Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಧನ ಕಲಾ ಸಂಗಮ (ರಿ), ಹಲ್ಸನಾಡು ಬಿಲ್ಡಿಂಗ್, ಮುಖ್ಯರಸ್ತೆ, ಕುಂದಾಪುರದಲ್ಲಿ ರಂದು ಯಕ್ಷಗಾನ ತರಬೇತಿ ತರಗತಿಯ ಉದ್ಘಾಟನೆಯನ್ನು ಖ್ಯಾತ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪನವರಿಂದ ನೆರವೇರಿದರು. ಬಳಿಕ ಮಾತನಾಡಿದ ಅವರು ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ದಿನ ಬರೆ ಶೋಕಿಗಾಗಿ ಯಕ್ಷಗಾನವೆಂದಂತಾಗಿದೆ. ಅದು ಆ ಕಲೆಗೆ ಮಾಡುತ್ತಿರುವ ಅಪಚಾರ. ಬಡಗು ತಿಟ್ಟಿನ ಮೂಲ ಶಿಕ್ಷಣ ನೀಡುವುದರ ಮೂಲಕ ಅತ್ತ್ಯುತ್ತಮ ಯಕ್ಷಗಾನ ಕಲಾವಿದರನ್ನು ತಯಾರು ಮಾಡಿ, ಸಮಾಜಕ್ಕೆ ಸಮರ್ಪಿಸುವಂತೆ ಕೇಳಿಕೊಂಡರು. ನಾರಾಯಣ ಐತಾಳರು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು, ಯಕ್ಷಗಾನ ಕಲಾವಿದ ಹಾಗೂ ಗುರು ಗಣಪತಿ ಹೆಗಡೆ, ಕಡ್ಲೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಕಲಿಸುವ ಮೂಲಕ ಸಾರ್ಥಕ್ಯವನ್ನು ಕಂಡುಕೊಳ್ಳ ಬೇಕು, ಆ ನಿಟ್ಟಿನಲ್ಲಿ ಶ್ರಮವಹಿಸಿ ಪ್ರಯತ್ನ ಮಾಡುವುದಾಗಿ ಭರವಸೆ ಇತ್ತರು. ಇನ್ನೋರ್ವ ಹವ್ಯಾಸಿ ಯಕ್ಷಗಾನ ಕಲಾವಿದರಾದ ಆಶೋಕ ಆಚಾರ್ ಶುಭಶಯವನ್ನು ಕೋರಿದರು, ಚಿತ್ರಕಲಾವಿದ ಮಂಜುನಾಥ ಮಯ್ಯರು ವಂದನಾರ್ಪಣೆ ಸಲ್ಲಿಸಿದರು. ತದನಂತರ ಯಕ್ಷಗಾನ ತರಗತಿ…

Read More

ಪ್ರೀತಿ ಎಂಬದೇ ಚುಂಬಕ ಗಾಳಿ: ಬಿ.ಎ.ಸನದಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರೀತಿಯೆಂಬುದೇ ಒಂದು ಪ್ರಶಸ್ತ ಚುಂಬಕ ಶಕ್ತಿ. ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಅವನ ಕೆಲಸ ಸಾಧನೆಗಳ ಮೇಲೆ ಇಂತಹ ಪ್ರೀತಿ ಗೌರವವೇ ನಮ್ಮನ್ನು ಪರಸ್ಪರ ಸೆಳೆಯುತ್ತದೆ ಎಂದು ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ, ಆಕಾಶವಾಣಿ ಮಾಧ್ಯಮದ ಹಿರಿಯ ಚೇತನ ಬಿ.ಎ ಸನದಿ ಹೇಳಿದರು. ಅವರು ಪತ್ರಕರ್ತರ ವೇದಿಕೆ( ರಿ) ಬೆಂಗಳೂರು ಉಡುಪಿ ಜಿಲ್ಲಾ ಘಟಕದ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ ದಶಮಾನೋತ್ಸವ ಪ್ರಯುಕ್ತ ನೀಡಲಾದ ಗೌರವವನ್ನು ಗುರುವಾರ ಸ್ವೀಕರಿಸಿ ಮಾತನಾಡುತ್ತಿದ್ದರು. ನನಗೆ ಭಾಷೆಯ ಮೇಲೆ ಪ್ರೀತಿಇದೆ. ಭಾಷಾ ವ್ಯಾಮೋಹವಿರಲಿಲ್ಲ ಆಯಾ ಭಾಷೆಯ ಜನರೊಡನೆ ಅವರ ಭಾಷೆಯಲ್ಲಿ ಪ್ರೀತಿ ವಿಶ್ವಾಸ ಹಂಚಿ ಕೊಳ್ಳುವುದು ಸಾಧ್ಯವಾಯಿತು. ಸಾಮರಸ್ಯದ ಬದುಕೇ ಶ್ರೇಷ್ಠ ಎಂದು ಅವರು ಹೇಳಿದರು. ಗೌರವ ಪ್ರಧಾನಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಸಾಹಿತ್ಯದಲ್ಲಿ ಕೀರ್ತಿಗಳಿಸಿದ ಸನದಿ ಅವರು ಜನರ ಮನಸ್ಸಿನಲ್ಲಿ ಉಳಿಯುವ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇಂತಹ ವ್ಯಕ್ತಿಗಳನ್ನು ಗೌರವಿಸುವುದೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ವಿಕಿಪೀಡಿಯಾ ಅಸೋಸಿಯೇಶನ್‍ನ ಉದ್ಘಾಟನೆ ಹಾಗೂ ಮೂರು ದಿನಗಳ ಮಾಹಿತಿ ಕಾರ್ಯಾಗಾರಕ್ಕೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಾಲನೆ ಗುರುವಾರ ನೀಡಲಾಯಿತು. ಪ್ರಭು ಆಸ್ಪತ್ರೆಯ ಡಾ. ಕೃಷ್ಣ ಮೋಹನ ಪ್ರಭು, ವಿಕಿಪೀಡಿಯಾ ಅಸೋಸಿಯೇಶನ್ ಅನ್ನು ಉದ್ಘಾಟಿಸಿ, ವಿಶ್ವಕೋಶಗಳು ಜನರಿಂದ ದೂರವಿರುವಾಗ ವಿಕಿಪೀಡಿಯಾ ಜ್ಞಾನವನ್ನು ಪಸರಿಸಲು ಜನಸ್ನೇಹಿ ಕೆಲಸವನ್ನು ಮಾಡುತ್ತಿದೆ. ಯುವಜನರು ಪೂರ್ವಾಗ್ರಹವಿಲ್ಲದೆ ಇದನ್ನು ಸದುಪತೋಗಪಡಿಕೊಳ್ಳಬೇಕು. ಕನ್ನಡದ ಹೆಚ್ಚಿನ ಲೇಖನಗಳು ವಿಕಿಪೀಡಿಯಾದಲ್ಲಿ ಪ್ರಕಟಗೊಂಡು ಭಾಷೆಯನ್ನು ಸಮೃದ್ಧ ಮಾಡುವ ಕೆಲಸ ಯುವ ಸಮೂಹದಿಂದಾಗಬೇಕು. ಜ್ಞಾನ ಸಂಪಾದನೆಗೆ ಉತ್ತಮ ಅವಕಾಶ ನೀಡುವ ವಿಕಿಪೀಡಿಯಾದಲ್ಲಿಮಾಹಿತಿಗಳನ್ನು ಪ್ರಕಟಿಸುವ ಮುನ್ನ ಅಧ್ಯಯನ, ವಿಮರ್ಶೆ ಅಗತ್ಯ ಎಂದರು. ಕರಾವಳಿ ವಿಕಿಪೀಡಿಯನ್ಸ್ ಹಾಗೂ ಸಂಪಾದಕ ಡಾ. ಪವನಜ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅಪಾರ ಮಾಹಿತಿಗಳ ಕಣಜ ವಿಕಿಪೀಡಿಯಾ. ಇದರ ಮೂಲಕ ಬರವಣಿಗೆಯಲ್ಲೂ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಸಾಧ್ಯ. ಬೇರೆಯವರ ಬರಹಗಳನ್ನು ನಕಲು ಮಾಡುವಂತಿಲ್ಲ. ತರ್ಕಬದ್ಧ ಆಲೋಚನೆ, ನಿರಂತರ ಸಂಶೋಧನಾ ಪ್ರವೃತ್ತಿ, ಬೇರೆ ಮೂಲದಿಂದ ಮಾಹಿತಿ ಸಂಗ್ರಹಿಸಿ ಅಧ್ಯಯನ ಪೂರ್ಣವಾಗಿ ಬರೆದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾನ್ಯ ಸಂಸದೆ ಶೋಭಾ ಕರಂದ್ಲಾಜೆಯವರು ಸಂವಿಧಾನದ ರಕ್ಷಣೆಯಂತಹ ಜವಾಬ್ದಾರಿಯುತ ಹುದ್ದೆಯಾದ ಸಂಸದೆಯಾಗಿದ್ದು ಕೋಮು ಸಾಮರಸ್ಯ ಕೆಡುವಂತಹ ರೀತಿಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿ ಗಲಭೆ ಪೀಡಿತ ಪ್ರದೇಶದಲ್ಲಿ ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯದವರನ್ನು ಎತ್ತಿಕಟ್ಟುತ್ತಿರುವುದು ಖಂಡನೀಯವಾಗಿದೆ. ಇವರು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದ್ದಾರೆ. ಗಲಭೆಯನ್ನು ತನ್ನ ಭಾಷಣದ ಮೂಲಕ ರಾಜ್ಯಾದ್ಯಂತ ಹಬ್ಬಿಸಲು ಪ್ರಯತ್ನಿಸಿರುವುದು ಹೊಣೆಗೇಡಿ ಮತ್ತು ಅಘಾತಕಾರಿ ವರ್ತನೆಯಾಗಿದೆ. ಸಂವಿಧಾನದ ಆಶಯದಂತೆ ಎಲ್ಲಾ ಧರ್ಮ ಮತ್ತು ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಸಂಸದರಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆ ಕಾರಣಕ್ಕಾಗಿ ಅವರು ಈಗಿಂದೀಗಲೇ ರಾಜೀನಾಮೆ ನೀಡಬೇಕೆಂದು ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಶ್ಯಾಮಲಾ ಭಂಡಾರಿ ಆಗ್ರಹಿಸಿದ್ದಾರೆ. ಎಲ್ಲಾ ಧರ್ಮಗಲ್ಲಿಯೂ ಒಳ್ಳೆಯವರು ಇರುವಂತೆ, ಕೆಟ್ಟವರೂ ಇದ್ದಾರೆ. ಯಾರೋ ಬೆರೆಳೆಣಿಕೆಯಷ್ಟು ಕಿಡಿಗೇಡಿಗಳು ಯಾವುದೋ ಆಮಿಷಕ್ಕೆ ಒಳಗಾಗಿ ಎಸಗುವ ದುಷ್ಕೃತ್ಯಗಳಿಗೊಸ್ಕರ ಇಡೀ ಒಂದು ಸಮುದಾಯವನ್ನೇ ದೂಷಿಸುವುದು ಸರಿಯಲ್ಲ. ದೇಶದ ಸಂವಿಧಾನದ ಪ್ರಕಾರ ಯಾರೇ ತಪ್ಪು ಮಾಡಿದರೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತೀಚೆಗೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಜಯಕರ್ನಾಟಕ ಪತ್ರಿಕೆಯ ಕುಂದಾಪುರದ ಯುವ ಪತ್ರಕರ್ತೆ ಅಶ್ವಿನಿ ಹಕ್ಲಾಡಿ ಅವರು ಪತ್ರಿಕೋದ್ಯಮದಲ್ಲಿ ಮಹಿಳೆಯರ ಸವಾಲುಗಳು ಎಂಬ ವಿಷಯದ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನವಿಕ ಸಂಘದ ಸಂಯೋಜಕರಾದ ಪ್ರೊ. ರಾಮಚಂದ್ರ ಅವರು ವಹಿಸಿದ್ದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸುಮಲತಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಶಬರಿ ಕಾರ್ಯಕ್ರಮ ನಿರೂಪಿಸಿ, ಅನಿತಾ ವಂದಿಸಿದರು.’

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಹಕಾರಿ ಸಂಘಗಳ ನಡುವೆ ಪೈಪೋಟಿ ಇದ್ದರೂ ಸಾರ್ವಜನಿಕರಿಗೆ ಉತ್ತಮ ಸೇವೆ ಸಹಕಾರಿ ಸಂಘಗಳು ನೀಡುತ್ತಾ ಬಂದಿರುವುದು ಸಹಕಾರಿ ಕ್ಷೇತ್ರದ ಹೆಚ್ಚುಗಾರಿಕೆ ಹೊಸ ವ್ಯವಸ್ಥೆಗಳ ಮೂಲಕ ಸಹಕಾರಿ ಕ್ಷೇತ್ರದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಿದೆ ಎಂದು ದ.ಕ ಜಿಲ್ಲೆ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಹೇಳಿದ್ದಾರೆ. ಕುಂದಾಪುರ ತಾಲೂಕು ನವೀಕೃತ ಕೇಂದ್ರ ಕಚೇರಿ ಉದ್ಘಾಟಿಸಿ, ನವೀಕೃತ ಕಟ್ಟಡಕ್ಕೆ ಎರಡು ಲಕ್ಷಅನುದಾನ ನೀಡುವುದಾಗಿ ಘೋಷಿಸಿದರು. ನವೀಕೃತ ಕೇಂದ್ರದ ಮೂಲಕ ಸಾರ್ವಜನಿಕರಿಗೆಇನ್ನಷ್ಟು ಸೌಲಭ್ಯ ಲಭಿಸಲಿ ಎಂದ ಅವರು, ಸೇವೆ ಮೂಲಕ ಸಹಕಾರಿ ಕ್ಷೇತ್ರ ಬೆಳೆಯಲು ಕಾರಣವಾಗಿದ್ದು, ಸಹಾಕಾರಿ ಮಟ್ಟ ವೃದ್ಧಿಸಲೂ ಕಾರಣವಾಗಿದೆ ಎಂದು ಹೇಳಿದರು. ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರದೇವಸ್ಥಾನ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಭದ್ರತಾಕೊಠಡಿ ಉದ್ಘಾಟಿಸಿರು. ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ಅಧ್ಯಕ್ಷ ಮಲ್ಯಾಡಿ ಮೋಹನದಾಸ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘ ಉಪಾಧ್ಯಕ್ಷ ಸಂತೋಷಕುಮಾರ್ ಶೆಟ್ಟಿ ಬಾಳೆಮನೆ, ಕುಂದಾಪುರ ಎಪಿಎಂಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ಯೆಂದೂರು: ಯಡ್ತರೆ ಮನೆತನದ ಹಿರಿಕ ಆಲಂದೂರು ಅಣ್ಣಪ್ಪ ಶೆಟ್ಟಿ (76) ಅವರು ತಮ್ಮ ಸ್ವಗೃಹದಲ್ಲಿ ಇಂದು ನಿಧನರಾದರು. ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಸಹಕಾರಿ ಕ್ಷೇತ್ರದಲ್ಲಿ ತೋಡಗಿಸಿಕೊಂಡಿದ್ದ ಅವರು ಯಡ್ತರೆ ಮನೆತನದಲ್ಲಿ ಓರ್ವ ಪ್ರಮುಖರೆನಿಸಿಕೊಂಡಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಟ್ರಸ್ಟಿಗಳಾಗಿ, ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅನುವಂಶಿಯ ಆಡಳಿತ ಮೊಕ್ತೇಸರರಾಗಿ, ಬೈಂದೂರು ಶ್ರೀ ಸೇನೆಶ್ವರ ದೇವಸ್ಥಾನ, ಬ್ಯೆಂದೂರು ಶ್ರೀ ವೆಂಕಟರಮಣ ದೇವಸ್ಥಾನಗಳ ಮಾಜಿ ಅಧ್ಯಕ್ಷರಾಗಿ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಬೈಂದೂರು ಮಂಡಲದ ಪಂಚಾಯತಿಯ ಮಾಜಿ ಅಧ್ಯಕ್ಷರಾಗಿದ್ದರು. ಬ್ಯೆಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾಗಿ ಸಹಕಾರಿ ರಂಗದಲ್ಲಿ ಗುರುತಿಸಿಕೊಂಡಿದ್ದರು. ಸಾಮಾಜಿಕ ರಂಗದಲ್ಲಿ ತೊಡಗಿಸಿಕೊಂಡಿದ್ದರು. ಅಣ್ಣಪ್ಪ ಶೆಟ್ಟರ ಕುಟುಂಬಿಕರು ದೊಡ್ಡ ಜಮಿನ್ದಾರರಾಗಿದ್ದರು. ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಯಾದ ಸಂದರ್ಭ ಅಣ್ಣಪ್ಪ ಶೆಟ್ಟರು ಹಾಗೂ ಅವರ ತಂದೆ ತಮ್ಮ ಒಕ್ಕಲುಗಳಿಗೆ ಗೇಣಿ ಪಡೆಯುವುದನ್ನು ತಾವಾಗಿಯೇ ಇಲ್ಲಿಸಿದ್ದರು. ಒಕ್ಕಲುಗಳು ಉಳುವೆ ಮಾಡುತ್ತಿದ್ದ ಜಮೀನನ್ನು ಯಾವುದೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಂಬದಕೋಣೆ ಸರಕಾರಿ ಪದವಿ ಪೂರ್ವ ಕಾಲೇಜು ಇದರ ನೂತನ ಕಟ್ಟಡ ರಚನೆಗೆ ರೂ.೪೪ಲಕ್ಷದ ಕಾಮಗಾರಿಗೆ ರಾಜ್ಯ ಸಾರಿಗೆ ನಿಗಮ ಅಧ್ಯಕ್ಷರು, ಶಾಸಕ ಕೆ.ಗೋಪಾಲ ಪೂಜಾರಿ ಗುದ್ದಲಿ ಪೂಜೆಯನ್ನು ಗುರುವಾರ ನೇರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು ಕಂಬದಕೋಣೆ ಕಾಲೇಜಿನ ಶಿಕ್ಷಕರ ಪರಿಶ್ರಮದಿಂದಾಗಿ ಮಾದರಿಯಾಗಿ ಗುರುತಿಸಿಕೊಂಡಿದೆ. ಶಿಕ್ಷಕರ ಕಾರ‍್ಯವನ್ನು ಅಭಿನಂದಿಸುವುದಾಗಿ ತಿಳಿಸಿದರು. ಮಕ್ಕಳ ವಿದ್ಯಾಭಾಸದ ಕುರಿತು ಕಾಳಜಿವಹಿಸುವ ಸಲುವಾಗಿ ಮುಂದಿನ ದಿನಗಳಲಿ ಪ್ರತಿ ಶಾಲೆಗೆ ತೆರಳಿ ಶಾಲಾ ಎಸ್‌ಡಿಎಂಸಿ ಸದಸ್ಯರು ಹಾಗೂ ಹೆತ್ತವರೊಂದಿಗೆ ಸಮಾಲೋಚಿಸುವ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಶಾಲಾ ಮೈದಾನಕ್ಕೆ ಸುಮಾರು ೬ಲಕ್ಷ ವೆಚ್ಚದಲ್ಲಿ ಅಳವಡಿಸಿರುವ ಇಂಟರ್‌ಲಾಕ ವ್ಯವಸ್ಥೆಯನ್ನು ಶಾಸಕರು ಈ ಸಂದರ್ಭ ಉದ್ಘಾಟಿಸಿದರು. ಈ ಸಂದರ್ಭ ಜಿಲ್ಲಾ ಪಂ.ಸದಸ್ಯೆ ಗೌರಿ ದೇವಾಡಿಗ, ತಾ.ಪಂ.ಸದಸ್ಯ ಜಗದೀಶ ದೇವಾಡಿಗ, ಕಂಬದಕೋಣೆ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕಂಬದಕೋಣೆ ಗ್ರಾ.ಪಂ. ಅಧ್ಯಕ್ಷ ರಾಜೇಶ ದೇವಾಡಿಗ, ಕೆರ್ಗಾಲು ಗ್ರಾ.ಪಂ. ಅಧ್ಯಕ್ಷೆ ಸೋಮು, ಉಪಾಧ್ಯಕ್ಷ ಸುಂದರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯ ಆಶ್ರಯದಲ್ಲಿ ಸೆ.9ರಿಂದ 15ರವರೆಗೆ ನಡೆಯುವ ಜೇಸಿ ಸಪ್ತಾಹದ ಸಭಾಪತಿಯಾಗಿ ಕುಂದಾಪುರದ ಸಿವಿಲ್ ಇಂಜಿನಿಯರ್, ಬಿಲ್ಡಿಂಗ್ ಮತ್ತು ಇಂಟಿರಿಯರ್ ಡಿಸೈನ್ ಕನ್ಸಲ್ಟೆಂಟ್ ಗಣೇಶ್ ನಾಯಕ್ ಎಂ. ಆಯ್ಕೆಯಾಗಿದ್ದಾರೆ ಎಂದು ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಶ್ರೀಧರ ಸುವರ್ಣ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಾನವ ಹಕ್ಕುಗಳ ಕೋಶ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬಿ.ಎಸ್. ಸತೀಶ್ ಪೋಲೀಸ್ ನಿರೀಕ್ಷಕರು, ಉಡುಪಿ ಜಿಲ್ಲೆ ಅವರು ಮಾತನಾಡಿ ಭ್ರಷ್ಟಾಚಾರವೆಂಬ ನಕಾರಾತ್ಮಕ ಮನಸಿದ್ದಾಗ ಮಾತ್ರ ಭ್ರಷ್ಟಾಚಾರವೆಂಬುದು ನಡೆಯಲಿಕ್ಕೆ ಸಾಧ್ಯವಿದೆ. ನಮಗೆ ಕಾನೂನಿನ ಸಲಹೆ ಮತ್ತು ಅರಿವಿನ ಅಗತ್ಯತ ಬಹಳ ಇದೆ. ನಿಮ್ಮ ನಮ್ಮ ಊರುಗಳಲ್ಲಿ ನೀವೆ ಭ್ರಷ್ಟಾಚಾರವೆಂಬುದರ ನಿಗ್ರಹ ಕುರಿತಂತೆ ಅರಿವು ಮೂಡಿಸಬೇಕು. ಅದರ ನಿರ್ಮೂಲನೆಯಲ್ಲಿ ನಾವೆಲ್ಲರೂ ಕೈಜೋಡಿಸಬೇಕು. ಹಾಗಿದ್ದಾಗ ಮಾತ್ರ ನಿರ್ಮೂಲನೆ ಸಾಧ್ಯವಾಗಬಹುದು. ಪ್ರತಿಯೊಬ್ಬರೂ ತಾನೂ ಆಮಿಷಗಳನ್ನು ನೀಡಿ ಕೆಲೆಸ ಮಾಡಿಸಿಕೊಳ್ಳಬಾರದು ಎಂಬುದನ್ನು ಮನಗಾಣಬೇಕು. ಭ್ರಷ್ಟಾಚಾರವನ್ನುಬೇರು ಸಹಿತ ಕಿತ್ತೊಗೆಯಲು ಪಣತೊಡಬೇಕು. ಯಾರಾದರೂ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು ನಿಮ್ಮ್ ಗಮನಕ್ಕೆ ಬಂದಾಗ ಭ್ರಷ್ಟಾಚಾರ ನಿಗ್ರಹ ದಳದ ಗಮನಕ್ಕೆ ತರಬೇಕು. ಎಂದು ಎಂದ ಹೇಳಿದರು. ಭ್ರಷ್ಟಾಚಾರ ನಿಗ್ರಹ ದಳ ಉಡುಪಿ ಜಿಲ್ಲೆಯೆ ನಿರೀಕ್ಷಕರಾದ…

Read More