ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂತ ಫಿಲಿಪ್ ನೆರಿ ಚರ್ಚ್ ಬಸ್ರೂರಿನಲ್ಲಿ ಪವಿತ್ರ ಶುಕ್ರವಾರವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಸ್ಥಳೀಯ ಶಾಲೆಯ ಮೈದಾನಾದಲ್ಲಿ ಸ್ಥಳೀಯ ಚರ್ಚನ ಧರ್ಮಗುರುಗಳಾದ ವಂ ವಿಶಾಲ್ ಲೋಬೊರವರ ಮುಂದಾಳತ್ವದಲ್ಲಿ ಶಿಲುಬೆಯ ಹಾದಿಯನ್ನು ನಡೆಸಲಾಯಿತು. ಈ ಭಕ್ತಿ ಕಾರ್ಯದಲ್ಲಿ ವಂ! ವಿಶಾಲ್ ಲೋಬೊರವರ ನೇತೃತ್ವದಲ್ಲಿ ಶುಭಶುಕ್ರವಾರದ ಧಾರ್ಮಿಕ ಕಾರ್ಯಗಳನ್ನು ನೆರವೇರಿಸದರು. ಪ್ರಭು ಯೇಸುವಿನ ಜೀವನದ ಪ್ರಮುಖ ಘಟನೆಗಳನ್ನು ಸ್ಮರಿಸಿ ಭಕ್ತಿಭಾವದಿಂದ ಅವರನ್ನು ನಮಿಸಿದರು. ತಾಲೂಕಿನ ಕುಂದಾಪುರ, ಬೈಂದೂರು ಚರ್ಚ್ ಸೇರಿದಂತೆ ಎಲ್ಲಾ ಇಗರ್ಜಿಗಳು ಪವಿತ್ರ ಶುಕ್ರವಾರವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಜನತಾ ದರ್ಶನದಲ್ಲಿ ರಾಜ್ಯ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶಯದಂತೆ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ತಿಂಗಳಿಗೊಮ್ಮೆ ಜನತಾದರ್ಶನ ನಡೆಸಲಾಗುತ್ತಿದೆ. ಜನರ ಸಮಸ್ಯೆ ನೇರವಾಗಿ ಆಲಿಸಿ ಪರಿಹಾರ ಕಂಡುಕೊಳ್ಳುವ ಜೊತೆಗೆ ವಿವಿಧ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಇರಾದೆ ನಮ್ಮದು ಎಂದವರು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಈ ಮಧ್ಯೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಭ್ರಷ್ಟಾಚಾರ ನಿಗ್ರಹ ದಳ ರಚಿಸಿ ಲೋಕಾಯುಕ್ತ ದುರ್ಬಲಗೊಳಿಸುವ ಇರಾದೆ ನಮ್ಮ ಮುಂದಿಲ್ಲ. ಈಗಾಗಲೇ ದೇಶದ ಇತರ ರಾಜ್ಯಗಳಲ್ಲಿಯೂ ಎಸಿಬಿ ರಚನೆಯಾಗಿದೆ. ಮಿಗಿಲಾಗಿ ಹೈಕೋರ್ಟ್ ಅದೇಶದಂತೆ ರಾಜ್ಯದಲ್ಲೂ ಎಸಿಬಿ ರಚನೆಗೆ ಸಂಪುಟದಲ್ಲಿ ಚರ್ಚೆ ನಡೆಸಿ ತೀರ್ಮಾನಕ್ಕೆ ಬಳಿಕ ಬರಲಾಗಿದೆ. ರಾಜ್ಯ ಸರಕಾರ ಲೋಕಾಯಕ್ತ ಹಲ್ಲು ಕೀಳುವ ಕೆಲಸ ಮಾಡಿಲ್ಲ. ಆದರೆ ಈ ಹಿಂದೆ ಲೋಕಾಯುಕ್ತಕ್ಕೆ ಹಲ್ಲೇ ಇರಲಿಲ್ಲ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಿಲ್ಲವ ಸಮಾಜ ಸೇವಾ ಸಂಘಟನೆಗಳು ಗ್ರಾಮೀಣ ಭಾಗದ ಬಿಲ್ಲವ ಸಮಾಜದ ಸಮಸ್ಯೆಗಳನ್ನು ಅರಿತು ಪರಿಹಾರ ದೊರಕಿಸಿಕೊಡುವ ಮೂಲಕ ಸಂಘಟನೆಯ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಶನಿವಾರ ಕುಂದಾಪುರದ ಶ್ರೀ ನಾರಾಯಣಗುರು ಸಭಾಭವನಲ್ಲಿ ಜರುಗಿದ ಸಭೆಯಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನ ನಿರ್ಮಾಣಕ್ಕೆ ಮೊದಲನೇ ಕಂತಿನ ೧೨ಲಕ್ಷ ರೂ. ಚೆಕ್ ಹಸ್ತಾಂತರಿಸಿ ಮಾತನಾಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಸಮಾಜ ಸೇವಾ ಸಂಘಟನೆಗಳ ಮೂಲಕ ಕಡು ಬಡವರನ್ನೂ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಇದರೊಂದಿಗೆ ಸಮಾಜ ಪ್ರತಿ ಮಕ್ಕಳಿಗೂ ಉತ್ತಮ ಶಿಕ್ಷಣ ದೊರಕಿಸಿಕೊಡುವಲ್ಲಿ ನೆರವಾಗುವುದೊಂದಿಗೆ, ಸಮಾಜವನ್ನು ಬಲಪಡಿಸುವ ಕಾರ್ಯವನ್ನು ಸಮುದಾಯದ ಪ್ರತಿಯೋರ್ವರೂ ಒಗ್ಗಟ್ಟಾಗಿ ಮಾಡಬೇಕಿದೆ ಎಂದರು. ಕುಂದಾಪುರದಲ್ಲಿ ಮೊಗವೀರ ಸಭಾಭವನ, ಬಂಟರ ಯಾನೆ ನಾಡವರ ಸಭಾಭವನ ಹಾಗೂ ಬಿಲ್ಲವ ಸಭಾಭವನ ನಿರ್ಮಾಣಕ್ಕೆ ೫೦ಲಕ್ಷ ರೂ.ಗಳನ್ನು ಮಂಜೂರು ಮಾಡಿದ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಎಲ್ಲರೂ ಒಟ್ಟಾಗಿ ಗೌರವಿಸಬೇಕಿದೆ ಎಂದರು. ಕುಂದಾಪ್ರ ಡಾಟ್ ಕಾಂ…
ಕುಂದಾಪ್ರ ಡಾಟ್ ಕಾಂ – ಕುಂದಾಪುರ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಹಿತಾಸಕ್ತಿಗೆ ಅನುಗುಣವಾಗಿ ಯಾವುದಾದರೂ ಕ್ಷೇತ್ರದಲ್ಲಿ ತಮ್ಮನ್ನು ಕ್ರೀಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ವಿದ್ಯಾರ್ಥಿದೆಸೆಯಲ್ಲಿಯೇ ಓದಿನ ಕ್ರೀಯಾಚರಣೆಯ ಜೊತೆಗೆ ಸ್ವಉದ್ಯೋಗದ ಕುರಿತು ಮಾಹಿತಿ ಮತ್ತು ತರಬೇತಿಯನ್ನು ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಹಿಂಜರಿಕೆಯನ್ನು ಬಿಟ್ಟು ಉದ್ಯಮಶೀಲತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಯಶಸ್ಸು ಸಾಧ್ಯ ಎಂದು ರುಡ್ಸೆಟ್ ಸಂಸ್ಥೆಯ ತರಬೇತುದಾರ ಪ್ರಾಧ್ಯಾಪಕ ಕರುಣಾಕರ ಕೆ. ಹೇಳಿದರು. ಅವರು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಸಂಘದ ಆಶ್ರಯದಲ್ಲಿ ‘ಉದ್ಯಮಶೀಲತಾ ಅರಿವು’ ಎಂಬ ವಿಷಯದ ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯ ಮತ್ತು ನಿರ್ವಹಣಾ ಸಂಘದ ಸಂಯೋಜಕರಾದ ಕು. ಶಬೀನಾ ಎಚ್ ಮತ್ತು ಸಹ ಸಂಯೋಜಕರಾದ ಶ್ರೀ ವಿಘ್ನೇಶ್ವರ್ ರಾವ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಶ್ರೀನಿಧಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ 102.11 ಕೋಟಿ ವೆಚ್ಚದಲ್ಲಿ ನಡೆಯಲಿರುವ ಬ್ರೇಕ್ ವಾಟರ್ ವಿಸ್ತರಣಾ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಮೀನುಗಾರರ ಸಮಾವೇಶಕ್ಕೆ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಮೀನುಗಾರರು ಹಾಗೂ ನಾಗರಿಕರು ಸಹಕಾರ ನೀಡುವುದರ ಜೊತೆಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಇಲಾಖೆ ಹಾಗೂ ಸರಕಾರದೊಂದಿಗೆ ಕೈಜೋಡಿಸಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಬ್ರೇಕ್ ವಾಟರ್ ವಿಸ್ತರಣಾ ಕಾಮಗಾರಿ ಹಾಗೂ ಮೀನುಗಾರರ ಸಮಾವೇಶದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ನೆರವೇರಿಸಿ ಮಾತನಾಡಿದರು. ರಾಜ್ಯದ ಮುಖ್ಯಮಂತ್ರಿಗಳು ಗಂಗೊಳ್ಳಿಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಮೀನುಗಾರ ಸಂಘಟನೆಗಳು, ಮೀನುಗಾರರು ಒಗ್ಗಟ್ಟಿನಿಂದ ದುಡಿದು ಗಂಗೊಳ್ಳಿ ಮೀನುಗಾರಿಕಾ ಬಂದರಿನ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಹೇಳಿದರು. ತಾಪಂ ಸದಸ್ಯ ರಾಜು ದೇವಾಡಿಗ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಕಾರ್ಯದರ್ಶಿ ಚೌಕಿ ವಿಠೋಬ ಖಾರ್ವಿ, ಮಾಜಿ ಅಧ್ಯಕ್ಷ ಡಿ.ಚಂದ್ರ ಖಾರ್ವಿ, ನಾಗರಾಜ ಖಾರ್ವಿ, ನಾಗಪ್ಪಯ್ಯ ಪಟೇಲ್,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬಡಗುತಿಟ್ಟಿನ ಯಕ್ಷಗಾನ ಭಾಗವತ ಹೆರೆಂಜಾಲು ಗೋಪಾಲ ಗಾಣಿಗ ಅವರ ನಾಗೂರು ಬ್ಯಾಟರಕ್ಲು ನಿವಾಸಕ್ಕೆ ಉಪ್ಪುಂದ ಗಾಣಿಗ ಸೇವಾ ಸಂಘದ ಪದಾಧಿಕಾರಿಗಳು ಭೇಟಿನೀಡಿ ಸಂಘದ ವತಿಯಿಂದ ಅಪಘಾತಕ್ಕೀಡಾದ ಭಾಗವತರ ಚಿಕಿತ್ಸೆಗಾಗಿ ಸಹಾಯಧನ ಚೆಕ್ ನೀಡಿದರು. ಕಳೆದ ಜನವರಿಯಲ್ಲಿ ಮುಳ್ಳಿಕಟ್ಟೆ ಸಮೀಪ ನಡೆದ ಬೈಕ್ ಅಪಘಾತದಿಂದ ತೀವೃತರಹದಿಂದ ಗಾಯಾಳುಯಾಗಿದ್ದ ಭಾಗವತರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿ ದೀರ್ಘಕಾಲದ ಚಿಕಿತ್ಸೆಯ ಬಳಿಕ ಮನೆಗೆ ಹಿಂದಿರುಗಿದ್ದರು. ಸದ್ಯ ಎಡಕಾಲು ತೀವೃ ಜರ್ಝರಿತಗೊಂಡು ನಡೆದಾಡಲಾಗದ ಸ್ಥಿತಿಯಲ್ಲಿರುವ ಭಾಗವತರು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇವರ ನೆರವಿಗೆ ಬಂದ ಕುಂದಾಪುರ ಗಾಣಿಗ ಸೇವಾ ಸಮಿತಿ ಮಾಜಿ ಅಧ್ಯಕ್ಷ ಕೊಲ್ಲೂರು ರಮೇಶ ಗಾಣಿಗ ಮತ್ತು ಬೈಂದೂರು ಘಟಕದ ಅಧ್ಯಕ್ಷ ಬಿ.