ಇಲ್ಲಿನ ಯುಸ್ಕೋರ್ಡ್ ಟ್ರಸ್ಟ್ (ರಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನ-ಸಂಸ್ಕೃತಿ ಸಂಭ್ರಮ ೨೦೧೫ರ ಮೂರನೇ ದಿನದಂದು ಆಯ್ದ ಕವಿಗಳಿಂದ ’ಕವಿಗೋಷ್ಠಿ’ ನಡೆಯಿತು.
ಯುವ ಕವಿಗಳಾದ ಚಂದ್ರ ಕೆ. ಹೆಮ್ಮಾಡಿ ನ್ಯಾಯ ಭಾಗ್ಯ ಹಾಗೂ ನಮ್ ಭಾಷಿ ನಮ್ ಜೀವ, ಪೂರ್ಣಿಮಾ ಭಟ್ ದಶಾವತಾರಿಣಿ ಹಾಗೂ ಹೌಂದಬ್ರ್, ನಾಗರಾಜ ಅಲ್ತಾರು ಒಂದು ಪ್ರಶ್ನೆ ಹಾಗೂ ನನ್ನ ಕವನ, ರಮೇಶ ಗೌಡ ಕನ್ಯೆಯ ಸ್ವಗತ ಹಾಗೂ ಮಣ್ಣಿನ ತಗಹು ಮತ್ತು ಶೇಖರ ದೇವಾಡಿಗ ಪ್ರಕೃತಿ ಕಂದನ ಆಕ್ರಂದನ ಹಾಗೂ ಶವಣನ ಬುಟ್ಟಿ ಎಂಬ ಕವನಗಳನ್ನು ವಾಚಿಸಿದರು.
ಬೈಂದೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಸುಬ್ರಮಣ್ಯ ಭಟ್ ಕವಿಗೋಷ್ಠಿಯ ಸಮನ್ವಯಕಾರರಾಗಿದ್ದರು. ಕನ್ನಡ ಉಪನ್ಯಾಸಕ ಪ್ರೋ. ಅನಿಲ್ಕುಮಾರ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು