Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಪ್ರತಿಭಟನೆಗೆ ಬಂದವರು ಸಂಧಾನಕ್ಕೆ ನಿಂತರು. ರಾಜಿಗೆ ಒಪ್ಪದ ಗ್ರಾಮಸ್ಥರು ತಿರುಗಿ ಬಿದ್ದರು!
    ವಿಶೇಷ ವರದಿ

    ಪ್ರತಿಭಟನೆಗೆ ಬಂದವರು ಸಂಧಾನಕ್ಕೆ ನಿಂತರು. ರಾಜಿಗೆ ಒಪ್ಪದ ಗ್ರಾಮಸ್ಥರು ತಿರುಗಿ ಬಿದ್ದರು!

    Updated:15/03/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ದೇವಲ್ಕುಂದ ಮೀನು ಸಂಸ್ಕರಣಾ ಘಟಕ ವಿವಾದ

    Click Here

    Call us

    Click Here

    ಕುಂದಾಪ್ರ ಡಾಟ್ ಕಾಂ ವರದಿ
    ಕುಂದಾಪುರ, ಮಾ.15: ಕರೆ ನೀಡಿದ್ದು ಪ್ರತಿಭಟನೆಗೆ ಆದರೆ ಬಂದಿದ್ದು ಮಾತ್ರ ಸಂಧಾನಕ್ಕೆ. ರಾಜಿ ಸೂತ್ರ ಮುರಿದು ತಿರುಗಿ ಬಿದ್ದ ಗ್ರಾಮಸ್ಥರು, ಸದ್ದಿಲ್ಲದೇ ಕಾಲ್ಕತ್ತ ಜಯ ಕರ್ನಾಟಕ ಸಂಘಟನೆಯ ಮುಖಂಡರು! ಇದು ಇಂದು ಕಟ್‌ಬೆಲ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಮೀನು ಸಂಸ್ಕರಣಾ ಘಟಕ ತೆರೆಯುವುದನ್ನು ವಿರೋಧಿಸಿ ಹಮ್ಮಿಕೊಂಡ ಪ್ರತಿಭಟನೆಯ ಪ್ರಮುಖಾಂಶ.

    ಜನರಿಗೆ ತೊಂದರೆಯಾಗುವು ಕಾರಣದಿಂದ ಮೀನು ಸಂಸ್ಕರಣಾ ಘಟಕ ಆರಂಭಿಸುವುದನ್ನು ವಿರೋಧಿಸಿ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆ ಕರೆ ನೀಡಿತ್ತು. ಅದರಂತೆ ಗ್ರಾಮಸ್ಥರು ಕೂಡ ಪಂಚಾಯತ್ ಎದುರು ಜಮಾಯಿಸಿದ್ದರು. ಗ್ರಾಮಸ್ಥರನ್ನು ಉದ್ದೇಶಿಸಿ ಜಯಕರ್ನಾಟಕ ಸಂಘಟನೆಯ ಗೌರವಾಧ್ಯಕ್ಷ ಸುಧಾಕರ ರಾವ್ ಮಾತನಾಡುತ್ತಾ, ದೇವಲ್ಕುಂದದಲ್ಲಿ ಮೀನು ಸಂಸ್ಕರಣಾ ಘಟಕ ಆರಂಭಗೊಳ್ಳಲಿದೆ ಎಂಬ ತಪ್ಪು ಮಾಹಿತಿಯಿಂದಾಗಿ ಪ್ರತಿಭಟನೆಗೆ ಮುಂದಾಗಿದ್ದೆವು. ಆದರೆ ಅಲ್ಲಿ ಮೀನು ಶಿಥಿಲೀಕರಣ ಘಟಕ ಆರಂಭವಾಗುವುದೆಂದು ಡಿವೈಎಸ್ಪಿ ಸಮ್ಮುಖದಲ್ಲಿ ಕಾರ್ಖಾನೆಯವರು ಮನವರಿಕೆ ಮಾಡಿದ್ದರಿಂದ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದ್ದೇವೆ. ನಮ್ಮ ವಿರೋಧ ಇದ್ದದ್ದು ಮೀನು ಸಂಸ್ಕರಣಾ ಘಟಕ ಆರಂಭಿಸುವುದಕ್ಕೆ ಮಾತ್ರ ಎನ್ನುತ್ತಿದ್ದಂತೆ ಗ್ರಾಮಸ್ಥರು ಆಕ್ಷೇಪ ಎತ್ತಿದರು. ಕುಂದಾಪ್ರ ಡಾಟ್ ಕಾಂ ವರದಿ

