Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಹುಲ್ಲಿನ ಗುಡಿಸಲಲ್ಲಿ ವಾಸವಿರುವ ಕುಟುಂಬಕ್ಕೆ ಬೇಕಿದೆ ಭದ್ರ ಸೂರು
    Recent post

    ಹುಲ್ಲಿನ ಗುಡಿಸಲಲ್ಲಿ ವಾಸವಿರುವ ಕುಟುಂಬಕ್ಕೆ ಬೇಕಿದೆ ಭದ್ರ ಸೂರು

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಸಾಲಮಾಡಿ ಶೌಚಾಲಯ ಕಟ್ಟಿದ್ದರೂ ಅನುದಾನ ನೀಡಲು ನಾಡ ಪಂಚಾಯತ್ ಹಿಂದೇಟು

    Click Here

    Call us

    Click Here

    ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
    ಕುಂದಾಪುರ: ತಾಲೂಕಿನಲ್ಲಿ ಮುಖವೆತ್ತರಿಸಿ ನೋಡಬೇಕಾದ ವಸತಿ ಸಮಚ್ಛಯಗಳು ತಲೆಯೆತ್ತುವ ಮಟ್ಟಿಗೆ ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತಿರುವ ಹೊತ್ತಿಗೆ, ಹುಲ್ಲಿನ ಗುಡಿಸಿಲೊಳಕ್ಕೆ ಮಳೆ ಬಿಸಿಲೆನ್ನದೆ ಬದುಕು ಕಂಡುಕೊಂಡಿದೆ ನಾಡ ಗ್ರಾಪಂ ವ್ಯಾಪ್ತಿಯ ಪಡುಕೋಣೆ ಹಡವು ನರಸಿಂಹ ದೇವಾಡಿಗರ ಕುಟುಂಬ.

    ಕಳೆದ ಎಪ್ಪತ್ತು ವರ್ಷಗಳಿಂದ ಹಡವು ನರಸಿಂಹ ದೇವಾಡಿಗ ಅವರು ಮಳಿ ಹುಲ್ಲು ಸೂರಿನಡಿಯಲ್ಲಿ ಪತ್ನಿ ಬಾಬಿ ದೇವಾಡಿಗ ಪುತ್ರಿ ಸಮುನಾ ಜೊತೆ ವಾಸ ಮಾಡುತ್ತಿದ್ದಾರೆ. ವಾಸಿಸುವ ಮನೆ, ಹಟ್ಟಿ, ಸ್ನಾನದ ಮನೆ ಎಲ್ಲವೂ ಮಳಿ ಹುಲ್ಲಿಂದ ನಿರ್ಮಿಸಲಾಗಿದೆ. ಕಳೆದ ಒಂದು ವರ್ಷದ ಹಿಂದೆ ವಿದ್ಯುತ್ ಬಂದಿದ್ದು ಬಿಟ್ಟರೆ ಮತ್ತೇನು ಪ್ರಗತಿ ಸಾಧಿಸಿಲ್ಲ. ಮನೆ ಗೋಡೆಯಲ್ಲಿ ಹುತ್ತ ಕಟ್ಟಿದೆ. ಒಳಗಡೆ ಇಲಿ ಹೆಗ್ಗಣಗಳು ತೋಡಿದ ಗುಳಿಗಳಿವೆ. ಹಾವುಗಳಂತೂ ಈ ಮನೆಯ ಖಾಯಂ ಸದಸ್ಯರು. ಮಳೆ ಬಂದರೆ ನೀರೆಲ್ಲಾ ಒಳಗೆ. ಜೋರು ಮಳೆ ಬಂದರೆ ಇವರ ಬೇರೆಯವರ ಮನೆಯೇ ಆಸರೆ. ಒಟ್ಟಾರೆ ಇಂದೋ ನಾಳೆಯೋ ಎನ್ನುವ ಸ್ಥಿತಿಯಲ್ಲಿ ಮನೆಯಿದೆ. ನರಸಿಂಹ ದೇವಾಡಿಗ ಅವರ ಓರ್ವ ಮಗ ಮಂಜುನಾಥ ಬೆಂಗಳೂರು ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಗಂಡ-ಹೆಂಡತಿ ಈರ್ವರೂ ಕೃಷಿ ಕಾರ್ಮಿಕರು. ಮಗಳು ಸಮುನಾ ಪಡುಕೋಣೆ ಹವ್ಯಾಸಿ ಛಾಯಾಗ್ರಾಹಕಿ. ಕುಂದಾಪ್ರ ಡಾಟ್ ಕಾಂ ವರದಿ.

