸಮಾರೋಪದ ಅಂಗವಾಗಿ ಶ್ರೀ ವಿಷ್ಣುಮೂರ್ತಿ ದೇವರಿಗೆ ಬೆಳ್ಳಿಯ ಮುಖವಾಡ ಸೇರಿದಂತೆ ಒಟ್ಟು ಅಂದಾಜು ಏಳು ಕೆ.ಜಿ. ಬೆಳ್ಳಿ ಹಾಗೂ ನಿತ್ಯ ಮತ್ತು ವಿಶೇ? ಪೂಜಾ ಕೈಂಕರ್ಯಗಳಿಗೆ ಅಗತ್ಯವಿರುವ ವಿವಿಧ ಪೂಜಾ ಸಾಮಗ್ರಿಗಳನ್ನು ದೇವಸ್ಥಾನದ ಆಡಳಿತ ಮಂಡಳಿಯ ಸಮ್ಮುಖದಲ್ಲಿ ವಿಧಿವತ್ತಾಗಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಶ್ರೀ ವೇದಮೂರ್ತಿ ನಾಗೇಶ್ವರ ಭಟ್ಟ ಅವರ ದೀರ್ಘಕಾಲದ ಭಕ್ತಿಪೂರ್ವಕ, ನಿಸ್ವಾರ್ಥ, ಶಿಸ್ತುಬದ್ಧ ಹಾಗೂ ಆದರ್ಶ ಸೇವೆಯನ್ನು ಗೌರವಪೂರಕವಾಗಿ ವ್ಯಕ್ತಪಡಿಸಿದ್ದು, ಅವರ ಈ ಅಪೂರ್ವ ಸಮರ್ಪಣೆ ಮತ್ತು ಸೇವಾ ಮನೋಭಾವವು ಮುಂದಿನ ಪೀಳಿಗೆಗೆ ದೇವಾಲಯದ ಸೇವಾ ಪರಂಪರೆಗೆ ಸ್ಫೂರ್ತಿದಾಯಕವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.











