ಕುಂದಾಪುರ: ಸೌಮ್ಯ, ಸಜ್ಜನ, ಪ್ರಾಮಾಣಿಕರೆಂದು ಕರೆಸಿಕೊಳ್ಳುತ್ತಿದ್ದ ಕರ್ನಾಟಕದ ಜನ ಬರುಬರುತ್ತಾ ಅಸಹನೆ, ಮೇಲಾಟದ ಪ್ರತೀಕವಾಗುತ್ತಿದ್ದಾರೆಯೇ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಭಾಷಾಭಿಮಾನ, ಪ್ರಾಂತ್ಯಾಭಿಮಾನ ಮರೆತುಹೋಗಿ, ಹಣಗಳಿಸುವುದು ಹೇಗೆಂಬ ಯೋಚನೆ ಹೆಚ್ಚಿದೆ ಎಂದು ಮಂಗಳೂರು ಆಕಾಶವಾಣಿ ನಿವೃತ್ತ ಉದ್ಘೋಷಕಿ ನಾರಾಯಣಿ ದಾಮೋದರ್ ಹೇಳಿದರು. ಅವರು ಕನ್ನಡ ವೇದಿಕೆ ಕುಂದಾಪುರದ ಆಶ್ರಯದಲ್ಲಿ ನಡೆದ ಕನ್ನಡ ಡಿಂಡಿಮದ ಕೊನೆಯ ವಾರದ ಕಾರ್ಯಕ್ರಮದಲ್ಲಿ ಕನ್ನಡವೆನೆ ಮನ ಕುಣಿಯುವುದು ಎಂಬ ವಿಷಯವಾಗಿ ಮಾತನಾಡುತ್ತಾ ಈ ಜಗತ್ತಿನಲ್ಲಿ ಕಾಸು ಮಾಡುವ ಕಸರತ್ತು ಬಿಟ್ಟರೆ ಬೇರೇನೂ ಕಾಣಿಸದು. ನಮ್ಮಲ್ಲಿ ಭಾವೈಕ್ಯತೆ ಮರೆಯಾಗಿ ಹೋಗಿದೆ. ಗುಣ ಮೌಲ್ಯಗಳೆನಿಸಿದ ಪ್ರೀತಿ, ಕರುಣೆ, ನಮ್ರತೆ ಇವೆಲ್ಲಾ ಕಾಲಕ್ಕೆ ತಕ್ಕಂತೆ ಬಿಕರಿಯಾಗುವ ವಸ್ತುಗಳಾಗಿಬಿಟ್ಟವೆ. ಕೆಲವರು ಸೇವೆಯನ್ನೇ ಕಸುಬಾಗಿಸಿಕೊಂಡು ಜೀವನಕ್ಕೆ ದಾರಿ ಮಾಡಿಕೊಂಡಂತೆ ಕಾಣಿಸುತ್ತದೆ ಎಂದರು. ಶಿಕ್ಷಣ ಕ್ಷೇತ್ರ ಗೊಂದಲದ ಗೂಡಾಗಿದೆ. ಪ್ರಾಥಮಿಕ ಶಿಕ್ಷಣ ಎನ್ನುವುದು ದಿಕ್ಕು ದೆಸೆ ಇಲ್ಲದೇ ಸೊರಗಿದೆ. ಸರಕಾರ ಶಿಕ್ಷಣದ ಗುಣಮಟ್ಟದ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಶಿಕ್ಷಕರ ಸಂಖ್ಯೆ ಹೆಚ್ಚಿಸಿದೆ ಎಂದರು ಮಯೂರ ಪ್ರಶಸ್ತಿ…
Author: ನ್ಯೂಸ್ ಬ್ಯೂರೋ
ಬೈಂದೂರು: ಇಲ್ಲಿಗೆ ಸಮೀಪದ ಬಿಜೂರು ಕೃಷಿ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದ ಟ್ರಾಕ್ಟರ್ ಅಡಿಯಲ್ಲಿ ಬಾಲಕನೊಬ್ಬ ಆಕಸ್ಮಿಕವಾಗಿ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ಇಂದು ಸಂಜೆ ನಡೆದಿದೆ. ಬಿಜೂರು ಗ್ರಾಮದ ಕಂಚಿಕಾನ್ ನಾರಂಬಳ್ಳಿಯ ಚಿಕ್ಕಯ್ಯ ಪೂಜಾರಿ ಅವರ ಮಗ ಚೇತನ (9) ನತದೃಷ್ಟ ಬಾಲಕ. ನಾರಂಬಳ್ಳಿಯ ಚಿಕ್ಕಯ್ಯ ಪೂಜಾರಿ ಹಾಗೂ ಕುಸುಮಾ ದಂಪತಿಯ ಪುತ್ರನಾದ ಚೇತನ್ ಕಂಚಿಕಾನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಭಾನುವಾರ ಶಾಲೆ ರಜೆವಿರುವುದರಿಂದ ಮನೆಯ ಸನಿಹದಲ್ಲೇ ಇರುವ ಕೃಷಿ ಗದ್ದೆಗೆ ತೆರಳಿದ್ದ ಎನ್ನಲಾಗಿದೆ. ಅಲ್ಲಿ ಉಳುವೆ ಮಾಡುತ್ತಿದ್ದ ಬಾಡಿಗೆ ಟ್ರಾಕ್ಟರ್ ಗೆ ಗದ್ದೆಯಲ್ಲಿ ಬಾಲಕ ಆಕಸ್ಮಿಕವಾಗಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮುಂಬೈ ಹೊಟೇಲ್ನ ಕಾರ್ಮಿಕನಾಗಿ ದುಡಿಯುತ್ತಿದ್ದ ತಂದೆ ಚಿಕ್ಕಯ್ಯ ಅವರದ್ದು ಬಡ ಕುಟುಂಬ. ಚಿಕ್ಕ ಮಗುವಿನ ಈ ಆಕಸ್ಮಿಕ ಸಾವು ಕುಟುಂಬದವರನ್ನು ಕಂಗಾಲಾಗಿಸಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಕವಿಸಮಯ ಕವಿನಮನದಲ್ಲಿ’ ಶ್ರೀನಿವಾಸ ಜೋಕಟ್ಟೆ ತಮ್ಮ ಕವಿತೆ ವಾಚಿಸಿದರು.
ಮೂಡುಬಿದಿರೆ: ಶಿಸ್ತು, ಶ್ರೇದ್ಧೆ, ಕೀಯಾಶೀಲತೆ, ಏಕ ಕಾಲದಲ್ಲಿ ಹಲವಾರು ಕಾರ್ಯ ಮಾಡುವ ಮನೋಭಾವ, ಸತ್ಯವನ್ನು ಸಂಶೋಧಿಸುವ ಸಾಹಿತಿ, ಸಂಶೋಧಕ ನಾಡೋಜ ಡಾ. ಎಂ.ಎಂ. ಕರ್ಲ್ಬುಗಿ ಅಭಿವ್ಯಕ್ತಿ ಸ್ವತಂತ್ರ್ಯದ ರೂಪಕ ಎಂದು ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಹೇಳಿದರು. ಇಲ್ಲಿನ ನುಡಿಸಿರಿ 2015ರಲ್ಲಿ ‘ಸಂಸ್ಮರಣೆ: ನಾಡೋಜ ಡಾ. ಎಂ.ಎಂ. ಕರ್ಲ್ಬುಗಿ ನೆನಪು’ ಕುರಿತು ಮಾತನಾಡುತ್ತಾ ವಿದ್ಯುನ್ಮಾನ ಮಾಧ್ಯಮಗಳು ಕುಶಲತೆ ಇಲ್ಲದಿರುವರಿ ದೊಡ್ಡ ಅಸ್ತ್ರವನ್ನು ಕೊಡುತ್ತಿವೆ. ಇದು ಸಮಾಜವನ್ನು ದಾರಿ ತಪ್ಪಿಸುತ್ತಿದೆ ಎಂದು ಆಪಾದಿಸಿದರು. ಕರ್ಲ್ಬುಗಿ ಬಸವಣ್ಣ ಸ್ಥಾಪಿಸಿದ ಲಿಂಗಾಯತವನ್ನು ಕರ್ನಾಟಕದ ಮೊದಲನೇ ಧರ್ಮ ಎಂದು ವಾದಿಸಿದವರು. ಮಠದ ಸಂಪನ್ಮೂಲಗಳನ್ನು ಬಳಸಿಕೊಂಡು ಸಾಹಿತ್ಯ ಮತ್ತು ಸಂಶೋಧನೆಗೆ ಬಳಸಿಕೊಂಡರು. ವೀರಶೈವರು ಜಗ್ದಗುರುಗಳಲ್ಲ ಜಗ್ದಾಚಾರ್ಯರರು ಎಂದು ಪ್ರತಿಪಾದಿಸಿದವರು ಎಂದು ತಿಳಿಸಿದರು. ಕರ್ಲ್ಬುಗಿ ಒಬ್ಬ ಭಿನ್ನ ಆಲೋಚನೆಗಳ ಬರಹಗಾರ. ಸಂಶೋಧನೆ ಅವರ ಇಷ್ಟದ ಕ್ಷೇತ್ರವಾಗಿತ್ತು. ಅವರ ಗುರು ಆರ್. ಸಿ. ಹಿರೇಮಠgನ್ನು ಮೀರಿ ಬೇಳೆದವರು. ಗುರು-ಶಿಷ್ಯರ ಸಂಬಂಧ ಹಾಳಾಗಿದ್ದು ವಿಷಾದಕರ ಎಂದು ಅಭಿಪ್ರಾಯಪಟ್ಟರು. ಈ ವೇಳೆ ಡಾ| ನರಸಿಂಹ…
ಮೂಡುಬಿದಿರೆ: ಅಭಿವೃದ್ಧಿಯ ನೆಪದಲ್ಲಿ, ಅಭಿವೃದ್ಧಿಯ ಜಪದಲ್ಲಿ ನದಿ ಮೂಲ ಬಡವಾಗುತ್ತಿದೆ. ಜಲಮೂಲ ಬರಿದಾಗುತ್ತಿದೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಅಧ್ಯಯನಕ್ಕೊಳಪಟ್ಟ ನೀರು ಇಂದು ನಿರ್ಲಕ್ಷ್ಯದ ವಸ್ತುವಾಗಿದೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಹೊಳ್ಳ ವಿಷಾದ ವ್ಯಕ್ತಪಡಿಸಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ನೀರಿನ ಬಳಕೆ ಮತ್ತು ಹಂಚಿಕೆ: ಹೊಸತನದ ಹುಡುಕಾಟ’ ಎಂಬ ವಿಷಯದಲ್ಲಿ ನೇತ್ರಾವತಿ ನದಿ ತಿರುವಿನ ಆತಂಕಗಳ ಕುರಿತು ಮಾತನಾಡಿದರು. ಹೊಳೆಯ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುವುದು ಎಂಬ ಮಾತೇ ಅರ್ಥಹೀನ. ನದಿ ಸಮುದ್ರ ಸೇರುವುದು ನೈಸರ್ಗಿಕ ವ್ಯವಸ್ಥೆ. ಈ ನೀರನ್ನು ತಿರುಗಿಸುತ್ತೇವೆ ಎನ್ನುವುದರಲ್ಲಿ ನಿಸರ್ಗದ ಮೇಲಿನ ಸವಾರಿಯಷ್ಟೇ. ಬಯಲುಸೀಮೆಯವರಿಗೆ ನೀರು ಕೊಡಲು ನಮ್ಮ ವಿರೋಧವಿಲ್ಲ. ಆದರೆ ನಮಗೇ ಸಾಲದಷ್ಟು ನೀರನ್ನು ಇತರರಿಗೆ ನೀಡುವುದಾದರೂ ಹೇಗೆ? 15ವರ್ಷದ ಹಿಂದಿನ ವರದಿಯನ್ನಿಟ್ಟುಕೊಂಡು ಯೋಜನೆಯನ್ನು ಜಾರಿಗೊಳಿಸಲು ಹೊರಟಿರುವುದು ದುಡ್ಡಿನ ರಾಜಕೀಯಕ್ಕೆ ತೋರಿಸುತ್ತದೆ. ನದಿಮೂಲಕ್ಕೆ ತೊಂದರೆ ಮಾಡಿದರೇ ಮುಂದೊಂದು ದಿನ ಯಾರಿಗೂ ನೀರಿಲ್ಲದ ಸ್ಥಿತಿ ಬರಲಿದೆ ಎಂದವರು ಹೇಳಿದರು.
