ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಾರುತಿ ಸುಜುಕಿ ಆಟೋಮೊಬೈಲ್ ಸಂಸ್ಥೆಯು ದೆಹಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ 25ನೇ ಅಖಿಲ ಭಾರತ ಕೌಶಲ್ಯ ಸ್ವರ್ಧೆಯ ಎಕ್ಸ್ಪ್ರೆಸ್ ಸರ್ವಿಸ್ ವಿಭಾಗದಲ್ಲಿ ಬೆಂಗಳೂರು ಬಿಮಾಲ್ ಆಟೋ ಎಜೆನ್ಸಿಯಲ್ಲಿ ಟೆಕ್ನಿಶಿಯನ್ ಆಗಿರುವ ಸಂತೋಷ್ ಆಚಾರ್ಯ ಹಾಗೂ ಬಿಚ್ಕಿ ಕುಮಾರ್ ಸಾಹೋ ಅವರು ಪ್ರಥಮ ಸ್ಥಾನಗಳಿಸಿ ಸ್ಥಾನ ಪಡೆದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸಂತೋಷ್ ಆಚಾರ್ಯ ಬೈಂದೂರು ತಗ್ಗರ್ಸೆಯ ಗಣಪಯ್ಯ ಆಚಾರ್ಯ ಹಾಗೂ ಜಯಲಕ್ಷ್ಮೀ ಅವರ ಪುತ್ರ.