ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ರಿ. ಬೈಂದೂರು – 12ನೇ ವರ್ಷದ ಟ್ರಸ್ಟ್ ದಿನಾಚರಣೆ

Click Here

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸಮುದಾಯದ ಸಂಘಟನೆಗಳ ಮೂಲ ಉದ್ದೇಶವೇ ಸಮುದಾಯದ ಅಭಿವೃದ್ಧಿಯಾಗಿದ್ದು, ಉಳ್ಳುವರು ಇಲ್ಲದವರಿಗೆ ನೀಡುವ ದಾನಕ್ಕೆ ಸೇತುವೆಯಾಗಿ ಕೆಲಸ ಮಾಡಬೇಕು. ಅಂತಹ ಶ್ರೇಷ್ಠ ಕಾರ್ಯವನ್ನು ಕಳೆದ ಹನ್ನೆರಡು ವರ್ಷಗಳಿಂದ ಟ್ರಸ್ಟ್‌ ಮಾಡುತ್ತಾ ಬರುತ್ತಿದೆ ಎಂದು ವಿಶ್ವ ರಾಮಕ್ಷತ್ರಿಯ ಮಹಾಸಂಘ ಅಧ್ಯಕ್ಷ ಎಚ್.‌ ಶಶಿಧರ್‌ ನಾಯ್ಕ್‌ ಹೇಳಿದರು.

Click Here

Call us

Click Here

ಅವರು ಭಾನುವಾರ ಇಲ್ಲಿನ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ರಿ. ಬೈಂದೂರು ಇದರ 12ನೇ ವರ್ಷದ ಟ್ರಸ್ಟ್ ದಿನಾಚರಣೆ ಹಾಗೂ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ ರಾಮಕ್ಷತ್ರಿಯ ಸಮುದಾಯದಲ್ಲಿ ಹಲವು ಪ್ರತಿಭಾನ್ವಿತರಿದ್ದು ಅವರಿಗೆ ಸೂಕ್ತ ಪ್ರೋತ್ಸಾಹ ದೊರೆತಾದ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ ಎಂದರು.

ಟ್ರಸ್ಟ್‌ನಿಂದ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಮನೆ ಹಸ್ತಾಂತರ, ವಿದ್ಯಾರ್ಥಿ ದತ್ತು ಸ್ವೀಕಾರ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ಹಸ್ತಾಂತರ ನಡೆಯಿತು.

ಬಿಬಿಎಂಪಿ ಉಪ ಆರೋಗ್ಯಾಧಿಕಾರಿ ಡಾ. ಜಿ. ಕೆ. ಸುರೇಶ್ ಮಾತನಾಡಿ, ಅರ್ಹರಿಗೆ ನೆರವು ನೀಡುವುದೇ ನಾವು ಮಾಡಬಹುದಾದ ಬಹುದೊಡ್ಡ ಸೇವೆಯಾಗಿದೆ. ಅಪೇಕ್ಷೆ ಇಲ್ಲದ ದಾನ ಯಾವಾಗಲೂ ಮನುಷ್ಯನನ್ನು ಉನ್ನತ ಮಟ್ಟಕ್ಕೇರಿಸುತ್ತದೆ ಎಂದು ಹೇಳಿದರು.

ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್‌ನ ಆಡಳಿತ ಟ್ರಸ್ಟೀ ಬಿ. ರಾಮಕೃಷ್ಣ ಶೇರೆಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯೆ, ಆರೋಗ್ಯ, ವಸತಿ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು. ಅದರಿಂದ ವಂಚಿತರಾಗುವವರಿಗೆ ನೆರವು ನೀಡಲು ಕಳೆದ ಒಂದು ದಶಕದಿಂದ ಸೇವೆ ಸಲ್ಲಿಸಲಾಗುತ್ತಿದೆ. ಟ್ರಸ್ಟ್ ಸಹಾಯ ಪಡೆದು ಸಬಲರಾದವರು ಮತ್ತಷ್ಟು ಜನರಿಗೆ ದಾನ ನೀಡಿದರೆ ಅದೇ ನಾವು ಸಮುದಾಯಕ್ಕೆ ಮಾಡಬಹುದಾದ ಬಹುದೊಡ್ಡ ಸೇವೆ ಎಂದರು.

