ಮೂಡ್ಲಕಟ್ಟೆ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಮಹಿಳಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.

Call us

Click Here

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಆರ್ಎಎಮ್ ಕಾಲೇಜ್‌ನ ಹೆಚ್‌ಒಡಿ ಮತ್ತು ಪ್ರೊಫೆಸರ್‌ ಅಥರ್ವ ಆರ್ಗ್ಯಾನಿಕ್ಸ್‌ನ ಸಂಸ್ಥಾಪಕರು ಮತ್ತು ಸಿಇಒ ಆಗಿರುವ ಡಾ. ಅಪೇಕ್ಷ ರಾವ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಾವು ದೇಹದ ಮಾತು ಕೇಳುವ ಬದಲು  ಅದನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದೇವೆ. ನಾವು ವಿಶ್ವದಲ್ಲಿ ಕೇವಲ ಒಂದು ಧೂಳಿನ ಕಣವಷ್ಟೇ. ಹಾಗಾಗಿ ಇರುವಷ್ಟು ದಿನ ಆರೋಗ್ಯ ಕಾಪಾಡಿಕೊಂಡು ನೆಮ್ಮದಿಯಿಂದ ಬದುಕುವುದು ಮುಖ್ಯ, ಅದಕ್ಕಾಗಿ ನಾವು ಪಾಲಿಸಬೇಕಾದ ನಾಲ್ಕು ಸೂತ್ರಗಳಾದ ಉತ್ತಮ ನಿದ್ರೆ, ವ್ಯಾಯಾಮ, ಆಹಾರ ಕ್ರಮ, ಹಾಗೂ ಒತ್ತಡ ನಿಯಂತ್ರಣ ಇವುಗಳ ಬಗ್ಗೆ ಮನಮುಟ್ಟುವಂತೆ ಸವಿವರವಾಗಿ ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಪ್ರೊಲಾಕೆ ಟೆಕ್ನಾಲಜೀಸ್ ಇದರ ಸಂಸ್ಥಾಪಕರು ಮತ್ತು ಸಿಇಒ ಆಗಿರುವ ಸುಮಂಗಲ ತುಂಗ ಅವರು ಮಾತನಾಡಿ, ಉದ್ಯಮಿಯಾಗಲು ಬೇಕಾದ ಗುಣಗಳು ,ಮಹಿಳೆಯರು ಉದ್ಯಮದಲ್ಲಿ ಎದುರಿಸುವ ಸವಾಲುಗಳು ಮತ್ತು ಅವುಗಳನ್ನು ಹೇಗೆ ಎದುರಿಸುವುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.

ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಮೆಲ್ವಿನ್ ಡಿಸೋಜ ಅಧ್ಯಕ್ಷೀಯ ಭಾಷಣದಲ್ಲಿ ಮಹಿಳಾ ಸಾಧಕಿಯರನ್ನು ಸ್ಮರಿಸುತ್ತ ಅವರಂತೆ ನೀವೂ ಸಾಧನೆಗೈಯಬೇಕು ಎಂದು ವಿಧ್ಯಾರ್ಥಿನಿಯರಿಗೆ ಕರೆ ನೀಡಿದರು.

ಕಾಲೇಜಿನ ಮಹಿಳಾ ಸಾಧಕಿಯಾಗಿ ವಿಶ್ವೇಶ್ವರಯ್ಯ ವಿಶ್ವ ವಿಧ್ಯಾಲಯದ ಎಮ್‌ಟೆಕ್ ಪದವಿಯ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್‌ ಪಡೆದ ಕಾಲೇಜಿನ ಹಳೆ ವಿದ್ಯಾರ್ಥಿ, ಕಂಪ್ಯೂಟರ್ ಸೈನ್ಸ್ (ಡಾಟಾ ಸೈನ್ಸ್) ವಿಭಾಗದ ಉಪನ್ಯಾಸಕಿ ಫರಾನ ಇಮ್ರಾನ್ ಅವರನ್ನು ಸನ್ಮಾನಿಸಲಾಯಿತು.

Click here

Click here

Click here

Call us

Call us

ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಸಂಯೋಜಕಿ ಪ್ರೊಫಸರ್ ಅಕ್ಷತ ನಾಯಕ್, ಡೀನ್ ಪ್ಲೇಸ್ಮೆಂಟ್ ಅಮೃತಮಾಲ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಫ್ರಾಹ್‌ ಕಾರ್ಯಕ್ರಮ ನಿರೂಪಿಸಿ, ಶ್ರೇಯ ವಂದಿಸಿದರು.

Leave a Reply