ಎಂ.ನಾಗರಾಜ ಗಾಣಿಗ ತಮ್ಮ ವೈಯಕ್ತಿಕ ನೆರವು ನೀಡಿ ಭಾಗವತರಿಗೆ ಆತ್ಮಸ್ಥೈರ್ಯ ತುಂಬಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಉಪ್ಪುಂದ ಘಟಕದ ಗೌರವಾಧ್ಯಕ್ಷ ಅನಂತ ಗಾಣಿಗ, ಅಧ್ಯಕ್ಷ ಗಣಪಯ್ಯ ಗಾಣಿಗ, ಉಪಾಧ್ಯಕ್ಷ ಶಿವಾನಂದ ಗಾಣಿಗ,…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೊಂಕಣಿ ಖಾರ್ವಿ ಸಮಾಜ ಬಾಂಧವರ ಬಹುದೊಡ್ಡ ಹಬ್ಬ ಹೋಳಿಯನ್ನು ವಾರಗಳ ಕಾಲ ಅದ್ದೂರಿಯಾಗಿ ಆಚರಿಸಲಾಗಿದ್ದು ಕೊನೆಯ ದಿನ ಹೋಳಿ ಓಕುಳಿ ಹಾಗೂ ಬೃಹತ್ ಪುರಮೆರವಣಿಗೆಯೊಂದಿಗೆ ಸಮಾಪನಗೊಂಡಿತು. ಜನಪದ ವಾದ್ಯ ಗುಮಟೆ, ಚೆಂಡೆ ವಾದನ, ಹೋಳಿ ನೃತ್ಯ ಮನ ಸೆಳೆದರೇ, ಶಿವನ ಸ್ತಬ್ಧಚಿತ್ರ ಹೋಳಿ ಮೆರವಣಿಗೆಯ ಕಳೆ ಹೆಚ್ಚಿಸಿತು. ಎರಡು ತಾಸಿಗೂ ಮಿಕ್ಕಿ ನಡೆದ ಮೆರವಣಿಗೆಯಲ್ಲಿ ಕೊಂಕಣಿ ಖಾರ್ವಿ ಸಮಾಜದ ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಊರವರು ಪರಸ್ಪರ ಬಣ್ಣ ಎರಚಿಕೊಂಡು ಬಣ್ಣದ ಹಬ್ಬದ ರಂಗು ತುಂಬಿದರು. ಮೆರವಣಿಗೆಯುದ್ದಕ್ಕೂ ಮೊಳಗಿದ ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಅಂತಾರಾಷ್ಟ್ರೀಯ ಎಫ್ಎಸ್ಎಲ್ ಸೇವಾ ಸಂಸ್ಥೆಯ ವಿದೇಶಿ ಸ್ವಯಂಸೇವಕರು ಹೋಳಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು. ಮೆರವಣಿಗೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೂವಸ್ತ್ ಮಾಡಲಾಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ►ಇದನ್ನೂ ಓದಿ: ಕೊಂಕಣಿ ಖಾರ್ವಿ ಜನಾಂಗದ ವೈಶಿಷ್ಟ್ಯಪೂರ್ಣ ಆಚರಣೆ ಹೋಳಿ – http://kundapraa.com/?p=12447 ►ಮತ್ತಷ್ಟು ಚಿತ್ರಗಳು – ಇಲ್ಲಿ ಕ್ಲಿಕ್ಮಾಡಿ…
◦ ಕುಂದಾಪ್ರ ಡಾಟ್ ಕಾಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಭಾರತ-ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಕೊನೆಯ ಓವರ್ ಆರಂಭವಾಗುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿ, ಬೌಲರ್ ಹಾರ್ದಿಕ್ ಪಾಂಡ್ಯನ ಪ್ರತಿ ಎಸೆತವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು. ಎರಡೂ ವಿಕೆಟ್ ಪಡೆದರೂ ಒಂದು ಹಂತಕ್ಕೆ ಪಂದ್ಯ ಸೋತಿತೆಂದು ನಿರಾಶರಾಗಿದ್ದರೂ ಕೊನೆಯ ಎಸೆತದಲ್ಲಿ ಭಾರತ ಗೆಲುವಿನ ನಗೆ ಬೀರಿದ್ದು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಈ ಕೊನೆಯ ಓವರ್ನಲ್ಲಿ ಕುಂದಗನ್ನಡ ಮಾತನಾಡುವ ಕ್ರಿಕೆಟ್ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸಿರಬಹುದು ಎಂಬುದನ್ನು ಯುವ ಬರಹಗಾರ ನಾಗರಾಜ ಶೆಟ್ಟಿ ನೈಕಂಬ್ಳಿ ನಿರೂಪಿಸಿದ್ದಾರೆ. ಓದಿ ಸುಮ್ನೆ ತಮಾಷೆಗೆ… || ಕುಂದಾಪ್ರ ಡಾಟ್ ಕಾಂ 20ನೇ ಓವರ್ ಶುರು ಆತಿತ್ … ದೇವ್ರೆ ದೇವ್ರೆ ನೀನೇ ಕಾಪಾಡ್. ಇವತ್ತೊಂದ್ ಮರ್ಯಾದಿ ಉಳ್ಸ್ ಮರಾಯ ಹಾರ್ದೀಕ… 19.1 ದಿಡ್ ದಿಡ್ ದಿಮಿಗುಟ್ಕಂಡ್ ಓಡ್ ಬಂದ ಬೋಲ್ ಹಾಕ್ದ ಸಿಂಗಲ್ ರನ್, ಸೂಪರ್ ಬೋಲಿಂಗ್, ಅಬ್ಬಾ ಹಿಂಗೆ ಹಾಕ್ ಮರಾಯ. 19.2 ಸತ್ತ್ ಹ್ವಾಪ್ಕೆ .…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಎಸು ಕ್ರಿಸ್ತರು ಪವಿತ್ರ ಗುರುವಾರದಂದು ಪರಮ ಪ್ರಸಾದದ ಸಂಸ್ಕಾರ, ಗುರು ದೀಕ್ಷೆ ಸಂಸ್ಕಾರದ ಆಚರಣೆ ಮಾಡಿ, ಯೇಸು ತನ್ನಂತೆ ನೀವೂ ಕೂಡ ಬೇರೆಯವರ ಸೇವೆ, ಪ್ರೀತಿ ಮಾಡುವುದು ಮುಖ್ಯ ಎಂದು ಮನದಟ್ಟು ಮಾಡಲು ತಮ್ಮ ಶಿಷ್ಯರ ಕಾಲುಗಳನ್ನು ತೊಳೆದರು, ಈ ಸಲ ಪ್ರಥಮ ಭಾರೀ ಪೋಪ್ ಫ್ರಾನ್ಸಿಸರ ಅತಿಕ್ರತತ ಘೋಷಣೆಯೊಂದಿಗೆ, ಪುರುಷರ ಜೊತೆ ಮಹಿಳೆ, ಮಕ್ಕಳ ಪಾದಗಳನ್ನು ತೊಳೆಯುವ ಈ ಸಂಸ್ಕಾರದ ಅಚರಣೆ ಕುಂದಾಪುರ ಹೋಲಿ ರೊಜಾರಿ ಚರ್ಚಿನಲ್ಲಿ ಪ್ರಧಾನ ಗುರುಗಳಾದ ವ|ಅನೀಲ್ ಡಿಸೋಜಾರ ನೇತ್ರತ್ವದಲ್ಲಿ ನೆಡೆಯಿತು.
ಕುಡಿದ ಮತ್ತಿನಲ್ಲಿದ್ದ ನೇಪಾಳಿ ಮೂಲಕ ಯುವಕನೋರ್ವ ಕಂಠಪೂರ್ತಿ ಕುಡಿದಿದ್ದ ತಮ್ಮ ಸಂಬಂಧಿಗೆ ಜಾಕಿಚಾನ್ ಶೈಲಿಯಲ್ಲಿ ಹೊಡೆಯುತ್ತಿದ್ದ. ಗಂಟೆಗಳ ಕಾಲ ನಡೆದ ಈ ಯುವಕರುಗಳ ಹೊಡೆದಾಟ ಸಾರ್ವಜನಿಕರಿಗೆ ಬಿಟ್ಟಿ ಮನೋರಂಜನೆ ದೊರೆತಿತ್ತು. ಕುಡಿದ ಅಮಲಿನಲ್ಲಿ ತೇಲುತ್ತಿದ್ದ ಅಸಾಮಿ ಕೊನೆಗೆ ಪೊಲೀಸರ ಟೊಪ್ಪಿಗೂ ಕೈಯಿಟ್ಟಿದ್ದ. ಕೆಳಗಿನ ವಿಡೀಯೋ ನೋಡಿ….
