ವಂಡ್ಸೆ: ರುದ್ರಭೂಮಿ ಸ್ವಚ್ಛತಾ ಕಾರ್ಯಕ್ರಮ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ, ಶ್ರೀ ವಿನಾಯಕ ಯುವಕ ಸಂಘ ನೆಂಪು ಹಾಗೂ ವಂಡ್ಸೆ ಗ್ರಾಮಸ್ಥರ ಸಹಯೋಗದಲ್ಲಿ ಡಿ.೪ರಂದು ವಂಡ್ಸೆ ಹಿಂದೂ ರುದ್ರಭೂಮಿ ’ಮುಕ್ತಿಧಾಮ’ದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

Call us

Click Here

ರುದ್ರಭೂಮಿಯ ಪರಿಸರದಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡಲಾಯಿತು. ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಅಧ್ಯಕ್ಷ ಗಣೇಶ ಕಾಂಚನ್, ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ವಾಸು ಜಿ.ನಾಯ್ಕ್ ವಂಡ್ಸೆ, ಶ್ರೀ ವಿನಾಯಕ ಯುವಕ ಸಂಘ ನೆಂಪು ಇದರ ಅಧ್ಯಕ್ಷರಾದ ಸಂತೋಷ ಮಂಗಲ್ಸನಕಟ್ಟೆ, ಮೊಗವೀರ ಯುವ ಸಂಘಟನೆ ಜಿಲ್ಲಾ ಕೋಶಾಧಿಕಾರಿ ಸುರೇಶ ವಿಠಲವಾಡಿ, ಉಪಾಧ್ಯಕ್ಷರಾದ ರಾಜು ಶ್ರೀಯಾನ್, ಗ್ರಾ.ಪಂ.ಸದಸ್ಯ ಉದಯ ಕೆ.ನಾಯ್ಕ್, ಮೊಗವೀರ ಯುವ ಸಂಘಟನೆಯ ಮಾಜಿ ಅಧ್ಯಕ್ಷರಾದ ಮಂಜುನಾಥ ಆರ್.ಆರಾಟೆ, ರಾಘವೇಂದ್ರ ನೆಂಪು, ನಿಯೋಜಿತ ಅಧ್ಯಕ್ಷರಾದ ಮಂಜುನಾಥ ಚಂದನ್ ನೆಂಪು, ಶ್ರೀ ವಿನಾಯಕ ಯುವಕ ಮಂಡಲದ ಕಾರ್ಯದರ್ಶಿ ಮಂಜುನಾಥ ಆಚಾರ್ಯ ಕುಂಟರ್ನೆಲು, ಗೌರವಧ್ಯಕ್ಷರಾದ ಸುಕುಮಾರ್ ಶಾರಾಳ, ಮೊಗವೀರ ಯುವ ಸಂಘಟನೆಯ ರಾಜು ಮೆಂಡನ್ ತ್ರಾಸಿ, ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಕಾರ್ಯದರ್ಶಿ ಪ್ರಭಾಕರ ಮೊಗವೀರ ಸೇನಾಪುರ, ಭಾಸ್ಕರ ಬಟ್ಟೆಕುದ್ರು ಹಾಗೂ ಪದಾಧಿಕಾರಿಗಳು, ಸದಸ್ಯರು, ವಿನಾಯಕ ಯುವಕ ಮಂಡಲದ ಪದಾಧಿಕಾರಿಗಳು ಸದಸ್ಯರು ಉಪಸ್ತಿತರಿದ್ದರು.

Leave a Reply