ಮೂಡುಬಿದಿರೆ: ಕರ್ನಾಟಕದ ಬಹುಭಾಗ ಒಂದೊಂದು ಹನಿಗೂ ಪರಿತಪಿಸುವ ಸ್ಥಿತಿ ಇದೆ. ಸಮೃದ್ಧ ಬದುಕನ್ನು ಉಂಡ ಕೋಲಾರ ಜಿಲ್ಲೆಯಲ್ಲಿ ಎರಡು ಸಾವಿರ ಅಡಿ ಕೆಳಗೆ ಹೋದರೂ ನೀರು ಸಿಗುತ್ತಿಲ್ಲ. ಸಮುದ್ರಕ್ಕೆ ಸೇರುವ ನೀರಿನ್ನು ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಡಾ. ಕೆ. ಸಿ. ಬಸವರಾಜು ಹೇಳಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ನೀರಿನ ಬಳಕೆ ಮತ್ತು ಹಂಚಿಕೆ: ಹೊಸತನದ ಹುಡುಕಾಟ’ ಎಂಬ ವಿಷಯದಲ್ಲಿ ಕಾವೇರಿ ನದಿಯ ಕುರಿತು ಮಾತನಾಡಿದರು. ಪ್ರತಿಭಾರಿಗೂ ನೀರು ಹಂಚಿಕೆಯ ವಿಷಯದಲ್ಲಿ ಕರ್ನಾಟಕ್ಕೆ ಅನ್ಯಾಯವಾಗುತಿದೆ. ರಾಜಕಾರಣಿಗಳು ನಮ್ಮ ಬದುಕನ್ನೇ ನಾಶಮಾಡುತ್ತಿದ್ದಾರೆ. ನ್ಯಾಯಾಧಿಕರಣ ಕೂಡ ನೈಸರ್ಗಿಕ ತೀರ್ಪಿನ ವಿರುದ್ದ ಹಂಚಿಕೆ ಮಾಡಿದೆ ಎಂದವರು ಹೇಳಿದರು.
ಮೂಡುಬಿದಿರೆ: ಎಲ್ಲರೂ ಕಪ್ಪು ಎಂದು ಅಶುಭದ ಸಂಕೇತವೆಂದು ಭಾವಿಸುತ್ತಾರೆ ಆದರೆ ನಮ್ಮ ಜನ ಕಪ್ಪು ಮೋಡವಾಗಿ ಯಾವಾಗ ಆಗುತ್ತದೆ ಎಂದು ಕಾಯುತ್ತಾರೆ. ನೀರಿನ ಸಮಸ್ಯೆ ದಿನವೂ ನಮ್ಮನ್ನು ಕಾಡುತ್ತಿದೆ. ಕುಡಿಯಲು, ಸ್ನಾನಕ್ಕೆ ನೀರಿಲ್ಲ. ನಮ್ಮೂರಿನವರಿಗೆ ಹೆಣ್ಣು ಕೊಡಲ್ಲ. ಸರಕಾರಿ ನೌಕರರು ಇಲ್ಲಿ ಉಳಿಯೋಲ್ಲ. ಇಂತಹ ದುಸ್ಥರ ಬದುಕು ನಮ್ಮದು. ಮಹದಾಯಿಯ ಅಗತ್ಯತೆಯನ್ನು ವಿಕಾಸ್ ಸೊಪ್ಪಿನ್ ನರಗುಂದ ವಿವರಿಸಿದ್ದು ಹೀಗೆ. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ನೀರಿನ ಬಳಕೆ ಮತ್ತು ಹಂಚಿಕೆ ಎಂಬ ವಿಚಾರಗೋಷ್ಠಿಯಲ್ಲಿ ಮಹದಾಯಿ ಯೋಜನೆಯ ಕುರಿತು ಮಾತನಾಡುತ್ತಾ ಕರ್ನಟದಲ್ಲಿ ಬಳಕೆಯಾಗದೇ ಉಳಿಯುತ್ತಿದ್ದ ನೀರನ್ನು ಡ್ಯಾಂ ಮುಖಾಂತರ ನಾಲ್ಕು ಜಿಲ್ಲೆಗಳಿಗೆ ತಲುಪಿಸಲು ಮಲಪ್ರಭಾ ಡ್ಯಾಂ ಕಟ್ಟಲಾಯಿತು. ಆದರೆ ಆ ಡ್ಯಾಂ ತುಂಬಿತ್ತಿಲ್ಲ ಎಂಬ ಕಾರಣಕ್ಕೆ ಹತ್ತಿರದಲ್ಲೇ ಇದ್ದ ಮಹದಾಯಿಯನ್ನು ಮಲಪ್ರಭೆಗೆ ಸೇರಿಸುವ ಪ್ರಯತ್ನ ನಡೆಯಿತು. ಆದರೆ ಗೋವಾ ಇದಕ್ಕೆ ತಗಾದೆ ತೆಗೆಯಿತು. ಅದು ಇಂದಿಗೂ ಮುಂದುವರಿದಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರಕಾರಗಳೂ ನೀರಿನ ಮೇಲೆ ನಮ್ಮ…
ಕುಂದಾಪುರ: ಮರವಂತೆಯ ಸಾಧಕಿ ಜ್ಯೋತಿ ಎಸ್. ದೇವಾಡಿಗ ಅವರಿಗೆ ‘ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ’ ದೊರೆತಿದೆ. ಶಯದೇವಿಸುತೆ ಬಿರುದಾಂಕಿತ ಜ್ಯೋತಿ ಎಸ್. ಅವರು ಮೈಸೂರಿನಲ್ಲಿ ಆಯೋಜಿಸಲಾಗಿದ್ದ ವಿಶ್ವಕವಿ ಕುವೆಂಪು ನೆನಪಿನ ರಾಜ್ಯಮಟ್ಟದ ಕವನ ಸ್ವರ್ಧೆಯಲ್ಲಿ ವಿಜೇತರಾಗಿದ್ದು ಅವರ ಕವನಕ್ಕೆ ಈ ಪುರಸ್ಕಾರ ದೊರೆತಿದೆ. ಮೈಸೂರಿನಲ್ಲಿ ನಡೆದ ವಿಶ್ವಕವಿ ಕುವೆಂಪುರವರ 111ನೇ ಜನ್ಮದಿನ ಹಾಗೂ ಸಂಸ್ಥೆಯ 30ನೇ ವಾರ್ಷಿಕೋತ್ಸವದ ಅಂಗವಾಗಿ ವರಕವಿ ದ.ರಾ. ಬೇಂದ್ರೆ ಸವಿನೆನಪಿನ ರಾಜ್ಯಮಟ್ಟದ ಅದ್ಧೂರಿ ಸಾಹಿತ್ಯೋತ್ಸವ ಸಂಭ್ರಮದಲ್ಲಿ ಹೆಸರಾಂತ ಕವಿ ಹಾಗೂ ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ಅವರಿಗೆ ಈ ಪುರಸ್ಕಾರ ಪ್ರದಾನಿಸಲಾಯಿತು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಮೇರು ಪ್ರತಿಭೆಯ ಲೇಖಕರೂ, ಕಲಾರಾಧಕರೂ ಆದ ಜ್ಯೋತಿ ಅವರಿಗೆ ಈ ಹಿಂದೆ ಕಲೆ ಮತ್ತು ಯಕ್ಷಗಾನ, ಸಾಹಿತ್ಯ ಕ್ಷೇತ್ರದಲ್ಲಿನ ಅಪೂರ್ವ ಸಾಧನೆಗಾಗಿ, “ರಂಗಸ್ಠಳ ರತ್ನ ಪ್ರಶಸ್ತಿ” ಹಾಗೂ, “ವರ್ಷದ ಕನ್ನಡ ಬರಹಗಾರ ಪ್ರಶಸ್ತಿ -2015ನ್ನು ಪಡೆದಿದ್ದರು.
ಮೂಡುಬಿದಿರೆ: ಕೃಷಿ ವಿಶ್ವವಿದ್ಯಾನಿಲಯಗಳು ರೈತರ ಬದುಕನ್ನು ಹಾಳುಮಾಡಿ, ಕೈಗಾರಿಕರಣವನ್ನು ಪರೋಕ್ಷವಾಗಿ ಉತ್ತೇಜಿಸುತ್ತಿದೆ. ಈ ವ್ಯವಸ್ಥಿತ ಶಡ್ಯಂತ್ರದಿಂದ ರೈತನ ಬದುಕು ದುಸ್ಥಿರವಾಗುತ್ತಿದೆ. ದುಡ್ಡು ಮಾಡುವ ದಂಧೆಗಿಳಿದು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ದಿನದಿಂದ ದಿನಕ್ಕೆ ಆರೋಗ್ಯ ನೆಮ್ಮದಿ ಕುಸಿಯುತ್ತಿದೆ ಎಂದು ರೈತ ವರ್ತೂರು ನಾರಾಯಣ ರೆಡ್ಡಿ ಅಭಿಪ್ರಾಯಪಟ್ಟರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ಕೃಷಿ: ಹೊಸತನದ ಹುಡುಕಾಟ’ ಎಂಬ ವಿಷಯದಲ್ಲಿ ಮಾತನಾಡಿದರು. ವ್ಯವಸಾಯದಲ್ಲಿ ಮರಗಿಡ, ದನಕರು, ತಿಪ್ಪೆಗುಂಡಿ ಎಲ್ಲವೂ ಬೇಕೆಬೇಕು. ಉತ್ತಮ ಕೃಷಿಗೆ ರಾಸಾಯನಿಕ ಗೊಬ್ಬರಗಳ ಅವಶ್ಯಕತೆ ಇಲ್ಲವೇ ಇಲ್ಲ. ಮಣ್ಣಿನಲ್ಲಿನ ಸೂಕ್ಷ್ಮಜೀವಿಗಳನ್ನು ಉಳಿಸಿಕೊಂಡರೆ ಸಾಕು. ಎಕರೆಗೆ ಕನಿಷ್ಠ ೨೫ ವಿವಿಧ ಜಾತಿ ಮರ, ಒಂದು ದನವಿದ್ದರೇ ಅವರಷ್ಟು ಶ್ರೀಮಂತ ಮತ್ತೊಬ್ಬರಿಲ್ಲ. ಕಬ್ಬಿನ ಸೋಗೆ, ಅಡಿಕೆ ಸಿಪ್ಪೆಯನ್ನು ಸುಡುವ ಬದಲಿಗೆ ಅದನ್ನೇ ಗೊಬ್ಬರವಾಗಿ ಬಳಸಿಕೊಂಡರೇ ರೈತ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು. ಸತ್ತ ದನಗಳನ್ನು ನಮ್ಮ ಮಣ್ಣಿನಲ್ಲಿಯ ಹೂತರೆ ೨೦ವರ್ಷಕ್ಕೆ ಬೇಕಾದ ಗೊಬ್ಬರ ಪಡೆಯಬಹುದು. ಮೀನಿನ ತ್ಯಾಜ್ಯವನ್ನು ರಸಗೊಬ್ಬರವನ್ನಾಗಿಸಿಕೊಳ್ಳಬಹುದು. ಆದರೆ ನಮ್ಮ…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ನವಂಬರ್ ತಿಂಗಳ 26, 27, 28 ಮತ್ತು 29 ರಂದು ಮೂಡುಬಿದಿರೆಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ, ವಿಶೇಷ ಸಾಧನೆ ಮಾಡಿದ ಗಣ್ಯರನ್ನು ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಈ ಸಂದರ್ಭದಲ್ಲಿ ಗೌರವಿಸಲಾಗುತ್ತದೆ. ಈ ವರ್ಷವೂ ಕನ್ನಡ ನಾಡು ನುಡಿ ಸಂಸ್ಕೃತಿಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ವಿಶೇಷ ಸಾಧನೆಗಳನ್ನು ಮಾಡಿದ ಹತ್ತು ಮಂದಿ ಗಣ್ಯರನ್ನು ಆಳ್ವಾಸ್ ನುಡಿಸಿರಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯ ವೇದ ಸಾಹಿತ್ಯ, ಉಪನಿಷತ್ತು, ಮಹಾಭಾರತ, ಪುರಾಣ, ಭಾರತೀಯ ತತ್ತ್ವ ಶಾಸ್ತ್ರಗಳಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದು, ತಾರ್ಕಿಕವಾಗಿ ಹಾಗೂ ಜನಸಾಮಾನ್ಯರು ಸುಲಭವಾಗಿ ಅರ್ಥೈಸುವಂತೆ ತಿಳಿಯ ಹೇಳುವ ಪ್ರವಚನಕಾರರಿವರು. ಸ್ವತ: ಸಾಹಿತಿಯಾಗಿ ಅನೇಕ ಕೃತಿಗಳನ್ನು ರಚಿಸಿ, ಸಂಸ್ಕೃತದ ಪ್ರಮುಖ ಕೃತಿಗಳನ್ನು ಕನ್ನಡಕ್ಕೆ…
