Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ದೇವಸ್ಥಾನದ ವರ್ಧಂತ್ಯೋತ್ಸವ, ಬ್ರಹ್ಮ ಕಲಶೋತ್ಸವ
    ಊರ್ಮನೆ ಸಮಾಚಾರ

    ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ದೇವಸ್ಥಾನದ ವರ್ಧಂತ್ಯೋತ್ಸವ, ಬ್ರಹ್ಮ ಕಲಶೋತ್ಸವ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ: ತ್ರಿಮೂರ್ತಿಗಳಲ್ಲಿ ಪರಶಿವ ಅಪಾರ ಕರುಣಾಮಯಿ. ಭಕ್ತರಿಗಾಗಿ ತಾನು ಎಂತಹ ಕಷ್ಟ ಅನುಭವಿಸಲೂ ಸಿದ್ಧ. ಶಿವನಿಗೆ ಅರ್ಪಿಸಬೇಕಾಗಿರುವುದು ಶುದ್ಧ ಭಕ್ತಿ ಮಾತ್ರ. ಅಭಿಷೇಕ ಪ್ರಿಯನಾದ ಶಿವ ಒಂದು ಬಿಂದಿಗೆ ನೀರು. ಒಂದು ಬಿಲ್ವ ಪತ್ರೆಗೆ ಒಲಿದು ಬಿಡುವ. ರಾವಣನ ಭಕ್ತಿಗೆ ಮೆಚ್ಚಿದ ಆತ ಆತ್ಮಲಿಂಗಗಳನ್ನೇ ನೀಡಿದ. ಅರಿವಿಲ್ಲದೇ ಬಿಲ್ವ ಪತ್ರೆ ಸೇವೆ ನಡೆಸಿದ ಕಣ್ಣಪ್ಪನಿಗೆ ಒಲಿದ, ಸಮುದ್ರ ಮಥನದ ಕಾಲದಲ್ಲಿ ಅಳುಕದೇ ವಿಷ ನುಂಗಿ ಭಕ್ತರನ್ನು ರಕ್ಷಿಸಿದ ಇಂತಹ ಶಿವ ಯೋಗಿ,ತ್ಯಾಗಿ, ಭೋಗಿ ಎಲ್ಲವೂ ಹೌದು. ಶಿವಾಲಯಕ್ಕೆ ಭೇಟಿ ನೀಡಿ ಸದಾಶಿವನ ಧ್ಯಾನಗಳಿಂದ ನಾವು ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ ಎಂದು ಸರಕಾರಿ ಪ್ರೌಡಶಾಲೆ ಮಣುರೂ ಪಡುಕೆರೆಯ ಶ್ರೀಧರ ಶಾಸ್ತ್ರಿ ಗುಂಡ್ಮಿ ಹೇಳಿದರು.

    Click Here

    Call us

    Click Here

    ಅವರು ಕೋಟೇಶ್ವರ ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ದೇವಸ್ಥಾನದ ೧೭ ನೇ ವರ್ಧಂತ್ಯೋತ್ಸವ ಹಾಗೂ ಬ್ರಹ್ಮ ಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿದರು.

    ಮುಖ್ಯ ಅತಿಥಿಗಳಾಗಿ ಕೋಟೇಶ್ವರ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ. ಶ್ರೀಧರ ವಿ ಕಾಮತ್ ಮಾತನಾಡಿ ಹೊಸ ದೇವಾಲಯಗಳನ್ನು ಸ್ಥಾಪಿಸುವುದಕ್ಕಿಂತ ಪುರಾತನ ದೇವಾಲಯಗಳನ್ನು ಅಭಿವೃದ್ದಿಪಡಿಸಿ ವ್ಯವಸ್ಥಿತ ಪೂಜೆ ಪುನಸ್ಕಾರಗಳನ್ನು ನೆರವೇರಿಸುವುದು ಶ್ರೇಯಕರ. ಪ್ರತಿನಿತ್ಯ ದೇವರ ದರ್ಶನ ಹಾಗೂ ಸನ್ನಿಧಿಯಲ್ಲಿ ಭಜನೆಗಳಿಂದ ಧನಾತ್ಮಕ ಶಕ್ತಿ, ಚಿಂತನೆ ಸಂಚಲನವಾಗುತ್ತದೆ ಎಂದು ಹೇಳಿದರು.

    ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ ದೇವಾಲಯಗಳು ನಮ್ಮ ಪ್ರಕೃತಿಯ ಕೇಂದ್ರಗಳು ಇವುಗಳ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಬೇಕು ಎಂದು ಕರೆ ನೀಡಿದರು.

    ಮಂಗಳೂರು ಪದವಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ, ವಕೀಲರಾದ ರವಿ ಪ್ರಸನ್ನ ಸಿ.ಕೆ, ಶುಭಾ ಶಂಸನೆ ಮಾಡಿದರು.

