ಕೇಂದ್ರ ಸರಕಾರದ ಕಾರ್ಮಿಕ ವಿರೋಧ ನೀತಿ ವಿರೋಧಿಸಿ ಪ್ರತಿಕೃತಿ ದಹನ

Call us

Call us

Call us

ಕುಂದಾಪುರ: ಬಣ್ಣದ ಮಾತುಗಳನ್ನಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರಕಾರವು ಯುಪಿಎ ಸರಕಾರ ಅವಧಿಯಲ್ಲಿನ ಜನವಿರೋಧಿ ನೀತಿಗಳನ್ನೇ ಮುಂದುವರಿಸುತ್ತಿದೆ ಎಂದು ಸಿಐಟಿಯು ತಾಲೂಕು ಸಮಿತಿಯ ಅಧ್ಯಕ್ಷ ಎಚ್. ನರಸಿಂಹ ಹೇಳಿದರು.

Call us

Click Here

ಅವರು ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಕುಂದಾಪುರ ಸಿಐಟಿಯು ತಾಲೂಕು ಸಮಿತಿಯ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಕಾರ್ಮಿಕ ಕಾನೂನನ್ನು ತಿದ್ದುಪಡಿ ಮಾಡಿ ಮಾಲಿಕರ ಪರವಾದ ನೀತಿಗಳನ್ನು ಜಾರಿಗೆ ತರುವುದನ್ನು ಹಾಗೂ ಪಿ.ಎಫ್, ಇ.ಪಿ.ಎಫ್ ಹಾಗೂ ಇ.ಎಸ್.ಐಗಳನ್ನು ಕಾರ್ಮಿಕರಿಂದ ಕಸಿಯುವ ಷಡ್ಯಂತ್ರವನ್ನು ಸಿಐಟಿಯು ವಿರೋಧಿಸುತ್ತದೆ. ವಿದೇಶದಿಂದ ಕಪ್ಪುಹಣವನ್ನು ತರುವುದಾಗಿ ಹೇಳಿದ ಸರಕಾರ ಇಂದು ನಮ್ಮ ಖಾತೆಯಿಂದಯೇ ಹಣ ವಸೂಲಿ ಮಾಡುವ ಹುನ್ನಾರ ಮಾಡುತ್ತದೆ ಎಂದವರು ಆರೋಪಿಸಿದರು.

ಕೇಂದ್ರ ಸರಕಾರದ ಪ್ರತಿಕೃತಿಯನ್ನು ದಹಿಸಿ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಪೋಷಣೆ ಕೂಗಲಾಯಿತು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ್, ಸಿಐಟಿಯು ಪ್ರಮುಖರಾದ ವೆಂಕಟೇಶ ಕೋಣಿ, ಸುರೇಶ್ ಕಲ್ಲಾಗರ್, ಮಹಾಬಲ ವಡೇರಹೊಬಳಿ ಮೊದಲಾದವರು ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

Leave a Reply