ಮೂಡುಬಿದಿರೆ: `ಸರಕಾರಿ ಶಾಲೆಯೇ ಇರಲಿ ಅಥವಾ ಖಾಸಗಿ ಶಾಲೆಯೇ ಇರಲಿ ಅವುಗಳ ನಡುವಿನ ಅಸಮಾನತೆಯನ್ನು ಹೋಗಲಾಡಿಸಿ ಏಕರೂಪ ಶಿಕ್ಷಣ ನೀತಿಯನ್ನು ತರಬೇಕಿದೆ. ಈ ಎರಡೂ ವ್ಯವಸ್ಥೆಗಳ ಗೊಂದಲಗಳು ನಿರ್ಮಿಸುವ ಕಂದರಗಳನ್ನು ದಾಟುವುದು ಎಲ್ಲ ವಿದ್ಯಾರ್ಥಿಗಳಿಗೂ ಸಾಧ್ಯವಿಲ್ಲ. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳಾಗಬೇಕಿದೆ. ದೇಸೀ ಚಿಂತನೆಗಳಿಗೆ ಒತ್ತು ಕೊಟ್ಟು ಅದನ್ನು ಅನುಷ್ಠಾನಗೋಳಿಸುವ ಗಟ್ಟಿತನ ನಮ್ಮ ನಾಯಕರಿಗೆ ಬೇಕಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ-೨೦೧೬ರಲ್ಲಿ ಶಿಕ್ಷಣದ ಕುರಿತು ವಿಶೇಷೋಪನ್ಯಾಸ ನೀಡಿದ ಅವರು ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಕೆಲವು ಮಹತ್ವದ ಸಂಗತಿಗಳನ್ನು ವಿಶ್ಲೇಷಿಸಿದರು. ಹೊರರಾಜ್ಯದ ಐಎಎಸ್ ಅಧಿಕಾರಿಗಳ ಜೊತೆಗೆ ಎಸಿ ರೂಮಿನಲ್ಲಿ ಚರ್ಚೆ ಮಾಡಿ ನಮ್ಮ ರಾಜ್ಯದ ಶಿಕ್ಷಣ ನೀತಿಗಳನ್ನು ರೂಪಿಸಲಾಗುತ್ತಿದೆ. ಆದರೆ ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಾರ್ಯ ಮಾಡಿದ ಅನುಭವಿಗಳ ಜೊತೆಗೆ ಚರ್ಚಿಸಿ ನಮ್ಮ ರಾಜ್ಯಕ್ಕೆ ಬೇಕಾದ ಪ್ರಬಲ ಶಿಕ್ಷಣ ನೀತಿಗಳನ್ನು ರೂಪಿಸುವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ ಮೂಡುಬಿದರೆ: ಬೋಲ್ಟ್ನಲ್ಲಿರು ನಟ್ ಸರ್ರನೇ ತಿರುಗಿ ಬೇರಾಗುತ್ತೆ. ಕೈಯಲ್ಲಿರುವ ಕಾರ್ಡ್ ಮಾಯವಾಗುತ್ತೆ. ನಾವು ಅಂದುಕೊಂಡ ಕಾರ್ಡುಗಳೇ ಜಾದೂಗಾರನ ಕೈಯಿಂದ ಹೊರಬರುತ್ತೆ. ಜಾದೂಗಾರನ ವೇಷತೊಟ್ಟು, ಜಾದೂ ದಂಡವನ್ನು ಹಿಡಿದಿರುವ ವ್ಯಕ್ತಿಯೋರ್ವರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ ಮೂಡುಬಿದಿರೆಯ ಆಳ್ವಾಸ್ ನುಡಿಸಿರಿಯಲ್ಲಿ ಗಮನ ಸೆಳೆಯುತ್ತಿದ್ದರು. ವಿಕ್ರಮ್ ಜಾದೂಗಾರ್. ಮಡಿಕೇರಿಯ ವೃತ್ತಿಪರ ಜಾದೂಗಾರರು. ಮೂವತ್ತು ವರ್ಷಗಳಿಂದ ಜಾದೂಕಲೆಯನ್ನೇ ಕಸುಬಾಗಿಸಿಕೊಂಡಿರುವ ಅವರು ಈವರೆಗೆ ೨,೫೦೦ಕ್ಕೂ ಹೆಚ್ಚು ಜಾದೂ ಪ್ರದರ್ಶನಗಳನ್ನು ನೀಡಿದ್ದಾರೆ. ನುಡಿಸಿರಿಯಲ್ಲಿ ಕ್ಲೋಸಪ್ ಮ್ಯಾಜಿಕ್ ಪ್ರದರ್ಶಸುತ್ತಿರುವ ಅವರು ಪ್ರೇಕ್ಷಕರನ್ನು ಹತ್ತಿರದಲ್ಲಿಯೇ ನಿಲ್ಲಿಸಿಕೊಂಡು ನೆಟ್-ಬೋಲ್ಟ್, ರಿಂಗ್ ರೋ, ಕಾರ್ಡ್ ಟ್ರಿಕ್ಸ್ಗಳನ್ನು ಐದು ನಿಮಿಷಗಳ ಕಾಲ ಪ್ರದರ್ಶಿಸುತ್ತಿದ್ದರೇ, ಮಕ್ಕಳು ವಿದ್ಯಾರ್ಥಿಗಳಂತೂ ಗುಂಪು ಗುಂಪಾಗಿ ನಿಂತು ಚಿಕಿತರಾಗಿ ನೋಡುತ್ತಿದ್ದಾರೆ.
ಮೂಡುಬಿದಿರೆ: `ಮಾಧ್ಯಮಗಳು ನಾಳೆಗಳನ್ನು ನಿರ್ಮಾಣ ಮಾಡುತ್ತಿವೆಯಾ ಅಥವಾ ನಿರ್ನಾಮ ಮಾಡುತ್ತಿವೆಯಾ ಎಂಬ ಪ್ರಶ್ನೆ ಇಂದಿನ ಮಾಧ್ಯಮಗಳನ್ನು ನೋಡಿದಾಗ ಉದ್ಭವಿಸುವುದು ಖಂಡಿತ!’ ಹೀಗೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಉದಯವಾಣಿ ಮಾಧ್ಯಮ ಸಮೂಹದ ಮುಖ್ಯಸ್ಥ ರವಿ ಹೆಗಡೆ. ಆಳ್ವಾಸ್ ನುಡಿಸಿರಿಯಲ್ಲಿ ನಡೆದ `ಮಾಧ್ಯಮ-ನಾಳೆಗಳ ನಿರ್ಮಾಣ’ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. `ಸ್ಪರ್ಧೆ ಇದ್ದಾಗ ಅದರಿಂದ ಹೊರಬರುವ ಫಲಿತಾಂಶ ಯಾವಾಗಲೂ ಗುಣಮಟ್ಟದ್ದಾಗಿರುತ್ತದೆ ಎಂಬುದು ಎಲ್ಲರ ನಂಬಿಕೆ. ದುರದೃಷ್ಟವಶಾತ್ ಮಾಧ್ಯಮಗಳಲ್ಲಿ ಇದಕ್ಕೆ ವ್ಯತಿರಿಕ್ತ ಬದಲಾವಣೆ ಕಂಡು ಬರುತ್ತಿದೆ. ಮಾಧ್ಯಮಗಳಲ್ಲಿ ಪ್ರಬುದ್ಧತೆಯ ಕೊರತೆ ಉಂಟಾಗಿರುವುದರಿಂದ ಈ ನಕಾರಾತ್ಮಕ ಬೆಳವಣಿಗೆ ಉಂಟಾಗುತ್ತಿದೆ’ ಎಂದರು. `ಮಾಧ್ಯಮಗಳು ಯಾವಾಗಲೂ ನಕಾರಾತ್ಮಕ ಸುದ್ದಿಗಳನ್ನು ಕೊಡುತ್ತವೆ ಎಂಬ ಆರೋಪ ಮಾಧ್ಯಮಗಳ ಮೇಲಿದೆ. ಆದರೆ ಇತ್ತೀಚೆಗೆ ನಡೆಸಿದ ಒಂದು ಟಿ.ಆರ್.ಪಿ. ಸಮೀಕ್ಷೆಯ ಪ್ರಕಾರ ಹೀಗೆ ಮಾಧ್ಯಮಗಳ ಮೇಲೆ ಆರೋಪ ಮಾಡಿದ ಜನರೇ ನಕಾರಾತ್ಮಕ ಸುದ್ದಿಗಳನ್ನು ನೋಡುತ್ತಿದ್ದರು ಎಂಬ ಅಂಶ ಗಮನಕ್ಕೆ ಬಂದಿದೆ. ಆದರೆ ಮಾಧ್ಯಮಗಳು ಈ ಬಗೆಯ ಸುದ್ದಿಯನ್ನು ಕೊಡುವುದರಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿದ್ದು ಖಂಡಿತ. ಖಾಸಗಿ ವಾಹಿನಿಯೊಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನದ ವಿಚಾರಗೋಷ್ಠಿಯಲ್ಲಿ ‘ರಾಜಕಾರಣ’ದ ಬಗ್ಗೆ ವಿಷಯ ಮಂಡಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಆಳ್ವಾಸ್ ಕಾಲೇಜಿಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪ್ರವೇಶ ಹೆಚ್ಚುತ್ತಿರುವ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡದ್ದು ಹೀಗೆ ದಕ್ಷಿಣ ಕನ್ನಡದಲ್ಲಿ ಪ್ರತಿವರ್ಷ ೨೫ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಉಳಿದ ಜಿಲ್ಲೆಗಳಲ್ಲಿಯೂ ಇದೆ ಸ್ಥಿತಿ ಇದೆ. ಆದರೆ ಮೂಡಬಿದಿರೆಯ ಆಳ್ವಾಸ್ ಕನ್ನಡ ಶಾಲೆಗೆ ಮಾತ್ರ ಪ್ರವೇಶ ಪರೀಕ್ಷೆ ಬರೆಯಲು ೮೦೦೦ದಷ್ಟು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರವೇಶ ನೀಡಬೇಕೆಂದರೆ ಡಾ. ಆಳ್ವರು ದಕ್ಷಿಣ ಕನ್ನಡದಲ್ಲಿಯೇ ೨೮ ಶಾಲೆಗಳನ್ನು ತೆರೆಯಬೇಕಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಉತ್ಕೃಷ್ಟ ಶಿಕ್ಷಣ ಹೇಗೆ ನೀಡಬೇಕೆಂಬುದಕ್ಕೆ ಡಾ. ಮೋಹನ್ ಆಳ್ವರ ಸಂಸ್ಥೆಯೇ ಮಾದರಿ. ಹೀಗಾಗಿ ಅವರನ್ನು ರಾಜ್ಯದ ಶಿಕ್ಷಣ ಮಂತ್ರಿಯಾಗಿಸುವುದು ಒಳಿತು.
ಮೂಡಬಿದಿರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನ ನಡೆದ ಶತಮಾನದ ನಮನ ವಿಶೇಶೋಪನ್ಯಾಸದಲ್ಲಿ ಡಾ. ದೇ ಜವರೇಗೌಡರ ಕುರಿತು ಕನ್ನಡ ಪ್ರಾಧ್ಯಪಕ ಹಾಗೂ ಪ್ರಾಚಾರ್ಯರಾದ ಡಾ. ಸಿ. ಪಿ ಕೃಷ್ಣ ಕುಮಾರ್ ಮಾತನಾಡಿದರು. ಕನ್ನಡದ ಶತಪುರುಷರೆಂದೇ ಹೆಸರಾಗಿರುವ ಇವರು ಚೆನ್ನರಾಯ ಪಟ್ಟಣದ ಒಂದು ಕುಗ್ರಾಮದವರು. ತಮ್ಮ ವೈಯಕ್ತಿಕ ಜೀವನ ಹೋರಾಟದ ನಡುವೆಯೂ ಕನ್ನಡ ಪರವಾದ ಪ್ರಬಲ ಹೋರಾಟರಾಗಿ ಗುರುತಿಸಿಕೊಂಡವರು. ಉತ್ತಮ ಆಡಳಿತಗಾರ, ಶಿಕ್ಷಣತಜ್ಙ, ಸಾಹಿತಿ ಹಾಗೂ ಕನ್ನಡಪರ ಹೋರಾಟಗಾರ, ಅತ್ಯಂತ ಕ್ರೀಯಾಶೀಲ ವ್ಯಕ್ತಿಯಾಗಿದ್ದ ಜವರೇಗೌಡರು ಕನ್ನಡಕ್ಕೆ ಶ್ರೇಷ್ಠ ಸ್ಥಾನಮಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಆಳ್ವಾಸ್ ಪದವಿ ಕಾಲೇಜಿನ ಪದವಿ ವಿಬಾಗದ ಟಿ. ಎನ್. ಎ. ಖಂಡಿಗೆ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡಬಿದಿರೆ: ತಲೆಯಲ್ಲಿ ಮಲಹೊರುವ ಪದ್ಧತಿಯನ್ನು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನಿಲ್ಲಿಸಿ, ಭೂ ಸುಧಾರಣೆ ಚಳುವಳಿ ಪ್ರಾರಂಭ ಮಾಡಿದ ದೇವರಾಜ ಅರಸರು ಭಾರತದಲ್ಲಿ ಸಾರ್ವಕಾಲಿಕ ಮಾದರಿ ರಾಜಕರಣಿಯಾಗಿ ಮಿಂಚಿದವರು ಎಂದು ಬಿ. ಎಲ್ ಶಂಕರ್ ತಿಳಿಸಿದರು. ಅವರು ವಿದ್ಯಾಗಿರಿಯ ರತ್ನಾಕರ ವರ್ಣಿ ವೇದಿಕೆಯಲ್ಲಿ ಆಳ್ವಾಸ್ ನುಡಿಸಿರಿ-೨೦೧೬ ರ ಎರಡನೇ ದಿನದ ‘ಶತಮಾನದ ನಮನ ಡಿ. ದೇವರಾಜ್ ಅರಸು’ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ ಹಳ್ಳಿಗಳಲ್ಲಿ ಯಾರು ಸೋಮಾರಿಗಳಾಗಬಾರದು ಎಂಬ ಸದ್ದೂದೇಶದಿಂದ ನಿರುದ್ಯೋಗಿಗಳಿಗೆಲ್ಲ ಉಪಹಾರ ಗೃಹದಲ್ಲಿ ಕೆಲಸ ಕೊಡಿಸಿ ಮಾನವ ಕಲ್ಯಾಣ ಮಾಡಿದ ಪ್ರಾಮಣಿಕವಾಗಿ ರಾಜಕಾರಣಿ ಎಂದು ತಿಳಿಸಿದರು. ದಲಿತ ಸಾಹಿತ್ಯ ಹಾಗೂ ಹಿಂದುಳಿದ ಸಾಹಿತ್ಯ ಮುಂಚೂಣಿಗೆ ಬರುವಂತೆ ಮಾಡಿದುದರಲ್ಲಿ ದೇವರಾಜ್ ಅರಸರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಖಾಸಗಿಯಾಗಿ ಬಡ್ಡಿ ವ್ಯವಹಾರ ಮಾಡುವವರಿಗೆ ಕಡಿವಾಣ ಹಾಕುವಂತಹ ಕೆಲಸ ಮಾಡಿದ ದೇವರಾಜ ಅರಸರದ್ದು ಭಾರತದಲ್ಲಿ ಶತಮಾನ ಕಳೆದರು ನೆನಪು ಮಾಡುವಂತಹ ವ್ಯಕ್ತಿತ್ವ ಅವರದ್ದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಮ್ಮೇಳನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಪ್ರಜಾಪ್ರಭುತ್ವದಲ್ಲಿ ಸಾಮಾನ್ಯನೂ ಕೂಡ ಬಹುಮುಖ್ಯ. ಅವರ ಆಶೋತ್ತರಗಳನ್ನು ಈಡೇರಿಸುವುದು ರಾಜಕಾರಣಿಗಳ ಮುಖ್ಯ ಗುರಿಯಾಗಬೇಕು. ದುರಾದೃಷ್ಟವಶಾತ್ ಇಂದಿನ ರಾಜಕಾರಣಿಗಳಿಗೆ ಜನಪರ ಕಾಳಜಿಗಿಂತ ಸ್ವಹಿತಾಸಕ್ತಿಗಳೇ ಮುಖ್ಯವಾಗುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ವಿಷಾದ ವ್ಯಕ್ತಪಡಿಸಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ `ಧರ್ಮ ಮತ್ತು ರಾಜಕಾರಣ: ನಾಳೆಗಳ ನಿರ್ಮಾಣ’ ವಿಚಾರಗೋಷ್ಠಿಯಲ್ಲಿ ರಾಜಕೀಯ ಕ್ಷೇತ್ರದಲ್ಲಾಗಬೇಕಿರುವ ಬದಲಾವಣೆಗಳ ಬಗ್ಗೆ ಮಾತನಾಡಿದರು. ರಾಜಕೀಯ ಹಾಗೂ ರಾಜಕಾರಣಗಳ ಬಗ್ಗೆ ಜನರ ನಿರೀಕ್ಷೆಗಳು ಬದಲಾಗಬೇಕಿವೆ. ತಾನು ಆಯ್ಕೆ ಮಾಡಿದ ಜನಪ್ರತಿನಿಧಿಯನ್ನು ಪ್ರತಿಯೊಬ್ಬ ಪ್ರಜೆಯೂ ಧೈರ್ಯದಿಂದ ಪ್ರಶ್ನಿಸುವಂತಾಗಬೇಕು. ಅವರ ಯೋಜನೆಗಳು, ಆಶೋತ್ತರಗಳ ಬಗ್ಗೆ ಮುಕ್ತವಾಗಿ ತಿಳಿದುಕೊಳ್ಳುವಂತಾಗಬೇಕು. ಆದರೆ ಇಂದು ಹೆಚ್ಚಿನ ಸಂದರ್ಭಗಳಲ್ಲಿ ತೀರಾ ವೈಯಕ್ತಿಕ ಕುಶಲೋಪರಿಗಳಿಗೆ ರಾಜಕಾರಣಿಗಳ ಹಾಗೂ ಶ್ರೀಸಾಮಾನ್ಯನ ಸಂಬಂಧ ಸೀಮಿತವಾಗುತ್ತಿದೆ. ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಒಬ್ಬ ಪ್ರಬಲ ನಾಯಕನ ಅವಶ್ಯಕತೆ ನಮಗಿದೆ. ಇಂದಿನ ರಾಜಕಾರಣ, ಚಳುವಳಿಗಳಿಗೆ ಮುಂದೆ ಯಾರಿದ್ದಾರೆಂಬುದು ಮುಖ್ಯವಾಗುವುದಿಲ್ಲ. ಹಿಂದೆ ಯಾರಿದ್ದಾರೆಂಬುದು ಮಾತ್ರ ಮುಖ್ಯವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವ್ಯಕ್ತಿಯೋರ್ವ ಪ್ರಾಮಾಣಿಕತೆ, ನಿಸ್ವಾರ್ಥಪರತೆ, ಸಾತ್ವಿಕತೆ, ವೃತ್ತಿಗೌರವವನ್ನು ಹೊಂದಿರುವುದೇ ನಿಜವಾದ ಧರ್ಮ. ಜಪ-ತಪ, ಹೋಮ ಹವನ, ಪೂಜೆ ಪುನಸ್ಕಾರಗಳು ಧಾರ್ಮಿಕ ಆಚರಣೆಗಳಷ್ಟೇ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಮಠದ ವೀರೇಶಾನಂದ ಸ್ವಾಮಿ ಹೇಳಿದರು. ಆಳ್ವಾಸ್ ನುಡಿಸಿರಿಯಲ್ಲಿ `ಧರ್ಮ ಮತ್ತು ರಾಜಕಾರಣ: ನಾಳೆಗಳ ನಿರ್ಮಾಣ’ ವಿಚಾರಗೋಷ್ಠಿಯಲ್ಲಿ ಧರ್ಮದ ಕುರಿತು ಮಾತನಾಡಿದರು. ಸ್ವಾಮೀಜಿಗಳು, ಸಂನ್ಯಾಸಿಗಳು ಮಾತ್ರವೇ ಧರ್ಮವನ್ನು ಆಚರಿಸಬೇಕೆಂಬ ತಪ್ಪು ಕಲ್ಪನೆಯಿದೆ. ಆದರೆ ಧರ್ಮದ ಆಚರಣೆ ಕೇವಲ ಸಂನ್ಯಾಸಿಗಳಿಗೆ ಸೀಮಿತವಲ್ಲ. ಪ್ರತಿಯೊಬ್ಬ ಮನುಷ್ಯನೂ ತನ್ನ ನಿಜವಾದ ಧರ್ಮವನ್ನು ಆಚರಿಸುವಂತಾಬೇಕು. ಧರ್ಮವೆಂಬುದು ಶೂರರಿಗೇ ಹೊರತು ಹೇಡಿಗಳಿಗಲ್ಲ ಎಂದರು. ಯಾವ ಸಮಾಜದಲ್ಲಿ ಶ್ರೇಷ್ಠ ತತ್ವಗಳು ಅನುಷ್ಠಾನಗೊಳ್ಳುತ್ತವೆಯೋ ಅದು ಅತ್ಯಂತ ಶ್ರೇಷ್ಠತಮ ಸಮಾಜವಾಗುತ್ತದೆ. ಒಬ್ಬ ಅತ್ಯುತ್ತಮ ವ್ಯಕ್ತಿಯ ಅಂತರಂಗದ ಸಾಮರ್ಥ್ಯ, ಪರಿಪೂರ್ಣತೆಯಿಂದ ಸಮಾಜಕ್ಕೆ ಉತ್ತಮ ಸಂಸ್ಕೃತಿ ದೊರೆಯಬಲ್ಲದು. ಉನ್ನತ ಸಂಸ್ಕಾರಗಳು ಸಮಾಜಕ್ಕೆ ದೊರೆಯದೇ ಹೋದರೆ ಒಬ್ಬ ವ್ಯಕ್ತಿಯ ಜೊತೆಗೆ ಅವನ ಭವಿಷ್ಯದ ಪೀಳಿಗೆಯೂ ಅದಕ್ಕೆ ಬಲಿಯಾಗುತ್ತದೆ. ಆದ್ದರಿಂದ ಸನಾತನ ಧರ್ಮದ ಆಚರಣೆ ತುಂಬಾ ಮುಖ್ಯವಾಗುತ್ತದೆ.…
ಕುಂದಾಪ್ರ ಡಾಟ್ ಕಾಂ ವರದಿ ಮೂಡುಬಿದಿರೆ: ಗುರುವಿನ ಆಟ, ಮಂತ್ರದ ಆಟ, ಗಾಳಿಯ ಆಟ, ಸಿದ್ಧಪ್ಪನ ಆಟ. ಈ ಚಮತ್ಕಾರ ಆಟ ಶಿವನು ಬಲ್ಲನು ತಿಳಿಯಿರಿ? ಎನ್ನುತ್ತಾ ಸಣ್ಣ ಗುಂಡೊಂದನ್ನು ಕೈಯಲ್ಲಿ ಹಿಡಿದು ಗಾಳಿಯಲ್ಲಿ ತೇಲಿಸಿ ಗಣಪತಿ, ಆಂಜನೇಯ, ಶಿವಲಿಂಗ, ಬಸವಣ್ಣನ ಮೂರ್ತಿ ತೆಗೆದು ತೋರಿಸುತ್ತಿದ್ದರೆ ಜನ ನಿಬ್ಬೆರಗಾಗಿ ನೋಡುತ್ತಿದ್ದರು. ಆಳ್ವಾಸ್ ನುಡಿಸಿರಿಗೆ ಆಗಮಿಸಿದ್ದ ಸುಡುಗಾಡು ಸಿದ್ಧರ ತಂಡ ಕ್ಯಾಂಪಸ್ನಲ್ಲಿ ನಡೆದು ಸಾಗುತ್ತಿದ್ದವರನ್ನು ಅವರತ್ತ ಸೆಳೆಯುತ್ತಾ, ತಮ್ಮ ಕೈಚಳಕ ತೋರುತ್ತಾ ಸುಡುಗಾಡು ಸಿದ್ಧರ ಕಲಾ ಪ್ರಕಾರಗಳನ್ನು ತೆರೆದಿಟ್ಟರು. ಹೊಸಪೇಟೆಯ ಕಲಾವಿದ ವಿರೂಪಾಕ್ಷಪ್ಪ ಅವರು ಎಳೆಂಟು ಗೋಲಿಗಳನ್ನು ಒಂದೊಂದಾಗಿ ನುಂಗುತ್ತಿದ್ದರು. ಅದರ ಮಧ್ಯೆಯೇ ಜನರ ಗಮನ ಹಿಡಿದಿಟ್ಟುಕೊಳ್ಳಲು ಸುತ್ತ ಕುಳಿತ ಇತರೆ ಕಲಾವಿದರು ತಮ್ಮ ಜೋಳಿಗೆಗಳಿಂದ ಬರುತ್ತಿದ್ದ ‘ಕುಯ್ ಕುಯ್’ ಸದ್ದನ್ನು ಅಡಗಿಸುತ್ತಿದ್ದರು. ಬಳಿಕ ನುಂಗಿದ ಎಲ್ಲಾ ಗೋಲಿಗಳನ್ನು ಕಲಾವಿದ ಗಂಟಲಿನಿಂದ ವಾಪಸ್ ತೆಗೆದು ವೀಕ್ಷಕರನ್ನು ಅಚ್ಚರಿ ಪಡಿಸಿದರು. ವಿರೂಪಾಕ್ಷಪ್ಪ ಅವರು ರಾಜ್ಯ ಪ್ರಶಸ್ತಿ ಪುರಸ್ಕೃತರು. ಬದುಕಿಗಾಗಿ ಹಿರಿಯರ ಬಳುವಳಿಯಾಗಿ ಬಂದ ಸುಡುಗಾಡು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಲಾಮನಸ್ಸುಗಳನ್ನು ಒಗ್ಗೂಡಿಸಿಕೊಂಡು ಕುಸುಮಾ ಫೌಂಡೇಶನ್ ನಾಗೂರು ಆಯೋಜಿಸುತ್ತಿರುವ ಕುಸುಮಾಂಜಲಿ- ೨೦೧೬ ಕಾರ್ಯಕ್ರಮದ ಪೂರ್ವಭಾವಿಯಾಗಿ ಹಮ್ಮಿಕೊಂಡ ಹಮ್ಮಿಕೊಂಡ ಗಾನಕುಸುಮ ಸಂಗೀತ ಕಾರ್ಯಕ್ರಮದ ಅಂತಿಮ ಸುತ್ತಿನ ಸೀನಿಯರ್ ವಿಭಾಗದಲ್ಲಿ ಬಿ.ಬಿ ಹೆಗ್ಡೆ ಕಾಲೇಜು ಕುಂದಾಪುರದ ವಿಜಯಲಕ್ಷ್ಮಿ, ಬಿ.ಬಿ ವಿಜೇತರಾಗಿದ್ದರೇ, ಜೂನಿಯರ್ ವಿಭಾಗದಲ್ಲಿ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ನ ಬಿ.ಅನೀಶ್ ವಿಜೇತರಾಗಿದ್ದಾರೆ. ನಾಗೂರಿನ ಶ್ರೀ ಕೃಷ್ಣ ಲಲಿತ ಕಲಾ ಮಂದಿರದಲ್ಲಿ ನಡೆಯಿತು. ಸೆಮಿಫೈನಲ್ ಸುತ್ತಿನಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಿಂದ ೧೫ ಗಾಯಕರನ್ನು ಫೈನಲ್ ಸ್ಪರ್ಧೆಗೆ ಆಯ್ಕೆಯಾದರೇ, ಫೈನಲ್ನಲ್ಲಿ ಇಬ್ಬರು ಆಯ್ಕೆಯಾದರು. ಸ್ಪರ್ಧೆಯ ತಿರ್ಪುಗಾರರಾಗಿ ಪ್ರಸಿದ್ಧ ಸಂಗೀತ ಬಾಲಚಂದ್ರ, ಉಡುಪಿ, ಗಾಯಕ ರಾಘವೇಂದ್ರ ಐತಾಳ ಬ್ರಹ್ಮಾವರ, ಗಾಯಕ ಪಲ್ಲವಿ ತುಂಗಾ ಕಾರ್ಯನಿರ್ವಹಿಸಿದರು. ಕುಸುಮಾಂಜಲಿ ೨೦೧೬ ರ ಚಾನೆಲ್ ಪಾರ್ಟ್ನರ್ ಮುಂಬಯಿ ಶುಭಸಾಗರ್ ಹೋಟೆಲ್ ಮಾಲಿಕರು ಲಕ್ಷ್ಮಣ ಪೂಜಾರಿ ದೀಪ ಬೆಳಗಿಸುದರ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಕುಸುಮ ಹೋಮ್ಸ್ ಪ್ರೈವೆಟ್ ಲಿಮಿಟೆಡ್ನ ನಿರ್ದೇಶಕ ಕುಸುಮಾವತಿ ಎಸ್. ಶೆಟ್ಟಿ, ನಿವೃತ್ತ ಶಿಕ್ಷಕಿ…
