ಗಂಗೊಳ್ಳಿ ಶಾರದೋತ್ಸವದಲ್ಲಿ ಸಂಚಿತ್‌ನ ಸ್ಯಾಕ್ಸೋಫೋನ್ ವಾದನ ಸೇವೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
47 ನೇ ವರುಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಎರಡನೇ ದಿನವಾದ ಮಂಗಳವಾರದಂದು ಗಂಗೊಳ್ಳಿಯ ಸ್ಯಾಕ್ಸೋಫೋನ್ ವಾದನದ ಬಹುಮುಖ ಬಾಲ ಪ್ರತಿಭೆ ಸಂಜಿತ್ ಎಮ್ ದೇವಾಡಿಗ ತಮ್ಮ ತಂಡದೊಂದಿಗೆ ಸ್ಯಾಕ್ಸೋಫೋನ್ ವಾದನ ಸೇವೆಯನ್ನು ಸಲ್ಲಿಸಿದರು.

Call us

Click Here

ಗಣನಾಯಕಾಯ, ನಮ್ಮಮ್ಮ ಶಾರದೆ, ಎಂತ ಅಂದ ಎಂತ ಚೆಂದ, ಶಾರದೆ ದಯೆ ತೋರಿದೆ, ಬ್ರಹ್ಮ ಮುಕುಟೆ, ಭಾಗ್ಯದ ಲಕ್ಷ್ಮಿ ಬಾರಮ್ಮ, ತಂಬೂರಿ ಮೀಟಿದವ ಮೊದಲಾದ ಗೀತೆಗಳನ್ನು ಸಾಕ್ಸೋಫೋನ್ ವಾದನದ ಮೂಲಕ ಸುಂದರವಾಗಿ ಪ್ರಸ್ತುತಪಡಿಸಿ ಜನಮನವನ್ನು ಸೆಳೆದರು. ತವಿಲ್ ನಲ್ಲಿ ಹರ್ಷವರ್ಧನ ಖಾರ್ವಿ, ತಬಲಾದಲ್ಲಿ ಸುಧೀಂದ್ರ ಆಚಾರ್ಯ ವಂಡ್ಸೆ, ಗೆಜ್ಜೆಯಲ್ಲಿ ಅಭಿಷೇಕ್ ಪೂಜಾರಿ ಮತ್ತು ತಾಳದಲ್ಲಿ ಮಾಧವ ದೇವಾಡಿಗ ಸಹಕರಿಸಿದರು.

ಪ್ರಧಾನ ಪುರೋಹಿತರಾದ ಜಿ. ರಾಘವೇಂದ್ರ ನಾರಾಯಣ ಆಚಾರ್ಯು ಉಪಸ್ಥಿತರಿದ್ದರು. ಸರಸ್ವತಿ ವಿದ್ಯಾಲಯದ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಶಾರದ ಮಹೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ಜಿ. ವಂದಿಸಿದರು.

Leave a Reply