Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮನೆ, ಕಛೇರಿಯಲ್ಲಿ ಧನಾತ್ಮಕತೆ ಸೃಷ್ಟಿಸಲು ಹೀಗೆ ಮಾಡಿ
    ವಿಶೇಷ ಲೇಖನ

    ಮನೆ, ಕಛೇರಿಯಲ್ಲಿ ಧನಾತ್ಮಕತೆ ಸೃಷ್ಟಿಸಲು ಹೀಗೆ ಮಾಡಿ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಬೇರೆ ಬೇರೆ ಕಾರಣಗಳಿಂದಾಗಿ ಮನೆ, ಕಛೇರಿಯಲ್ಲಿ ನೆಗೆಟಿವ್ ಶಕ್ತಿಗಳೇ ತುಂಬಿಕೊಂಡಿರುತ್ತವೆ. ಒತ್ತಡದ ಜೀವನದ ಜೊತೆಗೆ ಇನ್ನೊಬ್ಬರ ಮೇಲಿನ ಹೊಟ್ಟೆಕಿಚ್ಚು, ತಾತ್ಸಾರದ ಮನೋಭಾವನೆ ಇದೆಲ್ಲವಕ್ಕೂ ಪ್ರಮುಖ ಕಾರಣವಾಗಿರುತ್ತವೆ. ಆದರೆ ಇವೆಲ್ಲವಿಂದ ದೂರವಿದ್ದು, ಸಕಾರಾತ್ಮಕ ಆಲೋಚನೆ ಬೆಳೆಸಿಕೊಳ್ಳವುದು ಒಂದು ಸವಾಲಿನ ಕೆಲಸ. ಅದಕ್ಕಾಗಿ ಧ್ಯಾನ, ವ್ಯಾಯಾಮದಂತಹ ಚಟುವಟಿಗಳ ಅಗತ್ಯವಿದೆ. ಇವುಗಳ ಜೊತೆಗೆ ಮನೆ ಅಥವಾ ಕಛೇರಿಯ ಅಲಂಕಾರವೂ ಸಹ ನಮ್ಮಲ್ಲಿ ಧನಾತ್ಮಕತೆ ಸೃಷ್ಟಿ ಮಾಡಬಲ್ಲದು. ಮನಸ್ಸಿನ ನೆಗೆಟಿವ್ ಆಲೋಚನೆಗಳನ್ನು ದೂರಮಾಡಿ, ಪಾಸಿಟಿವ್ ಮನಸ್ಥಿತಿ ನಮ್ಮದಾಗಲು ಮನೆ ಹಾಗೂ ಕಛೇರಿಯಲ್ಲಿ ಇಡಬಹುದಾದ ಕೆಲವು ಉತ್ತಮ ವಸ್ತುಗಳ ಮಾಹಿತಿ ಈ ಲೇಖನದಲ್ಲಿದೆ.

    Click Here

    Call us

    Click Here

    ಮೀನು: ಮೀನು ಸಮೃದ್ಧಿಯನ್ನು ತರಲು ಬಹಳ ಪ್ರಸಿದ್ಧವಾಗಿದೆ. ಇದು ಸಮೃದ್ಧಿಯ ಜೊತೆಗೆ ಉತ್ತಮ ಆರೋಗ್ಯದ ಸಂಕೇತವಾಗಿದೆ. ನಿಮಗಿಷ್ಟವಾದ ಮಾರುಕಟ್ಟೆಯಲ್ಲಿ ಸಿಗುವ ಮೀನಿನ ಪ್ರತಿಮೆಯನ್ನು ಗೋಡೆಯ ಮೇಲೆ ನೇತುಹಾಕಬಹುದು. ಇದರ ಜೊತೆಗೆ ಅಕ್ವೇರಿಯಂ ಸಹ ಇಟ್ಟುಕೊಳ್ಳಬಹುದು, ಆದರೆ ಮೀನುಗಳನ್ನು ನೋಡಿಕೊಳ್ಳುವ ಮತ್ತು ಟ್ಯಾಂಕ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವವರಿಗೆ ಮಾತ್ರ ಇದು ಸೂಕ್ತ.

    ಆನೆ: ವಿವಿಧ ರೂಪಗಳಲ್ಲಿ ಸಿಗುವ ಆನೆಯ ಚಿತ್ರ ಅಥವಾ ಪ್ರತಿಮೆಯು ಅದೃಷ್ಟವನ್ನು ಆಕರ್ಷಿಸುತ್ತದೆ. ಇದು ಸಂಪತ್ತು, ಬುದ್ಧಿವಂತಿಕೆ, ರಕ್ಷಣೆ, ನಿಷ್ಠೆಯ ಸಂಕೇತವಾಗಿದ್ದು, ಮನೆಯೊಳಗೆ ಇಟ್ಟರೆ ಉತ್ತಮವಾಗಿದೆ. ಒಂದು ವೇಳೆ ಪ್ರತಿಮೆ ಪಡೆಯಲು ಸಾಧ್ಯವಾದದ್ದರೆ, ಕುಶನ್ ಅಥವಾ ಕುಶನ್ ಕವರ್ ಆದರೂ ಖರೀದಿಸಬಹುದು.

