ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಗುರುಕೃಪಾ ಕೊಂಕಣಿ ಮಹಿಳಾ ಮಂಡಳಿ ಕುಂದಾಪುರ ಇವರ ವತಿಯಿಂದ ಹಾಲಾಡಿ ಲಕ್ಷ್ಮೀದೇವಿ ಕಾಮತ್ ಇವರ ಅಧ್ಯಕ್ಷತೆಯಲ್ಲಿ ’ಗುರುಕೃಪಾ’ ಕೊಂಕಣಿ ಸಾಂಸ್ಕೃತಿಕ ಕಲಾಸಂಘ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಶೋಭಾ ಮೋಹನದಾಸ ಶಣೈ, ಮುಖ್ಯ ಅತಿಥಿಗಳಾಗಿ ವಾಮನ ಪೈ, ಯಕ್ಷಗಾನ ತರಭೇತುದಾರರಾಗಿ ರಾಮಚಂದ್ರ ಭಟ್, ವಿಠ್ಹಲ ಕಾಮತ್ ಉಪ್ಪಿನಕುದ್ರು ಹಾಗೂ ಮಹಾ ಪೋಷಕರಾದ ಶ್ರೀಯುತ ಹಾಲಾಡಿ ವಾಸುದೇವ ಕಾಮತ್ರವರು ಉಪಸ್ಥಿತರಿದ್ದರು.
ವಿಜಯಾ ಸದಾಶಿವ ಕಾಮತ್ರವರು ಧನ್ಯವಾದ ಸಮರ್ಪಣೆ ಮಾಡಿದರು.