Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ ಹೆಮ್ಮಾಡಿಯಲ್ಲಿ ಕರಗಿಲ್ಲ ಸ್ಮಶಾನ ಮೌನದ ಕಾರ್ಮೋಡ
    Recent post

    ಕುಂದಾಪುರ ಹೆಮ್ಮಾಡಿಯಲ್ಲಿ ಕರಗಿಲ್ಲ ಸ್ಮಶಾನ ಮೌನದ ಕಾರ್ಮೋಡ

    1 Comment
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ
    ಕುಂದಾಪುರ: ಆ ಪುಟಾಣಿಗಳಿಗೆ ಶಾಲೆಗೆ ಹೋಗುವ ತವಕ. ಅಮ್ಮ ಅಕ್ಕರೆಯಿಂದ ಸ್ನಾನ ಮಾಡಿಸಿ ಮಡಿಸಿಟ್ಟ ಯುನಿಫಾರ್ಮ್ ತೊಡಿಸಿ, ಪ್ರೀತಿಯಿಂದ ತಲೆಬಾಚಿ ಮುಖಕ್ಕೆ ತೆಳ್ಳಗಿನ ಪೌಡರ್ ಲೇಪಿಸಿದಾಗ ಗೋಡೆಗೆ ತಗಲಿಸಿದ್ದ ಗಡಿಯಾರದ ಪುಟ್ಟ ಮುಳ್ಳು 9 ಅಂಕೆಯ ಮೇಲೆ ತಣ್ಣಗೆ ಒರಗಿತ್ತು. ಅಬ್ಬಾ ಶಾಲೆಯ ಕಾರು ಬರುವ ಹೊತ್ತಾಯಿತು, ಮಮ್ಮಿ ಟಿಫನ್ ಬಾಕ್ಸ್ ಎಲ್ಲಿ ಎಂದು ಕೇಳಿದ ಮಗುವಿಗೆ ಇಗೋ ರೆಡಿ ಎನ್ನುವಷ್ಟರಲ್ಲಿ ಹೊರಗೆ ಕಾರಿನ ಸದ್ದು. ಮಮ್ಮಿ ಬಾಯ್.. ಎಂದ ಮಕ್ಕಳು ಕಾರಿನಲ್ಲಿ ಕುಳಿತೇ ಬಿಟ್ಟಿದ್ದವು. ಅದು ಮಕ್ಕಳು ಹೇಳಿದ ಕಟ್ಟಕಡೆಯ ಬಾಯ್.. ಆಗಿತ್ತಾ! ಇನ್ನೆಂದೂ ಆ ನಿಷ್ಪಾಪಿ ಕರುಳಿನ ಕುಡಿಗಳು ಮತ್ತೆ ಮನೆಯ ಹೊಸಿಲಿನ ಒಳಗೆ ಕಾಲಿಡಲಾರವು ಎಂಬ ಒಂದೂ ಶಂಕೆ ಇಲ್ಲದೇ ಮಕ್ಕಳಿಗೆ ಟಾಟಾ ಹೇಳಿದ ಹೆತ್ತವರಿಗೆ ಶಾಲೆಯ ಅನತಿ ದೂರದಲ್ಲಿ ಸಾವೆಂಬ ಸಾವು ಕಕ್ಕರುಗಾಲಿನಲ್ಲಿ ಮಕ್ಕಳಿಗಾಗಿ ಸಹನೆಯಿಂದ ಪಹರೆ ಕುಂತಿರುವ ವಿಷಯವಾದರೂ ಎಲ್ಲಿ ಗೊತ್ತಿತ್ತು? ಎಂದಿನಂತಿರಲಿಲ್ಲಾ ಮುಂದಿನ ಆ ಕರಾಳ ಕ್ಷಣಗಳು.!

