ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ 2025ರ ಮೇನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಶಿರೂರಿನ ನಾಗೇಂದ್ರ ಕಾಮತ್ ಉತ್ತೀರ್ಣರಾಗಿರುತ್ತಾರೆ.
ಉಡುಪಿಯ ತ್ರಿಷಾ ವಿದ್ಯಾ ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನು ಪಡೆದಿರುವ ಇವರು, ಕುಂದಾಪುರದ ವಿಶ್ವಾಸ್ ಕಾಮತ್ ಎಂಡ್ ಕೋ ಅವರಲ್ಲಿ ಆರ್ಟಿಕಲ್ಶಿಪ್ ಪಡೆದಿರುತ್ತಾರೆ. ಇವರು ಶಿರೂರಿನ ಅಶ್ವಿನಿ ಹಾಗೂ ಅಶೋಕ ಕಾಮತ್ ರವರ ಪುತ್ರರಾಗಿರುತ್ತಾರೆ.










