ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಜನತಾ ಕಾಲೋನಿ ನಿವಾಸಿ ಸುಮನ ಖಾರ್ವಿ ಅವರ ಮನೆಯಲ್ಲಿ ಸೆಲ್ಕೋ ಸೋಲಾರ್ ವತಿಯಿಂದ ಅಳವಡಿಸಲಾಗಿರುವ ಹೊಲಿಗೆ ಯಂತ್ರವನ್ನು ಕರ್ಣಾಟಕ ಬ್ಯಾಂಕ್ ತ್ರಾಸಿ ಶಾಖೆಯ ಪ್ರಬಂಧಕ ಅಮರನಾಥ ಪಿ. ಭಂಡಾರಿ ಬುಧವಾರ ಉದ್ಘಾಟಿಸಿದರು. ಹೊಲಿಗೆ ಯಂತ್ರ ಖರೀದಿಗೆ ತ್ರಾಸಿ ಕರ್ಣಾಟಕ ಬ್ಯಾಂಕ್ ಆರ್ಥಿಕ ಸಹಾಯವನ್ನು ನೀಡಿದೆ ಅಲ್ಲದೆ ಜಿ.ಐ.ಝೆಡ್ ಸಂಸ್ಥೆಯು ಶೇ.೨೫ ಸಬ್ಸಿಡಿ ಅನುದಾನ ನೀಡಿದೆ. ಸೆಲ್ಕೋ ಸಂಸ್ಥೆಯ ಏರಿಯಾ ಮ್ಯಾನೇಜರ್ ಶೇಖರ್ ಶೆಟ್ಟಿ, ಶಾಖಾ ಪ್ರಬಂಧಕ ಮಂಜುನಾಥ್, ಎಕ್ಸಿಕ್ಯೂಟಿಯಾದ ಮಂಜುನಾಥ್ ಬಿ. ಶೆಟ್ಟಿ ಮತ್ತು ಶಾಂತ ಖಾರ್ವಿ ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಉಪ್ಪುಂದ ಶಾಲೆಯಲ್ಲಿ ಪೋಷಕರಲ್ಲದವರು ಎಸ್ಡಿಎಂಸಿ ಅಧ್ಯಕ್ಷರಾಗಿದ್ದು ಕಾನೂನು ಬಾಹಿರ – ನವೀನಚಂದ್ರ ಉಪ್ಪುಂದ ಆರೋಪ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೊಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಶೆಟ್ಟಿ ಬೆಳಗೋಡು ಅನಾರೋಗ್ಯದಿಂದ ಸೋಮವಾರ ನಿಧನರಾದರು. ಕ್ರೀಡಾ ಕಮೆಂಟರಿಗಳ ಮೂಲಕ ಪ್ರಸಿದ್ಧರಾಗಿದ್ದ ಪ್ರಕಾಶ್ ಶೆಟ್ಟಿ ಅವರು ವಾಲಿಬಾಲ್ ಆಟದ ಕಮೆಂಟರಿಗೆ ಕುಳಿತರೆಂದರೆ ಸ್ಟೇಡಿಯಂ ಸ್ಥಭ್ದವಾಗುತ್ತಿತ್ತು. ಅವರು ಹಲವಾರು ಕ್ರೀಡೋತ್ಸವಗಳನ್ನೂ ಸಂಘಟಿಸಿ ಯಶಸ್ವಿಯಾಗಿದ್ದರು. ಸ್ವತಃ ಕಲಾವಿದರಾಗಿದ್ದ ಪ್ರಕಾಶ್ ಶೆಟ್ಟಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನೂ, ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಿ ಏಕಪಾತ್ರಾಭಿನಯದ ಮೂಲಕ ಪ್ರಸಿದ್ಧರಾಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚಿಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಕುಮಟಾ ಮಾತನಾಡಿ ಕನ್ನಡ ಭಾಷೆ ಬಳಕೆ ಹಾಗೂ ಕನ್ನಡ ಸಂಸ್ಕೃತಿ ಉಳಿಸುವ ಅತ್ಯಾದ್ಬುತ ಕೆಲಸ ಯಕ್ಷಗಾನ ರಂಗದಿಂದ ಆಗುತ್ತಿದೆ. ಭಾರತೀಯ ಪಾರಂಪರಿಕ, ಸಂದೇಶ ಯುವಕರಿಗೆ ಯಕ್ಷಗಾನ ಕೊಡುತ್ತಿದೆ. ಯಕ್ಷಗಾನ ಕೇವಲ ಕರಾವಳಿ ಕಲೆಯಲ್ಲ ಇಡೀ ಕರ್ನಾಟಕದ ಕಲೆಯಾಗಿದೆ ಎಂದರು. ಸಾವಿರ ಕುಟುಂಬಗಳಿಗೆ ಯಕ್ಷಗಾನ ಕಲೆ ಅನ್ನ ಕೊಡುವುದಷ್ಟೇ ಅಲ್ಲದೆ ಮಾತು ಕಲಿಸುವ ಕಲೆಯಾಗಿದೆ. ವೇಷಭೂಷಣ, ಭಾಷೆ, ನೃತ್ಯ, ಹಿಮ್ಮಳೆ, ಹಾಡುಗಾರಿಕೆ ಎಲ್ಲಾವನ್ನೂ ಒಳಗೊಂಡ ಕಲೆ ವಿಶ್ವದಲ್ಲಿ ಒಂದಿದೆ ಎಂದರೆ ಅದು ಯಕ್ಷಗಾನ ಕಲೆಯಲ್ಲಿ ಮಾತ್ರ ಎಂದು ಅಭಿಪ್ರಾಯಪಟ್ಟರು. ರಾಜ್ಯ ಹಿಂದುಳಿದ ವರ್ಗಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರಶಸ್ತಿ ಪುರಸ್ಕೃತರಾದ ಪಟ್ಲ ಸತೀಶ್ ಶೆಟ್ಟಿ,ಕೃಷ್ಣ…
ಬೈಂದೂರು: ಬೈಂದೂರಿನ ಹೆಸರಾದ ಮೊಬೈಲ್ ಮಾರಾಟ ಸಂಸ್ಥೆಯಾದ ‘ಪ್ರೀತಿ ಮೊಬೈಲ್ಸ್’ನಲ್ಲಿ ಸ್ಮಾರ್ಟ್ ಪೋನ್ ಫೆಸ್ಟ್ ಭಾಗವಾಗಿ ಗ್ರಾಹರಿಗೆ ವಿವಿಧ ಖಚಿತ ಬಹುಮಾನಗಳನ್ನು ನೀಡಲಾಗುತ್ತಿದೆ. ಸೆಪ್ಟಂಬರ್ 10ರಿಂದ ಆರಂಭಗೊಂಡಿರುವ ಸ್ಮಾರ್ಟ್ ಪೋನ್ ಫೆಸ್ಟ್ ಜನವರಿ 10ರ ತನಕ ಮುಂದವರಿಯಲಿದ್ದು ಪ್ರತಿ ಮೊಬೈಲ್ ಖರೀದಿಯ ಮೇಲೆಯೂ ವಿಶೇಷ ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಟಿವಿಎಸ್ ಜ್ಯೂಪಿಟರ್, ಎಲ್.ಇ.ಡಿ ಟಿವಿ, ಸ್ಮಾರ್ಟ್ ವಾಚ್, ಏರ್ ಪೋಡ್, ಸೇರಿದಂತೆ ಹತ್ತಾರು ಬಹುಮಾನಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿಪ್ರೀತಿ ಮೊಬೈಲ್ಸ್ ಬೈಂದೂರುಪಂಚಾಯತ್ ಕಟ್ಟಡ, ಪೊಲೀಸ್ ಸ್ಟೇಷನ್ ಎದುರುಗಡೆ ಬೈಂದೂರುಮೊಬೈಲ್ – 8861087889
ಬೈಂದೂರು ಜ್ಯೂನಿಯರ್ ಕಾಲೇಜು ಆತಿಥ್ಯದಲ್ಲಿ ಅಚ್ಚುಕಟ್ಟು ಕಾರ್ಯಕ್ರಮ ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಸೆ.12: ಕ್ರೀಡೆಯಲ್ಲಿ ಸೋಲು ಗೆಲುವಿನ ಲೆಕ್ಕಾಚಾರಕ್ಕಿಂತ ಕ್ರೀಡಾ ಸ್ಪೂರ್ತಿ ಮುಖ್ಯವಾದುದು. ಗೆದ್ದರೆ ಸಂತೋಷ ಪಡುವ ಸೋತರೆ ಮುಂದಿನ ಗೆಲುವಿಗೆ ತಯಾರಿ ನಡೆಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಿದೆ ಎಂದು ಉಡುಪಿ ಅರಣ್ಯ ಸಂಚಾರಿದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ. ಹೇಳಿದರು. ಅವರು ಕ್ಷೇತ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಹಭಾಗಿತ್ವದಲ್ಲಿ ಬೈಂದೂರು ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಖೋ ಖೋ ಪಂದ್ಯಾಟದಲ್ಲಿ ಕಲ್ಪಪುಪ್ಪವನ್ನರಳಿಸಿ ಶುಭಹಾರೈಸಿದರು. ಬೈಂದೂರು ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಎಸ್ಡಿಎಂಸಿ ಅಧ್ಯಕ್ಷ ಗಣಪ ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಜಿಪಂ ಮಾಜಿ ಸದಸ್ಯರುಗಳಾದ ಬಾಬು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೆಂಗಳೂರು ಯಲಹಂಕ ಬಳಿ ಭಾನುವಾರ ಸಂಭವಿಸಿದ ಸ್ಕೂಟಿ ಹಾಗೂ ಟ್ಯಾಂಕರ್ ನಡುವಿನ ಅಪಘಾತದಲ್ಲಿ ಬೈಂದೂರು ತಾಲೂಕು ಹೊಸ್ಕೋಟೆ ನಿವಾಸಿ ಮಹಿಳೆ ಮೃತಪಟ್ಟಿದ್ದಾರೆ. ಹೊಸ್ಕೋಟೆ ಬೊಳ್ಳುಗುಡ್ಡೆ ನಿವಾಸಿ ಪ್ರೇಮ ಪೂಜಾರಿ (35) ಮೃತಪಟ್ಟ ದುರ್ದೈವಿ. ಕಳೆದ ಎರಡು ವರ್ಷದಿಂದ ಬೆಂಗಳೂರು ಅಂಚೆ ಕಚೇರಿಯಲ್ಲಿ ಪ್ರೇಮಾ ಪೂಜಾರಿ ಸೇವೆ ಸಲ್ಲಿಸುತ್ತಿದ್ದು, ಪತಿ ಜೊತೆ ತೆರಳುತ್ತಿದ್ದಾಗ ಅಪಘಾತದಲ್ಲಿ ಪ್ರೇಮಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸೋಮವಾರ ಬೊಳ್ಳುಗುಡ್ಡೆಯಲ್ಲಿ ಅಂತ್ಯಕ್ರಿಯೆ ನಡೆದಿದೆ. ಮೃತರು ಪತಿ, ಇಬ್ಬರು ಮಕ್ಕಳ ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶರ್ಮದಾ ನೀಟ್ನಲ್ಲಿ ಶೇ.99.12 (613) ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾಳೆ. ಬೈಂದೂರು ಯಡ್ತರೆ ನಿವಾಸಿಯಾದ ಶರ್ಮದಾ, ದ್ವಿತೀಯ ಪಿಯುಸಿಯಲ್ಲಿಯೂ ರ್ಯಾಂಕ್ನೊಂದಿಗೆ ತೇರ್ಗಡೆಯಾಗಿದ್ದಳು. ಈಕೆ ಎಸ್ಸಿಡಿಸಿಸಿ ಬ್ಯಾಂಕ್ ಬೈಂದೂರು ವಲಯ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ ಹಾಗೂ ಶಾಂತಲಾ ದಂಪತಿಗಳ ಪುತ್ರಿ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಯಡ್ತರೆ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿಯನ್ನು ಶನಿವಾರ ಬಿಲ್ಲವ ಸಂಘದ ಭವನದಲ್ಲಿ ಆಚರಿಸಲಾಯಿತು. ಈ ಸಂದರ್ಭ ಸಂಘದ ಬಿಲ್ಲವ ಸಂಘದ ಅಧ್ಯಕ್ಷರಾದ ದೊಟ್ಟಯ್ಯ ಪೂಜಾರಿ, ಗೌರವ ಸಲಹೆಗಾರರಾದ ಮುತ್ತಯ್ಯ ಪೂಜಾರಿ ಕಳವಾಡಿ, ಸಂಘದ ಹಿರಿಯರಾದ ರಾಮ ಪೂಜಾರಿ ಹಾಗೂ ಸಂಘದ ಕಾರ್ಯದರ್ಶಿ ಕಿಶೋರ್ ಸಸಿಹಿತ್ಲು, ಸಂಘದ ಪದಾಧಿಕಾರಿಗಳು ಗಣೇಶ್ ಪೂಜಾರಿ, ಚಂದ್ರ ಪೂಜಾರಿ, ಮಂಜುನಾಥ ತಗ್ಗರ್ಸೆ, ಕೃಷ್ಣ ಬಾಳಿತ್ಲು ಹಾಗೂ ಘಟಕ ಪ್ರತಿನಿಧಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾದರು. ಇದನ್ನೂ ಓದಿ:► ಕುಂದಾಪುರ: ತಾಲೂಕು ಆಡಳಿತದಿಂದ ಗುರು ಅವರ 168ನೇ ಜಯಂತಿ ಆಚರಣೆ – https://kundapraa.com/?p=62019 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಉಪ್ಪುಂದ ಕಂಚಿಕಾನು ನಿವಾಸಿ ಮಂಜುನಾಥ ದೇವಾಡಿಗ ಭಾಗವಹಿಸಿ, ಮೈಸೂರಿನಲ್ಲಿ ನಡೆಯಲಿರುವ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 100ಮೀ ಓಟದಲ್ಲಿ ದ್ವಿತೀಯ ಹಾಗೂ 200ಮೀ ಓಟದಲ್ಲಿ ತೃತೀಯ ಬಹುಮಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವ ಮಂಜುನಾಥ್, ಬೈಂದೂರು ನೇಷನ್ ಲವರ್ಸ್ ಸಂಸ್ಥೆಯ ಸದಸ್ಯನಾಗಿದ್ದಾನೆ. ಈತ ಕಂಚಿಕಾನು ಪರಮೇಶ್ವರ ದೇವಾಡಿಗ ಹಾಗೂ ಚಿಕ್ಕು ದಂಪತಿಗಳ ಪುತ್ರ.
