ಪ.ಜಾ. ವಧು-ವರರ ಮುಖಾಮುಖಿ ಕಾರ್ಯಕ್ರಮ ಉದ್ಘಾಟನೆ

Call us

Call us

Call us

ಕುಂದಾಪುರ: ದಲಿತರು ಸಮಾಜದ ಮುಖ್ಯವಾಹಿನಿಗೆ ಬರಲು ಹಿಂಜರಿಯಬಾರದು. ಶಿಕ್ಷಣದಿಂದ ಸುಶಿಕ್ಷಿತರಾಗಿ, ಸಕ್ರಿಯ ಚಟುವಟಿಕೆಗಳಲ್ಲಿ ಸಂಘಟಿತರಾಗಿ ಸಮುದಾಯದ ಮುನ್ನಡೆಗೆ ಜನಪರ ಕೊಡುಗೆಗಳನ್ನು ನೀಡಲು ದಲಿತರು ಮುಂದೆ ಬರಬೇಕು. ಸಮುದಾಯದ ಸಹಾಯದಿಂದ ಉನ್ನತ ಸ್ಥಾನಮಾನ ಪಡೆದವರು ತಮ್ಮ ಸಮಾಜದ ಕಷ್ಟ-ಸುಖ, ನೋವು-ನಲಿವುಗಳಿಗೆ ಸ್ಪಂದಿಸುವ ಚಿಂತನೆ ನಡೆಸಬೇಕು. ವಧು-ವರರ ವೇದಿಕೆ ದಲಿತ ಸಮುದಾಯದ ವೈವಾಹಿಕ ಬಾಂಧವ್ಯಗಳಿಗೆ ಸೇತುವಾಗಿ ಸಮಾಜಮುಖಿ ಕಾರ್ಯ ಕೈಗೊಳ್ಳುವಂತಾದರೆ ಸಾರ್ಥಕತೆ ಸಾಧ್ಯ ಎಂದು ಕುಂದಾಪುರ ಪುರಸಭಾಧ್ಯಕ್ಷೆ ಕಲಾವತಿ ಯು. ಎಸ್. ಅವರು ಹೇಳಿದರು.

Call us

Click Here

ಮೇಲ್‌ಗಂಗೊಳ್ಳಿಯ ಡಾ. ಬಿ. ಆರ್. ಅಂಬೇಡ್ಕರ್ ಯುವಕ ಮಂಡಲ ಪೋಷಿತ ಪರಿಶಿಷ್ಟ ಜಾತಿ ವಧು-ವರರ ವೇದಿಕೆ ಆಶ್ರಯದಲ್ಲಿ ಕುಂದಾಪುರದ ಅಂಬೇಡ್ಕರ್ ಸಭಾಭವನದಲ್ಲಿ ರವಿವಾರ ಜರಗಿದ ಪರಿಶಿಷ್ಟ ಜಾತಿ ವಧು-ವರರ ಮುಖಾಮುಖಿ-2016 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯತ್ ಸದಸ್ಯ ಅನಂತ ಮೊವಾಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಮುಖಿ ಕಾರ್ಯದಲ್ಲಿ ದಲಿತ ಸಮುದಾಯ ಕೈಜೋಡಿಸಬೇಕು. ದಲಿತರ ವೈವಾಹಿಕ ಬಾಂಧವ್ಯಗಳಿಗೆ ಕೊಂಡಿಯಾಗಿ ವೇದಿಕೆ ಉತ್ತಮ ಕಾರ್ಯ ನಿರ್ವಹಿಸಲಿ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿ ಬಂಟ್ವಾಳ ಎಲ್‌ಐಸಿ ಆಡಳಿತಾದಿಕಾರಿ ಸುರೇಶ್ ಎಚ್. ಜಿ., ಪಡುಬಿದ್ರೆ ತಾಲೂಕು ಪಂಚಾಯತ್ ಸದಸ್ಯ ಭಾಸ್ಕರ ಪಡುಬಿದ್ರೆ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ, ದಸಂಸ ಕುಂದಾಪುರ ತಾಲೂಕು ಸಂಘಟನಾ ಕಾರ್ಯದರ್ಶಿ ಮಹೇಶ್ ಜಿ. ಕೆ., ವೇದಿಕೆಯ ಖಜಾಂಚಿ ಅರುಣಕುಮಾರ, ಸತೀಶ್ ಗಂಗೊಳ್ಳಿ, ಲಕ್ಷ್ಮಣ ಬೈಂದೂರು, ಉಮೇಶ್ ಮೊವಾಡಿ, ವೆಂಕಟ ಉಪ್ಪಿನಕುದ್ರು, ಅರುಣ ಹಕ್ಲಾಡಿ, ರಘುರಾಮ ಕೋಟೆಬಾಗಿಲು, ಅಶೋಕ್ ಎನ್. ಡಿ., ಪ್ರೇಮಾನಂದ ಕೆ., ಸುಭಾಶ್ ತಲ್ಲೂರು-ಗುಡ್ಡೆಅಂಗಡಿ ಮೊದಲಾದವರು ಉಪಸ್ಥಿತರಿದ್ದರು. ವೇದಿಕೆಯ ಅಧ್ಯಕ್ಷ ಮೋಹನ ಅದ್ಯಪಾಡಿ ಅವರು ಸ್ವಾಗತಿಸಿದರು. ಸಂಜೀವ ಹೊಸಾಡು ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶೀನ ಕಾವ್ರಾಡಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಭಾಸ್ಕರ ಎಚ್. ಜಿ. ಅವರು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಧು-ವರರ ಮುಖಾಮುಖಿ ನಡೆಯಿತು.

Leave a Reply