    Click here

    Click here

    Click here

    Call us

    Call us

    ಬ್ರಹ್ಮ ಕಲಶೋತ್ಸವ ಗೌರವಾಧ್ಯಕ್ಷರಾದ ಡಾ|.ಎನ್.ಭಾಸ್ಕರ್ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದೇವಳದ ಆಡಳಿತ ಮೊಕ್ತೇಸರರಾದ ಸುಬ್ರಹ್ಮಣ್ಯ ಶೆಟ್ಟಿಗಾರ ಪ್ರಾಸ್ತಾವಿಕ ದೂರುಗಳನ್ನಾಡಿ ವಿಶಾಲವಾದ ಸರೋವರದ ಮಧ್ಯೆ ಇರುವ ದೇವಾಲಯ ಭಕ್ತರ ಮತ್ತು ಅಭಿವೃದ್ಧಿ ಯೋಜನೆ ರೂಪಿಸಿದ್ದು ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು. ಶ್ರೀ ಮಹಾಲಿಂಗೇಶ್ವರ ಸಾಂಸ್ಕ್ರತಿಕ ಸಂಘದ ಅಧ್ಯಕ್ಷರಾದ ಪ್ರಶಾಂತ ದೇವಾಡಿಗ ಉಪಸ್ಥಿತರಿದ್ದರು. ಕೋಟೇಶ್ವರ ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ದೇವರಿಗೆ ರಜತ ಪ್ರಭಾವಳಿ ಕೊಡುಗೆಯಾಗಿ ನೀಡಿದ ಶಿಲ್ಪಿ ರಾಜಗೋಪಾಲ ಆಚಾರ್ಯ, ದೇಣಿಗೆಯಿತ್ತ ರವಿ ಪ್ರಸನ್ನ ಸಿಕೆ ಇವರುಗಳನ್ನು ಸನ್ಮಾನಿಸಲಾಯಿತು.
    ನೃತ್ಯ ಕಲೆಯಲ್ಲಿ ರಾಷ್ಟ್ರೀಯ ಮಟ್ಟದ ಸಾಧನೆಗೈದ ಸ್ಥಳೀಯ ಪ್ರತಿಭೆ ರೇಷ್ಮಾ ಕುಮಾರಿಯನ್ನು ಗೌರವಿಸಲಾಯಿತು.

    ರವೀಂದ್ರ ದೊಡ್ಮನೆ ಸ್ವಾಗತಿಸಿದರು. ಶಿವಾನಂದ ದೊಡ್ಡೋಣಿ ಕಾರ್ಯಕ್ರಮ ನಿರೂಪಿಸಿ ಅನುಷ್ ವಂದಿಸಿದರು.
    ಧಾರ್ಮಿಕ ಕಾರ್ಯಕ್ರಮದಲ್ಲಿ ಚಂಡಿಕಾಯಾಗ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ, ರಂಗಪೂಜೆ ನಡೆಯಲಿದೆ. ರಾತ್ರಿ ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ಉತ್ತರ ಕನ್ನಡ ಇವರಿಂಧ ಮಾಗಧವಧೆ-ರಾಜ ರುದ್ರಕೋಪ ಯಕ್ಷಗಾನ ನಡೆದವು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಡಿ.23ರಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಿಂದ ರಾಷ್ಟ್ರೀಯ ರೈತರ ದಿನಾಚರಣೆ

    19/12/2025

    ಕೋಟ ಅಮೃತೇಶ್ವರೀ ಜಾತ್ರಾ ಆಮಂತ್ರಣ ಬಿಡುಗಡೆ

    19/12/2025

    ಗಂಗೊಳ್ಳಿ ಎಸ್‌ವಿ ಪ.ಪೂ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

    19/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಡಿ.23ರಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಿಂದ ರಾಷ್ಟ್ರೀಯ ರೈತರ ದಿನಾಚರಣೆ
    • ಕೋಟ ಅಮೃತೇಶ್ವರೀ ಜಾತ್ರಾ ಆಮಂತ್ರಣ ಬಿಡುಗಡೆ
    • ಗಂಗೊಳ್ಳಿ ಎಸ್‌ವಿ ಪ.ಪೂ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
    • ಪದವಿಪೂರ್ವ ಶಿಕ್ಷಣದ ಯಶಸ್ಸಿಗೆ ಸಮರ್ಥ ಆಯ್ಕೆ ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪಿಯು ಕಾಲೇಜು
    • ಸಿಎಲ್‌ಎಟಿ ಫಲಿತಾಂಶ: ಆಳ್ವಾಸ್ ಪಿಯು ಕಾಲೇಜಿನ 11 ವಿದ್ಯಾರ್ಥಿಗಳು ಉತ್ತೀರ್ಣ  

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.