Click here

Click here

Click here

Call us

Call us

ಅತಿಥಿಗಳಾಗಿ ವಿಘ್ನೇಶ್ವರ ಪಾಲಿಪ್ರೊಡಕ್ಟ್ ಪಾಲುದಾರರಾದ ಪ್ರಕಾಶ್ ಬೆಟ್ಟಿನ್, ಬೈಂದೂರು ವೃತ್ತ ನಿರೀಕ್ಷಕ ಸವಿತ್ರತೇಜ್, ವಿಶ್ವ ರಾಮಕ್ಷತ್ರಿಯ ಮಹಾಸಂಘದ ಕಾರ್ಯದರ್ಶಿ ಶ್ರೀಧರ್ ಪಿ.ಎಸ್., ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷರಾದ ರಾಮಕೃಷ್ಣ ಸಿ. ಉಪಸ್ಥಿತರಿದ್ದರು.

ಸುರಭಿ ಬಿ. ಬೈಂದೂರು ನಿರ್ದೇಶಕ ಸುಧಾಕರ ಪಿ. ಬೈಂದೂರು ಅವರನ್ನು ಸನ್ಮಾನಿಸಲಾಯಿತು. ಅತಿಥಿಗಳನ್ನು ಗೌರವಿಸಲಾಯಿತು.

ಟ್ರಸ್ಟಿಗಳಾದ ಕೆ. ಲಕ್ಷ್ಮೀನಾರಾಯಣ, ಕೆ.ಜಿ. ನಾಗಪ್ಪ ಶೇರುಗಾರ್, ವೆಂಕಟ್ರಮಣ ಬಿಜೂರು, ಬಿ. ಶ್ರೀನಿವಾಸ ಶೇರೆಗಾರ್, ಅಶೋಕ್ ಕುಮಾರ್ ಬಾಡ, ಬಿ. ಶ್ರೀಧರ ಪಡುವರಿ, ಶ್ರೀನಿವಾಸ ಜಿ. ಶಿವಮೊಗ್ಗ, ಪದ್ಮನಾಭ ಕೊತ್ವಾಲ್, ವೆಂಕಟೇಶ್ ಕೆ.ಟಿ ಬಿಜೂರು, ಹೆಚ್. ಸುಬ್ರಾಯ ಶೇರುಗಾರ್, ಜಯಾನಂದ ಹೋಬಳಿದಾರ್, ಜಯಂತಿ ನಾರಾಯಣ ರಾವ್, ನಾಗರಾಜ ಬಿಜೂರು, ಗೋಪಾಲಕೃಷ್ಣ ಕಲ್ಮಕ್ಕಿ, ಶ್ರೀಧರ ಪಿ ಪಡುವರಿ, ಕೃಷ್ಣಯ್ಯ ವಿ. ಮದ್ದೋಡಿ, ವಸಂತಿ ವಾಸುದೇವ ಬೈಂದೂರು ಉಪಸ್ಥಿತರಿದ್ದರು.

ಟ್ರಸ್ಟ್ ಸಂಚಾಲಕ ಆನಂದ ಮದ್ದೋಡಿ ವಾರ್ಷಿಕ ವರದಿ ವಾಚಿಸಿದರು. ಬೈಂದೂರು ರಾಮಕ್ಷತ್ರಿಯ ಮಾತೃಮಂಡಳಿ ಸದಸ್ಯರು ಪ್ರಾರ್ಥಿಸಿದರು. ಟ್ರಸ್ಟಿಗಳಾದ ಚಂದ್ರಶೇಖರ ಕೆ. ಕೋಟೇಶ್ವರ ಸ್ವಾಗತಿಸಿ, ವೆಂಕಟರಮಣ ಬಿಜೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಟ್ರಸ್ಟ್ ಸಂಚಾಲಕ ಕೇಶವ ನಾಯ್ಕ್ ವಂದಿಸಿದರು. ಟ್ರಸ್ಟ್ ಸಂಚಾಲಕ ಆನಂದ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕರಾದ ಭಾಸ್ಕರ ಬಾಡ, ವೆಂಕಟರಮಣ ಮಯ್ಯಾಡಿ, ಮಹಾಬಲೇಶ್ವರ, ರವಿರಾಜ್ ಮಯ್ಯಾಡಿ, ರಾಘವೇಂದ್ರ ದಡ್ಡು, ನಾಗರಾಜ ಬಾಡ, ವಾಸುದೇವ ಪಡುವರಿ, ರಾಜೇಶ್ ಮಯ್ಯಾಡಿ, ರಾಘವೇಂದ್ರ ತಗ್ಗರ್ಸೆ, ದಿನಕರ ಪಟವಾಲ್ ಮೊದಲಾದವರು ಸಹಕರಿಸಿದರು.

Leave a Reply