ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬೈಂದೂರು ಕಾಲ್ತೋಡಿನ ಬೊಳ್ಳಂಬಳ್ಳಿ ಮೂಲದ, ತೆಲಂಗಾಣದಲ್ಲಿ ವಾಸವಾಗಿರುವ ಇಂದ್ರಾಚಿತ 739ನೇ ರ್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ.
ಎಳವೆಯಿಂದಲೇ ಐಎಎಸ್ ಆಗುವ ಕನಸು ಹೊತ್ತಿದ್ದ ಇಂದ್ರಾಚಿತ ಅವರ ಕನಸಿಗೆ ನೀರೆರೆದು ಪೋಷಿಸಿದ ಪೋಷಕರು ಮಗಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ಕೊಡಿಸಿ, ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯ ಇರುವ ಕೋಚಿಂಗ್ ಕೊಡಿಸಿದ್ದಾರೆ. ದಿಲ್ಲಿಯಲ್ಲಿ ಕೋಚಿಂಗ್ ಹಾಗೂ ನೀತಿ ಆಯೋಗದೊಂದಿಗೆ ಇಂಟನ್ ೯ಶಿಪ್ ಮಾಡಿದ್ದಾರೆ.
ಆರನೇ ಪಯತ್ನದಲ್ಲಿ ಯಶಸ್ಸು:
ಆರಂಭದ ಮೂರು ಪ್ರಯತ್ನದಲ್ಲಿ ಪ್ರಾರಂಭಿಕ ಹಂತವನ್ನು (ಪ್ರಿಲಿಮ್ಸ್) ದಾಟಲು ವಿಫಲರಾದರೂ, ಛಲ ಬಿಡದೇ ನಾಲ್ಕನೇ ಬಾರಿ ಪರೀಕ್ಷೆ ಬರೆದು ಪ್ರಾರಂಭಿಕ ಹಂತವನ್ನು ದಾಟಿದ್ದು, ಮೈನ್ಸ್ ತೇರ್ಗಡೆಗೊಂಡಿರಲಿಲ್ಲ. ಐದನೇ ಬಾರಿ ಪ್ರಿಲಿಮ್ಸ್, ಮೈನ್ಸ್ ಉರ್ಕಿಣ್ರರಾಗಿ, ಸಂದರ್ಶನನೀಡಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ಅವರ ಹೆಸರಿರಲಿಲ್ಲ. ಆರನೇ ಬಾರಿಗೆ ಎಲ್ಲಾ ಮಜಲುಗಳನ್ನು ದಾಟಿ ಅಂತಿಮವಾಗಿ ಆಯ್ಕೆಯಾಗಿದ್ದಾರೆ.
ಇಂದ್ರಾಚಿತ ಅವರು ರಾಘವೇಂದ್ರ ರಾವ್ ಹಾಗೂ ಮಮತಾ ಆರ್. ಶೆಟ್ಟಿ ಅವರ ಪುತ್ರಿಯಾಗಿದ್ದು ವಿದ್ಯಾಭಾಸವನ್ನು ತೆಲಂಗಾಣದಲ್ಲಿ ಪೂರ್ಣಗೊಳಿಸಿದ್ದಾರೆ. ಬಿಎ, ಎಕಾನಾಮಿಕ್ಸ್, ಪೊಲಿಟಿಕಲ್ ಸೈನ್ಸ್, ಪಬ್ಲಿಕ್ ಅಡ್ಮಿನಿಸ್ಟೇಶನ್) ಪದವಿ ಪಡೆದು, ಎಮ್ ಎ ಪೊಲಿಟಿಕಲ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಮಾರಣಕಟ್ಟೆ ದೇವಸ್ಥಾನದ ಅಧ್ಯಕ್ಷ ಸದಾಶಿವ ಶೆಟ್ಟಿ ಮತ್ತು ಚಂದ್ರಾವತಿ ಶೆಟ್ಟಿ ಅವರ ಮೊಮ್ಮಗಳು.
ಈ ಬಗ್ಗೆ ಪ್ರತಿಕ್ರಿಯಿಸಿಯಿರುವ ಇಂದ್ರಾಚಿತ, ಪರೀಕ್ಷೆ ಸನಿಹವಾಗುತ್ತಿದ್ದಂತೆ ದಿನಕ್ಕೆ 10 ಗಂಟೆ ಓದುತ್ತಿದ್ದೆ. ಉಳಿದ ದಿನಗಳಲ್ಲಿ ಕನಿಷ್ಠ 6 ರಿಂದ 8 ಗಂಟೆ ಓದಿಗಾಗಿ ಮೀಸಲಿಡುತ್ತಿದ್ದೇನು. ಪೋಷಕರು, ಕುಟುಂಬ, ಸ್ನೇಹಿತರು ಬೆಂಬಲದಿಂದ ಯಾವುದೇ ಒತ್ತಡವಿಲ್ಲದೇ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಬಳಿಕ ಇತರ ಯಾವುದೇ ಕೆಲಸಕ್ಕೆ ಸೇರದೇ ಸತತ ಆರು ವರ್ಷ ಯುಪಿಎಸ್ಸಿಗಾಗಿ ಮೀಸಲಿಟ್ಟು ಓದಿದ್ದೇನೆ ಎನ್ನುತ್ತಾರೆ