ಬೈಂದೂರು: ಹೈಸ್ಕೂಲ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Call us

Call us

Call us

ಬೈಂದೂರು: ಸಮೀಪದ ಶಿರೂರು ಕೋಣನಮಕ್ಕಿ ನಿವಾಸಿಯಾಗಿರುವ ವಿದ್ಯಾರ್ಥಿಯೊಬ್ಬ ತನ್ನ ಮನೆಯ ಸಮೀಪದ ಅಕೇಶಿಯಾ ಪ್ಲಾಂಟಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ. ರತ್ತೂಬಾಯಿ ಜನತಾ ಪ್ರೌಢಶಾಲೆಯ 9ನೇ ತರಗತಿಯಲ್ಲಿ ಕಲಿಯುತ್ತಿದ್ದ ಶಶಾಂಕ್ (15) ಮೃತ ವಿದ್ಯಾರ್ಥಿ.

Call us

Click Here

ಕೋಣನಮಕ್ಕಿ ನಿವಾಸಿ ಈಶ್ವರ ಎಂಬುವವರ ಮಗನಾದ ಶಶಾಂಕ್ ಪ್ರತಿನಿತ್ಯ ಬೆಳಿಗ್ಗೆ ವಾಕಿಂಗ್ ಗೆ ತೆರಳುವ ಅಭ್ಯಾಸ ಹೊಂದಿದ್ದ ಎನ್ನಲಾಗಿದೆ. ಇಂದು ಬೆಳಿಗ್ಗೆಯೂ ವಾಕಿಂಗ್ ಗೆ ತೆರಳಿದ್ದ ಶಶಾಂಕ್ ಶಾಲೆಗೆ ತೆರಳುವ ಸಮಯವಾಗಿದ್ದರೂ ವಾಪಾಸು ಬಾರದೇ ಇದ್ದುದರಿಂದ ಆತಂಕಗೊಂಡ ಮನೆಯವರು ಹುಡುಕಾಟ ನಡೆಸಿದಾಗ ಸಮೀಪದ ಅಕೇಶಿಯಾ ಪ್ಲಾಂಟೆಶನ್ ನಲ್ಲಿ ಶಶಾಂಕ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನನ್ನ ಸಾವಿಗೆ ನಾನೇ ಕಾರಣ ಎಂದು ತನ್ನ ಬಲಗೈ ಮೇಲೆ ಬರೆದುಕೊಂಡಿರುವು ಮಾರ್ಕರ್ ಪೆನ್ನಿನಿಂದ ಬರೆದುಕೊಂಡಿದ್ದಾನೆ.

ಬೈಂದೂರು ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ 9 ತರಗತಿ ಅಭ್ಯಸಿಸುತ್ತಿದ್ದ ಶಶಾಂಕ್ ಡಿಸ್ಟಿಂಕ್ಷನ್ ವಿದ್ಯಾರ್ಥಿಯಾಗಿದ್ದ. ವಿದ್ಯಾರ್ಥಿಯಾಗಿದ್ದ. ಎಲ್ಲರೊಂದಿಗೆ ಬೆರೆಯುವ ಗುಣ ಹೊಂದಿದ್ದ ಎನ್ನಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply