ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸುರಭಿ ರಿ. ಬೈಂದೂರು, ರಂಗಸ್ಥಳ ಉಪ್ಪುಂದ ಹಾಗೂ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇವರ ಸಹಯೋಗದಲ್ಲಿ ಉಪ್ಪುಂದದ ರೈತ ಸಿರಿ ಸಭಾಭವನದಲ್ಲಿ ಭಾವ ಕವಿ ಪ್ರಸಿದ್ಧ ಸಾಹಿತಿ ಡಾ. ಎಚ್.ಎಸ್. ವೆಂಕಟೇಶ್ ಮೂರ್ತಿ ಅವರಿಗೆ “ಭಾವ ನಮನ” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು

ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇದರ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಡಾ. ವೆಂಕಟೇಶ್ ಮೂರ್ತಿ ಅವರ ಸಾಹಿತ್ಯ ಸಾಧನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು “ರಂಗಸ್ಥಳ” ಉಪ್ಪುಂದ ಇದರ ಅಧ್ಯಕ್ಷರಾದ ಯು.ಎಚ್.ರಾಜಾರಾಮ ಭಟ್ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಚ್.ಎಸ್.ವಿ ಅವರ ಕುರಿತು ಅಧ್ಯಾಪಕ ಸಂದೀಪ ದೇವಾಡಿಗ “ನುಡಿ ನಮನ” ಸಲ್ಲಿಸಿದರು.


ಬೈಂದೂರು ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಅವರು ಆಶಯ ನುಡಿಗಳನ್ನಾಡಿದದರು.
ಸಂದೀಪ ದೇವಾಡಿಗ ಸ್ವಾಗತಿಸಿ, ರಂಗಸ್ಥಳ ಉಪ್ಪುಂದ ಕಾರ್ಯದರ್ಶಿಗಳಾದ ಗಣೇಶ್ ಉಪ್ಪುಂದ ಧನ್ಯವಾದ ಗೈದರು. ಕಾರ್ಯಕ್ರಮವನ್ನು ರಾಮಕೃಷ್ಣ ದೇವಾಡಿಗ ಉಪ್ಪುಂದ ನಿರ್ವಹಿಸಿದರು.
“ರಾರಾ ಮೆಲೋಡಿಯಸ್” ಉಪ್ಪುಂದ ಇದರ ಕಲಾವಿದರಾದ ರವಿ ಹೊಸ್ಕೋಟೆ, ರಮ್ಯರವಿ ಹೊಸ್ಕೋಟೆ, ಚಂದ್ರ ಬಂಕೇಶ್ವರ ಅವರಿಂದಎಚ್ಎಸ್ವಿ ಅವರ ವಿವಿಧ ಆಯ್ದ ಭಾವಗೀತೆಗಳ ಗುಚ್ಛವನ್ನು ಪ್ರಸ್ತುತಪಡಿಸಲಾಯಿತು.