    ಗಿಡಮೂಲಿಕೆಗಳು: ತಮ್ಮ ಕುಟುಂಬದ ಅದೃಷ್ಟಕ್ಕಾಗಿ ಅನೇಕ ಜನರು ಗಿಡಮೂಲಿಕೆಗಳನ್ನು ಮತ್ತು ವಿವಿಧ ಸಸ್ಯಗಳನ್ನು ಮನೆಯೊಳಗೆ ಇಡುತ್ತಾರೆ. ಇದು ಅದೃಷ್ಟದ ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಆದ್ದರಿಂದ ಗಿಡದ ಬಗ್ಗೆ ಚೆನ್ನಾಗಿ ತಿಳಿದುಕೊಂಡು, ಅಲರ್ಜಿ ಇಲ್ಲದ ಗಿಡಗಳನ್ನು ಮನೆಯೊಳಗೆ ಇಡಿ. ಇದಕ್ಕಾಗಿ ನಿಮಗೆ ಅಲೋವೆರಾ, ಮನಿಪ್ಲಾಂಟ್ ಉತ್ತಮ ಸಸ್ಯಗಳಾಗಿದ್ದು, ಕಡಿಮೆ ನಿರ್ವಹಣೆಯ ಅವಶ್ಯಕತೆ ಇರುತ್ತದೆ.

    ಡ್ರೀಮ್ ಕ್ಯಾಚರ್: ಇದೊಂದು ವಿದೇಶಿ ಪರಿಕಲ್ಪನೆಯಾಗಿದ್ದರೂ ಸಹ ಭಾರತೀಯರು ಇದನ್ನು ಪ್ರೀತಿಸುತ್ತಾರೆ, ಏಕೆಂದರೆ ಅವುಗಳ ಸೌಂದರ್ಯದ ಜೊತೆಗೆ ಸಕಾರಾತ್ಮಕತೆಯನ್ನು ಹೊತ್ತು ತರುವುದರಿಂದ. ವಿವಿಧ ಡಿಸೈನ್ನಲ್ಲಿ ಬರುವ ಈ ಡ್ರೀಮ್ ಕ್ಯಾಚರ್ ನ್ನು ಮನೆಯೊಳಗೆ ಇಡುವುದರಿಂದ, ಮನೆಯೂ ಕಲಾತ್ಮಕವಾಗಿ ಕಾಣುವುದು.

    Click here

    Click here

    Click here

    Call us

    Call us

    ಹರಳುಗಳು: ಇದು ಅದೃಷ್ಟ, ಪ್ರೀತಿ, ಸಂತೋಷದ ಸಂಕೇತವಾಗಿದ್ದು, ಒತ್ತಡವನ್ನು ನಿವಾರಿಸಲು ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲು ಗುಲಾಬಿ ಬಣ್ಣದ ಸ್ಫಟಕಳಂತಹ ಶಿಲೆಗಳನ್ನು ಇಡಬಹುದು.

    ಹಂಸ ಕೈ: ನಕಾರಾತ್ಮಕತೆ ನಿವಾರಣೆ ಮಾಡುವ ಅತ್ಯಂತ ಪ್ರಸಿದ್ಧವಾದ ಅಲಂಕಾರಿಕ ವಸ್ತುವೆಂದರೆ ಈ ಹಂಸ ಕೈ ಅಥವಾ ಹಂಸ ಹ್ಯಾಂಡ್. ಇದು ಮನೆಯ ಅಲಂಕಾರಕ್ಕೂ ಉತ್ತಮಾಗಿದ್ದು, ನೀವು ಅವುಗಳನ್ನು ನೇತುಹಾಕಬಹುದು, ಆ ರೀತಿಯ ಬಟ್ಟೆಯನ್ನು, ದಿಂಬಿನ ಕವರ್, ಬೆಡ್ ಕವರ್ ಖರೀದಿಸಬಹುದು ಅಥವಾ ಲೋಹದ ಪ್ರತಿಮೆ ಇತ್ಯಾದಿಗಳ ರೂಪದಲ್ಲಿಯೂ ಇಡಬಹುದು. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಇಟ್ಟುಕೊಳ್ಳಬಹುದು.

