ಕುಂದಾಪ್ರ ಡಾಟ್ ಕಾಂ.
ಬೈಂದೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ‘ಬೈಂದೂರು ಪ್ಯಾಲೇಸ್’ ಅಪಾರ್ಟ್ಮೆಂಟ್ ಭಾನುವಾರ ಲೋಕಾರ್ಪಣೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಉದ್ಘಾಟಿಸಿದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಕ್ಷೇತ್ರದ ಮಾಜೀ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ ಶುಭಾಶಂಸನೆಗೈದರು.
ಕ್ರೆಡೈ ಉಡುಪಿ ಗೌರವ ಅಧ್ಯಕ್ಷ ಮನೋಹರ್ ಎಸ್.ಶೆಟ್ಟಿ, ಕುಂದಾಪುರ: ಶ್ರೀರಾಮ್ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ನಾಗರಾಜ್ ಕಾಮಧೇನು ಉಪಸ್ಥಿತರಿದ್ಧರು.
ಇದೇ ಸಂದರ್ಭ ಸಂಸ್ಥೆಯ ಪಾಲುದಾರ, ಆರ್.ಎಸ್. ವೆಂಚರ್ಸ್ನ ರಾಜೀವ್, ಸಾಜು ಹಾಗೂ ಮಹಿಮಾರನ್ನು ಗೌರವಿಸಲಾಯಿತು. ಈ ವೇಳೆ ರಾಜೀವ ಅವರು ಬರೆದ “ಮಾರ್ಕೆಟಿಂಗ್ ಪುಶ್ ದ ಕಸ್ಟಮರ್ಸ್ ಟು ಪುಲ್ ದ ಬ್ರ್ಯಾಂಡ್” ಪುಸ್ತಕ ಬಿಡುಗಡೆಗೊಳಿಸಲಾಯಿತು.
ಸಂಸ್ಥೆಯ ಪ್ರವರ್ತಕ ಕೆ. ವೆಂಕಟೇಶ್ ಕಿಣಿ ಸ್ವಾಗತಿಸಿದರು. ಉದಯ್ ಆಚಾರ್ ಪ್ರಾರ್ಥಿಸಿದರು. ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ಬೈಂದೂರು ಪ್ಯಾಲೇಸ್ ವಸತಿ ಸಮುಚ್ಛಯದಲ್ಲಿ ಉದ್ಘಾಟನೆಯ ಪ್ರಯುಕ್ತ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಕೊನೆಯ 10 ವಸತಿಗೃಹಗಳು ಮಾತ್ರ ಬಾಕಿಯಿದ್ದು ಕೇವಲ 29.9 ಲಕ್ಷ ರೂ. ನಿಗದಿ ಮಾಡಲಾಗಿದೆ. ಈಜುಕೊಳ ಸೇರಿದಂತೆ ಸಾಮಾನ್ಯ 20 ಸೇವೆ ದೊರೆಯಲಿದೆ. ರಾಮನಾಥ ಗ್ರೂಫ್ ಆ್ಯಂಡ್ ಕಂ. ಹಾಗೂ ಆರ್.ಎಸ್. ವೆಂಚರ್ ಜಂಟಿಯಾಗಿ ಬೈಂದೂರು ಪ್ಯಾಲೇಸ್ ಪ್ರವರ್ತಕರಾಗಿದ್ದು ಬೈಂದೂರಿನಲ್ಲಿ ಅತ್ಯಾಧುನಿಕ ಸೌಲಭ್ಯದ ಮೊದಲ ವಸತಿ ಸಮುಚ್ಛಯ ಇದಾಗಿದೆ ಎಂದು ಪ್ರವರ್ತಕ ಕೆ. ವೆಂಕಟೇಶ್ ಕಿಣಿ ಹೇಳಿದರು.