ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂರು ಮುತ್ತು ಖ್ಯಾತಿಯ ಕುಂದಾಪುರದ ರೂಪಕಲಾ ಸಂಸ್ಥೆಯ ನಿರ್ದೇಶಕ, ಪ್ರಸಿದ್ಧ ಕಲಾವಿದ ಸತೀಶ ಪೈ ಅವರನ್ನು ಬೆಂಗಳೂರಿನ ಗೋಕುಲ್ ಮಿತ್ರ ಬಳಗ ಇದರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಜರಗಿದ ಸಮಾರಂಭದಲ್ಲಿ ಅತಿಥಿಗಳಾದ ಹೊಟೇಲ್ ಉದ್ಯಮಿ ಎಂ.ಪಿ.ಪ್ರಭು, ಪಿ.ಸುರೇಶ, ಪಿ.ಸತ್ಯ, ಎಸ್.ಎಂ.ರಘು, ಬೆಂಗಳೂರು ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಮಣೂರು ವಾಸುದೇವ ಮಯ್ಯ ಮೊದಲಾದವರು ಕಲಾವಿದ ಕೆ.ಸತೀಶ ಪೈ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು.
ಬೆಂಗಳೂರಿನ ಗೋಕುಲ್ ಮಿತ್ರ ಬಳಗದ ಜಯಂತ ಪೂಜಾರಿ ಹಟ್ಟಿಯಂಗಡಿ, ರಮೇಶ ಕುಮಾರ್ ಚೋರಾಡಿ, ಕಲಾವಿದರಾದ ಅಶೋಕ ಶ್ಯಾನುಭಾಗ್ ಕುಂದಾಪುರ, ಕೆ.ಸಂತೋಷ ಪೈ ಕುಂದಾಪುರ, ನಾಗೇಶ ಕಾಮತ್, ನವೀನ ಭಟ್ ಹಟ್ಟಿಯಂಗಡಿ, ಬಿ.ಗಣೇಶ ಶೆಣೈ ಗಂಗೊಳ್ಳಿ, ಮಣಿಕಂಠ, ನಾಗೇಶ ಹಾಲಾಡಿ, ಶ್ವೇತಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.