    Click Here

    Call us

    Click Here

    ತ್ರಾಸಿ ಸಮೀಪವಿರುವ ಡೊನ್ ಬೊಸ್ಕೊ ಇಂಗ್ಲಿಷ್ ಮಾಧ್ಯಮ ಶಾಲೆಗೆ ತಲ್ಲೂರು, ಹೆಮ್ಮಾಡಿ, ಕನ್ನಡ ಕುದ್ರು ಪರಿಸರದಿಂದ ಎಂದಿನಂತೆ ಸುಮಾರು ೧೮ ಮಕ್ಕಳನ್ನು ಹತ್ತಿಸಿಕೊಂಡ ಕಾರು ಚಾಲಕ ಮಾರ್ಟಿನ್ ಒಲಿವೆರಾ ಕಾರನ್ನು ಒಡಿಸುತ್ತಲಿದ್ದ, ಅದೆ ಶಾಲೆಯ ಶಿಕ್ಷಕಿಯಾಗಿರುವ ಅವ ಪತ್ನಿ ಫಿಲೋಮಿನಾ, ಮಗ ಅಲ್ವಿಟಾ ಸಹ ಉಳಿದ ಮಕ್ಕಳೊಂದಿಗೆ ಅದೇ ಕಾರಿನಲ್ಲಿದ್ದಾರೆ. ಮುಂದಿನ ಮಾರಣಹೋಮಕ್ಕೆ ಸಾಕ್ಷಿಯಾಗಬಲ್ಲೆನೆಂಬ ಕಿಂಚಿತ್ ಅನುಮಾನವಿಲ್ಲದೇ ಮಳೆ ಮಾತ್ರ ಒಂದೇ ಸಮನೆ ಸುರಿಯುತಲಿದೆ. ಮಕ್ಕಳು ಕಾರಿನಲ್ಲಿ ಎಂದಿನಂತೆ ತಮ್ಮದೇ ಆದ ಚಿನ್ನಾಟದಲ್ಲಿ ಮುಳುಗಿ ಹೋಗಿದ್ದಾರೆ. ಶಾಲೆಯ ದಿಕ್ಕಿನತ್ತ ರಭಸದಿಂದ ಕಾರು ಹೆದ್ದಾರಿಯಲ್ಲಿ ಸಾಗುತ್ತಿದ್ದರೆ, ಅತ್ತ ಮೊವ್ವಾಡಿಯ ತಿರುವಿನಲ್ಲಿ ಅಷೊತ್ತಿನಿಂದ ಸದ್ದಿಲ್ಲದೇ ಕುಂತಿದ್ದ ಸಾವು ವಿಕಾರವಾಗಿ ಆಕಳಿಸಿ ಎದ್ದು ನಿಂತಿದೆ. ರಾಷ್ತ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರನ್ನು ಶಾಲೆಗೆ ಸಾಗುವ ಮೊವಾಡಿ ತಿರುವಿನಲ್ಲಿ ಬಲಕ್ಕೆ ತಿರುಗಿಸಿ ಬಿಟ್ಟಿದ್ದಾನೆ ಮಾರ್ಟಿನ್, ಅದೇ ಸಮಯಕ್ಕೆ ಕುಂದಾಪುರದತ್ತ ಸಾಗುತ್ತಿದ್ದ ಬಸ್ಸೊಂದು ನೇರವಾಗಿ ಕಾರಿಗೆಅಪ್ಪಳಿಸಿದೆ ಅಷ್ಟೇ. ಸಾವಿನ ರುದ್ರ ತಾಂಡವಕ್ಕೆ ಸ್ಥಳದಲ್ಲೀಯೇ ಮೂವರು ಮಕ್ಕಳು ರಕ್ತಸಿಕ್ತವಾಗಿ ಜೀವ ಚೆಲ್ಲಿದರೆ, ಮಾರಣಾಂತಿಕ ಗಾಯಗಳೊಂದಿಗೆ ಸಾವಿನೊಂದಿಗೆ ಸೆಣಸಾಡುತ್ತಿರುವ ಉಳಿದ ಮಕ್ಕಳ ಚೀರಾಟ ಮುಗಿಲು ಮುಟ್ಟಿದೆ.ಮಕ್ಕಳ ಶಾಲಾಬ್ಯಾಗ್, ಕೊಡೆ, ಟಿಪನ್ ಬಾಕ್ಸ್, ಶೂ ಗಳು ಜಿನುಗುತ್ತಿರುವ ನೆತ್ತರಿನೊಂದಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕುಂದಾಪ್ರ ಡಾಟ್ ಕಾಂ ವರದಿ.

    ಆ ಕೂಡಲೇ ಗಾಯಗೊಂಡ ಮಕ್ಕಳನ್ನು ಕುಂದಾಪುರ ಹಾಗೂ ಮಣಿಪಾಲದ ಆಸ್ಪತ್ರೆಗಳಿಗೆ ರವಾನಿಸಲಾಯಿತಾದರೂ, ಬೆಂಬಿಡದ ದುಷ್ಟ ಸಾವು ಒಂದರ ಹಿಂದೆ ಒಂದರಂತೆ ಮತ್ತೇ ಐದು ಪುಟ್ಟ ಮಕ್ಕಳಿಗೆ ತನ್ನ ಸಹಿಯನ್ನು ಜಡಿದು, ಅನ್ವಿಟಾ,ಅನನ್ಬ, ನಿಖಿತಾ (ಅಕ್ಕ-ತಂಗಿ), ರೊಯ್ಸಾನ್, ಅಲ್ವಿಟಾ,ಕ್ಲರೀಶಾ, ಕ್ಲೆರಿಷ್ಟಾ , ಡೆಲ್ಫಿನ್ ಸೇರಿದಂತೆ ಒಟ್ಟು ೮ ಅಮಾಯಕ ಮುದ್ದು ಜೀವಗಳನ್ನು ತಂಜೊತೆ ಇನ್ಬಿಲ್ಲದಂತೆ ಸೆಳದೊಯ್ದಿದೆ. ಮಿನೋಶಾ ಅರ್ಫಾ,ಮಾರಿಯೋ, ಲೀಸಾ, ಎನ್ಸ್ತನ್, ಫ್ರಿಯಾನಾ. ಗಾಯಗೊಂಡಿದ್ದಾರೆ. ಮಮ್ಮಿಮಮ್ಮಿ ಎಂದು ಕುಂದಾಪುರ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳ ಅರ್ತನಾದ ಎಂತಹವರ ಕಣ್ಣಲ್ಲೂ ನೀರು ತರಿಸುವಂತಿದ್ದು, ಜರಗಿ ಹೋದ ದಾರುಣತೆಗೆ ಇಡೀ ಕುಂದಾಪುರಕ್ಕೆ ಕುಂದಾಪುರವೇ ಕಂಬನಿ ಮಿಡಿದಿದೆ. ಕುಂದಾಪ್ರ ಡಾಟ್ ಕಾಂ ವರದಿ

