ಲಯನ್ಸ್ ಅಧ್ಯಕ್ಷರಾಗಿ ಇಬ್ರಾಹಿಂ ಸಾಹೇಬ್ ಕೋಟ

Call us

Call us

Call us

ಕುಂದಾಪುರ: ಲಯನ್ಸ್ ಕ್ಲಬ್, ಹಂಗಳೂರಿನ 2015-16ನೇ ಸಾಲಿನ  ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಸಾಹೇಬ್ ಕೋಟ ಆಯ್ಕೆಯಾಗಿದ್ದಾರೆ. ಕುಂದಾಪುರ ಹಾಗೂ ಬ್ರಹ್ಮಾವರದಲ್ಲಿ ಕಾರ್ಯಾಚರಿಸುತ್ತಿರುವ ಪ್ಲೆಸೆಂಟ್ ಪೀಠೋಪಕರಣ ಮಳಿಗೆಯ ಪಾಲುದಾರರಾದ ಇವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಮಾಯಿತುಲ್ ಫಲಾಹ್‌ನ ಅಧ್ಯಕ್ಷರಾಗಿ, ಅಲ್ಪಸಂಖ್ಯಾತರ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದು, ಜುಮ್ಮಾ ಮಸೀದಿ ಕೋಟದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಹಂಗಳೂರಿನ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಎಚ್. ಬಾಲಕೃಷ್ಣ ಶೆಟ್ಟಿ, ಖಜಾಂಚಿಯಾಗಿ ಸ್ಟ್ಯಾನಿ ಡಿ’ಮೆಲ್ಲೊ ಆಯ್ಕೆಯಾದರು.

Call us

Click Here

ಲಯನ್ಸ್ ಕ್ಲಬ್, ಹಂಗಳೂರಿನ 2015-16ನೇ ಸಾಲಿನ  ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂನ್. 13ರಂದು ರಾತ್ರಿ ೭.೩೦ಕ್ಕೆ ಕುಂದಾಪುರದ ಹೋಟೆಲ್  ಶರೋನ್ ಸಭಾಂಗಣದಲ್ಲಿ ನಡೆಯಲಿದೆ.

Leave a Reply