ಹರೆಗೋಡು ರೈತ ಮಹಿಳೆಯರಿಗೆ ನಾಟಿ ಸ್ಪರ್ಧೆ

Call us

Call us

Call us

ಕುಂದಾಪುರ: ಇಲ್ಲಿನ ರೋಟರಿ ಕ್ಲಬ್ ಮಿಡ್‌ಟೌನ್, ರೋಟರ‍್ಯಾಕ್ಟ್ ಕ್ಲಬ್ ಸೆಂಟ್ರಲ್ ಕುಂದಾಪುರ ಹಾಗೂ ಸ್ಥಳೀಯ ಮಹಾವಿಷ್ಣು ಯುವಕ ಮಂಡಲ ರಿ. ಹರೆಗೋಡು ಇವರ ಸಹಕಾರದೊಂದಿಗೆ ಕಟ್‌ಬೇಲ್ತೂರು ಹರೆಗೋಡಿನಲ್ಲಿ ರೈತ ಮಹಿಳೆಯರಿಗೆ ನಾಟಿ ಸ್ಪರ್ಧೆ ನಡೆಯಿತು.

Call us

Click Here

ಕುಂದಾಪುರ ರೋಟರಿ ಮಿಡ್ ಟೌನ್ ಕ್ಲಬ್‌ನ ಅಧ್ಯಕ್ಷರಾದ ಮಹೇಶ್ ಬೆಟ್ಟಿನ್ ರೈತರಿಗೆ ಕೃಷಿ ಪರಿಕರ ವಿತರಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಬಹುಮಾನ ವಿತರಿಸಿ ಮಾತನಾಡಿ, ಕೃಷಿಯನ್ನು ಉಳಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರಕಾರವು ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರೂ ಕೃಷಿಕರು ಅತ್ಮಹತ್ಯೆ ಮಾಡಿಕೊಳ್ಳತ್ತಿರುವುದು ತುಂಬಾ ಬೇಸರದ ಸಂಗತಿ. ಕೃಷಿಕರಿಗೆ ಪ್ರೋತ್ಸಾಹ ನೀಡಿ ಅವರ ಬದುಕನ್ನು ಹಸನಾಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹರೆಗೋಡು ಮಹಾವಿಷ್ಣು ಯುವಕ ಮಂಡಲದ ಗೌರವಾಧ್ಯಕ್ಷರಾದ ರಾಘವೇಂದ್ರ ನಾವಡ, ಮಿಡ್‌ಟೌನ ರೋಟರಿಯ ಕಾರ್ಯದರ್ಶಿ ರವಿಶ್ಚಂದ್ರ ಶೆಟ್ಟಿ, ರೋಟರ‍್ಯಾಕ್ಟ್ ಅಧ್ಯಕ್ಷ ಅಜಯ್ ಭಂಡರಕಾರ್, ಮಹಾವಿಷ್ಣು ಯುವಕ ಮಂಡಲದ ಅಧ್ಯಕ್ಷ ರವೀಶ್ ಡಿ. ಎಚ್., ರೋಟರ‍್ಯಾಕ್ಟ್ ಕ್ಲಬ್‌ನ ರವೀಂದ್ರ, ಸ್ಥಳೀಯ ಕೃಷಿಕರಾದ ನರಸಿಂಹ ಗಾಣಿಗ, ಕೊಗ್ಗ ಗಾಣಿಗ, ವೆಂಕಟರಾಮಣ್ಣ ಗಾಣಿಗ, ರವಿ ಪೂಜಾರಿ ಮೊದಲಾದವುರು ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ತುಂಗ ಪೂಜಾರಿಯ ತಂಡ, ರಾಧ ಪೂಜಾರಿಯವರ ತಂಡ ಹಾಗೂ ಮೂಕಾಂಬಿಕಾ ಗಾಣಿಗ ತಂಡ ನಾಟಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಪ್ರಸಾದ ಆಚಾರ್ಯ ಸ್ವಾಗತಿಸಿ, ಸಂಜು ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ಸಂದೀಪ ವಂದಿಸಿದರು.

Leave a Reply