Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ರಂಗು ರಂಗಾಗಿ ಮೂಡಿಬಂತು ಸಮುದಾಯದ ರಂಗರಂಗು ರಜಾಮೇಳ
    ವಿಶೇಷ ಲೇಖನ

    ರಂಗು ರಂಗಾಗಿ ಮೂಡಿಬಂತು ಸಮುದಾಯದ ರಂಗರಂಗು ರಜಾಮೇಳ

    Updated:26/04/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆಯೇ ಸಮ್ಮರ್ ಕ್ಯಾಂಪು, ಟ್ರೆನಿಂಗು, ಕೋಚಿಂಗ್ ಎಂದು ಮತ್ತೊಂದು ಬಗೆಯಲ್ಲಿ ತರಗತಿಗಳು ಆರಂಭಗೊಂಡುಬಿಡುತ್ತದೆ. ಎಲ್ಲಾ ಒತ್ತಡಗಳಿಂದ ಮುಕ್ತರಾಗಿ ಒಂದೆರಡು ತಿಂಗಳು ಅಜ್ಜಿ ಮನೆಯಲ್ಲೊ ಅಥವಾ ಮತ್ಯಾರೋ ಬಂಧು-ಸ್ನೇಹಿತರೊಂದಿಗೋ ಬಾಲ್ಯದ ಸವಿಯನ್ನು ಸವಿಯೋದಕ್ಕೂ ಬಿಡದೇ ಮತ್ತೆ ಬೋರ್ಡು, ಬ್ರಷ್ಗಳ ಮುಂದೆ ತಂದು ಕೂರಿಸುವ ಕಾರ್ಯಕ್ರಮಗಳಿಗೆ ಬರವಿಲ್ಲ. ಅಂಥಹದರಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಕೆಲವೊಂದು ಸಂಘ ಸಂಸ್ಥೆಗಳು ಮಕ್ಕಳನ್ನು ಮಕ್ಕಳನ್ನಾಗಿ ನೋಡಿ, ಅವರು ಆಡುತ್ತಾ, ಓಡುತ್ತಾ, ಕುಣಿದು ಕುಪ್ಪಳಿಸುತ್ತಾ ಕಲಿಯುವಂತೆ ಮಾಡಿ ಬಾಲ್ಯವನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡುವಲ್ಲಿ ಶ್ರಮಿಸಿ ಯಶಸ್ಸನ್ನೂ ಕಾಣುತ್ತದೆ. ಇಲ್ಯಾರು ಮೇಷ್ಟ್ರುಗಳಾಗೊದಕ್ಕೆ ಬಯಸೊಲ್ಲ ಬದಲಿಗೆ ಮಕ್ಕಳದೇ ಪ್ರಪಂಚದಲ್ಲಿ, ಮಕ್ಕಳೊಂದಿಗೆ ಮಕ್ಕಳಾಗಿ ಒಂದಿಷ್ಟು ಕಲಿಸಿ, ಕಲಿತು ನಿಜಾರ್ಥದಲ್ಲಿ ಶಿಬಿರವನ್ನು ಸಾರ್ಥಕ್ಯಗೊಳಿಸುವ ನಿಸ್ವಾರ್ಥ ಪ್ರಯತ್ನ ಮಾಡಿತ್ತಾರೆ.

    Click Here

    Call us

    Click Here

    ಹೌದು. ಕುಂದಾಪುರದ ‘ಸಮುದಾಯ’ ಸಾಂಸ್ಕೃತಿಕ ಸಂಘಟನೆಯು ಕೆಲವು ವರ್ಷಗಳಿಂದ ಆಯೋಜಿಸುತ್ತಾ ಬಂದಿರುವ ‘ರಂಗ ರಂಗು’ ಬೇಸಿಗೆ ಶಿಬಿರ ಈ ಭಾರಿಯೂ ಹಲವು ವಿಶೇಷತೆಗಳಿಂದ ಕೂಡಿತ್ತು. ವಡೇರಹೋಬಳಿ ಸ.ಹಿ.ಪ್ರಾ ಶಾಲೆಯಲ್ಲಿ ಕುಂದಾಪುರ ಜೆಸಿಐ ಸಿಟಿಯ ಸಹಯೋಗದೊಂದಿಗೆ ಆಯೋಜಿಸಿದ್ದ ರಂಗ ರಂಗುವಿನಲ್ಲಿ, ಮಕ್ಕಳ ಬಾಲ್ಯವನ್ನು ರಂಗು ರಂಗಾಗಿಡಲು ಶ್ರಮಿಸಿತ್ತು. ಎಪ್ರಿಲ್ 19ರಿಂದ ಆರಂಭಗೊಂಡ 8 ದಿನಗಳ ಬೇಸಿಗೆ ಶಿಬಿರದಲ್ಲಿ ಹತ್ತನೇ ತರಗತಿಯೊಳಗಿನ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಅಲ್ಲಿ ಕೇವಲ ಖಾಸಗಿ ಶಾಲೆಯ ಮಕ್ಕಳಿಗೆ ಫೀಸ್ ತೆಗೆದುಕೊಂಡು ಶಿಬಿರವನ್ನು ಆಯೋಜಿಸುವ ಬದಲಿಗೆ ಸರಕಾರಿ ಶಾಲೆ ಹಾಗೂ ಟೆಂಟ್ ನ ಮಕ್ಕಳನ್ನು ಸೇರಿಸಿಕೊಂಡು ಎಲ್ಲರಿಗೂ ಉಚಿತವಾಗಿ ಶಿಬಿರವನ್ನು ಏರ್ಪಡಿಸಿದ್ದರು.

    ಎಲ್ಲಾ ರಜಾ ಶಿಬಿರಗಳಲ್ಲಿಯೂ ಇರುವಂತೆ ಇಲ್ಲಿಯೂ ಬಿತ್ರ ಬಿಡಿಸುವುದು, ಬಣ್ಣ ಬಳಿಯುವುದು, ಕ್ರಾಫ್ಟ್, ಮಾಸ್ಕ್ ಮಾಡುವುದು, ಹಾಡು, ನೃತ್ಯ ದಿನವೂ ಇತ್ತು. ಅದರ ನಡುವೆ ಬಂದ ತೆಂಗಿನ ಗರಿಗಳ ಮಾತ್ರ ಇಂದಿನ ಮಕ್ಕಳಿಗೆ ಒಂದು ಹೊಸ ಅನುಭವನ ನೀಡಿತು. ನೋಡುತ್ತಿದ್ದಂತೆಯೇ ವಾಚು, ಕನ್ನಡಕ, ಗಿರಿಗಿಟ್ಲೆ ಮೊದಲಾದವುಗಳು ಅದರಿಂದ ತಯಾರಾಗಿಬಿಟ್ಟವು. ಮತ್ತೆ ಶಿಬಿರದಲ್ಲಿ ಕಾಣಿಸಿಕೊಂಡಿದ್ದು ‘ಕುಂಬಾರಿಕೆ’ಯ ಕಸರತ್ತು. ಮಕ್ಕಳು ವಿಧ ವಿಧದ ಮಣ್ಣಿಮ ಮಡಿಕೆಗಳನ್ನು ತಯಾರಿಸಿ ಖಷಿಪಟ್ಟದ್ದಕಿಂತ ಹೆಚ್ಚು, ಮಣ್ಣನ್ನು ಕೈತುಂಬಾ ಮೆತ್ತಿಕೊಂಡ ಸಂಭ್ರಮ ಅವರಲ್ಲಿತ್ತು. ಅಗ್ನಿಶಾಮಕ ದಳದವರ ಅಗ್ನಿ ಪ್ರಾತ್ಯಕ್ಷಿಕೆ ಮುಗಿದ ಬಳಿಕ ನಡೆದ ನೀರಾಟದಲ್ಲಿ ಮಕ್ಕಳು ಉತ್ಸಾಹದ ಚಿಲುಮೆಗಳಾಗಿ ಜಿನುಗಿದರು.

    ಈ ನಡುವೆ ಮಕ್ಕಳೊಂದಿಗೆ ಕೋಡಿ ಕಿನಾರೆಗೆ ಕಿರು ಪ್ರವಾಸ, ಅವರದ್ದೇ ಚೇಷ್ಟೆಗಳ ಚಿತ್ರವನ್ನು ತೋರಿಸುವ ಸಾಹಸವೂ ನಡೆದಿತ್ತು. ದಿನವೂ ಕಿರು ನಾಟಕಕ್ಕೊಂದು ತಾಲೀಮು ಕೂಡ ಸಲೀಸಾಗಿ ನಡೆದರೇ, ಮದ್ಯಾಹ್ನ ಊಟದ ನಂತರ ಅರ್ಧ ಘಂಟೆ ಗಾಂಧಿ ಪಾರ್ಕಿನಲ್ಲಿ ಒಂದಿಷ್ಟು ಹೊತ್ತು ಸಾಗಿತ್ತು. ಕೊನೆಯ ದಿನ ವಿಶೇಷವಾಗಿ ಆಯೋಜಿಸಿದ ಸಂತೆ, ಮಕ್ಕಳು ಸಾಮಾಜಿಕ ಬದುಕಿನೊಂದಿಗೆ ಸಂಭ್ರಮಿಸುವಂತೆ ಮಾಡಿತು. ಹಣ್ಣು, ತರಕಾರಿ, ದೋಸೆ ಕ್ಯಾಂಪ್, ಮೊಬೈಲ್ ಕರೆನ್ಸಿ, ಕಲಾಕೃತಿ, ಜ್ಯೂಸ್, ಬೇಕರಿ ತಿನಿಸುಗಳನ್ನು ಮಕ್ಕಳು ತಮಗೆ ನಿಗದಿಗೊಳಿಸಿದ ಅಂಗಡಿಯಲ್ಲಿಟ್ಟು ಮಾರುತ್ತಾ ತಮ್ಮ ವ್ಯವಹಾರ ಕೌಶಲ್ಯವನ್ನು ತೋರ್ಪಡಿಸಿದರು. ಮಕ್ಕಳೇ ಪೋಷಕರೇ ಇಲ್ಲಿ ಗ್ರಾಹಕರಾದರು.

    ಮನೆಯಲ್ಲಿ ಅಮ್ಮನಿಗೆ ತಾಕೀತು ಮಾಡಿದಂತೆ ತಾವು ಸೇವಿಸುವ ಉಪಹಾರ, ಊಟ, ಪಾನೀಯ ಯಾವುದಾಗಬೇಕೆಂದು ಈ ರಜಾಮೇಳದಲ್ಲಿ ಮಕ್ಕಳೇ ನಿರ್ಧರಿಸುತ್ತಿದ್ದರು.

    Click here

    Click here

    Click here

    Call us

    Call us

    ಶಿಬಿರದಲ್ಲಿ ಎಂದಿನಂತೆ ಜಿ.ವಿ ಕಾರಂತ, ಉದಯ ಗಾಂವ್ಕರ್, ಬಾಲಕೃಷ್ಣ ಕೆ. ಎಂ, ವಾಸುದೇವ ಗಂಗೇರ, ಸದಾನಂದ ಬೈಂದೂರು, ಎಚ್ ನರಸಿಂಹ, ಸಂಧ್ಯಾ ನಾಯಕ್, ಸುಧಾಕರ ಕಾಂಚನ್, ಸಂದೇಶ ವಡೇರಹೋಬಳಿ, ವಿಕ್ರಮ್, ಅನಂತ ಪ್ರಭು, ಶಿವಾನಂದ, ಪೂರ್ಣಚಂದ್ರ, ನಿಶಾಂತ್ ಮೊದಲಾದವರು ಮಕ್ಕಳಿಗೆ ಜೊತೆಯಾದ್ದರೇ ಭೋಜ ಹಾಂಡ್, ರಘು ಕುಲಾಲ್, ಗೋಪಾಲಕೃಷ್ಣ ಮಂಗಳೂರು, ಅಶೋಕ್ ತೆಕ್ಕಟ್ಟೆ, ಚಿನ್ನಾ ವಾಸುದೇವ್, ರಾಘವೇಂದ್ರ ಉಡುಪಿ ಸತೀಶ್ ಶೆಟ್ಟಿಗಾರ್, ಮಾಲತಿ ನಾಯಕ್, ಸುಮನಾ ನಾರಾಯಣ ಅಡಿಗ, ದಿನೇಶ ಪ್ರಭು, ಶ್ರೀಧರ ಎಸ್, ಸೇರಿದಂತೆ ಒಂದಿಷ್ಟು ಯುವ ಬಳಗ ಎಲ್ಲರೂ ಮಕ್ಕಳೊಂದಿಗೆ ಸೇರಿ ಮಕ್ಕಳಾದರು.

    ಒಟ್ಟಿನಲ್ಲಿ ಮಕ್ಕಳಿಗಾಗಿಯೇ ಉಚಿತವಾಗಿ ಆಯೋಜಿಸಿ ಎಂಟು ದಿನಗಳ ಈ ಬೇಸಿಗೆ ಶಿಬಿರವು ಮಕ್ಕಳನ್ನು ಮಕ್ಕಳನ್ನಾಗಿಯೇ ನೋಡುವಂತೆ ಮಾಡುವಲ್ಲಿ, ಆ ಮೂಲಕ ಮಕ್ಕಳಿಗೂ ಒಂದು ಸುಂದರ ಬಾಲ್ಯವನ್ನು ಕಟ್ಟಿಕೊಡುವಲ್ಲಿ ಯಶಕಂಡಿದೆ.

    ► ಟೆಂಟ್ ಮಕ್ಕಳೂ ಶಿಬಿರಕ್ಕೆ ಬಂದರು!
    ಬಡತನದ ಬೇಗೆಯಲ್ಲಿ ಬೆಳೆಯುವ ಟೆಂಟ್ ಮಕ್ಕಳಿಗೆ ಒಂದು ಶಾಶ್ವತ ನೆಲೆಯೆಂಬುದಿಲ್ಲ. ಅವರು ಸ್ವಲ್ವ ದೊಡ್ಡವರಾಗುವುದೇ ತಡ, ಪೋಷಕರು ದುಡಿಯಲು ನೂಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಸುಂದರ ಬಾಲ್ಯದ ಕನಸು ಕಾಣುವುದೂ ಕಷ್ಟ. ಇತ್ತಿಚಿಗೆ ಅಲ್ಲಿಯೂ ಒಂದಿಷ್ಟು ಪರಿವರ್ತನೆಗಳಾಗಿ ಶಿಕ್ಷಕರ ನಿರಂತರ ಒತ್ತಾಯದ ಮೇರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸುವ ಮನಸ್ಸು ಮಾಡುತ್ತಿದ್ದಾರೆ ಎನ್ನುವುದು ನೆಮ್ಮದಿಯ ಸಂಗತಿ. ಸಮುದಾಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ಮಕ್ಕಳನ್ನು ಬೇಸಿಗೆ ಶಿಬಿರಕ್ಕೂ ಕರೆತರುವ ಪ್ರಯತ್ನ ಮಾಡಿತ್ತು. ಶಿಬಿರದಲ್ಲಿ ಟೆಂಟ್ ನಿಂದ ಬರುವ ಮಕ್ಕಳು ನಮ್ಮ ಪೇಟೆ ಮಕ್ಕಳೊಂದಿಗೆ ಬೆರೆಯುವಂತೆ ಮಾಡಿದ ಈ ವಿಶೇಷ ಪ್ರಯತ್ನ ಮಾತ್ರ ಮೆಚ್ಚುವಂತದ್ದು.

    ► ನಕ್ಕಳಾ ರಾಜಕುಮಾರಿ?
    ಎಂಟು ದಿನಗಳ ಬೇಸಿಗೆ ಶಿಬಿರದಲ್ಲಿ ನಾಟಕದ ತಾಲೀಮು ಕೂಡ ಸಲೀಸಾಗಿ ನಡೆದಿತ್ತು. ಪ್ರತಿಭಾವಂತ ನಿರ್ದೇಶಕ ವಾಸುದೇವ ಗಂಗೇರ ಅವರ ನಿರ್ದೇಶನದಲ್ಲಿ ‘ನಕ್ಕಳಾ ರಾಜಕುಮಾರಿ’ ನಾಟಕದ ಸಿದ್ಧಗೊಂಡಿದ್ದ, ಸಮಾರೋಪ ಸಮಾರಂಭದ ಬಳಿಕ ಪ್ರದರ್ಶನಗೊಳ್ಳಲಿದೆ. ಮಕ್ಕಳ ಪ್ರತಿಭೆಯೂ ಅಲ್ಲಿಗೆ ಬರುವ ಪೊಷಕರ ಮುಂದೆ ಅನಾವರಣಗೊಳ್ಳಲಿದೆ.

    ► ಹೆಚ್ಚಿನ ಸಹಕಾರ ಬೇಕು
    ಬೆಸಿಗೆ ಶಿಬಿರಗಳನ್ನು ಆಯೋಜಿಸುವುದೆಂದರೆ ಸಣ್ಣ ವಿಷಯವಲ್ಲ. ಸಾವಿರಾರು ರೂಪಾಯಿ ಹಣದ ಅಗತ್ಯವಿರುತ್ತದೆ. ಮಕ್ಕಳ ಉಟ, ತಿಂಡಿ, ಶಿಬಿರದ ಸಾಮಾಗ್ರಿ, ಸಂಪನ್ಮೂಲ ವ್ಯಕ್ತಿಗಳ ಸಂಭಾವನೆ, ತಿರುಗಾಟ ಹೀಗೆ ಖರ್ಚಿನ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅಂಥಹದರಲ್ಲಿ ಉಚಿತವಾಗಿ ಕುಂದಾಪುರದ ಸಮುದಾಯ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದೆ. ಈ ದೊಡ್ಡ ಮೊತ್ತದ ಹೊರೆಯನ್ನು ಹೊರಲು ಈ ಬಾರಿ ಜೆಸಿಐ ಕುಂದಾಪುರ ಸಿಟಿ, ಹಾಗೂ ಕೆಲವು ಉತ್ಸಾಹಿಗಳು ಕೈಜೊಡಿಸಿದ್ದಾರೆ. ಆದರೆ ಮಕ್ಕಳಿಗೆ ಸುಂದರ ನೆನಪುಗಳನ್ನು ಕಟ್ಟಿಕೊಡಲು ಮತ್ತಷ್ಟು ಹಣವೂ ಅಗತ್ಯವಿರುತ್ತದೆ. ಅದನ್ನು ಬರಿಸುವಲ್ಲಿ ಸಹೃದಯಿಗಳು ಮುಂದೆಬರಬೇಕಾಗಿದೆ.

    ●  ವೈಯಕ್ತಿಕವಾಗಿ ಬೇಸಿಗೆ ಶಿಬಿರಗಳ ಬಗ್ಗೆ ನನ್ನ ಸಹಮತವಿಲ್ಲ. ಅಜ್ಜಿಯ ಮನೆಯಲ್ಲಿ ಆಟವಾಡಿಕೊಂಡಿರಬೇಕಾದವರು ಇಲ್ಲಿ ತಂದು ಕೂರಿಸುವುದು ಸರಿಯಲ್ಲ. ಆದರೆ ಪೇಟೆಯ ಮಕ್ಕಳಿಗೆ ಇಂತಹ ಶಿಬಿರಗಳನ್ನು ಬಿಟ್ಟರೆ ಬೇರೆಯ ಆಯ್ಕೆಗಳಿಲ್ಲ. ಆದ್ದರಿಂದ ಬೇಸಿಗೆ ಶಿಬಿರವನ್ನು ವ್ಯವಹಾರವನ್ನಾಗಿಸದೇ, ಮಕ್ಕಳ ನಿಜವಾದ ಬಾಲ್ಯವನ್ನು ಕಟ್ಟಕೊಡುವ ಸಣ್ಣ ಪ್ರಯತ್ನವನ್ನು ಮಾಡುತ್ತಾ ಬರುತ್ತಿದ್ದೇವೆ – ಉದಯ ಗಾಂವ್ಕರ್, ಅಧ್ಯಕ್ಷರು ಸಮುದಾಯ ಕುಂದಾಪುರ (ಫೇಸ್ಬುಕ್ ಸ್ಟೇಟಸ್)

    _MG_2293 _MG_2306 _MG_2316 samudaya ranga rangu1 samudaya ranga rangu7

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಗಣನಾಯಕನ ರೂಪ, ಗುಣದಲ್ಲಿ ಕಲಿಯಬೇಕಾದ ಪಾಠಗಳು ಅನೇಕ

    06/09/2024

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d