    ಸಾಲ ಮಾಡಿ ಕಟ್ಟಿದ ಶೌಚಾಲಯಕ್ಕೆ ಪಂಚಾಯತ್ ಅನುದಾನವಿಲ್ಲ:
    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿರ್ಮಲ ಭಾರತ್ ಯೋಜನೆಯಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಂಡ ಶೌಚಾಲಯಕ್ಕೂ ನಾಡಾ ಗ್ರಾಪಂ. ಹಣ ನೀಡದೆ ಸತಾಯಿಸುತ್ತಿದೆ. ನರಸಿಂಹ ದೇವಾಡಿಗ ನಿಯಮದಂತೆ ಶೌಚಾಲಯ ಕಟ್ಟಿಕೊಂಡಿದ್ದು, ಪ್ರತೀ ಹಂತದ ಚಿತ್ರ ಹಾಗೂ ದಾಖಲೆ ಗ್ರಾಪಂಗೆ ಒದಗಿಸಿದ್ದಾರೆ. ಆದರೂ ಉಳ್ಳವರ ಮರ್ಜಿಗೆ ಮಣಿದ ನಾಡಾ ಗ್ರಾಪಂ ನರಸಿಂಹ ದೇವಾಡಿಗರ ಶೌಚಾಲಯ ಅನುದಾನ ತಡೆಹಿಡಿದಿದೆ. ನರಸಿಂಹ ದೇವಾಡಿಗ ವಾಸದ ಬಗ್ಗೆ ತಹಸೀಲ್ದಾರ್ ಕೋರ್ಟ್ ದೃಢೀಕರಿಸಲಾಗಿದೆ. ಯಾರೋ ತಗಾದೆ ತೆಗೆಯುತ್ತಾರೆ ಎಂದು ಗ್ರಾಪಂ ಅನುದಾನ ತಡೆಹಿಡಿಯಲು ಅವಕಾಶವಿಲ್ಲ. ಗ್ರಾಪಂ ಏಕಪಕ್ಷೀಯ ನಿಲುವ ತಳೆದು ಫಲಾನುಭವಿಗಳಿಗೆ ಅನುದಾನ ನೀಡಲು ಹಿಂದೇಟು ಎಷ್ಟು ಸರಿ ಎಂಬ ಎಂದು ಮನೆಯವರು ಅಳಲು ತೋಡಿಕೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

    * ನಾಡಾ ಗ್ರಾಪಂ ನಮಗೆ ಶೌಚಾಲಯ ಕಟ್ಟಿಕೊಳ್ಳುಲು ಪರವಾನಿಗೆ ಕೊಟ್ಟಿದ್ದು, ಹಂತ, ಹಂತವಾಗಿ ಕಟ್ಟಿದ ಶೌಚಾಯದ ಪೊಟೋ ಸಹಿತ ನಾಡಾ ಗ್ರಾಪಂಗೆ ವರದಿ ಸಲ್ಲಿಸಿದ್ದೇವೆ. ಶೌಚಾಲಯ ನಿರ್ಮಿಸಿ ಎರಡು ವರ್ಷ ಕಳೆದರೂ ಚಿಕ್ಕಾಸು ನಾಡಾ ಗ್ರಾಪಂ ಕೊಟ್ಟಿಲ್ಲ. ತಾಯಿ ಚಿನ್ನ ಅಡವಿಟ್ಟು ಶೌಚಾಲಯ ಕಟ್ಟಿಕೊಂಡಿದ್ದೇವೆ. ಶೌಚಾಲಯಕ್ಕೆ ಗ್ರಾಪಂ ಅನುದಾನ ನೀಡದ ಕಾರಣ ಅಡವಿಟ್ಟ ಚಿನ್ನ ಕೂಡಾ ಕೈತಪ್ಪುವ ಹಂತಕ್ಕೆ ಬಂದಿದೆ. ನಿಯಮದಂತೆ ಶೌಚಾಲಯ ಕಟ್ಟಿಕೊಂಡರೂ ಗ್ರಾಪಂ ಹಣ ನೀಡಿತ್ತಿಲ್ಲ – ಸುಮನಾ ಪಡುಕೋಣೆ, ನರಸಿಂಹ ದೇವಾಡಿಗರ ಪುತ್ರಿ

    Click here

    Click here

    Click here

    Call us

    Call us

    * ಜೋರು ಮಳೆ ಬಂದರೆ ನಾವು ಬೇರೆಯವರ ಮನೆ ಆಶ್ರಯ ಪಡೆಯಬೇಕು. ಮನೆ ಒಳಗೆ ಹಾವು ಬಂದರೆ ವಾರಗಟ್ಟಲೆ ಇರುತ್ತದೆ. ಹಾವು ಹಿಡಿದು ಬೇರೆ ಕಡೆ ಬಿಟ್ಟು ಬರಬೇಕು. ಹುಲ್ಲು ಮಾಡಿಂದ ರಾತ್ರಿ ಹಾವು ಮೈಮೇಲೆ ಬೇಳಬಾರದು ಎಂಬ ಉದ್ದೇಶದಲ್ಲಿ ಮನೆ ಮಾಡಿನ ಒಳಛಾವಣಿಯಲ್ಲಿ ಸೀರೆ ಹಾಗೆ ಕಟ್ಟಿಲಾಗಿದೆ. ಇಷ್ಟೆಲ್ಲಾ ಕಷ್ಟಗಳ ನಡುವೆ ಶೌಚಾಲಯ ಕಟ್ಟಿಕೊಂಡಿದ್ದರೂ, ಗ್ರಾಪಂ ಹಣ ನೀಡಿಲ್ಲ. ಜೀವನ ನಡೆಸುವುದೇ ಕಷ್ಟವಾಗಿರುವಾಗ ಕಷ್ಟಪಟ್ಟು ಕಟ್ಟಿದ ಶೌಚಾಲಯಕ್ಕೆ ಹಣ ನೀಡದಿರುವುದು ಯಾವ ನ್ಯಾಯ. – ಬಾಬಿ ದೇವಾಡಿಗ, ನರಸಿಂಹ ದೇವಾಡಿಗರ ಪತ್ನಿ

    news PADUKONE HOUSE STORY2 news PADUKONE HOUSE STORY news PADUKONE HOUSE STORY3

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d