ಕುಂದಾಪುರ: ಸಂತ್ ಪಿಯುಸ್ ದೇವಾಲಯ ಪಿಯುಸ್ ನಗರ್ ಇದರ ತೆರಾಲಿ ಹಬ್ಬ ಹಾಗೂ ಭಾರತಿಯ ಕೆಥೋಲಿಕ ಯುವ ಸಂಚಾಲನ ಪಿಯುಸ್ ನಗರ ಇದರ 46ನೇ ವಾರ್ಷಿಕೋತ್ಸವ ಸಮಾರಂಭ ಪಿಯುಸ್ ನಗರ ಇಗರ್ಜಿ ವಠಾರದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪಿಯುಸ್ ನಗರ ಇಗರ್ಜಿಯ ಧರ್ಮ ಗುರುಗಳಾದ ಜೋನ್ ಆಲ್ಪ್ರೆಡ್ ಒರ್ಬೊಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ವಲಯದ ವಿಗಾರ್ವಾರ್ ಅನಿಲ್ ಡಿಸೋಜ,ಸಾಸ್ತಾನ ಇಗರ್ಜಿಯ ಧರ್ಮಗುರುಗಳಾದ ಜೋನ್ ವಾಲ್ಟರ್ ಮೆಂಡೊನ್ಸಾ,ತಾಲೂಕು ಪಂಚಾಯತ್ ಸದಸ್ಸರಾದ ಮಂಜು ಬಿಲ್ಲವ, ಬಿಲಾಲ್ ಜುಮ್ಮಾ ಮಸ್ಜಿದ್ ಎಮ್.ಕೋಡಿ ಇದರ ಅಧ್ಯಕ್ಷರಾದ ಮಹಮದ್ ಅಲಿ ಸಾಹೇಬ್ ,ಸೆಂಟ್ ಆನ್ಸ್ ಕಾನ್ವೆಂಟ್ ಇದರ ಸುಫಿರಿಯರ್ ಸಿಸ್ಟರ್ ಲೋರೆನ್ಸಾ ,ಹಂಗಳೂರು ಗ್ರಾಮ ಪಂಚಾಯತ್ ಉಪಾಧ್ಯಾಕ್ಷರಾದ ಸ್ಟಿವನ್ ಡಿ’ಕೋಸ್ತಾ,ಪಾಲನಾ ಮಂಡಳಿ ಉಪಾಧ್ಯಾಕ್ಷರಾದ ವಿಲ್ಪ್ರೆಡ್ ಡಿ’ಸೋಜಾ ,ಪಾಲನಾ ಮಂಡಳಿ ಕಾರ್ಯದರ್ಶಿ ಲೀನಾ ತಾವ್ರೊ ಸಂಸ್ಧೆಯ ಸಲಹೆಗಾರರಾದ ಜೇಮ್ಸ್ ಡಿ’ಮೆಲ್ಲೊ ವೇದಿಕೆಯಲ್ಲಿ ಉಪಸ್ದಿತರಿದ್ದರು .
ಇದೇ ಸಂದರ್ಭದಲ್ಲಿ ಸಮಾಜಸೇವಕ ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡೇವಿಡ್.ವಿ ಸಿಕ್ಟೇರಾ, ಹಾಗೂ ವಾಲಿಬಾಲ್ ಆಟಗಾರ ಅನೂಪ್ ಡಿಕೋಸ್ಟಾ ಅವರನ್ನು ಸಸ್ಮಾನಿಸಲಾಯಿತು. ಸಂಸ್ದೆಯ ಅಧ್ಯಕ್ಷರಾದ ಉಲ್ಲಾಸ್ ಡಿ’ಮೆಲ್ಲೊ ಸ್ವಾಗತಿಸಿ,ಡ್ರೀಮಾ ಡಿ’ಸೋಜ ಕಾರ್ಯಕ್ರಮ ನಿರೂಪಿಸಿ , ಗ್ಲೀಮಾ ಡಿ’ಸೋಜ ವಂದಿಸಿದರು