ಸೆ.15ರಂದು ಐರೋಡಿ ಗೋವಿಂದಪ್ಪನವರಿಗೆ ಪುಂಡಲಿಕ ಹಾಲಂಬಿ ಪುರಸ್ಕಾರ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವ ರಾಜಾಧ್ಯಕ್ಷರಾದ ದಿವಗಂತ ಪುಂಡಲಿಕ ಹಾಲಂಬಿಯವರ ನೆನಪಿಗಾಗಿ ಅವರ ಧರ್ಮಪತ್ನಿ ಸರೋಜ ಹಾಲಂಬಿ ಅವರು ಸ್ಥಾಪಿಸಿದ ಪುಂಡಲಿಕ ಹಾಲಂಬಿ ಯಕ್ಷ ಪುರಸ್ಕಾರಕ್ಕೆ ಹಿರಿಯ ಯಕ್ಷಗಾನ ಕಲಾವಿದರಾದ ಐರೋಡಿ ಗೋವಿಂದಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

Call us

Click Here

ಈ ಪುರಸ್ಕಾರ 25,000 ನಗದು ಹಾಗೂ ಫಲಕ ಒಳಗೊಂಡಿರುತ್ತದೆ. ಸೆ. 15ರ ಸಂಜೆ 4.30ಕ್ಕೆ ಗುಂಡ್ಮಿ ಯಕ್ಷ ಕಲಾರಂಗದಲ್ಲಿ ವಿತರಿಸಲಾಗುವುದೆಂದು ಕ.ಸಾ.ಪ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಹಾಗೂ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply