ಹಂಗಳೂರಿನ ಶ್ರೀ ಚಿಕ್ಕ ಮಹಾಲಿಂಗೇಶ್ವರ ಪ್ರತಿಷ್ಠಾ ಮಹೋತ್ಸವ

Call us

Call us

Call us

ಕುಂದಾಪುರ: ನಮಗೆ ಯಾವುದೇ ಕಷ್ಟ ಬಂದರು ದೇವರ ಮೊರೆಹೋಗಿ ಅವನ ಮೇಲೆ ಭಾರ ಹೇರುತ್ತೇವೆ. ಭಗವಂತನ ಮೇಲೆ ಹೊಣೆ ಹಾಕಿ ನಾವು ಶಾಂತಿಯಿಂದ ನೆಮ್ಮದಿಯಿಂದ ಇರುತ್ತೇವೆ. ಇದಕ್ಕೆಲ ದೇವರ ಮೇಲೆ ಇರುವ ದೃಢವಾದ ನಂಬಿಕೆಯೇ ಕಾರಣ. ಎಲ್ಲರಿಗೂ ದೇವರು ಸದ್ಗತಿಯನ್ನು ಕರುಣಿಸಲಿ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆಯವರು ಹೇಳಿದರು.

Call us

Click Here

ಅವರು ಹಂಗಳೂರಿನ ಶ್ರೀ ಚಿಕ್ಕ ಮಹಾಲಿಂಗೇಶ್ವರ ಹಾಗೂ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಎ.ಎಸ್‌.ಎನ್‌.ಹೆಬ್ಟಾರ್‌ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ನಿವೃತ್ತ ವಿಜಯ ಬ್ಯಾಂಕ್‌ ಉದ್ಯೋಗಿ ನಡೂರು ಸದಾನಂದ ಶೆಟ್ಟಿ, ಲಕ್ಷ್ಮಣ ಶೇರಿಗಾರ ಹಂಗಳೂರು, ದೇವಸ್ಥಾನದ ಅರ್ಚಕ ಸೂರ್ಯನಾರಾಯಣ ಐತಾಳ್‌, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ಆರ್‌.ನಾಯ್ಕ, ಗೀತಾಂಜಲಿ ಕೆ.ಆರ್‌. ನಾಯ್ಕ ಉಪಸ್ಥಿತರಿದ್ದರು. ವಕ್ವಾಡಿ ರಂಜಿತ್‌ಕುಮಾರ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗುರುರಾಜ್‌ ಗಾಣಿಗ ವಂದಿಸಿದರು.

Leave a Reply