ವಂಡಾರು ಗೇರುಬೀಜ ಕಾರ್ಖಾನೆ ಮಾಲಿಕನಿಂದ ನೌಕರನಿಗೆ ಹಲ್ಲೆ: ಪ್ರಕರಣ ದಾಖಲು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮಾಡದಿರುವ ತಪ್ಪನ್ನು ಒಪ್ಪಿಕೊಳ್ಳುವಂತೆ ಬೆದರಿಕೆಯೊಡ್ಡಿ ಹಲ್ಲೆಗೈದ ಘಟನೆಯೊಂದು ಬ್ರಹ್ಮಾವರ ತಾಲೂಕು ವಂಡಾರು ಗ್ರಾಮದ ಬಿಲ್ಲಾಡಿ ಶ್ರೀಕೃಷ್ಣ ಪ್ರಸಾದ ಗೇರುಬೀಜ ಕಾರ್ಖಾನೆಯಲ್ಲಿ ಬುಧವಾರ ನಡೆದಿದೆ. ಕಾರ್ಖಾನೆಯ ಮಾಲಿಕ ಸಂಪತ್ ಕುಮಾರ್ ಶೆಟ್ಟಿ ಎಂಬಾತ ಅಲ್ಲಿಯೇ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ವಿಜಯ (25) ಎಂಬ ವ್ಯಕ್ತಿಯನ್ನು ಅಮಾನುಷವಾಗಿ ತಳಿಸಿದ್ದು, ಗಾಯಗೊಂಡ ವಿಜಯ ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Call us

Click Here

ಗುಂಡ್ಮಿ ಯಕ್ಷಿಮಠದ ನಿವಾಸಿಯಾದ ವಿಜಯ ಪೂಜಾರಿ ಎಂಬುವವರು ಕೆಲ ಸಮಯದಿಂದ ವಂಡಾರುವಿನ ಶ್ರೀ ಕೃಷ್ಣ ಪ್ರಸಾದ ಗೇರು ಬೀಜ ಕಾರ್ಖಾನೆಯಲ್ಲಿ ಟಿಕ್ನೀಶಿಯನ್ ಆಗಿ ಕೆಲಸ ಮಾಡಿಕೊಂಡಿದ್ದರು. ಅ.16ರಂದು ಅಲ್ಲಿನ ಕೆಲಸಗಾರನೋರ್ವ ಗೇರು ಬೀಜಗಳನ್ನು ಕಟ್ಟಿಂಗ್ ಮೆಶೀನ್’ಗೆ ಹಾಕುವಾಗ ದೊಡ್ಡ ಮೆಶೀನ್ಗೆ ಬದಲಾಗಿ ಸಣ್ಣ ಮೆಶೀನ್ಗೆ ಹಾಕಿದ್ದಾನೆ. ಇದರಿಂದ ಹೆದರಿದ ಆ ನೌಕರ ಕಾರ್ಖಾನೆ ಕಡೆಗೆ ಬಂದಿರಲಿಲ್ಲ. ಆದರೆ ಘಟನೆಯಿಂದಾಗಿ ಕೋಪಗೊಂಡಿದ್ದ ಮಾಲಿಕ ಸಂಪತ್ ಶೆಟ್ಟಿ, ಅ.18ರ ಬೆಳಿಗ್ಗೆ ಗೇರು ಬೀಜ ಕಾರ್ಖಾನೆಯ ಒಳಗಡೆ ವಿಜಯ್ ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಂದು ಏಕಾಏಕಿ ಹಲ್ಲೆ ನಡೆಸಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆ ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರೂ ಕೇಳದೇ ಹಲ್ಲೆ ನಡೆಸಿದ್ದಾರೆ.

ನಂತರ ಪುನ ಕ್ಯಾಬಿನ್ಗೆ ಎಳೆದುಕೊಂಡು ಹೋಗಿ ಅಲ್ಲಿ ಪುನ ಹಲ್ಲೆ ಮಾಡಿ ಗೇರು ಬೀಜ ಕಟ್ಟಿಂಗ್ ಮಾಡುವಾಗ ನೀನೇ ತಪ್ಪು ಮಾಡಿರುವುದು ಎಂದು ಒಪ್ಪಿಕೊಳ್ಳುವಂತೆ ಬೆದರಿಕೆಯೊಡ್ಡಿದ್ದಾನೆ. ಈ ಬಗ್ಗೆ ಕಂಪ್ಲೆಂಟ್ ಕೊಟ್ಟರೆ ನಿನ್ನನು ಉಳಿಯಲು ಬಿಡುವುದಿಲ್ಲ ರೇಪ್ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿ, ವಿಜಯ್ ಬಳಿಯಿಂದ ಮೊಬೈಲ್ ಪೋನ್ ಹಾಗೂ ನಗದು ಹಣ ಹಾಗೂ ಬೈಕ್ ಕೀ ಕಿತ್ತುಕೊಂಡು ಹೊರಕ್ಕೆ ಕಳುಹಿಸಿದ್ದಾನೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply