Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಮತ್ತು ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗೆ ಮಾರಕ ರೋಗ, ಏಡ್ಸ್ ಬಗ್ಗೆ ಅರಿವು ಮೂಡಿಸುವ ಬಗ್ಗೆ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕುಂದಾಪುರ ತಾಲೂಕು ಪಂಚಾಯತ್ ವಠಾರದಲ್ಲಿ ನಡೆದ ಒಂದು ಗಂಟೆಯ ಈ ಯಕ್ಷಗಾನ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಪ್ರಾಯೋಜಿಸಿದ್ದು, ಯಕ್ಷಗಾನವನ್ನು ಬೆಂಗಳೂರಿನ ಕಲಾದರ್ಶಿನಿ ತಂಡ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಅವರು ಈ ಪ್ರದರ್ಶನ ಸಾರ್ವಜನಿಕರಿಗೆ ಮಾರಕ ಕಾಯಿಲೆ ಏಡ್ಸ್ ಬಗ್ಗೆ ಅರಿವು ಮೂಡಿಸುವಲ್ಲಿ ತುಂಬಾ ಸಹಕಾರಿಯಾಗಿದೆ ಎಂದು ಕಲಾವಿದರಿಗೆ ಶುಭ ಹಾರೈಸಿದರು. ರೋಟರಿ ಸನ್‌ರೈಸ್ ಸದಸ್ಯರಾದ ಕೆ.ಎಚ್. ಚಂದ್ರಶೇಖರ, ಪ್ರಕಾಶಚಂದ್ರ ಹೆಗ್ಡೆ, ಅಬುಶೇಖ್ ಸಾಹೇಬ್, ರಾಜಶೇಖರ ಹೆಗ್ಡೆ, ಟಿ.ಎಂ. ಚಂದ್ರಶೇಖರ, ನಾಗರಾಜ ನಾಕ್, ಶಿವಾನಂದ ಎಂ.ಪಿ., ಡುಂಡಿರಾಜ್, ನಾಗೇಶ್ ನಾವುಡ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದಿನ ತಂತ್ರಜ್ಞಾನ ಯುಗದಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ತಮ್ಮದೇ ಆದ ವೆಬ್‌ಸೈಟ್‌ನ ಅಗತ್ಯತೆ ಇದ್ದು ಇದರಿಂದ ಶೈಕ್ಷಣಿಕ ಸಂಸ್ಥೆಗೆ, ವಿದ್ಯಾರ್ಥಿಗಳಿಗೆ ರಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಪ್ರಯೋಜನವಾಗಲಿದೆ ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್.ಬಿ.ನಾಯಕ್ ರವರು ಸ್ಥಳೀಯ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜಿನ ವೆಬ್ ಸೈಟ್ ಉದ್ಘಾಟಿಸಿ ಮಾತನಾಡಿದರು ಇನ್ನೋರ್ವ ಮುಖ್ಯ ಅತಿಥಿ ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನ ಖ್ಯಾತ ಮಕ್ಕಳ ತಜ್ಞ ಹಾಗೂ ೨೦೧೭ನೇ ಸಾಲಿಗೆ ಇಂಡಿಯನ್ ಪಿಡಿಯಾಟ್ರಿಕ್ಸ್ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಸಂತೋಷ ಟಿ ಸೋನ್ಸ್ ರವರು ಮಾತನಾಡುತ್ತಾ ಇಂದು ದೇಶದ ಮೂಲೆ ಮೂಲೆಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿರುವ ಯುವಕ ಯುವತಿಯರು ತಮ್ಮ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಕುಂದಾಪುರದವರು ಛಲಗಾರರು, ಬುದ್ಧಿವಂತರು, ಪ್ರಪಂಚದ ಬೇರೆ ಬೇರೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ನಾಗಾರಾಧನೆಯಿಂದ ನಮ್ಮ ಇಷ್ಟಾರ್ಥಗಳೆಲ್ಲವೂ ನೆರವೇರುತ್ತವೆ. ನಮಗೆ ಕಣ್ಣಿಗೆ ಕಾಣಸಿಗುವ ಪ್ರತ್ಯಕ್ಷ ದೇವರಾದ ನಾಗನನ್ನು ಭಕ್ತಿಶ್ರದ್ಧೆಯಿಂದ ಪೂಜಿಸಬೇಕು. ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳು ಪ್ರತಿನಿತ್ಯ ಶಾಸ್ತ್ರೋಕ್ತವಾಗಿ ನಡೆದರೆ ಊರಿನಲ್ಲಿ ಎಲ್ಲರೂ ಕ್ಷೇಮದಿಂದ ಇರಲು ಸಾಧ್ಯ ಮತ್ತು ಯಾವುದೇ ಕ್ಷಾಮವಿಲ್ಲದೆ ಎಲ್ಲರೂ ಸುಖದಿಂದ ಬಾಳಲು ಸಹಾಯಕವಾಗಲಿದೆ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿ ಅವರ ಶಿಷ್ಯ ಶ್ರೀ ವಿದುಶೇಖರ ಭಾರತೀ ಸ್ವಾಮೀಜಿ ಹೇಳಿದರು. ಅವರು ಗುಜ್ಜಾಡಿಯ ಬೆಣ್ಗೆರೆಯಲ್ಲಿರುವ ಶ್ರೀ ನಾಗ ದೇವಸ್ಥಾನಕ್ಕೆ ಚಿತ್ತೈಸಿ ಶ್ರೀದೇವರ ದರ್ಶನ ಪಡೆದು ಭಕ್ತರನ್ನು ಆಶೀರ್ವದಿಸಿ ಮಾತನಾಡಿದರು. ಶ್ರೀ ಶೃಂಗೇರಿ ಮಠಕ್ಕೂ ಬಾಡುಡಿ ಮೇಸ್ತ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಭಕ್ತರು ಪ್ರತಿವರ್ಷ ಮಠದ ಮಹಾಸ್ವಾಮಿಗಳು ದರ್ಶನ ಪಡೆದು ಸ್ವಾಮೀಜಿಯವರ ಅನುಗ್ರಹಕ್ಕೆ ಪ್ರಾಪ್ತರಾಗುತ್ತಿದ್ದು, ಶ್ರೀದೇವರ ಮತ್ತು ಗುರುಗಳ ಆಶೀರ್ವಾದದಿಂದ ಸಮಾಜ ಅಭಿವೃದ್ಧಿ ಹೊಂದಿ ಶ್ರೀದೇವರ ಸತ್ಕಾರ್ಯಗಳನ್ನು ನಿರಂತರವಾಗಿ ನಡೆಸುವಂತಾಗಲಿ ಎಂದು ಆಶೀರ್ವದಿಸಿದರು. ಇದೇ ಸಂದರ್ಭ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರುಗಿತು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ ಸಮಾರಂಭಕ್ಕೆ ಚಾಲನೆ ನೀಡಿದರು. ಹಸ್ತಪತ್ರಿಕೆ ಬಿಡುಗಡೆಗೊಳಿಸಿದ ಉದ್ಯಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಮತ್ತು ಆಸ್ಪತ್ರೆಯ ರೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ದಿಕ್ಸೂಚಿ ಭಾಷಣ ಮಾಡಿ, ಬಾಲ್ಯದಿಂದಲೇ ಮಕ್ಕಳಿಗೆ ಶಿಕ್ಷಣದ ಜೊತೆಗೆ ಅನಂತ ಕೌಶಲ್ಯಗಳನ್ನು ಕಲಿಸುವುದು ಕೂಡಾ ಭವಿಷ್ಯದ ಜೀವನಕ್ಕೆ ಸಹಕರಿಯಾಗುತ್ತದೆ. ಜೀವನದಲ್ಲಿ ಆಗಾಗ ಬರುತ್ತಿರುವ ಅವಕಾಶಗಳಿಂದ ಮಕ್ಕಳು ವಂಚಿತರಾಗದೇ ಕಠಿಣ ಪರಿಶ್ರಮ, ಸತತ ಪ್ರಯತ್ನಗಳಿಂದ ಮುನ್ನುಗ್ಗಿದಾಗ ಬೆಳಕು ಕಾಣಬಹುದು ಎಂದರು. ಸಾಂಸಾರಿಕ ವರ್ತನೆಯ ನಿರೀಕ್ಷೆಯಂತೆ ಮಕ್ಕಳನ್ನು ಬೆಳೆಸುವುದು ಸಾಮಾನ್ಯ ಸಂಗತಿಯಾದರೂ ಕೂಡಾ ಅವರಿಗೆ ಮೌಲ್ಯ, ನೈತಿಕತೆ, ಸಾಮಾಜಿಕ ಜ್ಞಾನ ಹಾಗೂ ಸೇವಾಮನೋಭಾವನೆಯ ಬಗ್ಗೆ ತಿಳಿಹೇಳಬೇಕು. ಇದು ನಮ್ಮ ನಡೆ-ನುಡಿಯ ಮೇಲೆ ಅವಲಂಬಿತವಾಗಿದ್ದು, ಮನೆಯಿಂದಲೇ ಈ ರೀತಿಯಾಗಿ ಕಲಿಕೆ ಪ್ರಾರಂಭಿಸಬೇಕು. ಯಾವುದೇ ವಿಚಾರವನ್ನು ನಾವು ಒಪ್ಪಿಕೊಂಡು ಗೌರವಿಸುತ್ತೇವೋ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯದಲ್ಲಿ ೨೦೧೨ರಿಂದ ಪಂಜರದಲ್ಲಿ ಮೀನು ಸಾಕಣಿಕೆ ನಡೆಯುತ್ತಿದ್ದು, ಕೃಷಿಕರು ಮೀನು ಸಾಕಣಿಕೆ ಹೆಚ್ಚಿನ ಒತ್ತನ್ನು ನೀಡಿ ಅದನ್ನು ಲಾಭದಾಯಕ ಉದ್ಯಮವಾಗಿ ಪರಿವರ್ತಿಸಿ ಎಂದು ಕರಾವಳಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಸಿ.ಕೆ. ಮೂರ್ತಿ ಹೇಳಿದರು. ಜಿಲ್ಲಾ ಪಂಚಾಯತ್ ಉಡುಪಿ ಮತ್ತು ಮೀನುಗಾರಿಕಾ ಇಲಾಖೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಉಪ್ಪುಂದ ನಾಡದೋಣಿ ಭನವದಲ್ಲಿ ನಡೆದ ಪಂಜರದಲ್ಲಿ ಮೀನು ಕೃಷಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ವರ್ಷ ದೇಶದಲ್ಲಿ ೩೩ ಸಾವಿರ ಕೋಟಿ ರೂ. ಸಿಗಡಿ ರಫ್ತು ಮಾಡಲಾಗಿದೆ, ಇದರಲ್ಲಿ ಸಿಂಹಪಾಲು ಉತ್ಪಾದನೆ ಆಂಧ್ರ, ಕೇರಳ ರಾಜ್ಯದಿಂದ ಆಗಿದ್ದು, ಸೌಲಭ್ಯ ಕೊರತೆಯಿಂದ ನಮಗೆ ಸ್ವಲ್ಪಮಟ್ಟಿಗೆ ಹಿನ್ನೆಡೆಯಾಯಿತು. ವೈಜ್ಞಾನಿಕ ಸಂಬಂಧದೊಂದಿಗೆ ಸೀಕೇಜ್ ಕೃಷಿ ಮಾಡಿ ಫಲಕಾರಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೂ ಸಿಗಡಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಪಂಜರದಲ್ಲಿ ಮೀನು ಸಾಕಣಿಕೆಗೆ ಕೇಂದ್ರ, ರಾಜ್ಯ ಹಾಗೂ ನ್ಯಾಷನಲ್ ಫೀಶರಿಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ನಿಟ್ಟೆ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ ೩೧೮೨ ಇದರ ಜಿಲ್ಲಾ ಮಟ್ಟದ ಕ್ರೀಡಾಕೂಟ ಸ್ಪೂರ್ತಿ ೨೦೧೬ರಲ್ಲಿ ಭಾಗವಹಿಸಿದ ರೋಟರಿ ಕ್ಲಬ್ ಕುಂದಾಪುರ ವಿವಿಧ ಸ್ಪರ್ಧೆಗಳಲ್ಲಿ ೨೩ ಪ್ರಥಮ, ೧೯ ದ್ವಿತೀಯ, ೧೧ ತೃತೀಯ ಸ್ಥಾನದೊಂದಿಗೆ ಅತೀ ಹೆಚ್ಚು ಪ್ರಶಸ್ತಿಯನ್ನು ಗಳಿಸಿ ಚಾಂಪಿಯನ್‌ಶಿಪ್ ಪಡೆದು ರೋಟರಿ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸಿದೆ. ಹುಡುಗರ ವಿಭಾಗದಲ್ಲಿ ಪ್ರಭಾವ್, ಹುಡುಗಿಯರ ವಿಭಾಗದಲ್ಲಿ ರೋಶನಿ, ಆನ್ಸ್ ಕಿರಿಯರ ವಿಭಾಗದಲ್ಲಿ ನಯನ ಕಿಶೋರ್, ಆನ್ಸ್ ಹಿರಿಯರ ವಿಭಾಗದಲ್ಲಿ ಗೀತಾಂಜಲಿ ಆರ್. ನಾಯ್ಕ್ ವೈಯಕ್ತಿಕ ಚಾಂಪಿಯನ್ ಪಡೆದುಕೊಂಡರು. ಆನ್ಸ್ ಹಿರಿಯರ ವಿಭಾಗದಲ್ಲಿ ೫೦ ಮೀ. ಓಟದಲ್ಲಿ, ಶಾಟ್‌ಪುಟ್, ಸ್ಟ್ಯಾಂಡಿಂಗ್ ಜಂಪ್‌ನಲ್ಲಿ ಗೀತಾಂಜಲಿ ಆರ್. ನಾಯ್ಕ್ ಪ್ರಥಮ, ಆನ್ಸ್ ಕಿರಿಯರ ವಿಭಾಗದಲ್ಲಿ ೧೦೦ ಮೀ. ಓಟದಲ್ಲಿ, ೨೦೦ ಮೀ. ಓಟದಲ್ಲಿ, ಲಾಂಗ್‌ಜಂಪ್‌ನಲ್ಲಿ ನಯನ ಕಿಶೋರ್ ಪ್ರಥಮ, ಕೇರಂ ಸಿಂಗಲ್ಸ್‌ನಲ್ಲಿ ಸುರೇಖಾ ಕಿಶೋರ್ ಪ್ರಥಮ, ಹುಡುಗಿಯರ ವಿಭಾಗದಲ್ಲಿ ಶಾಟ್‌ಪುಟ್, ಕೇರಂನಲ್ಲಿ…

Read More

ಶ್ರೀ ಪಡ್ರೆ ಅವರಿಗೆ ಕುಸುಮಾಶ್ರೀ ಪ್ರಶಸ್ತಿ. ಗಾಯನ ಸ್ವರ್ಧೆ ವಿಜೇತ ಪ್ರತಿಭೆಗಳಿಗೆ ಗಾನಕುಸುಮ ಪ್ರಶಸ್ತಿ. ಕುಂದಾಪ್ರ ಡಾಟ್ ಕಾಂ ವರದಿ. ಉದ್ಯಮದೊಂದಿಗಿನ ಸಾಮಾಜಿಕ ಬದ್ಧತೆ. ಬದ್ಧತೆಯಲ್ಲೊಂದು ಉತ್ಕಷ್ಟತೆ. ಇದು ಕಳೆದ ಹದಿನೇಳು ವರ್ಷದ ಹಿಂದೆ ಹುಟ್ಟಿಕೊಂಡ ನಾಗೂರಿನ ಕುಸುಮ ಸಮೂಹ ಸಂಸ್ಥೆಗಳಲ್ಲಿ ಕಾಣಬಹುದಾದ ವಿಶೇಷತೆ. ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ಕುಸುಮ ಸಮೂಹ ಸಂಸ್ಥೆಗಳು ಉತ್ಕೃಷ್ಟ ಹಾಗೂ ಶಿಸ್ತುಬದ್ಧ ವ್ಯವಹಾರ ಮೌಲ್ಯಗಳನ್ನು ಅಳವಡಿಸಕೊಂಡು ಸಂಸ್ಥೆಯ ಸಾಮಾಜಿಕ ಜವಾಬ್ದಾರಿಯನ್ನೂ ಮರೆಯದೇ ಶೈಕ್ಷಣಿಕ, ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಸಂಗೀತಾಸಕ್ತರಿಗಾಗಿ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾಂಸ್ಕೃತಿಕ ಕ್ಷೇತ್ರದಲ್ಲೂ ಛಾಪು ಮೂಡಿಸಿದ ಛಾತಿ ಸಂಸ್ಥೆಯದ್ದು. ಪರಿಸರದ ಪ್ರತಿಭೆಗಳಿಗೆ ಧ್ವನಿಯಾಗಬೇಕು ಎಂಬ ಸದುದ್ದೇಶದಿಂದ ಕುಸುಮ ಸಂಸ್ಥೆಯ ಹದಿನೈದನೇ ವರ್ಷದ ಸಂಭ್ರಮದೊಂದಿಗೆ ಆಯೋಜಿದ ‘ಕುಸುಮಾಂಜಲಿ’ ಸಾಂಸ್ಕೃತಿಕ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ಸ್ಫೂರ್ತಿಯನ್ನು ಮುಂದುವರಿಸಿಕೊಂಡು ಈ ಭಾರಿ ‘ಕುಸುಮಾಂಜಲಿ – 2016’ ಆಯೋಜಿಸಲಾಗಿದೆ. ಡಿ.11ರ ಸಂಜೆ ನಡೆಯಲಿರುವ ಕಾರ್ಯಕ್ರಮಕ್ಕೊಂದು ಗರಿ ಎಂಬಂತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತನ್ನ ಸೇವೆಗಳ ಮೂಲಕ ಜನಮನ ಗೆದ್ದಿರುವ ವಿಜಯಾ ಬ್ಯಾಂಕ್ ತನ್ನ ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಸೇವೆ, ಸೌಲಭ್ಯ ಸೇವೆಗಳನ್ನು ನೀಡುವ ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿದ್ದು, ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರ ರಾವ್ ವೈ. ಹೇಳಿದರು. ಖಂಬದಕೋಣೆಯ ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘದ ಸಮುದಾಯ ಭವನಕ್ಕೆ ಸ್ಥಳಾಂತರಗೊಂಡ ವಿಜಯಾ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವ ವಿಜಯಾ ಬ್ಯಾಂಕ್ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ್ಮತಾಳಿದ್ದು, ಬ್ಯಾಂಕಿನ ೨೫೬ನೇ ಶಾಖೆಯಾಗಿ ಖಂಬದಕೋಣೆಯಲ್ಲಿ ೧೯೭೪ರಲ್ಲಿ ಪ್ರಾರಂಭಿಸಲಾಯಿತು. ಈಗ ದೇಶಾದ್ಯಂತ ೧೯೯೫ ಶಾಖೆಗಳನ್ನು ಬ್ಯಾಂಕ್ ಹೊಂದಿದೆ. ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಅಲ್ಲದೇ ಹಿಂದೆ ಆರ್ಥಿಕ ವಿಪ್ಲವದ ಕಾಲಘಟ್ಟದಲ್ಲಿ ವಿಜಯಾ ಬ್ಯಾಂಕ್ ಸ್ಥಾಪಿಸುವುದರ ಮೂಲಕ ಹಣಕಾಸಿನ ವ್ಯವಹಾರದ ಪುನಃಶ್ಚೇತನಕ್ಕೆ ನಾಂದಿಯಾಗಿದ್ದ ಬ್ಯಾಂಕಿನ ಸಂಸ್ಥಾಪಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೀನುಗಾರರು ರಾಮಾಯಣದ ಕಾಲದಿಂದಲೂ ಶ್ರೀರಾಮನ ಅನನ್ಯ ಭಕ್ತರು ಎನ್ನುವುದಕ್ಕೆ ಅರಸ ಗುಹ ಸಾಕ್ಷಿ. ವನವಾಸಕ್ಕೆ ಹೊರಟ ಶ್ರೀರಾಮನನ್ನು ಮೀನುಗಾರರ ಅರಸನಾದ ಗುಹ ಬರಮಾಡಿಕೊಂಡು ತನ್ನ ರಾಜ್ಯವನ್ನು ಅವನಿಗೆ ಸಮರ್ಪಿಸಲು ಮುಂದಾದವ. ಅಂದಿನಿಂದ ಇಂದಿನ ವರೆಗೂ ಈ ಪರಂಪರೆ ಮುಂದುವರಿದಿರುವುದಕ್ಕೆ ಎಲ್ಲೆಡೆಯ ಮೀನುಗಾರರು ಶ್ರೀರಾಮನನ್ನು ಆರಾಧ್ಯ ದೇವರಾಗಿ ಸ್ವೀಕರಿಸಿರುವುದೇ ನಿದರ್ಶನ ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಯತಿ ಶ್ರೀ ವಿಧುಶೇಖರಾನಂದ ಸ್ವಾಮೀಜಿ ಹೇಳಿದರು. ಮರವಂತೆಯ ಮೀನುಗಾರರ ಶ್ರೀರಾಮ ಮಂದಿರಕ್ಕೆ ಸಂಜೆ ಆಗಮಿಸಿ, ಸಮುದಾಯದವರಿಂದ ಗುರುವಂದನೆ ಸ್ವೀಕರಿಸಿದ ಬಳಿಕ ಅವರು ಅನುಗ್ರಹ ಪ್ರವಚನಗೈದರು. ಶ್ರೀರಾಮ ಆದರ್ಶ ಪುರುಷನ ರೂಪದಲ್ಲಿ ಅವತಾರವೆತ್ತಿದ ಭಗವಂತ. ಮಾರಿಚನಂತಹ ರಕ್ಕಸ ಶ್ರೀರಾಮನನ್ನು ಧರ್ಮದ ಶರೀರ ರೂಪಿ ಎಂದು ವರ್ಣಿಸಿದ್ದ. ಶ್ರೀರಾಮ ನಾಮ ಉಚ್ಚಾರದಿಂದ ಸಕಲ ಪಾಪಗಳು ದೂರಾಗುತ್ತವೆ. ಅದು ಎಲ್ಲಕರ ಪಾಲಿನ ತಾರಕ ಮಂತ್ರ. ಕಷ್ಟ ಸಹಿಷ್ಣುಗಳಾದ ಮೀನುಗಾರರು ರಾಮಾರಾಧನೆಯ ಮೂಲಕ ಕಷ್ಟ ಪರಿಹರಿಸಿಕೊಳ್ಳುತ್ತಾರೆ, ಸಮೃದ್ಧಿ ಹೊಂದುತ್ತಾರೆ ಎಂದು ಅವರು ಹೇಳಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಸಿದ್ದಾಪುರ: ಕೆನರಾ ಬ್ಯಾಂಕ್‌ನ ಬೆಂಗಳೂರು ಕೇಂದ್ರ ಕಚೇರಿಯ ಜನರಲ್ ಮ್ಯಾನೇಜರ್ ರವೀಂದ್ರ ಭಂಡಾರಿ ಅವರ ಗ್ರಾಮೀಣ ಅಭಿವೃದ್ಧಿ ಹಾಗೂ ಸಾಮಾಜಿಕ ಸೇವೆಯನ್ನು ಗುತಿಸಿರುವ ಬೆಂಗಳೂರು ಹೆಬ್ಬಾಳದ ಆಲೂಮ್ನಿ ಅಸೋಸಿಯೇಶನ್ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸಾಯನ್ಸ್ ಇವರ ವತಿಯಿಂದ ೨೦೧೫-೧೬ನೇ ಸಾಲಿನ ವಿಶೇಷ ಅಲೂಮ್ನಿ ಅವಾರ್ಡ್‌ನ್ನು ನೀಡಿ ಗೌರವಿಸಿದೆ. ರವೀಂದ್ರ ಭಂಡಾರಿ ಅವರಿಗೆ ೨೦೧೫-೧೬ನೇ ಸಾಲಿನ ವಿಶೇಷ ಅಲೂಮ್ನಿ ಅವಾರ್ಡ್‌ನ್ನು ಕೇಂದ್ರ ಸಚಿವ ಸದಾನಂದ ಗೌಡ, ಹೆಬ್ಬಾಳ ಶಾಸಕ ನಾರಾಯಣ ಸ್ವಾಮಿ, ಉಪ ಕುಲಪತಿ ಶಿವಣ್ಣ ಹಾಗೂ ಮಾಜಿ ಉಪಕುಲಪತಿ ನಾರಾಯಣ ಗೌಡ ಅವರು ನೀಡಿ, ಗೌರವಿಸಿದ್ದಾರೆ. ಕೆನರಾ ಬ್ಯಾಂಕ್‌ನ ಬೆಂಗಳೂರು ಕೇಂದ್ರ ಕಚೇರಿಯ ಜನರಲ್ ಮ್ಯಾನೇಜರ್ ಆಗಿರುವ ರವೀಂದ್ರ ಭಂಡಾರಿ ಅವರು ಮೂಲತ ಕುಂದಾಪುರ ತಾಲೂಕಿನ ಹಾಲಾಡಿಯ ಜಿ. ರಾಜೀವ ಭಂಡಾರಿ ಹಾಗೂ ರುಕ್ಮೀಣಿ ಭಂಡಾರಿ ದಂಪತಿಗಳ ಪತ್ರರಾಗಿದ್ದಾರೆ. ಅಗ್ರಿಕಲ್ಚರಲ್ಲಿ ಬಿ.ಎಸ್‌ಸಿ ಮಾಡಿರುವ ರವೀಂದ್ರ ಭಂಡಾರಿ ಅವರು ೧೯೮೨ರಲ್ಲಿ ಕೆನರಾ ಬ್ಯಾಂಕಿಗೆ ಅಗ್ರಿಕಲ್ಚರಲ್ ಅಽಕಾರಿಯಾಗಿ ಸೇರ್ಪಡೆಗೊಂಡರು.…

Read More