    ಬುದ್ಧನ ಪ್ರತಿಮೆ: ಇದೊಂದು ಸಾಮಾನ್ಯವಾಗಿ ಹೆಚ್ಚಿನ ಮನೆಯಲ್ಲಿ ಕಂಡುಬರುವ ವಸ್ತುವಾಗಿದೆ. ಭಗವಾನ್ ಬುದ್ಧನ ಪ್ರತಿಮೆ ಅಥವಾ ನಗುವ ಬುದ್ಧನ ಪ್ರತಿಮೆ ಮನೆಗೆ ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ. ಇದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಹಲವರದ್ದು.

    ತಾಜಾ ಹೂವುಗಳು: ಬಾಡಿದ ಅಥವಾ ಪ್ಲಾಸ್ಟಿಕ್ ಹೂವುಗಳಿಗಿಂತ ತಾಜಾ ಹೂವುಗಳು ನಿಮ್ಮ ಮನೆಗೆ ಸಂತೋಷ ಮತ್ತು ಚೈತನ್ಯವನ್ನು ತರುತ್ತವೆ.

    ಧೂಪ: ನಿಮ್ಮ ಮನೆಯೊಳಗೆ ಧೂಪವನ್ನು ಹಾಕುವುದರಿಂದ ಮನೆಯೊಳಗಿರುವ ನಕಾರಾತ್ಮಕತೆಯನ್ನು ಹೊರಹಾಕಬಹುದು. ಇದರ ಸುಗಂಧವು ಉತ್ತಮ ಮನಸ್ಥಿತಿಯನ್ನು ನೀಡಿ, ಪಾಸಿಟಿವ್ ಆಲೋಚನೆಗಳಿಗೆ ದಾರಿಮಾಡಿಕೊಡುತ್ತದೆ.

    ಆಮೆ: ಕೆಲವು ಜನರು ಆಮೆಗಳನ್ನು ಸಾಕುತ್ತಾರೆ, ಆದರೆ ಅವುಗಳನ್ನು ನಿರ್ವಹಿಸುವುದು ಸುಲಭವಲ್ಲ ಎಂಬುದನ್ನು ನೆನಪಿನಲ್ಲಿಡಿ. ಆಮೆ ಚಿತ್ರವಿರುವ ಮುದ್ರಣಗಳು ಅಥವಾ ಲೋಹೀಯ ಪ್ರತಿಮೆಗಳನ್ನು ಇಟ್ಟು ಮನೆಯ ಅಲಂಕಾರ ಮಾಡುವುದು ಉತ್ತಮ.

    ಹಣ್ಣಿನ ಬಟ್ಟಲು: ನೀವು ದಾಳಿಂಬೆ ಮತ್ತು ಇತರ ಸಿಟ್ರಸ್ ಹಣ್ಣುಗಳಿಂದ ತುಂಬಿದ ಹಣ್ಣಿನ ಬುಟ್ಟಿಯನ್ನು ಮನೆಯೊಳಗೆ ಇಟ್ಟುಕೊಂಡರೆ, ಅದು ಉತ್ತಮ ಆರೋಗ್ಯವನ್ನು ನೀಡುತ್ತದೆ ಮತ್ತು ಶ್ರೀಮಂತಿಕೆಯನ್ನು ತರುತ್ತದೆ ಎಂದು ನಂಬಲಾಗಿದೆ.

    ನೀಲಿ ಬಟ್ಟೆ: ನೀಲಿ ಬಣ್ಣವು ದುರಾದೃಷ್ಟವನ್ನು ದೂರ ಮಾಡುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಅದೃಷ್ಟಕ್ಕಾಗಿ ನೀಲಿ ಸ್ಕರ್ಟ್, ಕುರ್ತಾ, ದುಪಟ್ಟಾ, ಟೀ ಶರ್ಟ್ ಅಥವಾ ಯಾವುದನ್ನಾದರೂ ಧರಿಸಬಹುದು.

    ಕುಂದಾಪ್ರ ಡಾಟ್ ಕಾಂ ಲೇಖನ

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಣನಾಯಕನ ರೂಪ, ಗುಣದಲ್ಲಿ ಕಲಿಯಬೇಕಾದ ಪಾಠಗಳು ಅನೇಕ

    06/09/2024

    ಭಾರತ ಬಜೆಟ್-23 ಮುನ್ನೋಟ: ಆರ್ಥಿಕ ಕುಸಿತದ ಭೀತಿಯ ನಡುವೆ ಭಾರತೀಯ ಅರ್ಥವ್ಯವಸ್ಥೆಯನ್ನು ಮೇಲೆತ್ತುವ ಸವಾಲು

    01/02/2023

    ಉದ್ಯೋಗ ಸಂದರ್ಶನದ ತಯಾರಿಗೆ ಒಂದಿಷ್ಟು ಟಿಪ್ಸ್

    01/01/2023

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು
    • ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್ ಭೇಟಿ
    • ವಿದೇಶಿ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ಪ್ರಿಯಾಂಶ್ ಶಂಕರ್‌ಗೆ ಚಿನ್ನದ ಪದಕ
    • ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಯಡಿ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d