ಚಿತ್ತೂರು ಸ್ವಸಹಾಯ ಸಂಘ: ಕೃಷಿ ಅಧ್ಯಯನ ಪ್ರವಾಸ

Call us

Call us

Call us

ಕುಂದಾಪುರ: ಶ್ರೀ ಕ್ಷೇ.ಧ.ಗ್ರಾ.ಯೋಜನೆ ಪ್ರವರ್ತಿತ ಚಿತ್ತೂರು ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರ ಕೃಷಿ ಅಧ್ಯಯನ ಪ್ರವಾಸ ಇತ್ತೀಚೆಗೆ ನಡೆಯಿತು. ಮರವಂತೆಯ ರೆಬೆಲ್ಲೋ ಅವರ ಕೃಷಿ ಕ್ಷೇತ್ರದಲ್ಲಿ ನೀರು ಇಂಗಿಸುವ ವಿಧಾನ, ನಾಯ್ಕನಕಟ್ಟೆಯ ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರ, ಹಾಲಂಬೇರು ತಿಮ್ಮಣ್ಣ ಹೆಗ್ಡೆ ಅವರ ಹೈನುಗಾರಿಕೆ, ಸಾವಯವ ಕೃಷಿಯ ಬಗ್ಗೆ ಅಧ್ಯಯನ ಮಾಡಲಾಯಿತು. ಕೃಷಿ ಅಧಿಕಾರಿ ಹನುಮಂತ, ಚಿತ್ತೂರು ವಲಯ ಮೇಲ್ವಿಚಾರಕ  ಪ್ರಭಾಕರ್ ಉಪಸ್ಥಿತರಿದ್ದರು. ಈ ಕೃಷಿ ಅಧ್ಯಯನ ಪ್ರವಾಸದಲ್ಲಿ 35ಮಂದಿ ಕೃಷಿಕರು ಭಾಗವಹಿಸಿದ್ದರು.

Call us

Click Here

Leave a Reply