ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ದೂರದರ್ಶಿತ್ವ, ಉದಾತ್ತ ಚಿಂತನೆ, ಕಾರ್ಯತತ್ಪರತೆಯ ಮೂಲಕ ಅನೇಕರಿಗೆ ಮಾದರಿಯಾಗಿದ್ದ ಡಾ. ಬಿ. ಯಶೋವರ್ಮ ಅವರ ವ್ಯಕ್ತಿತ್ವದ ಸ್ಫೂರ್ತಿದಾಯಕ ಆಯಾಮವನ್ನು ಹೊಸ ಪೀಳಿಗೆಗೆ ದಾಟಿಸುವ ಸದುದ್ದೇಶದೊಂದಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯು ತನ್ನ ಕ್ಯಾಂಪಸ್ನ ನೂತನ ಕಟ್ಟಡವೊಂದಕ್ಕೆ ಯಶೋಕಿರಣ ಎಂದು ಹೆಸರಿರಿಸಿ ನಮನ ಸಲ್ಲಿಸಿದೆ. ಈ ಕಟ್ಟಡಕ್ಕೆ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಿಂದಲೇ ವಿದ್ಯುಕ್ತ ಚಾಲನೆ ದೊರಕಿದೆ. ಜಾಂಬೂರಿನ ಸಂದರ್ಭದಲ್ಲಿ ಆಳ್ವಾಸ್ ಕ್ಯಾಂಪಸ್ನ ಯಶೋಕಿರಣದಲ್ಲಿ ಜರುಗುತ್ತಿರುವ ಕಲಾಮೇಳವು ಡಾ. ಬಿ. ಯಶೋವರ್ಮರ ಕ್ರಿಯಾಶೀಲ ಚಿಂತನೆಗಿದ್ದ ವೈವಿಧ್ಯತೆಯನ್ನೇ ಬಿಂಬಿಸುತ್ತಿದೆ. ಡಾ. ಬಿ. ಯಶೋವರ್ಮ ಅವರು ಸಾಹಿತ್ಯ, ಕಲೆ, ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಆಡಳಿತಾತ್ಮಕ ಪ್ರಕ್ರಿಯೆಗೆ ಸಾಂಸ್ಕೃತಿಕ ಸ್ಪರ್ಶ ನೀಡಿದವರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಹತ್ತುಹಲವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರಯೋಗಗಳನ್ನು ನಡೆಸಿದವರು. ಹೆಸರೇ ಸೂಚಿಸುವಂತೆ ತಮ್ಮ ಯಶಸ್ಸಿನೊಂದಿಗೆ ವಿದ್ಯಾರ್ಥಿಗಳ ಹಾಗೂ ಬೋಧಕವರ್ಗದ ಯಶಸ್ಸಿಗೆ ಕಾರಣರಾದವರು. ತಮ್ಮ ವ್ಯಕ್ತಿತ್ವದಿಂದ ಎಲ್ಲರಿಗೂ ಬಹುಬೇಗ ಹತ್ತಿರವಾಗುತ್ತಿದ್ದ ಯಶೋವರ್ಮ ಅವರಿಗೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಕಾಡು ಮತ್ತು ಪರ್ವತಗಳು ಚಾರಣ ಪ್ರಿಯರಿಗೆ ಒಂದು ವಿಶಿಷ್ಠ ಪ್ರಪಂಚ. ಜಾಂಬೂರಿಯ ಸಂಭ್ರಮದ ನಡುವೆ ಅರಣ್ಯ ಇಲಾಖೆಯ ಸಹಕಾರದೊಂದಿಗೆ ವಿದ್ಯಾಗಿರಿಯಲ್ಲಿ ನಿರ್ಮಿಸಿರುವ ಟ್ರಕ್ಕಿಂಗ್ ಪಾತ್, ಆಳ್ವಾಸ್ ಆವರಣದಲ್ಲಿ ಹೊಸ ಲೋಕವನ್ನೇ ತೆರೆದಿಟ್ಟಿದೆ. ಎತ್ತರದ ಗುಡ್ಡೆ, ಇಳಿಜಾರು, ತಗ್ಗು ಪ್ರದೇಶ, ಪ್ರಾಣಿಗಳ ಗೊಂಬೆ ಆಕೃತಿಗಳು, ಹುಲಿ- ಸಿಂಹಗಳ ಘರ್ಜನೆ, ಪ್ರಾಣಿ, ಹಕ್ಕಿಗಳ ದ್ವನಿ, ಹರಿಯುವ ನೀರು, ಜಲಪಾತ, ಕೃತಕವಾಗಿ ತಯಾರಿಸಿದ ಸೇತುವೆ ಈ ಎಲ್ಲವೂ ಚಾರಣದ ಅನುಭವವನ್ನೇ ನೀಡುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಮಾರ್ಗದ ಎರಡು ಬದಿಯಲ್ಲಿ ಹಗ್ಗವನ್ನು ಹಾಕಲಾಗಿದ್ದು ಇವುಗಳ ಸಹಾಯದಿಂದ ಎಲ್ಲಾ ವಯಸ್ಸಿನವರು ಚಾರಣ ಅನುಭವ ಪಡೆಯಬಹುದು. ಜಾಂಬೂರಿಗೆ ಬಂದ ಪ್ರೇಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಆಕರ್ಷಣೀಯ ಸ್ಥಳವಾಗಿದೆ ಟ್ರಕಿಂಗ್ ಪಾತ್. ಈ ಕುರಿತು ಮಂಗಳೂರಿನ ಅಮೀನ್ ಮೆಚ್ಚುಗೆ ವ್ಯಕ್ತಪಡಿಸಿದರು. ಟ್ರಕಿಂಗ್ ಪಾತ್ ಒಂದು ಮಿನಿ ಚಾರಣದ ಹಾಗೆ ಇದೆ. ಬಹಳ ಚೆನ್ನಾಗಿ ನಿರ್ಮಿಸಲಾಗಿದೆ. ಮುಂಜಾಗ್ರತಾ ಕ್ರಮಗಳು ಬಹಳ ಸಹಾಯಕವಾಗಿದೆ. ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಈ ಟ್ರಕಿಂಗ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರಿಯ ಸಾಂಸ್ಕೃತಿಕ ಜಾಂಬೂರಿಯ ‘ಸವಿತಕ್ಕ ಅಳ್ಳಿ ಬ್ಯಾಂಡ್’ ಕಾರ್ಯಕ್ರಮವು ಕನ್ನಡದ ತತ್ವಪದಕಾರರ ತಾತ್ವಿಕ ಗೀತೆಗಳು ಮತ್ತು ಆಧುನಿಕ ಕವಿಗಳ ಕಾವ್ಯಕಾಣ್ಕೆ ಆಧಾರಿತ ಸಂಗೀತ ಮಾಧುರ್ಯವನ್ನು ಕಟ್ಟಿಕೊಟ್ಟಿತು. ಆಳ್ವಾಸ್ ಸಂಸ್ಥೆಯ ವಿದ್ಯಾಗಿರಿಯ ಕೆ.ವಿ ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಬೆಂಗಳೂರಿನ ಸವಿತಕ್ಕ ಮತ್ತು ಬಳಗದ ಕಲಾವಿದರು ತತ್ವಪದ ಮತ್ತು ಆಧುನಿಕ ಕಾವ್ಯದ ರಸವತ್ತಾದ ಸಂಯೋಜನೆಯೊಂದಿಗಿನ ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಿ ರಂಜಿಸಿದರು. ಖ್ಯಾತ ಗಾಯಕಿ ಸವಿತಕ್ಕ, ರಾಜೀವ ಅಗಳಿ, ಓಂಬ್ಬೆ ಗೌಡ್ರು, ಬಸಂಜಿ ಪ್ರಸಾದ, ಯಶಸ್ವಿನಿ ಅವರ ಸುಮಧುರ ಧ್ವನಿಯ ಮೂಲಕ ಕನ್ನಡದ ಶ್ರೇಷ್ಠ ಕವಿಗಳ ಕವಿತೆಗಳ ಆಸ್ವಾದ ಪ್ರೇಕ್ಷಕರಿಗೆ ದಾಟಿಕೊಂಡಿತು. ಸವಿತಕ್ಕ ಅವರು ?ಹಾವಾದ್ರು ಕಚ್ಚಬಾರ್ದಾ? ಮತ್ತು ?ಸೋಜಗಾದ ಸುಜಿ ಮಲ್ಲಿಗೆ ಅವರು ಪ್ರಸ್ತುತಪಡಿಸಿದ ತಕ್ಷಣ ವ್ಯಾಪಕ ಚಪ್ಪಾಳೆಗಳ ಮೆಚ್ಚುಗೆ ವ್ಯಕ್ತವಾಯಿತು. ಅವರು ಹಾಡಿದ ? ಯಾಕೆ ಬಡಿದಾಡ್ತಿ ತಮ್ಮ ? ಹಾಡು ಯುವ ಮನಸುಗಳನ್ನು ಸೆಳೆಯಿತು. ರಾಜೀವ ಅಗಳಿ ಬೇಂದ್ರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ/ಬೈಂದೂರು: ತಾಲೂಕಿನ ಕುಂದಾಪುರ ಹೊಲಿಕ್ರಾಸ್ ಚರ್ಚ್, ಬಸ್ರೂರು ಫಿಲೀಪ್ ನೇರಿ ಚರ್ಚ್, ತ್ರಾಸಿ ಕ್ರಿಸ್ಟ್ಕಿಂಗ್ ಚರ್ಚ್, ಗಂಗೊಳ್ಳಿ ಅವರ್ ಲೇಡಿ ಆಫ್ ಇಮ್ಯಾಕ್ಯೂಲೇಟ್ ಚರ್ಚ್, ತಲ್ಲೂರು, ಬೆಳ್ವೆ ಜೊಸೆಫ್ ಚರ್ಚ್, ಫ್ರಾನ್ಸಿಸ್ ಆಸಿಸಿ ಚರ್ಚ್, ಬೈಂದೂರು ಹೊಲಿಕ್ರಾಸ್ ಚರ್ಚ್ ಸೇರಿದಂತೆ ವಿವಿಧ ಚರ್ಚುಗಳು ಹಾಗೂ ಕ್ರೈಸ್ತ ಸಮುದಾಯ ಕ್ರಿಸ್ಮಸ್ ಹಬ್ಬವನ್ನು ಸರಳವಾಗಿ ಆಚರಿಸಿ ಸಂಭ್ರಮಿಸಿದರು. ಚರ್ಚ್ಗಳಿಗೆ ಕುಟುಂಬ ಸಮೇತ ತೆರಳಿದ ಕ್ರೈಸ್ತರು, ಯೇಸು ಕ್ರಿಸ್ತನ ಶೀಲುಬೆ ಮುಂದೆ ನಿಂತು ಶ್ರದ್ದಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಚರ್ಚ್ನ ಆವರಣದಲ್ಲಿ ನಿರ್ಮಿಸಿರುವ ಕಣ್ಮನ ಸೆಳೆಯುವ ಗೋದಲಿಗಳು ವಿದ್ಯುತ್ ದೀಪಾಲಂಕಾರ ಗಮನ ಸೆಳೆಯುತ್ತಿದ್ದವು. ಕ್ರೈಸ್ತರ ಮನೆಗಳಲ್ಲಿ ಸಂಭ್ರಮ ಮನೆಮಾಡಿದ್ದು, ಗೋದಲಿ, ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ರೆ. ಫಾ. ವಿನ್ಸೆಂಟ್ ಕುವೆಲ್ಲೋ, ರೆ.ಫಾ. ರಾಯಲ್ ನಜ್ರೆತ್, ರೆ.ಫಾ. ಸಿರಿಲ್ ಲೋಬೋ, ರೆ.ಫಾ ಕಿರಣ್ ನಜ್ರೆತ್ ರವರ ನೇತ್ರತ್ವದಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ನಮ್ಮ ದೇಶಕ್ಕೆ ದೊಡ್ಡ ಚರಿತ್ರೆಯಿದ್ದು ಅದರೊಂದಿಗೆ ಮಾನವೀಯ ಮೌಲ್ಯವುಳ್ಳವರೂ, ಚಾರಿತ್ರ್ಯವಂತರ ಅಗತ್ಯವಿದೆ. ಅಂತವರನ್ನು ನಿರ್ಮಿಸುವ ಕಾರ್ಯದಲ್ಲಿ ಸ್ಕೌಟ್ಸ್ ಗೈಡ್ಸ್ ತೊಡಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು, ಜೀವನಮೌಲ್ಯ, ಹಿರಿಯರಿಗೆ ಆದರಿಸುವ, ಕಿರಿಯರನ್ನು ಪ್ರೀತಿಸುವ ಗುಣಧರ್ಮವನ್ನು ಸ್ಕೌಟ್ಸ್ ಗೈಡ್ಸ್ ಕಲಿಸುತ್ತದೆ ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಎಸ್. ಬೊಮ್ಮಾಯಿ ಹೇಳಿದರು. ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಐದನೇ ದಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಕೌ ಟ್ಸ್ – ಗೈಡ್ಸ್ ಸಂಸ್ಥೆ ಇದೀಗ ಸಂಸ್ಕೃತಿ ಬಿಂಬಿಸುವ ಹಲವು ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಸಂಸ್ಕೃತಿಯ ಚಳುವಳಿ ಆರಂಭಿಸಿದ್ದಾರೆ. ಇದು ಭಾರತೀಯ ಪರಂಪರೆಯ ಉಳಿವಿಕೆಗೆ ಹಾಗೂ ಭವ್ಯ ಭಾರತ ನಿರ್ಮಾಣಕ್ಕೆ ಸಾಕ್ಷಿಯಾಗುತ್ತಿದೆ ಎಂದರು. ಮಕ್ಕಳಿಗೆ ವಿದ್ಯೆ ಜತೆಗೆ ಬೌದ್ಧಿಕ ಜ್ಞಾನ ಅಗತ್ಯ. ಶಿಸ್ತು, ಜೀವನ ಮೌಲ್ಯವನ್ನು ಸಮಂಜಸವಾಗಿ ತಿಳಿಸಿದರೇ ಮಗು ಭವಿ?ದಲ್ಲಿ ಉತ್ತಮ ನಾಗರಿಕನಾಗುತ್ತಾನೆ. ಸಂಸ್ಕ್ರತಿಯ ಉಳಿವಿಕೆಯ ಮೇಲೆ ಭಾರತದ ಭವಿ? ನಿರ್ಧರಿತವಾಗಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳ ದಾಖಲಾತಿ ಗಣನೀಯವಾಗಿ ಇಳಿದಿದೆ. ಆಂಗ್ಲ ಮಾಧ್ಯಮ ಶಾಲೆಗಳ ಮೋಹಕ್ಕೆ ಒಳಗಾಗಿರುವ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ದಾಖಲಾತಿ ಮಾಡುತ್ತಿದ್ದಾರೆ. ಮಕ್ಕಳಿಗೆ ವ್ಯವಹಾರಿಕವಾಗಿ ಆಂಗ್ಲ ಭಾಷೆಯ ಅವಶ್ಯಕತೆ ಇದೆಯೇ ಹೊರತು ಜೀವನದಲ್ಲಿ ಆಂಗ್ಲ ಭಾಷೆ ಅಷ್ಟೊಂದು ಮಹತ್ವ ಪಡೆದುಕೊಂಡಿಲ್ಲ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು ಇಂದು ಉನ್ನತ ಹುದ್ದೆಯಲ್ಲಿ, ಸ್ಥಾನಮಾನ ಪಡೆದುಕೊಂಡಿದ್ದಾರೆ ಎಂದು ಕರ್ಣಾಟಕ ಬ್ಯಾಂಕ್ ಆದಿ ಉಡುಪಿ ಶಾಖೆಯ ವ್ಯವಸ್ಥಾಪಕ ಬಿ. ರವೀಂದ್ರ ಶ್ಯಾನುಭಾಗ್ ಹೇಳಿದರು. ಜಿ.ಎಸ್.ವಿ.ಎಸ್. ಅಸೋಸಿಯೇಶನ್ ಪ್ರಾಯೋಜಿತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಬೆಳ್ಳಿ ಹಬ್ಬದ ಪ್ರಯುಕ್ತ ಶಾಲೆಯ ಟಿ.ವಿಮಲಾ ವಿ.ಪೈ ಸಭಾಗೃಹದಲ್ಲಿ ಶನಿವಾರ ಜರಗಿದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಯೋಜನೆ ರೂಪಿಸಿ ಶ್ರಮಿಸಬೇಕು ಎಂದು…
ಐಶ್ವರ್ಯ ಕೋಣನ | ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಅಲ್ಲಿ ಮೀಸೆ ಹೊತ್ತ ಇಬ್ಬರು ವಯೋವೃದ್ಧ ಗಂಡಸರಿಗೆ ಎಲ್ಲಿಲ್ಲದ ಡಿಮ್ಯಾಂಡು. ಜೊತೆಗೆ ಕಟ್ಟುಮಸ್ತಾದ ತರುಣರೂ ಗಮನ ಸೆಳೆಯುತ್ತಿದ್ದರು. ಆಳ್ವಾಸ್ ಕ್ಯಾಂಪಸ್ಸಿನಲ್ಲಿ ನಡೆಯುತ್ತಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ, ನುಡಿಸಿರಿ ವೇದಿಕೆಯ ಸಮೀಪ ಸಾಹಜ ಪ್ರದರ್ಶನ ನಡೆಸುತ್ತಿದ್ದ ಬಿಜಾಪುರದ ದಾನೇಶ್ವರಿ ತಂಡ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಜನರ ಸಮ್ಮುಖದಲ್ಲಿ ಚಕ್ಕಡಿಕಲ್ಲಿಗೆ ಹಗ್ಗ ಕಟ್ಟಲಾಗುತ್ತದೆ. ಆ ಹಗ್ಗವನ್ನು ಬಿಜಾಪುರದ ದಿಗಂಬರಪ್ಪ ಅವರ ಮೀಸೆಗೆ ಜೋಡಿಸಲಾಗುತ್ತದೆ. ತಕ್ಷಣ ಅವರು ತಮ್ಮ ಮೀಸೆಯಿಂದಲೇ ೪೦ಕೆ.ಜಿ ಭಾರದ ಚಕ್ಕಡಿಕಲ್ಲನ್ನು ಎತ್ತುತ್ತಾರೆ. ಶಂಕರಪ್ಪ ಮತ್ತು ದಿಗಂಬರಪ್ಪ ಎನ್ನುವವರು ಕ್ರಮವಾಗಿ ೪೦ ಮತ್ತು ೪೫ ಕೆ.ಜಿ. ತೂಕದ ಚಕ್ಕಡಿಕಲ್ಲು ಎತ್ತುವ ಸಾಹಸ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಿಜಾಪುರದ ರಮೇಶ್ ದಾನಪ್ಪ ಪಾಟೀಲ್ ಬಾಯಿಂದ 120 ಕೆಜಿಯ ತೂಕವನ್ನು ಹಾರೆಯ ಮೂಲಕ ಎತ್ತುತ್ತಾರೆ. 14 ವರ್ಷದ ಹುಡುಗ 122 ಕೆಜಿಯ ಭತ್ತದ ಚೀಲವನ್ನು ಬೆನ್ನ ಮೇಲೆ ಹೊತ್ತುಕೊಳ್ಳುವ ಸಣ್ಣಗೆ ಭಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಮಣ್ಣಿನ ಕಳಸ ಹೊತ್ತು ಮೆರವಣಿಗೆ ಹೊರಟ ಹೆಣ್ಣು ಮಕ್ಕಳು, ಕಚ್ಚೆ ಕಟ್ಟಿ ತಮಟೆ ಭಾರಿಸುತ್ತಿದ್ದ ಹುಡುಗರು… ಕತ್ತಿ ಹಿಡಿದು ಗೋವಿಂದ…ಗೋವಿಂದ…. ಎಂದು ದೇವರ ನಾಮ ಸ್ಮರಿಸುತ್ತಿದ್ದ ವೀರ ಕುಮಾರರ ಪಾತ್ರಧಾರಿಗಳು, ನಂದಿಕೋಲು ಹಿಡಿದು ಕುಣಿಯುತ್ತಿದ್ದ ನೃತ್ಯಗಾರರು…. ಕರಗದ ಪಾತ್ರಧಾರಿ ಕುಣಿಯುತ್ತ ವೇದಿಕೆಗೆ ಬಂದದ್ದೆ ತಡ, ಪ್ರೇಕ್ಷಕರ ಕೇಕೆ ಕರತಾಡನ ಮುಗಿಲು ಮುಟ್ಟತ್ತು…. ಬಿ.ಬಿ.ಎಂ.ಪಿ ವಿಭಾಗದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ವಿಶಿಷ್ಟ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಜಾಂಬೂರಿಯಲ್ಲಿ “ಏಕ ಭಾರತ ಶ್ರೇಷ್ಠ ಭಾರತ” ಸಂದೇಶ ಸಾರುವ ಜಿಲ್ಲಾವಾರು ಸಾಂಸ್ಕೃತಿಕ ಪ್ರದರ್ಶನವನ್ನು ಕೆ.ವಿ ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿತ್ತು. “ಬೃಹತ್ ಬೆಂಗಳೂರು ಸಾಂಸ್ಕೃತಿಕ ವೈಭವ” ಎನ್ನುವ ಶಿರ್ಷಿಕೆಯೊಂದಿಗೆ ಬಿ.ಬಿ.ಎಂ.ಪಿ ವಿಭಾಗದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಸಾಧನೆ, ಬೆಂಗಳೂರು ಇತಿಹಾಸ ಸಾರುವ ರೂಪಕ, ಪಟಕುಣಿತ, ಅಣ್ಣಮ್ಮ ತಾಯಿ ಉತ್ಸವ, ದ್ರೌಪದಿ ಧರ್ಮರಾಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಮಣ್ಣಿನಿಂದ ವಿವಿಧ ಅಲಂಕಾರಿಕ ವಸ್ತುಗಳು ಹಾಗೂ ದಿನಬಳಕೆಯ ಪಾತ್ರೆಗಳನ್ನು ತಯಾರಿಸಬಹುದು. ಆದರೆ, ಆಭರಣಗಳನ್ನು ತಯಾರಿಸುವುದನ್ನು ನೋಡಿದ್ದೀರಾ? ಅಬ್ಬಬ್ಬಾ. ಎಂತಹ ಅಧ್ಬುತ ವಿನ್ಯಾಸದ ಆಭರಣಗಳು! ಆಳ್ವಾಸ್ ಆವರಣದಲ್ಲಿ ಜರುಗುತ್ತಿರುವ ಜಾಂಬೂರಿಯ ಕರಕುಶಲ ವಸ್ತು ಪ್ರದರ್ಶನದಲ್ಲಿ ಇಂತಹದ್ದೊಂದು ವಿಶೇಷ ಮಳಿಗೆ ಗಮನ ಸೆಳೆಯಿತು. ರಾಯಚೂರು ಜಿಲ್ಲೆಯ ಹನುಮಂತಿ ಎಂಬ ಮಹಿಳೆ ಮತ್ತು ತಂಡದವರು ಜೇಡಿಮಣ್ಣಿನಿಂದ ಸುಂದರವಾದ ಕಾಲ್ಗೆಜ್ಜೆ, ಕಿವಿಯೋಲೆ, ಕೈಬಳೆ, ಕೈಹಾರ, ಕೊರಳ ಸರ, ಕೀ ಬಂಚ್, ಜುಮ್ಕಿ, ಹ್ಯಾಂಗಿಗ್ಸ್, ಬಾಗಿಲು ತೋರಣಗಳನ್ನು ತಯಾರಿಸುತ್ತಿದ್ದಾರೆ. ಹೀಗೆ ವಿವಿಧ ವಿನ್ಯಾಸಗಳಿಂದ ಗ್ರಾಹಕರು ಒಮ್ಮೆ ತಮ್ಮ ಅಂಗಡಿಯತ್ತ ಕಣ್ಣು