    ಶಾಲೆಯ ಬೇಜವಾಬ್ದಾರಿ: ಬೇಕಾಬಿಟ್ಟಿ ಫೀಸು ತೆಗೆದು ಕೊಳ್ಳುವ ಶಾಲೆ ಮಕ್ಕಳ ಸಂಚಾg ವ್ಯವಸ್ಥೆಯ ಬಗ್ಗೆ ಕಾಳಜಿ ವಹಿಸದಿರುವುದು ಆದರ ಬೇಜವ್ದಾರಿಯನ್ನು ಎತ್ತಿ ತೋರಿಸುತ್ತಿದೆ . ಅಷ್ಟು ಮಕ್ಕಳನ್ನು ಓಮ್ನಿಯಂತಹ ವಾಹನದಲ್ಲಿ ಕುರಿ ಮಂದೆಯಂತೆ ತುಂಬಿಸಿ ಶಾಲೆಗೆ ಕರೆ ತರಲಾಗುತ್ತಿದ್ದರೂ ಈ ಬಗ್ಗೆ ಗಮನ ಹರಿಸದ ಶಾಲಾಡಳಿತದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

    ಚಾಲಕನ ನಿರ್ಲಕ್ಷ್ಯ: ಇದೀಗ ಅಪಘಾತದಲ್ಲಿ ಗಾಯಗೊಂಡಿರುವ ಕಾರುಮಾಲೀಕಹಾಗೂ ಚಾಲಕ ಮಾರ್ಟಿನ್ ಒಲಿವೆರಾ ರ ಪತ್ನಿ ಈ ಹಿಂದೆ ಬಜಪೆಯಲ್ಲಿ ನಡೆದ ವಿಮಾನಫಘಾತದಲ್ಲಿ ಮರಣ ಹೊಂದಿದ್ದು ನಂತರ ಫಿಲೋಮಿನಾ ಎಂಬಾಕೆಯನ್ನು ಅವರು ಮದುವೆಯಾಗಿದ್ದರು. ಫಿಲೋಮಿನಾ ಇದೇ ಡೋನ್ ಬಾಸ್ಕೊ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ದಂಪತಿಗಳ ಪುತ್ರನಾದ ಅಲ್ವಿಟಾ ಇದೇ ಶಾಲೆಯಲ್ಲಿ ಓದುತ್ತಿದ್ದಾನೆ. ಅಪಘಾತಕ್ಕೆ ಕಾರು ಚಾಲಕನ ನಿರ್ಲಕ್ಷತೆಯೇ ಕಾರಣವೆನ್ನಲಾಗುತ್ತಿದ್ದು, ತನ್ನ ಚಿಕ್ಕ ಎಡವಟ್ಟಿಗೆ ಉಳಿದ ಅಮಾಯಕ ಮಕ್ಕಳೊಂದಿಗೆ ತನ್ನ ಮಗ ಅಲ್ವಿಟನನ್ನೂ ಸಹಾ ಸಾವಿನ ತೆಕ್ಕೆಗೆ ಅಟ್ಟಿಸಿಬಿಟ್ಟಿದ್ದಾನೆ ಮಾರ್ಟಿನ್.

    Click here

    Click here

    Click here

    Call us

    Call us

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024

    1 Comment

    1. Pingback: 8 ಕಂದಮ್ಮಗಳ ಬಲಿ ಪಡೆದ ಮೊವಾಡಿ ಕ್ರಾಸ್ ದುರಂತಕ್ಕೆ 1 ವರ್ಷ. ಬದಲಾಗಿಲ್ಲ ಪರಿಸ್ಥಿತಿ. | Kundapra.com ಕುಂದಾಪ್ರ ಡಾಟ್ ಕಾಂ

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d