    ನಮಗೆ ಇಲ್ಲಿ ಮೀನಿಗೆ ಸಂಬಂಧಿಸಿದ ಯಾವ ಘಟಕದ್ದೂ ಅವಶ್ಯಕತೆ ಇಲ್ಲ ಎಂದು ಗ್ರಾಮಸ್ಥರು ಧ್ವನಿಯೇರಿಸಿದ್ದೇ ತಡ, ಜಯಕರ್ನಾಟಕ ಸಂಘಟನೆಯ ಮುಖಂಡರು ಕೂಡಲೇ ಪ್ರತಿಭಟನೆಯಿಂದ ಹಿಂದೆ ಸರಿದು ಗ್ರಾಪಂ ಪಿಡಿಓಗೆ ಮನವಿ ಸಲ್ಲಿಸಲು ಮುಂದಾದರು. ಗ್ರಾಮಸ್ಥರೊಂದಿಗೆ ಒಟ್ಟಾಗಿ ಪ್ರತಿಭಟನೆಳಿದಿದ್ದ ಸಂಘಟನೆಯ ಕಾರ್ಯಕರ್ತರುಗಳಿಗೆ ಏಕಾಏಕಿ ಎದುರಾದ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಸದ್ದಿಲ್ಲದೇ ಫಲಾಯನವಾದ ಅನುಸರಿಸಿದ್ದರು. ಕುಂದಾಪ್ರ ಡಾಟ್ ಕಾಂ ವರದಿ

    [quote font_size=”14″ bgcolor=”#ffffff” arrow=”yes” align=”right”]ನಾವು ಈವರೆಗೆ ನೆಮ್ಮದಿಯಿಂದಲೇ ಇದ್ದೇವೆ. ಇಲ್ಲಿ ಮೀನು ಸಂಸ್ಕರಣಾ ಘಟಕ ಆರಂಭಿಸಿ ನಮ್ಮ ನೆಮ್ಮದಿ ಕೆಡಹುವ ಹುನ್ನಾರ ನಡೆಸಿದ್ದಾರೆ. ಇಂತಹದ್ದನ್ನು ಮಾಡವುದನ್ನು ಬಿಟ್ಟು ಶಾಲೆಯನ್ನಾದರೂ ಕಟ್ಟಲಿ. ನಮ್ಮ ಮಕ್ಕಳು ದೂರದ ಶಾಲೆಗೆ ತೆರಳುವುದಾದರೂ ತಪ್ಪುತ್ತದೆ. – ಕಮಲಾ, ಗ್ರಾಮಸ್ಥೆ[/quote]

    Click here

    Click here

    Click here

    Call us

    Call us

    ಈ ಸಂದರ್ಭದಲ್ಲಿ ಸ್ಥಳೀಯರಾದ ಚರಣ ಮಾತನಾಡಿ ನಮ್ಮ ಗ್ರಾಮದಲ್ಲಿ ಮೀನು ಸಂಸ್ಕರಣಾ ಘಟಕವಾಗಲಿ, ಶಿಥಿಲೀಕರಣ ಘಟಕವಾಗಿ ಅದಕ್ಕೆ ವಿರೋಧವಿದೆ. ಈ ಪರಿಸರದಲ್ಲಿ ಶಾಲೆ, ದೇವಸ್ಥಾನ ಹಾಗೂ ಹತ್ತಾರು ದಲಿತ ಕುಟುಂಬದವರು ವಾಸಿಸುತ್ತಿದ್ದಾರೆ. ಗ್ರಾಮಸ್ಥರಿಗೆ ತಿಳಿಯದಂತೆ ಇಲ್ಲಿ ಅನುಮತಿ ನೀಡುತ್ತಿದ್ದಾರೆ. ಜಯಕರ್ನಾಟಕ ಸಂಘಟನೆಯವರು ಪ್ರತಿಭಟನೆಗೆ ಕರೆದು ಸಮಜಾಯಿಷಿ ನೀಡುತ್ತಿದ್ದಾರೆ. ನಮಗೆ ಅದರ ಅಗತ್ಯವೂ ಇಲ್ಲ. ಗ್ರಾಮಸ್ಥರ ಹಿತಾಸಕ್ತಿಯನ್ನು ಪರಿಗಣಿಸುವ ಸಂಘಟನೆಯಾಗಿದ್ದರೇ ಮಾತ್ರ ನಮ್ಮೊಂದಿಗೆ ಬನ್ನಿ. ಈ ಪರಿಸರದಲ್ಲಿ ಮೀನು ಸಂಸ್ಕರಣಾ ಘಟಕದ ಪ್ರಕ್ರಿಯೆ ಮುಂದುವರಿದದ್ದೇ ಆದರೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಕುಂದಾಪ್ರ ಡಾಟ್ ಕಾಂ ವರದಿ

    ಪ್ರತಿಭಟನೆಯಲ್ಲಿ ಜಯಕರ್ನಾಟಕ ವೇದಿಕೆಯ ಜಿಲ್ಲಾಧ್ಯಕ್ಷ ಜನನಿ ದಿವಾಕರ ಜೆ. ಶೆಟ್ಟಿ, ಹೆಮ್ಮಾಡಿ ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಪ್ರಕಾಶ, ಹೆಮ್ಮಾಡಿ ಗ್ರಾಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಹಟ್ಟಿಯಂಗಡಿ ಗ್ರಾಪಂ ಸದಸ್ಯ ಸಂತೋಷ ತೋಟಬೈಲು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಎಸೈ ನಾಸಿರ್ ಹುಸೇನ್ ಅವರ ನೇತೃತ್ವದಲ್ಲಿ ಬಂದೋವಸ್ತ್ ಏರ್ಪಡಿಸಲಾಗಿತ್ತು.

    ಜಯಕರ್ನಾಟಕ ಸಂಘಟನೆಯಲ್ಲಿಯೂ ಮೂಡದ ಒಗ್ಗಟ್ಟು!
    ಪ್ರತಿಭಟನೆಯ ಮಾಡುವ ಮೊದಲು ಹೇಳಿದ್ದೇ ಒಂದು ನಂತರದ ಹೇಳಿಕೆಯೇ ಇನ್ನೊಂದು. ಇದು ಜಯಕರ್ನಾಟಕ ಸಂಘಟನೆಯ ಜಿಲ್ಲಾ ನಾಯಕರುಗಳ ವಿರುದ್ಧ ಹೆಮ್ಮಾಡಿ ಘಟಕದ ಕಾರ್ಯಕರ್ತರುಗಳೇ ಅಸಮಧಾನ ಹೊರಗೆಡವಿದ ಪರಿ. ಹೆಮ್ಮಾಡಿಯಲ್ಲಿ ಮೀನು ಸಂಸ್ಕರಣಾ ಘಟಕವಿರಲಿ, ಶಿಥಿಲೀಕರಣ ಘಟಕ ಆಗುವುದಿರಲಿ ಅದಕ್ಕೆ ನಮ್ಮ ವಿರೋಧವಿದೆ. ಅದನ್ನು ವಿರೋಧಿಸಿಯೇ ಪ್ರತಿಭಟನೆ ಹಮ್ಮಿಕೊಂಡಿದ್ದು ಈಗ ಜಿಲ್ಲಾ ನಾಯಕರು ವ್ಯತಿರಿಕ್ತ ಹೇಳಿಕೆ ನೀಡಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿದ್ದಾರೆ.

    ಇದನ್ನೂ ಓದಿ: ದೇವಲ್ಕುಂದ: ಮೀನು ಸಂಸ್ಕರಣಾ ಘಟಕ ವಿರೋಧಿಸಿ ಬೃಹತ್ ಜನಾಂದೋಲನ – http://kundapraa.com/?p=9210 .

    Devalkunda Fish refinary Unit. Villegians opposed and pretested (1) Devalkunda Fish refinary Unit. Villegians opposed and pretested (2) Devalkunda Fish refinary Unit. Villegians opposed and pretested (3) Devalkunda Fish refinary Unit. Villegians opposed and pretested (4) Devalkunda Fish refinary Unit. Villegians opposed and pretested (5)

    Devalkunda Fish refinary Unit. Villegians opposed and pretested (6) Devalkunda Fish refinary Unit. Villegians opposed and pretested (7) Devalkunda Fish refinary Unit. Villegians opposed and pretested (8) Devalkunda Fish refinary Unit. Villegians opposed and pretested (9) Devalkunda Fish refinary Unit. Villegians opposed and pretested (10)

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d