Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲಾ ಸಹಕಾರ ಮಹಾಮಂಡಳದವರು ಜಿಲ್ಲೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಸಮೃದ್ದ ಭಾರತ ನಿರ್ಮಾಣದಲ್ಲಿ ಸಹಕಾರ ಚಳುವಳಿ ಮಾತ್ರವೇ ಪ್ರಧಾನ ಪಾತ್ರವನ್ನು ವಹಿಸಬಲ್ಲುದು’ ಎಂಬ ವಿಷಯದ ಕುರಿತು ನಡೆದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪಥಮ ಪಿ.ಯು.ಸಿ ವಿದ್ಯಾರ್ಥಿನಿ ವರ್ಷಾ ರವಿಶಂಕರ್ ಪ್ರಥಮ ಸ್ಥಾನ ಪಡೆದು ಕರ್ನಾಟಕ ಸಹಕಾರಮಹಾಮಂಡಳ ನಡೆಸುವ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು,ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಭಾರತಿ ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.ಮೂಡುಬಿದಿರೆ: ಆಧುನಿಕರಣದ ಭರಾಟೆಯಲ್ಲಿ ಹಲವು ಕುಂಚ ಕಲಾ ಪ್ರಕಾರಗಳು ಮಾಸಿಹೋಗುತ್ತಿವೆ. ಮಧುಬಾನಿ, ಗೊಂಡಾ, ವಾರ್ಲಿ, ಕಲಂಕಾರಿ ಹೀಗೆ ಅದೆಷ್ಟೊ ಚಿತ್ರಕಲಾ ಪ್ರಕಾರಗಳು ಕಾಣಸಿಗದಂತಾಗಿದೆ. ಇವತ್ತಿಗೂ ಕೂಡ ಇಂತಹ ಚಿತ್ರಕಲೆಯನ್ನೇ ಜೀವನೋಪಾಯವಾಗಿಸಿಕೊಂಡ ಕಲಾವಿದರು ಅಲ್ಲಲ್ಲಿ ಇದ್ದು, ಕಲಾಮೇಳದಲ್ಲಿ ಪಾರಂಪರಿಕ ಕಲಾಪ್ರಕಾರಗಳು ಅನಾವರಣಗೊಳ್ಳುತ್ತವೆ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದಲ್ಲಿ ಹಲವಾರು ಚಿತ್ರಕಲಾ ಪ್ರಕಾರಗಳಲ್ಲಿ ಪುರಾತನ ಕಾಲದ ವೈವಿಧ್ಯಮಯ ಚಿತ್ರಗಳೇ ಗಮನ ಸೆಳೆಯುತ್ತಿವೆ. ಅಂತಹವುಗಳಲ್ಲಿ ಬಿಹಾರಿ ಮೂಲದ ವಿಶಿಷ್ಟ ಕಲಾಪ್ರಕಾರದಲ್ಲಿ ಮಧುಬಾನಿಯೂ ಒಂದು. ಸೂಕ್ಷ್ಮ ಕುಸುರಿ ಚಿತ್ರಣ, ಪುರಾತನ ಶೈಲಿಯ ಸೊಗಡಿನಲ್ಲಿ ಮೂಡಿಬರುವ ನವಯುಗದ ಚಿತ್ರಣಗಳು ನಿಜಕ್ಕೂ ಮನಮೋಹಕ. ಸುಮಾರು ಹದಿನೈದು ವರ್ಷದಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಮಧುಬಾನಿ ಚಿತ್ರಕಲೆಯನ್ನು ಉಳಿಸಿ ಬೆಳೆಸುವಲ್ಲಿ ಬಿಹಾರದ ’ಸಂತೋಷ ಮಿಥಿಲಾ ಬೋಧನಾ ಕಲಾಕೇಂದ್ರ’ ಪ್ರಮುಖ ಪಾತ್ರವಹಿಸಿದೆ. ಸಂಪೂರ್ಣವಾಗಿ ಆರ್ಗಾನಿಕ್ ಮಾದರಿಯಲ್ಲಿ ಸಿದ್ಧವಾಗುವ ಈ ಮಧುಬಾನಿ ಚಿತ್ರಕಲಾ ಪ್ರಕಾರದಲ್ಲಿ ಮುಖ್ಯವಾಗಿ ಚಿತ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಕನ್ನಡ ಸೇರಿದಂತೆ ಭಾರತದ ಇತರ ಪ್ರಾದೇಶಿಕ ಭಾಷೆಗಳಲ್ಲಿ ನೀವು ಹರಿಕಥೆಯ ಸೊಗಡಿಗೆ ಸಾಕ್ಷಿಯಾಗಿರಬಹುದು. ಆದರೆ ಇಂಗ್ಲಿಷ್‌ನಲ್ಲಿ ಹರಿಕಥೆ ನಿರೂಪಿತವಾದರೆ ಹೇಗಿರುತ್ತದೆ? ಪರಭಾಷೆಯಲ್ಲಿ ನಮ್ಮದೇ ದೇಶದ ಪೌರಾಣಿಕ ಕಥೆಯ ಅಭಿವ್ಯಕ್ತಿ ಹೊಸ ಅನುಭವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿನ ಪ್ರೇಕ್ಷಕರಿಗೆ ದಾಟಿಕೊಂಡಿತು. ಬೆಂಗಳೂರಿನ ಶಾರ್ವರಿ ಅವರ ಧ್ವನಿಯಲ್ಲಿ ಅಭಿವ್ಯಕ್ತವಾದ ’ಪ್ರಹ್ಲಾದ ಚರಿತೆ’ ಹರಿಕಥೆಯು ಪ್ರಹ್ಲಾದನ ಭಕ್ತಿ ಮತ್ತು ಅವರ ತಂದೆಯ ನಡುವಿನ ಸಂಘರ್ಷದ ಕಥನವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಹಿಡಿದಿಟ್ಟಿತು. ಆರಂಭದಲ್ಲಿ ಕನ್ನಡ ಭಾಷೆಯಲ್ಲಿ ಪ್ರಹ್ಲಾದ ಮತ್ತು ಅವರ ತಂದೆ ಹಿರಣ್ಯಕಶ್ಯಪು ನಡುವಿನ ಸಂಘರ್ಷದ ವಿವಿಧ ಆಯಾಮಗಳನ್ನು ಶಾರ್ವರಿ ಪರಿಚಯಿಸಿದರು. ನಂತರ ಇಂಗ್ಲಿಷ್ ಭಾಷೆಯ ಮೂಲಕ ಪ್ರಹ್ಲಾದನ ಕಥನವನ್ನು ಸಂಕ್ಷಿಪ್ತವಾಗಿ ಅನಾವರಣಗೊಳಿಸಿದರು. ತಾಯಿಯ ಮೂಲಕ ಪ್ರಹ್ಲಾದನಿಗೆ ವಿಷ ನೀಡಿಸುವ ಪ್ರಸಂಗ ಮತ್ತು ವಿಷ್ಣು ಉಗ್ರನರಸಿಂಹಾವತಾರ ತಳೆದ ಸಂದರ್ಭವನ್ನು ಇಂಗ್ಲಿಷ್ ಭಾಷೆಯ ಮನೋಜ್ಞ ಶೈಲಿಯಲ್ಲಿ ನಿರೂಪಿಸಿದರು. ಕನ್ನಡದ ಭಾಷೆಯಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಇಲ್ಲಿನ ನುಡಿಸಿರಿ ವೇದಿಕೆಯಲ್ಲಿ ವಿದುಷಿ ಸುಪರ್ಣ ವೆಂಕಟೇಶ್ ತಂಡದ ಕಲಾವಿದರ ’ನಾಟ್ಯ ವೈವಿಧ್ಯ’ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಪ್ರೇಕ್ಷಕರನ್ನು ರಂಜಿಸಿತು. ಶುಭಾಶಯ ನಿವೇದನಾ ಪ್ರಾರ್ಥನೆಯ ’ಪುಷ್ಟಮಂಜರಿ’ ನೃತ್ಯದ ಮೂಲಕ ಕಲಾವಿದರು ಅಷ್ಟದಿಕ್ಪಾಲಕರನ್ನು ಪೂಜಿಸುವ ಆರಾಧನಾ ಭಂಗಿಗಳನ್ನು ಪ್ರದರ್ಶಿಸಿದರು. ಜರ್ಜರದೊಂದಿಗೆ ಪ್ರದರ್ಶಿತವಾದ ನೃತ್ಯವು ದೈವೀಪ್ರಾರ್ಥನೆಯ ಸಂಕಲ್ಪ ಮತ್ತು ಶ್ರದ್ಧಾಪೂರ್ವಕ ಸಮರ್ಪಣಾ ಭಾವವನ್ನು ಚಿತ್ರಿಸುವಲ್ಲಿ ಯಶಸ್ವಿಯಾಯಿತು. ‘ದುರ್ಗಾ ಕೌತ್ವಂ’ ನೃತ್ಯವು ಮಹಿಮಾನ್ವಿತ ದುರ್ಗೆಯ ಶಕ್ತಿ ಮತ್ತು ರೌದ್ರಾವತಾರವನ್ನು ಅನಾವರಣಗೊಳಿಸಿತು. ರಾಕ್ಷಸ ಸಂಹಾರಕ್ಕೂ ಮುನ್ನ ನಡೆಯುವ ಸಂಘರ್ಷದ ವೇಳೆ ದೇವಿ ತಾಳುವ ರೌದ್ರಾವತಾರದ ವಿರಾಟ್ ರೂಪ ಕಲಾವಿದರ ನಾಟ್ಯಕೌಶಲ್ಯದ ಮೂಲಕ ಮನವರಿಕೆಯಾಯಿತು. ವಿಷ್ಣುವಿನ ದಶಾವತಾರದ ಪರಿಕಲ್ಪನೆ ಆಧಾರಿತ ನೃತ್ಯರೂಪಕವು ಪ್ರೇಕ್ಷಕರನ್ನು ಪ್ರಭಾವಿಸಿತು. ವಿಷ್ಣುವಿನ ಒಂದೊಂದು ರೂಪವನ್ನು ಕಾಣಿಸುವಲ್ಲಿ ಕಲಾವಿದರು ಯಶಸ್ವಿಯಾದರು. ನಂತರ ಭರತನಾಟ್ಯದ ತಿಲ್ಲಾನ ನೃತ್ಯವು ಕಾರ‍್ಯಕ್ರಮದ ಮೆರುಗನ್ನು ಇಮ್ಮಡಿಗೊಳಿಸಿತು. ಬೆಂಗಳೂರಿನ ಸಾಯಿ ಡ್ಯಾನ್ಸ್ ಇಂಟರ್ ನ್ಯಾಷನಲ್ ನೃತ್ಯ ಕಲಾವಿದರಾದ ಆದಿತಿ ವಿ ರಾವ್,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಜಾತ್ರೆ, ಗದ್ದಲ, ಜನಜಂಗುಳಿ ಇವೆಲ್ಲದರ ನಡುವೆ ಕಿವಿಗೆ ಇಂಪಾದ ಮತ್ತು ಹುಮ್ಮಸ್ಸು ತುಂಬುವ ರಂಗಗೀತೆಗಳನ್ನು ಕೇಳುವ ಅವಕಾಶ ಶುಕ್ರವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಳ್ವಾಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ಕಲಾಪ್ರೇಕ್ಷಕರಿಗೆ ಲಭಿಸಿತ್ತು. ಮೂಡಬಿದರೆಯ ಆಳ್ವಾಸ್ ಆವರಣದ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ’ರಂಗಗೀತೆಗಳು’ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಹೆಗ್ಗೊಟ್ಟಾರ್ ಮತ್ತು ಬಳಗದ ಪ್ರದರ್ಶನ ನೆರೆದಿದ್ದವರನ್ನು ರಂಜಿಸಿತು. ಮೊದಲಿಗೆ ಹಯವದನ ನಾಟಕದ ಬಿ.ವಿ ಕಾರಂತರ ಸಂಯೋಜನೆಯ ’ಗಜವದನ ಹೇ ರಂಭಾ’ ಹಾಡಿನ ಮೂಲಕ ’ಪ್ರೇಕ್ಷಕರೇ ನಾಟಕದ ಮಾಲೀಕ’ ಎಂಬ ಸಂದೇಶವನ್ನು ಗೀತೆಯ ಮೂಲಕ ಜನರ ಮನಮುಟ್ಟಿಸಿದರು. ಹಾರ್ಮೋನಿಯಂ, ಖಂಜೀರಾ, ತಬಲ, ಡೋಲಕ್, ಗೆಜ್ಜೆ, ತಾಳ ಹೀಗೆ ಹಲವಾರು ವಾದನಗಳ ಮಿಳಿತ ನೆರೆದಿದ್ದ ಪ್ರೇಕ್ಷಕರ ಗಮನವನ್ನು ವೇದಿಕೆಯ ಮೇಲಿರುವವರ ಮೇಲೆ ಸೆಳೆಯುವಂತೆ ಮಾಡಿದರು. ಜಾನಪದ ಗೀತೆಗಳಿಗೆ ಭದ್ರ ಬುನಾದಿಯಾಗಿರುವ ರಂಗಭೂಮಿಯಲ್ಲಿ ಇನ್ನೂ ಹಲವಾರು ಜಾನಪದ ಗೀತೆಗಳು ಅನುರಣಿಸುತ್ತಿದೆ, ಅಂತಹದ್ದೇ ಒಂದು ರಂಗಗೀತೆಯಾದ ’ಗೋವಿಂದ ಮುರಹರ ಗೋವಿಂದ’ ಗೀತೆ ಪ್ರೇಕ್ಷಕರನ್ನು ಭಕ್ತಿವರವಶರನ್ನಾಗಿಸಿತು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ವಿಜ್ಞಾನವೆಂಬುದು ಹಲವು ಕೌತುಕಗಳ ಆಗರ. ಭಾರತ ಸರ್ಕಾರದ ರಾಷ್ಟೀಯ ವಿಜ್ಞಾನ ವಸ್ತು ಸಂಗ್ರಾಹಾಲಯಗಳ ಪರಿಷತ್ತು ಮತ್ತು ಸಂಸ್ಕೃತಿ ಸಚಿವಾಲಯದ ಅಂಗ ಸಂಸ್ಥೆಯಾದ ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯವು ವಿಜ್ಞಾನದ ಹಲವು ಪ್ರಯೋಗಗಳ ಮತ್ತು ಕೆಲವು ಪ್ರಸಿದ್ಧ ವಿಜ್ಞಾನಿಗಳ ನಿಯಮಗಳ ಕುರಿತಾದ ವಿವಿಧ ಮಾದರಿ ಮತ್ತು ಮಾಹಿತಿಗಳನ್ನು ಒಳಗೊಂಡ ’ಸಂಚಾರಿ ವಿಜ್ಞಾನ ಬಸ್’ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಜಾಂಬೂರಿ ಉತ್ಸವದಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆಕರ್ಷಿಸುತ್ತಿದೆ. ‘ಸಂಚಾರಿ ವಿಜ್ಞಾನ ಬಸ್’ನಲ್ಲಿ ವಿಜ್ಞಾನಗಳ ಕುರಿತಾದ ಸರಣಿ ಮತ್ತು ಸಮನಾಂತರ ಧಾರಕಗಳು, ಕೈ ವಿದ್ಯುತ್ ಕೋಶಗಳು, ನೇರ ವಿದ್ಯುತ್ ಮತ್ತು ಪರ್ಯಾಯ ವಿದ್ಯುತ್, ಸೇತುವೆಯ ಸಮತೋಲನಗಳು, ಆರ್ಸ್ಟೆಡ್‌ನ ಪ್ರಯೋಗ, ಅಯಸ್ಕಾಂತೀಯ ಗುಣಗಳು ಮತ್ತು ಉಷ್ಣತೆ, ಕೆಪಾಸಿಟರ್, ಸರಣಿ ಮತ್ತು ಸಮನಾಂತರ ಧಾರಕಗಳು, ಫ್ಲೆಮಿಂಗನ ಎಡಗೈ ನಿಯಮ, ಡಿ.ಸಿ. ಮೋಟಾರ್, ಸೋಮಾರಿ ಗೋಳ, ಬಲ್ಬಿನ ವಿವಿಧ ವಿಧಗಳು, ಕಿರುವಿದ್ಯುತ್ ಮಂಡಲ ತಡೆ, ವಿದ್ಯುತ್ ಜನರೇಟರ್,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಅಲ್ಲಿ ದ್ರೌಪದಿಗೆ ಕೃಷ್ಣ ವಸ್ತ್ರ ನೀಡಿದಂತೆ ಮುಗಿಯದಷ್ಟು ವಸ್ತ್ರವನ್ನು ಖಾಲೀ ಡಬ್ಬಿಯಿಂದ ಹೊರತೆಗೆಯುತ್ತಿದ್ದರು. ಬಿಳಿಯ ಬಣ್ಣದ ರಿಂಗ್ ಹಸಿರಾಗಿತ್ತು. ಹಸಿರು ರಿಂಗ್ ಮತ್ತೆ ಬಿಳಿಯಾಯ್ತು. ನೋಡನೋಡುತ್ತಿದ್ದಂತೆ ರಿಂಗ್ ಮಾಯವಾಗಿ ಗಾಳಿಯಲ್ಲಿ ತೇಲುವ ಮಂತ್ರದಂಡವಾಯ್ತು. ಇಂತಹದ್ದೊಂದು ಮಾಯಾಲೋಕ ಸೃಷ್ಟಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತರಾಷ್ಟ್ರೀಯ ಸಾಂಸ್ಕೃತಿಕ ಮೇಳದ ?ಜಾಂಬೂರಿ ಜಾದು? ಎನ್ನುವ ವಿಶೇಷ ಕಾರ್ಯಕ್ರಮ. ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಗಣೇಶ್ ಕುದ್ರೋಳಿ ನೇತೃತ್ವದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯ ತನಕ 18 ಜಾದೂಗಾರರಿಂದ 6 ವೇದಿಕೆಗಳಲ್ಲಿ ನಡೆಯುತ್ತಿರುವ ಮ್ಯಾಜಿಕ್ ಶೋ ಜಾಂಬೂರಿಯ ಮೆರುಗನ್ನು ಹೆಚ್ಚಿಸಿದೆ. ಕಳೆದ ಎರಡು ದಿನಗಳಿಂದ ಕುದ್ರೋಳಿ ಗಣೇಶ್, ತಮಿಳುನಾಡಿನ ಮೆಜಿಷಿಯನ್ ಮಹಾ, ಪ್ರಹ್ಲಾದಾಚಾರ್ಯ, ಕೇರಳದ ಸಚಿನ್ ತಮ್ಮ ಜಾದೂ ಕೌಶಲ್ಯದಿಂದ ಜನಮನ ರಂಜಿಸಿದ್ದಾರೆ. ನವದೆಹಲಿಯ ರಾಜ್‌ಕುಮಾರ್, ಕೇರಳದ ಎಂ.ಪಿ. ಹಾಶಿಮ್, ಬೆಂಗಳೂರಿನ ವೇಣುಗೋಪಾಲ್, ಕೇಶವ್ ಸೇರಿದಂತೆ ಭಾರತದ ಮೂಲೆ ಮೂಲೆಗಳಿಂದ ಆಗಮಿಸಿರುವ ಪ್ರಖ್ಯಾತ ಜಾದುಗಾರರು ಏಕಕಾಲದಲ್ಲಿ ದಿನಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿಕ್ಷಣ ಜ್ಞಾನ ಸಂಸ್ಥೆಯ ವತಿಯಿಂದ ಕೊಡ ಮಾಡುವ ಈ ಬಾರಿಯ ರಾಜ್ಯ ಮಟ್ಟದ ಶಿಕ್ಷಣ ಜ್ಞಾನ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಉಡುಪಿ ಜಿಲ್ಲೆಯಿಂದ ಕಾಲೇಜು, ಪ್ರೌಢಶಾಲೆ, ಪ್ರಾಥಮಿಕ, ಪೂರ್ವ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕ್ರಮವಾಗಿ ತೆಂಕನಿಡಿಯೂರು ಕಾಲೇಜಿನ ಕನ್ನಡ ಉಪನ್ಯಾಸಕ, ಪ್ರಾಂಶುಪಾಲ ವಿಶ್ವನಾಥ ಎನ್. ಕರಬ, ಕುಂದಾಪುರ ವಲಯದ ಕೋಡಿ ಬ್ಯಾರಿಸ್ ಸಂಸ್ಥೆಯ ಮುಖ್ಯೋಪಾಧ್ಯಾಯ ಜಯಶೀಲ ಶೆಟ್ಟಿ, ಬೈಂದೂರು ವಲಯದ ಆಲೂರು-ಕಳಿಯ ಶ್ರೀಮತಿ ಜಿ. ಹೆಗಡೆ ಬ್ರಹ್ಮಾವರ ವಲಯದ ಮುಂಡಾಡಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಜ್ಯೋತಿ ಶೆಟ್ಟಿ ಆಯ್ಕೆಯಾಗಿದ್ದರು. ಹೊಸದುರ್ಗದಲ್ಲಿ ಇತ್ತಿಚಿಗೆ ನಡೆದ ರಾಜ್ಯ ಶೈಕ್ಷಣಿಕ ಸಮಾವೇಶದಲ್ಲಿ ಈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಅಲ್ಲಿ ಹಳೆಯ ಪುಸ್ತಕಗಳಿದ್ದವು. ಹೊಸ ಕೃತಿಗಳ ಸಂಗ್ರಹವೂ ಇತ್ತು. ಕೃತಿಗಳತ್ತ ಕಣ್ಣು ಹಾಯಿಸಿ ಸಾಗುವವರು, ಹಾಗೆ ಸಾಗುತ್ತಲೇ ಇಷ್ಟವಾದ ಪುಸ್ತಕವನ್ನು ಕೈಗೆತ್ತಿಕೊಳ್ಳುವವರೂ ಇದ್ದರು. ಮಕ್ಕಳು, ಯುವಕರು, ಮಧ್ಯವಯಸ್ಕರು ಮತ್ತು ವಯೋವೃದ್ಧರು ಪುಸ್ತಕ ಪ್ರೀತಿಯೊಂದಿಗೆ ಅಲ್ಲಿದ್ದರು. ಸಾಹಿತ್ಯ, ಧರ್ಮ ಆಧ್ಯಾತ್ಮ, ಸಂಸ್ಕೃತಿ ಸೇರಿದಂತೆ ವಿವಿಧ ಬಗೆಯ ಕೃತಿಗಳ ರಾಶಿ ಎದ್ದುಕಾಣುತ್ತಿತ್ತು. ಮೂಡುಬಿದಿರೆಯ ಆಳ್ವಾಸ್ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022ರ ಪ್ರಯುಕ್ತ ಆಯೋಜಿತವಾದ ಪುಸ್ತಕ ಮೇಳದ ವಿಶೇಷ ಚಿತ್ರಣವಿದು. ಇಲ್ಲಿ 10ಕ್ಕೂ ಹೆಚ್ಚು ಪುಸ್ತಕದ ಸ್ಟಾಲ್‌ಗಳಿದ್ದು ಪುಸ್ತಕ ಓದುಗರನ್ನು ಸೆಳೆಯುತ್ತಿವೆ. ಹಳೆಯ ಪುಸ್ತಕಗಳನ್ನು ನೋಡುವ ಕುತೂಹಲದೊಂದಿಗೆ ಹಲವರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ತಮ್ಮಿಷ್ಟದ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಪುಸ್ತಕಗಳು ಬಂದಿದ್ದರೆ ಖರೀದಿಸುವ ಇರಾದೆಯೊಂದಿಗೆ ಭಾಗವಹಿಸುವವರೂ ಇದ್ದಾರೆ. ಧರ್ಮ-ಆಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳ ಸ್ಟಾಲ್‌ಗಳಲ್ಲಿ ಹಿರಿಯರು ಕಾಣಿಸಿಕೊಂಡರೆ ಎಲ್ಲಾ ಬಗೆಯ ಪುಸ್ತಕಗಳು ಲಭ್ಯವಿರುವ ಸ್ಟಾಲ್‌ಗಳ ಕಡೆಗೆ ಎಲ್ಲಾ ವಯೋಮಾನದವರು ಧಾವಿಸುತ್ತಿದ್ದಾರೆ. ಸಪ್ನಾ ಬುಕ್ ಹೌಸ್,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ನೀವು ಬೆಣ್ಣೆ ದೋಸೆ, ಮಸಾಲ ದೋಸೆ, ಈರುಳ್ಳಿ ದೋಸೆ ಸೇರಿದಂತೆ ಮನೆಯಲ್ಲಿ ಮಾಡುವ ಎಲ್ಲಾ ದೋಸೆಯ ರುಚಿ ಸವಿದಿರುತ್ತೀರಿ. ಆದ್ರೆ ಈ ದೋಸೆಯಲ್ಲಿ 99 ಪ್ರಕಾರಗಳಿರೋದು ನಿಮಗೆ ಗೊತ್ತಾ? ಹೀಗೆ 99 ಬಗೆಯ ದೋಸೆ ತಯಾರಿಸುವ ಈ ಸ್ಟಾಲ್ ಇಡೀ ಆಹಾರಮೇಳದಲ್ಲಿ ಎಲ್ಲರನ್ನೂ ಸೆಳೆಯುತ್ತಿದೆ. ಸಾರ್ವಜನಿಕರು ಪ್ರತಿದಿನ ಈ ಸ್ಟಾಲ್‌ಗೆ ಭೇಟಿ ನೀಡಿ ತರಹೇವಾರಿ ದೋಸೆಗಳ ರುಚಿಯನ್ನು ಹಲವರು ಸವಿಯುತ್ತಿದ್ದಾರೆ. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸ್ಕೌಟ್ಸ್ ಮತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಆಹಾರ ಮೇಳದಲ್ಲಿ ಕಾರ್ಕಳದ ಕಿರಣ್ ಶೆಟ್ಟಿ ಇಷ್ಟೊಂದು ಬಗೆಯ ದೋಸೆಗಳನ್ನು ಸಿದ್ಧಪಡಿಸಿ ಕೊಡುತ್ತಿದ್ದಾರೆ. ಜನರಿಗೆ ವಿಭಿನ್ನ ರುಚಿಯ ದೋಸೆಗಳನ್ನ ಪರಿಚಯಿಸುವ ಉದ್ದೇಶದಿಂದ ಆಹಾರ ಮೇಳದಲ್ಲಿ ಭಾಗಿಯಾಗಿದ್ದಾರೆ ಅವರು. ಅವರು ಕಣ್ಣೆದುರಿಗೇ ಸಿದ್ಧಪಡಿಸಿಕೊಡುವ ಪಿಜ್ಜಾ ದೋಸೆ, ಚೀಸ್ ದೋಸೆ, ಪನ್ನೀರ್ ಚೀಸ್ ದೋಸೆ ಎಲ್ಲರ ಫೇವರಿಟ್ ಎನ್ನಿಸಿವೆ. ಜನರಿಗೆ ಸಾಮಾನ್ಯವಾಗಿ ಹೊರಗಿನ ಆಹಾರ ತಿನ್ನಲು ರಾಸಾಯನಿಕಗಳ ಬಳಕೆಯಾಗಿರಬಹುದು ಎನ್ನುವ…

Read More