ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಉಪ್ಪುಂದದ ಪ್ರಧಾನ ಕಛೇರಿಗೆ ರಾಜ್ಯ ಹಾಗೂ ಹೊರ ರಾಜ್ಯಗಳ ನಬಾರ್ಡ್ನ ಅಧಿಕಾರಿಗಳ ನಿಯೋಗ ಭೇಟಿ ನೀಡಿ ಅಧ್ಯಯನ ನಡೆಸಿದರು.

ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ, ಸದಸ್ಯರಿಗೆ ನೀಡುತ್ತಿರುವ ಸೇವೆ ಹಾಗೂ ಸವಲತ್ತುಗಳ ಬಗ್ಗೆ, ಸದಸ್ಯರ ಠೇವಣಿ ಸದಸ್ಯರಿಗೆ ನೀಡಿದ ಸಾಲಗಳ ಬಗ್ಗೆ, ಸಂಘದ ಅಭಿವೃದ್ಧಿ ಹಾಗೂ ಸಂಘವು ಈಗಾಗಲೇ ಕೈಗೊಂಡಿರುವ ರೈತಸಿರಿ ಅಗ್ರಿಮಾಲ್ ಕಟ್ಟಡದ ಕಾಮಗಾರಿ ಇತ್ಯಾದಿಗಳ ಸವಿಸ್ತಾರವನ್ನ ಸಂಘದ ಉಪಾಧ್ಯಕ್ಷರಾದ ಮಂಜು ದೇವಾಡಿಗ ಅವರು ವಿವರಿಸಿದರು.
ಕೇರಳ ನಬಾರ್ಡ್ ಅಧಿಕಾರಿ ಜ್ಲಾನು ಸೌಂದರಿ ಅವರನ್ನು ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಕರ್ನಾಟಕದ ಬೆಂಗಳೂರು, ದಕ್ಷಿಣ ಕನ್ನಡ, ತೆಲಂಗಾಣ, ಆಂದ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯದ ನಬಾರ್ಡ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಸೇರಿ ಒಟ್ಟು 40 ಜನ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಬಾರ್ಡ್ ಅಧಿಕಾರಿಗಳಾದ ಶಕ್ತಿ ಪಿ. ಮೊಹೋಪತ್ರ, ಅಧಿಕಾರಿ ಶಿವರಾಜ್ , ಸಂಘದ ವಸೂಲಾತಿ ಅಧಿಕಾರಿ ಚಂದಯ್ಯ ಶೆಟ್ಟಿ, ಸ್ವ ಸಹಾಯ ಸಂಘಗಳ ಸಂಯೋಜಕರಾದ ಶ್ರೀಧರ್ ಕೆ. ಉಪಸ್ಥಿತರಿದ್ದರು.
ಸಂಘದ ಸಿ.ಇ. ಓ ವಿಷ್ಣು ಪೈ ಎನ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರ್ವಹಿಸಿದರು. ಸಂಘದ ಹಿರಿಯ ಸಹಾಯಕರಾದ ವಿಶ್ವನಾಥ್ ಅವರು ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.
















