ಕುಂದಾಪುರ: ಪ್ರೆಸಿಡೆಂಟ್ ಸಿಕ್ಸರ್ಸ್ ಕ್ರಿಕೆಟ್ ತಂಡದ ಜರ್ಸಿ ಅನಾವರಣಗೊಳಿಸಿದ ನಟ ಸುನಿಲ್ ಶೆಟ್ಟಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಈ ಬಾರಿ ಎಂಪಿಎಲ್ ಮ್ಯಾಂಗಳೂರು ಪ್ರೀಮಿಯರ್ ಲೀಗ್‌ನಲ್ಲಿ ಕುಂದಾಪುರದ ಅದುವೇ ಪ್ರೆಸಿಡೆಂಟ್ ಸಿಕ್ಸರ್ಸ್ ಕ್ರಿಕೆಟ್ ತಂಡ ಭಾಗವಹಿಸುತ್ತಿದೆ. ಈ ತಂಡದ ಉದ್ಘಾಟನಾ ಸಮಾರಂಭ, ಕೋಟೇಶ್ವರ ಹೈಸ್ಕೂಲ್ ಮೈದಾನದಲ್ಲಿ ಜರುಗಿತು. ವರ್ಣರಂಜಿತ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ತುಳುನಾಡಿನ ಹೆಮ್ಮೆಯ ಪುತ್ರ ಸುನೀಲ್ ಶೆಟ್ಟಿ ತಂಡದ ಜೆರ್ಸಿಯನ್ನು ಮತ್ತು ತಂಡದ ಥೀಂ ಸಾಂಗ್‌ನ್ನು ಬಿಡುಗಡೆಗೊಳಿಸಿದರು.

Call us

Click Here

ಈ ಸಂದರ್ಭ ಮಾತನಾಡಿದ ನಟ ಸುನೀಲ್ ಶೆಟ್ಟಿ, ನಮ್ಮಸ್ಕಾರ ಹೇಗಿದ್ದಿರಿ? ಎಂದು ಸಭಿಕರೊಂದಿಗೆ ಮಾತನಾಡಿದ ಸುನೀಲ್ ನಮಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತದೆ. ತುಳು ಬರ‍್ತದೆ ಎಂದು ಮಾತನ್ನು ಶುರು ಮಾಡಿದರು. ನನಗೆ ಈ ಕಾರ್ಯಕ್ರಮಕ್ಕೆ ಬಂದಿರುವುದು ಬಹಳ ಸಂತೋಷವಾಗಿದೆ. ಕ್ರಿಕೆಟ್ ಎನ್ನುವುದು ನನ್ನ ಮೊದಲ ಪ್ಯಾಶನ್ ಆಗಿದೆ. ಆಯೋಜಕರು ನನಗೆ ನಮ್ಮನ್ನು ಬೆಂಬಲಿಸಿ ಎಂದಾಗ ಇಲ್ಲ ಎನ್ನಲಾಗಲಿಲ್ಲ. ಆ ಕಾರಣವಾಗಿ ಬಂದು ಬೆಂಬಲಿಸಿದ್ದೇನೆ. ನಾನು ಪ್ರೆಸಿಡೆಂಟ್ ಸಿಕ್ಸರ್‌ನ್ನು ಬೆಂಬಲಿಸುತ್ತೇನೆ ನೀವು ಬೆಂಬಲಿಸಿ ಎಂದು ಇಂಗ್ಲಿಷ್ ಮಿಶ್ರಿತ ತುಳುವಿನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ತಿತಿಲಿ ಖ್ಯಾತಿಯ ಹಾಡುಗಾರ್ತಿ, ಪ್ರೆಸಿಡೆಂಟ್ ಸಿಕ್ಸರ್ ಕುಂದಾಪುರದ ರಾಯಭಾರಿ ಸಂಗೀತ ರವೀಂದ್ರನಾಥ್ ಸುನೀಲ್ ಶೆಟ್ಟಿಯವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ನನಗೆ ಹೆಮ್ಮೆಯ ವಿಚಾರ. ಪ್ರೆಸಿಡೆಂಟ್ ಸಿಕ್ಸರ‍್ಸ್ ಕುಂದಾಪುರ ಎನ್ನುವುದು ಉತ್ತಮ ತಂಡವಾಗಿದೆ. ಈ ತಂಡ ಈ ಬಾರಿ ಎಮ್‌ಪಿಎಲ್‌ನಲ್ಲಿ ಖಂಡಿತ ವಿಜಯ ಪತಾಕೆ ಹಾರಿಸುತ್ತದೆ. ಎಲ್ಲರೂ ಈ ತಂಡಕ್ಕೆ ಬೆಂಬಲ ನೀಡಿ ಎಂದರು. ಕಾರ್ಯಕ್ರಮದಲ್ಲಿ ಕ್ರಿಕೆಟರ್ ಶ್ರೀಪಾದ ಉಪಾಧ್ಯ. ಮಾಡೆಲ್ ಸುಶ್ಮಿತಾ ಪೂಜಾರಿ, ಉದ್ಯಮಿಗಳು ಮೊದಲಾದವರು ಉಪಸ್ಥಿತರಿದ್ದರು. ನಂತರ ಎಮ್‌ಪಿಎಲ್‌ನಲ್ಲಿ ಭಾಗವಹಿಸುತ್ತಿರುವ ಕ್ರಿಕೆಟಿಗರನ್ನು ಪರಿಚಯಿಸಲಾಯಿತು. ಈ ಸಂದರ್ಭ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.

news-president-sixers

????????????????????????????????????

Click here

Click here

Click here

Click Here

Call us

Call us

????????????????????????????????????

Leave a Reply