ಹಾಯಿಸುವಂತೆ ಮಾಡುತ್ತಿದ್ದಾರೆ ಈ ಗೃಹಿಣಿ. ಸದಾ ಕೃಷಿ ಹಾಗೂ ಮನೆ ಕೆಲಸದಲ್ಲಿ ನಿರತರಾಗಿರುವ ಗೃಹಿಣಿಯರ ಕಷ್ಟವನ್ನು ಅರಿತ ಸರ್ಕಾರೇತರ ಸಂಸ್ಥೆಗಳು ಹಳ್ಳಿ ಪ್ರದೇಶಗಳ ಮಹಿಳೆಯರಿಗೆ ಹೊಸ ಜೀವನೋಪಾಯವನ್ನು ಪರಿಚಯಿಸಿದರು. ಕೇರಳ, ದೆಹಲಿ, ಬೆಂಗಳೂರು, ಉಡುಪಿ ಹೀಗೆ ಬೇರೆ ಬೇರೆ ಪ್ರದೇಶಗಳಿಂದ ರಾಯಚೂರಿಗೆ ಆಗಮಿಸಿ ಸಂಘಟನೆಯನ್ನು ಆರಂಭಿಸಿದರು. ಪೋತ್ನಾಳ್ನಲ್ಲಿ ಹತ್ತು ರೂಪಾಯಿಯ ಉಳಿತಾಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಕೃಷಿಸಿರಿಯ ಸುತ್ತಮುತ್ತಲೆಲ್ಲಾ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಗುಂಪಿನ ಚಲನವಲನಗಳ ನಡುವೆ ನೂರಕ್ಕೂ ಹೆಚ್ಚು ಬೆದರು ಗೊಂಬೆಗಳು ಗಮನ ಸೆಳೆಯುತ್ತಿದ್ದವು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕೃಷಿಮೇಳದ ಸಮೀಪವಿರುವ ತರಕಾರಿ ಹಾಗೂ ಹೂವಿನ ತೋಟದ ನಡುವೆ ಬೆದರು ಗೊಂಬೆಗಳನ್ನು ನಿಲ್ಲಿಸಿರುವುದು ಆಕರ್ಷಕವಾಗಿ ಕಾಣುತ್ತಿದೆ. ತೋಟದಲ್ಲಿರುವ ಹೂವು ಹಾಗೂ ತರಕಾರಿಗಳಿಗೆ ಯಾವುದೇ ಪ್ರಾಣಿ ಪಕ್ಷಿಗಳಿಂದ ಹಾನಿಯಾಗಬಾರದು ಎನ್ನುವ ಉದ್ದೇಶದಿಂದ ನಿಲ್ಲಿಸುವ ಗೊಂಬೆಗಳೇ ತೋಟಕ್ಕೆ ಹೆಚ್ಚು ಆಕರ್ಷಣೆಯನ್ನು ನೀಡುವಂತಿದ್ದು ಜಾಂಬೂರಿಯಲ್ಲಿ ಅವುಗಳ ಚಿತ್ರಣವನ್ನು ಸೆರೆ ಹಿಡಿಯುವವರ ಸಂಖ್ಯೆಯು ಹೆಚ್ಚಾಗಿದೆ. ಹುಲ್ಲಿನಿಂದ ತಯಾರಿಸಿದ ಗೊಂಬೆಗಳಿಗೆ ಮಡಕೆಯ ಮುಖವಾಡವನ್ನು ಹಾಕಿ ಅದಕ್ಕೆ ಟೋಪಿಯನ್ನು ಹಾಕಿ ಅಲಂಕಾರ ಮಾಡಿ ನಿಲ್ಲಿಸಿರುವ ಭಂಗಿ ನೋಡುಗರಿಗೆ ಜೀವಂತ ವ್ಯಕ್ತಿ ತೋಟದ ಕಾವಲಿಗೆ ನಿಂತಂತಿತ್ತು. ಒಂದೆಡೆ ವಿಭಿನ್ನರೀತಿಯ ತರಕಾರಿಗಳು ನೋಡುಗರನ್ನು ಆಕರ್ಷಿಸಿದರೆ ಮತ್ತೊಂದೆಡೆ ಈ ಬೆದರು ಗೊಂಬೆಗಳು ಜನರನ್ನು ಆಕರ್ಷಿಸುವ ಮೂಲಕ ಜಾಂಬೂರಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದವು. ವರದಿ: ಜ್ಯೋತಿ ಜಿ., ದ್ವಿತೀಯ ವರ್ಷ,…
